Don't Miss!
- News Toilet Photo Viral: ಕಡಿಮೆ ಖರ್ಚಿನಲ್ಲಿ 'ಲೀಕೆಜ್ ಟ್ಯಾಂಕರ್'ನಿಂದ ಟಾಯ್ಲೆಟ್ ನಿರ್ಮಾಣ: ನೀವೂ ಟ್ರೈ ಮಾಡಿ
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಆಂಡ್ರ್ಯೂ ನನ್ನನ್ನು ಹಿಂಸಿಸುತ್ತಿದ್ದಾನೆ': 'ಬಿಗ್' ಆರೋಪ ಮಾಡಿದ 'ಚಿನ್ನು' ಕವಿತಾ
Recommended Video
ಆಂಡ್ರ್ಯೂ ಕಿರಿಕಿರಿ ಕೊಡುವುದು ಜಾಸ್ತಿ ಅಂತ ಗೊತ್ತಿದ್ದರೂ, ನಾಮಿನೇಷನ್ ಟಾಸ್ಕ್ ನಲ್ಲಿ ನಟಿ ಕವಿತಾ ಗೌಡ ಒಂದು ಡೀಲ್ ಮಾಡಿಕೊಂಡರು. ಆಂಡ್ರ್ಯೂ ಕೀಟಲೆ ಮಾಡ್ತಾರೆ ಎಂಬ ಅರಿವು ಇದ್ದರೂ ಪ್ರತಿ ದಿನ ಅವರೊಂದಿಗೆ ಹತ್ತು ನಿಮಿಷ ಕಾಲ ಕಾಳೆಯಲು ಕವಿತಾ ಒಪ್ಪಿಕೊಂಡರು.
ಪ್ರತಿ ದಿನ ಹತ್ತು ನಿಮಿಷ ಕವಿತಾ ಜೊತೆ ಕಾಲ ಕಳೆಯಬಹುದು ಎಂಬ ನಂಬಿಕೆ ಮೇಲೆ ಆಂಡ್ರ್ಯೂ ನಾಮಿನೇಟ್ ಆಗಲು ಮನಸ್ಸು ಮಾಡಿದರು.
ಕೊಟ್ಟ ಮಾತಿನಂತೆ ಆಂಡ್ರ್ಯೂ ಜೊತೆಗೆ ಕವಿತಾ ಪ್ರತ್ಯೇಕವಾಗಿ ಸಮಯ ಕಳೆಯುತ್ತಿದ್ದರು. ಇದೇ ಗ್ಯಾಪ್ ನಲ್ಲಿ ಅದೇನಾಯ್ತೋ, ಏನೋ... ''ಆಂಡ್ರ್ಯೂ ವರ್ತನೆ ಇಷ್ಟ ಆಗುತ್ತಿಲ್ಲ'' ಅಂತ ಜಯಶ್ರೀ ಮತ್ತು ಶಶಿ ಕೂಡ ಕಾಮೆಂಟ್ ಮಾಡಿದ್ದರು.
ಅದಾದ್ಮೇಲೆ, ಆಂಡ್ರ್ಯೂ ಮೇಲೆ ಕವಿತಾ ಆರೋಪ ಮಾಡಿದರು. ''ಆಂಡ್ರ್ಯೂ ಕಡೆಯಿಂದ ನನಗೆ ತುಂಬಾ ಹಿಂಸೆ ಆಗುತ್ತಿದೆ'' ಎಂದು ಕಟಕಟೆಯಲ್ಲಿ ನಿಂತು ಕವಿತಾ ನುಡಿದರು. ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...
'ಬಿಗ್ ಬಾಸ್' ನೀಡಿದ್ದ ವಿಶೇಷ ಚಟುವಟಿಕೆ
ಇತರೆ ಸ್ಪರ್ಧಿಗಳ ಕುರಿತು ದೂರು ಹೇಳಲು 'ನ್ಯಾಯ ಇಲ್ಲಿದೆ' ಎಂಬ ಚಟುವಟಿಕೆ ಮೂಲಕ 'ಬಿಗ್ ಬಾಸ್' ಅವಕಾಶ ಕಲ್ಪಿಸಿದರು. ನ್ಯಾಯಾಧೀಶರ ಸ್ಥಾನದಲ್ಲಿ ಮುರಳಿ ಕುಳಿತರು. ಈ ಚಟುವಟಿಕೆ ಅನುಸಾರ ತಮ್ಮ ಮನಸ್ಸಿನ ಭಾವನೆಗಳನ್ನು ಕವಿತಾ ಗೌಡ ಹೊರ ಹಾಕಿದರು.
ಒಲ್ಲದ ಮನಸ್ಸಿನಿಂದ ಡೀಲ್ ಮಾಡಿಕೊಂಡು ಹಳ್ಳಕ್ಕೆ ಬಿದ್ದ ಆಂಡಿ.!
ಕವಿತಾ ಮಾಡಿದ ಆರೋಪ ಏನು.?
''ನಾನು ಅವರಿಗೆ (ಆಂಡ್ರ್ಯೂ) ಕೊಟ್ಟ ಒಂದು ಮಾತಿನಿಂದ ದಿನೇ ದಿನೇ ಹಿಂಸಿಸುತ್ತಿದ್ದಾರೆ. He is making me uncomfortable. ನಾನು ಎಲ್ಲಿ ಹೋದರೂ, ನನ್ನ ಹಿಂದೆ ಬರುತ್ತಿದ್ದಾರೆ'' ಎಂದು ಆಂಡ್ರ್ಯೂ ಮೇಲೆ ಕವಿತಾ ನೇರ ಆರೋಪ ಮಾಡಿದರು.
'ಬಿಗ್ ಬಾಸ್' ಮನೆಯಲ್ಲಿ 'ರೈತ' ಶಶಿ ಇಷ್ಟ ಪಡುತ್ತಿರುವ 'ಚೆಲುವೆ' ಯಾರು.?
ವೈಯುಕ್ತಿಕವಾಗಿ ಹಿಂಸೆ ಆಗುತ್ತಿದೆ
''ನಾಮಿನೇಷನ್ ಟಾಸ್ಕ್ ಮುಗಿದ ಮೇಲೆ ಆಂಡ್ರ್ಯೂ ವರ್ತನೆಯಲ್ಲಿ ಸಿಕ್ಕಾಪಟ್ಟೆ ಬದಲಾವಣೆ ಆಯ್ತು. ನನಗೆ ತುಂಬಾ ಕಿರಿಕಿರಿ ತಂತು. ನನಗೆ ವೈಯುಕ್ತಿಕವಾಗಿ ತುಂಬಾ ಹಿಂಸೆ ಆಗುತ್ತಿದೆ'' ಎಂದರು ನಟಿ ಕವಿತಾ
ಕವಿತಾ ಜೊತೆಗೆ ಅಂಟಿಕೊಂಡು ಇರುವುದೇ ಶಶಿ ಗೇಮ್ ಪ್ಲಾನ್ ಅಂತೆ.!
ಆಂಡ್ರ್ಯೂ ಜೊತೆಗೆ ಕಮ್ಫರ್ಟ್ ಇಲ್ಲ
''ಆಂಡ್ರ್ಯೂ ಹೇಳೋದು ಒಂದು, ಮಾಡೋದು ಒಂದು. ನಾನು ಬೇರೆಯವರ ಬಳಿ ಮಾತನಾಡುವಾಗ, ಮಧ್ಯೆ ಬಂದು ಕಾಮೆಂಟ್ ಮಾಡುತ್ತಾರೆ. ಎಲ್ಲರ ಜೊತೆ ನಾನು ಫ್ರೆಂಡ್ ಆಗಿದ್ದೇನೆ. ಆದ್ರೆ, ಆಂಡ್ರ್ಯೂ ಜೊತೆಗೆ ನನಗೆ ಕಮ್ಫರ್ಟ್ ಆಗುತ್ತಿಲ್ಲ'' ಅಂತ ಕವಿತಾ ಹೇಳಿದರು.
ಅರುಣಾಚಲ ಪ್ರದೇಶದ ರಾಜಧಾನಿ ರಾಯಚೂರು ಎಂದ 'ಚಿನ್ನು' ಕವಿತಾ.!
ಆರೋಪ ಸರಿ ಅಲ್ಲ ಎಂದ ಆಂಡ್ರ್ಯೂ
''ಕನ್ಫೆಶನ್ ರೂಮ್ ನಲ್ಲಿ ಕರ್ನಾಟಕ ಜನರ ಮುಂದೆ ಕವಿತಾ ಒಪ್ಪಿಕೊಂಡು ಈಗ ಆರೋಪ ಮಾಡುವುದು ಸರಿ ಅಲ್ಲ'' ಅಂತ ಆಂಡ್ರ್ಯೂ ತಮ್ಮ ತಾವು ಸಮರ್ಥಿಸಿಕೊಂಡರು.