Don't Miss!
- Sports KKR vs RR IPL 2024: ಜೋಸ್ ದಿ ಬಾಸ್ ಬಟ್ಲರ್ ಆರ್ಭಟಕ್ಕೆ ಕೆಕೆಆರ್ ಹೈರಾಣ; ರಾಯಲ್ ಆಗಿ ಗೆದ್ದ ರಾಜಸ್ಥಾನ
- Lifestyle ಬೇಸಿಗೆಯಲ್ಲಿ ಇಡ್ಲಿ, ದೋಸೆಯ ಹಿಟ್ಟು ಹುಳಿ ಬಂದರೆ ಹುಳಿ ಕಡಿಮೆಯಾಗಲು ಏನು ಮಾಡಬೇಕು?
- News Dwarakish: ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ದ್ವಾರಕೀಶ್ ಪಡೆದಿದ್ದ ಮತಗಳೆಷ್ಟು?
- Automobiles ಪೆಟ್ರೋಲ್ ಎಂಜಿನ್ಗಳಲ್ಲಿ ಮಾತ್ರ ಬರಲಿದೆ ರೆನಾಲ್ಟ್ನ ಬ್ರಹ್ಮಾಸ್ತ್ರ ಡಸ್ಟರ್
- Finance ಇಸ್ರೇಲ್-ಇರಾನ್ ಯುದ್ಧದ ಪರಿಣಾಮ ಷೇರು ಪೇಟೆಯಲ್ಲಿ ಭಾರಿ ನಷ್ಟ
- Technology YouTube: ಯೂಟ್ಯೂಬ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್! ಆಡ್ ಬ್ಲಾಕರ್ ವಿರುದ್ಧ ಸಮರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಕೇಶ್-ಅಕ್ಷತಾಗೆ ಗಂಡ-ಹೆಂಡತಿ ಎಂದುಬಿಟ್ಟ ಆಂಡ್ರ್ಯೂ.!
Recommended Video
''ನಾನು ಮತ್ತು ಅಕ್ಷತಾ ಸ್ನೇಹಿತರು. ನಮ್ಮ ನಡುವೆ ಒಳ್ಳೆಯ ಫ್ರೆಂಡ್ ಶಿಪ್ ಇದೆ'' ಅಂತ ಎಷ್ಟೇ ಬಾರಿ ರಾಕೇಶ್ ಹೇಳಿದರೂ, 'ಬಿಗ್ ಬಾಸ್' ಮನೆಯ ಸ್ಪರ್ಧಿಗಳಿಗೆ ರಾಕೇಶ್-ಅಕ್ಷತಾ ನಡುವಿನ ಗೆಳೆತನ ಇಷ್ಟ ಆಗುತ್ತಿಲ್ಲ.
ಆಗಾಗ ''ಐ ಲವ್ ಯು ರಾಕಿ'' ಅಂತ ಅಕ್ಷತಾ ಬಹಿರಂಗವಾಗಿ ಹೇಳಿರುವುದರಿಂದ, ಎಲ್ಲಾ ಸ್ಪರ್ಧಿಗಳ ತಲೆಯಲ್ಲಿ ಹೆಬ್ಬಾವು ಹರಿದಾಡುತ್ತಿದೆ. ರಾಕೇಶ್-ಅಕ್ಷತಾ 'ಬಿಗ್ ಬಾಸ್' ಮನೆಯಲ್ಲಿ ನಡೆದುಕೊಳ್ಳುತ್ತಿರುವ ರೀತಿಗೆ ವೀಕ್ಷಕರು ಕೂಡ ಕಿರಿಕಿರಿಗೊಂಡಿದ್ದಾರೆ.
ಹೀಗಿರುವಾಗಲೇ, ರಾಕೇಶ್ ಮತ್ತು ಅಕ್ಷತಾ ಮುಖಕ್ಕೆ ಹೊಡೆದ ಹಾಗೆ ''ಗಂಡ-ಹೆಂಡತಿ'' ಅಂತ ಆಂಡ್ರ್ಯೂ ಹೇಳಿದ್ದಾರೆ. ಇದನ್ನ ಕೇಳಿಸಿಕೊಂಡು ಅಕ್ಷತಾ ಮಂಕಾಗಿದ್ದರೆ, ರಾಕೇಶ್ ಸಿಡಿದೆದ್ದರು. ಮುಂದೆ ಓದಿರಿ...
ಖಾರದ ಪುಡಿಯಿಂದ ಖಾರದ ಜಗಳ
'ಬಿಗ್ ಬಾಸ್' ನೀಡಿದ್ದ ವಿಶೇಷ ಚಟುವಟಿಕೆಯ ಅನುಸಾರ, ಅಕ್ಷತಾ ಶಾವಿಗೆ ಪಾಯಸ ತಯಾರಿಸಿದ್ದರು. ಅದನ್ನ ತೀರ್ಪುಗಾರರಾಗಿದ್ದ ಜಯಶ್ರೀ, ಶಶಿ ಮತ್ತು ಕವಿತಾ ರುಚಿ ನೋಡುವ ಮುನ್ನ ನಿರೂಪಕನ ಪಾತ್ರ ನಿರ್ವಹಿಸಿದ್ದ ಆಂಡ್ರ್ಯೂ ಶಾವಿಗೆ ಪಾಯಸಕ್ಕೆ ಖಾರದ ಪುಡಿ ಬೆರೆಸಿದರು. ಸಿಹಿ ತಿಂಡಿಗೆ ಖಾರ ಹಾಕಿ ಹಾಳು ಮಾಡಿದ ಆಂಡ್ರ್ಯೂ ವಿರುದ್ಧ ಅಕ್ಷತಾ ರೊಚ್ಚಿಗೆದ್ದರು.
ಪರಸ್ಪರ ಹಾರ ಹಾಕಿಕೊಂಡ ರಾಕೇಶ್-ಕವಿತಾ: ಮುನಿಸಿಕೊಂಡ ಅಕ್ಷತಾ.!
ಉಗ್ರ ರೂಪ ತಾಳಿದ ಅಕ್ಷತಾ
''ಆಂಕರ್ ಆಂಕರಿಂಗ್ ಅಷ್ಟೇ ಮಾಡಬೇಕು.. ಊಟಕ್ಕೆ ಖಾರ ಮಿಕ್ಸ್ ಮಾಡೋದಲ್ಲ... ಪ್ರತಿ ವಾರ ಆಂಡ್ರ್ಯೂ ಏನಾದರೂ ಒಂದು ಮಾಡುತ್ತಿರಲಿ.. ಯಾರೂ ಏನೂ ಮಾಡಬೇಡಿ.. ಮಾತನಾಡಬೇಡಿ'' ಅಂತ ಗರಂ ಆಗಿ ಅಕ್ಷತಾ ಹೇಳುತ್ತಿದ್ದರು.
ಅಕ್ಷತಾ-ರಾಕೇಶ್ ನ ಮೊದಲು ಹೊರಗೆ ಹಾಕಿ: ಇದು ವೀಕ್ಷಕರ ಕೋರಿಕೆ.!
ಗಂಡ-ಹೆಂಡತಿ ಎಂದ ಆಂಡ್ರ್ಯೂ
''ನೀನು ಮಾಡಿದ್ದು ತಪ್ಪು'' ಅಂತ ಆಂಡ್ರ್ಯೂಗೆ ರಾಕೇಶ್ ಹೇಳಿದಾಗ, ಅಕ್ಷತಾ ಪರ ವಹಿಸಿದ ರಾಕೇಶ್ ಗೆ ''ಮಾತಾಡ್ರೋ ಗಂಡ-ಹೆಂಡತಿ ಮಾತನಾಡಿಕೊಳ್ಳಿ...'' ಅಂತ ಮುಖಕ್ಕೆ ಹೊಡೆದ ಹಾಗೆ ಆಂಡ್ರ್ಯೂ ಹೇಳಿಬಿಟ್ಟರು.
ಸಿಹಿ ಪಾಯಸದಲ್ಲಿ ಖಾರದಪುಡಿ ಸೇರಿಸಿ ಎಲ್ಲರ ಕೆಂಗಣ್ಣಿಗೆ ಗುರಿಯಾದ ಆಂಡ್ರ್ಯೂ
ರಾಕೇಶ್ ಉಗ್ರ ಪ್ರತಾಪ
ಅಕ್ಷತಾ ಹಾಗೂ ತಮಗೆ 'ಗಂಡ-ಹೆಂಡತಿ' ಅಂತ ಹೇಳಿದ್ರಿಂದ, ರಾಕೇಶ್ ಉಗ್ರ ಪ್ರತಾಪ ತೋರಿದರು. ಏರುಧ್ವನಿಯಲ್ಲಿ ಆಂಡ್ರ್ಯೂ ಜೊತೆಗೆ ಜಗಳಕ್ಕೆ ಇಳಿದರು. ''ಅವಳು ನಿನಗೆ ಸಪೋರ್ಟ್ ಮಾಡುತ್ತಾಳೆ, ನೀನು ಅವಳಿಗೆ ಸಪೋರ್ಟ್ ಮಾಡುತ್ತೀಯಾ. ಅದಕ್ಕೆ ಹಾಗಂದೆ'' ಎಂದು ಸಬೂಬು ಕೊಡುತ್ತಿದ್ದರು ಆಂಡ್ರ್ಯೂ.
ರಾಕೇಶ್-ಅಕ್ಷತಾ ನಡುವೆ ಏನಿದೆ-ಏನಿಲ್ಲ.? ಗಾಸಿಪ್ ಗಳಿಗೆ ಸಿಕ್ಕ ಸ್ಪಷ್ಟನೆ ಇದು..
ಮಾತು ಬದಲಿಸಿದ ಆಂಡ್ರ್ಯೂ
''ಮಾತಾಡ್ರೋ ಗಂಡ-ಹೆಂಡತಿ ಮಾತನಾಡಿಕೊಳ್ಳಿ...'' ಅಂತ ಆಂಡ್ರ್ಯೂ ಮೊದಲು ಹೇಳಿದ್ದು. ಆಮೇಲೆ, ''ಗಂಡ-ಹೆಂಡತಿ ತರಹ ಎಂದೆ..'' ಎಂದು ಮಾತು ಬದಲಾಯಿಸಿಬಿಟ್ಟರು. ಅಲ್ಲದೇ, ''ಇದೇ ಜಾಗದಲ್ಲಿ ಅಕ್ಷತಾ ಬಿಟ್ಟು ಬೇರೆ ಯಾರಾದರೂ ಇದ್ದಿದ್ದರೆ, ನೀನು ವಹಿಸಿಕೊಂಡು ಬರ್ತಿದ್ಯಾ.?'' ಅಂತ ರಾಕೇಶ್ ಗೆ ಆಂಡ್ರ್ಯೂ ಪ್ರಶ್ನೆ ಹಾಕಿದರು.
ಆಂಡ್ರ್ಯೂ ವಿರುದ್ಧ ಮಾತನಾಡಲು ತಯಾರಿಲ್ಲ.!
''ಅಕ್ಷತಾ ಪರವಾಗಿ ನಾವೆಲ್ಲರೂ ಇದ್ದೇವೆ. ಆದ್ರೆ, ಆಂಡ್ರ್ಯೂ ಜೊತೆಗೆ ಬಾಯಿ ಕೊಡಲು ಆಗಲ್ಲ'' ಅಂತ ಧನರಾಜ್ ಹೇಳಿಬಿಟ್ಟರು. ಖಾರದ ಪುಡಿ ವಿಚಾರವಾಗಿ ನವೀನ್ ಮತ್ತು ಆಂಡ್ರ್ಯೂ ನಡುವೆ ವಾಕ್ಸಮರ ನಡೆಯಿತು.
ಯಾರೂ ಮಾತನಾಡಬೇಡಿ ಎಂದ ಅಕ್ಷತಾ
ಆಂಡ್ರ್ಯೂ ಮಾತಿನಿಂದ ಬೇಸರಗೊಂಡ ಅಕ್ಷತಾ, ''ಮಾತನಾಡಬೇಡಿ'' ಅಂತ ಎಲ್ಲರ ಬಳಿ ಕೇಳಿಕೊಳ್ಳುತ್ತಿದ್ದರು. ಈ ನಡುವೆ ''ಭಯ ಆಗುತ್ತಿದೆ'' ಅಂತ ರಾಕೇಶ್ ಕಣ್ಣೀರು ಹಾಕುತ್ತಿದ್ದರು.