Don't Miss!
- Finance mukesh ambaniಗೆ 67 ವರ್ಷ, ಅವರು ಹೊಂದಿರುವ ದುಬಾರಿ ವಸ್ತುಗಳು ಏನೇನು ಗೊತ್ತಾ?
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿಹಿ ಪಾಯಸದಲ್ಲಿ ಖಾರದಪುಡಿ ಸೇರಿಸಿ ಎಲ್ಲರ ಕೆಂಗಣ್ಣಿಗೆ ಗುರಿಯಾದ ಆಂಡ್ರ್ಯೂ
ಕಾಲು ಕೆರೆದುಕೊಂಡು ಜಗಳಕ್ಕೆ ನಿಲ್ಲುವಲ್ಲಿ.. ಕೆಣಕುವುದರಲ್ಲಿ.. ಕಿರಿಕಿರಿ ತರುವುದರಲ್ಲಿ ಆಂಡ್ರ್ಯೂ ನಂಬರ್ ಒನ್.
ಇಲ್ಲಿಯವರೆಗೂ 'ಬಿಗ್ ಬಾಸ್' ಮನೆಯಲ್ಲಿ ಆಂಡ್ರ್ಯೂ ಮಾಡಿರುವ ಜಗಳಗಳಿಗೆ ಲೆಕ್ಕವೇ ಇಲ್ಲ. ಪ್ರತಿ ವಾರ, ಪ್ರತಿ ದಿನ... ಏನಾದರೊಂದು ಕಿತಾಪತಿ ಮಾಡದೇ ಇದ್ದರೆ ಆಂಡ್ರ್ಯೂಗೆ ಸಮಾಧಾನವೇ ಆಗಲ್ಲವೇನೋ.!
ಕಳೆದ ಇಡೀ ವಾರ ಕವಿತಾ ಮತ್ತು ಆಂಡ್ರ್ಯೂ ವಿವಾದ ಕೇಂದ್ರಬಿಂದು ಆಗಿತ್ತು. ಕವಿತಾ ಪರವಾಗಿ ನಿಂತ ಜಯಶ್ರೀ ಮತ್ತು ಶಶಿಗೆ ಕೆಟ್ಟ ಹೆಸರು ಬಂತು. ಇನ್ಮೇಲಾದರೂ ಬುದ್ಧಿ ಕಲಿತು ಜನರ ಮನಸ್ಸು ಗೆಲ್ಲಬೇಕು ಅಂತ ಆಂಡ್ರ್ಯೂಗೆ ಅನಿಸುತ್ತೋ, ಇಲ್ವೋ..
ಆಂಡ್ರ್ಯೂ ಬಗ್ಗೆ ಕೆಲವರು ಹೊಗಳಲು ಆರಂಭಿಸಿದಂತೆ ಚಟುವಟಿಕೆಯೊಂದರಲ್ಲಿ ಅಧಿಕ ಪ್ರಸಂಗ ಮಾಡಲು ಹೋಗಿ ಎಲ್ಲರ ಕೆಂಗಣ್ಣಿಗೆ ಆಂಡ್ರ್ಯೂ ಗುರಿಯಾದರು. ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...
'ಬಿಗ್ ಬಾಸ್' ನೀಡಿದ್ದ ವಿಶೇಷ ಚಟುವಟಿಕೆ
'ಸವಿ ಸವಿ ರುಚಿ' ಎಂಬ ವಿಶೇಷ ಚಟುವಟಿಕೆಯನ್ನ 'ಬಿಗ್ ಬಾಸ್' ನೀಡಿದರು. ಇದರ ಅನುಸಾರ, ಅಕ್ಷತಾ ಸಿಡುಕು ಸ್ವಭಾವದ ಅಡುಗೆ ತಯಾರಿಸುವವರಾದರೆ, ಅಕ್ಷತಾಗೆ ಸೋನು ಪಾಟೀಲ್ ವಿಧೇಯಕ ಸಹಾಯಕಿ. ಇನ್ನೂ ಕಟ್ಟುನಿಟ್ಟಿನ ತೀರ್ಪುಗಾರರಾಗಿ ಶಶಿ, ಕವಿತಾ, ಜಯಶ್ರೀ ಪಾತ್ರ ನಿರ್ವಹಿಸಬೇಕಿತ್ತು. ಆಂಡ್ರ್ಯೂ ರದ್ದು ಭಾವನಾತ್ಮಕ ಸ್ವಭಾವದ ನಿರೂಪಕನ ಪಾತ್ರ. ಉಳಿದ ಸ್ಪರ್ಧಿಗಳು ಪ್ರೇಕ್ಷಕರಾಗಿದ್ದರು.
ಕವಿತಾ-ಆಂಡ್ರ್ಯೂ ಜಗಳಕ್ಕೆ ಶಶಿ ಸೀಮೆಎಣ್ಣೆಯಾದ್ರೆ, ಜಯಶ್ರೀ ಬೆಂಕಿಪಟ್ಟಣ.!
ಶಾವಿಗೆ ಪಾಯಸ ತಯಾರಿಸಿದ ಅಕ್ಷತಾ
ಸಿಹಿಯಾದ ರುಚಿಯಾದ ಶಾವಿಗೆ ಪಾಯಸವನ್ನು ತಯಾರಿಸಲು ಅಕ್ಷತಾ ಮುಂದಾದರು. ಶಾವಿಗೆ ಪಾಯಸ ಇನ್ನೇನು ರೆಡಿ ಆಯ್ತು ಅನ್ನೋಷ್ಟರಲ್ಲಿ ಒಂದು ಎಡವಟ್ಟು ನಡೆಯಿತು.
ಕವಿತಾ-ಆಂಡ್ರ್ಯೂ ರಂಪಾಟ: ಇಬ್ಬರಲ್ಲಿ ಯಾರು ಸರಿ.? ಯಾರು ತಪ್ಪು.?
ಖಾರದ ಪುಡಿ ಹಾಕಿದ ಆಂಡ್ರ್ಯೂ
ತೀರ್ಪುಗಾರರು ಶಾವಿಗೆ ಪಾಯಸದ ರುಚಿ ನೋಡುವಷ್ಟರಲ್ಲಿ, ಪಾಯಸಕ್ಕೆ ಆಂಡ್ರ್ಯೂ ಖಾರದ ಪುಡಿ ಹಾಕಿದರು. ಸಿಹಿ ತಿಂಡಿಗೆ ಖಾರದ ಪುಡಿ ಹಾಕಿ ಹಾಳು ಮಾಡಿದ ಆಂಡ್ರ್ಯೂ ವಿರುದ್ಧ ಅಕ್ಷತಾ ಸೇರಿದಂತೆ ಎಲ್ಲಾ ಸ್ಪರ್ಧಿಗಳು ಸಿಡಿಮಿಡಿಗೊಂಡರು.
'ಕವಿತಾ ಕಡೆಯಿಂದ ನನಗೆ ಮೋಸ ಆಗಿದೆ' ಎಂದ ಆಂಡ್ರ್ಯೂ.!
ಖಾರದ ಪುಡಿ ಉಲ್ಲೇಖ ಮಾಡಿದವರು ಯಾರು.?
ಹಾಗ್ನೋಡಿದ್ರೆ, ಶಾವಿಗೆ ಪಾಯಸ ತಯಾರಾಗುತ್ತಿದ್ದಾಗ, ''ಮೇಲೆ ಖಾರದ ಪುಡಿ ಲೈಟಾಗಿ ಹಾಕಿ'' ಅಂತ ಹೇಳಿದ್ದು ತೀರ್ಪುಗಾರರ ಸ್ಥಾನದಲ್ಲಿ ಕುಳಿತಿದ್ದ ಶಶಿ. ಆಗ, ''ಈಗ ಖಾರದ ಪುಡಿ ಹಾಕೋದಲ್ಲ.. ಕೊನೆಯಲ್ಲಿ ಹಾಕೋದು'' ಅಂತ ಜಯಶ್ರೀ ಕಾಮೆಂಟ್ ಮಾಡಿದರು. ಕಾಕತಾಳೀಯ ಅಂದ್ರೆ, ಕೊನೆಯಲ್ಲಿ ಆಂಡ್ರ್ಯೂ ಖಾರದ ಪುಡಿ ಹಾಕೇ ಬಿಟ್ಟರು.
'ಆಂಡ್ರ್ಯೂ ನನ್ನನ್ನು ಹಿಂಸಿಸುತ್ತಿದ್ದಾನೆ': 'ಬಿಗ್' ಆರೋಪ ಮಾಡಿದ 'ಚಿನ್ನು' ಕವಿತಾ
'ಬಿಗ್ ಬಾಸ್' ಮನೆಯಲ್ಲಿ ರಾದ್ಧಾಂತ
ಪಾಯಸಕ್ಕೆ ಖಾರದ ಪುಡಿ ಬೆರೆಸಿದ ಆಂಡ್ರ್ಯೂ ವಿರುದ್ಧ ಎಲ್ಲರೂ ಕಿರಿಕಿರಿಗೊಂಡರು. ಆಂಡ್ರ್ಯೂ-ರಾಕೇಶ್ ನಡುವೆ ಮಾತಿನ ಚಕಮಕಿ ನಡೆಯಿತು. ನವೀನ್ ಕೂಡ ಆಂಡ್ರ್ಯೂಗೆ ಸರಿಯಾಗಿ ಟಾಂಗ್ ಕೊಟ್ಟರು.
ಖಾರದ ಪುಡಿ ಹಾಕಿದ್ಯಾಕೆ.?
''ಕೊನೆಯಲ್ಲಿ ಸ್ವಲ್ಪ ಫನ್ ಇರಲಿ ಅಂತ ಖಾರದ ಪುಡಿ ಹಾಕಿದೆ. ಎಲ್ಲರೂ ತಿನ್ನುವ ಹಾಗಿದ್ದರೆ, ಖಾರದ ಪುಡಿ ಹಾಕುತ್ತಿರಲಿಲ್ಲ'' ಅಂತ ಆಂಡ್ರ್ಯೂ ಸಮರ್ಥಿಸಿಕೊಂಡರು.