Don't Miss!
- News Hubballi: ರಾಜ್ಯ ಸರ್ಕಾರದ ವಿರುದ್ಧ ಭಾರೀ ಪ್ರತಿಭಟನೆ: ನೇಹಾ ನಿವಾಸಕ್ಕೆ ಶ್ರೀಗಳು, ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ: ಪೊಲೀಸ್ ಅಭಯ
- Technology ನಿಮ್ಮ ಬಳಿ ರೆಡ್ಮಿಯ ಈ ಫೋನ್ ಇದ್ರೆ, ಇಲ್ಲಿದೆ ನಿಮಗೆ ಗುಡ್ನ್ಯೂಸ್!
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Sports LSG vs CSK IPL 2024: ಐಪಿಎಲ್ನಲ್ಲಿ ಇತಿಹಾಸ ಸೃಷ್ಟಿಸಿದ ಎಂಎಸ್ ಧೋನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ನನ್ನ ಜೀವನವನ್ನು ಹಾಳು ಮಾಡಿಕೊಂಡೆ' ಎಂದು ಕಣ್ಣೀರು ಸುರಿಸಿದ ಅಕ್ಷತಾ.!
Recommended Video
'ಬಿಗ್ ಬಾಸ್' ಕೊಟ್ಟಿದ್ದ 'ಕಾಲ್ ಸೆಂಟರ್' ಟಾಸ್ಕ್ ನಲ್ಲಿ ರಾಕೇಶ್ ಮತ್ತು ಅಕ್ಷತಾ ನಡುವಿನ ಸಂಬಂಧದ ಬಗ್ಗೆ ಧನರಾಜ್, ಜಯಶ್ರೀ ಮತ್ತು ಸೋನು ಪಾಟೀಲ್ ನೇರವಾಗಿ ಆರೋಪ ಮಾಡಿದರು.
''ನಮ್ಮಿಬ್ಬರ ನಡುವೆ ಸ್ನೇಹ ಇದೆ'', ''ಸ್ನೇಹಿತನಾಗಿ ನಾನು ರಾಕೇಶ್ ನ ಲವ್ ಮಾಡುವೆ'' ಎಂದು ರಾಕೇಶ್ ಮತ್ತು ಅಕ್ಷತಾ ಚಟುವಟಿಕೆಯಲ್ಲಿ ಸಮಾಧಾನದಿಂದ ಉತ್ತರ ಕೊಟ್ಟಿದ್ದರು.
ಚಟುವಟಿಕೆ ಮುಗಿದ ಮೇಲೆ ಕೊಂಚ ಅಪ್ ಸೆಟ್ ಆದಂತೆ ಕಂಡುಬಂದ ಅಕ್ಷತಾ, ಧನರಾಜ್ ಮತ್ತು ರಾಕೇಶ್ ಜೊತೆಗೆ ಕಿತ್ತಾಡಿಕೊಂಡ ಬಳಿಕ ಕಣ್ಣೀರು ಸುರಿಸಲು ಆರಂಭಿಸಿದರು.
''ನಾನು 'ಬಿಗ್ ಬಾಸ್' ಮನೆಗೆ ಯಾಕಾದರೂ ಬಂದ್ನೋ.? ಮರ್ಯಾದೆ ಕಳೆದುಕೊಳ್ಳಲು ಇಲ್ಲಿಗೇ ಬರಬೇಕಿತ್ತಾ.? ಇಲ್ಲಿ ಬಂದು ನನ್ನ ಜೀವನವನ್ನು ಹಾಳು ಮಾಡಿಕೊಂಡೆ'' ಎಂದು ಕಣ್ಣೀರು ಹಾಕಿದರು ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ. ಮುಂದೆ ಓದಿರಿ...
ಬೇರೆ ಯಾರೂ ಅರ್ಥ ಮಾಡಿಕೊಂಡಿಲ್ವಂತೆ.!
ಧನರಾಜ್ ಜೊತೆಗೆ ವಾಗ್ವಾದ ನಡೆದಾಗ, ''ಈ ಮನೆಯಲ್ಲಿ ನನ್ನನ್ನ ಯಾರೂ ಅರ್ಥ ಮಾಡಿಕೊಂಡಿಲ್ಲ. ರಾಕೇಶ್ ಒಬ್ಬನ್ನ ಬಿಟ್ಟು. ಅದಕ್ಕೆ ಅವನ ಜೊತೆ ನಾನು ಜಾಸ್ತಿ ಸಮಯ ಕಳೆಯುತ್ತೇನೆ'' ಎಂದರು ಅಕ್ಷತಾ.
ರಾಕೇಶ್-ಅಕ್ಷತಾಗೆ ಗಂಡ-ಹೆಂಡತಿ ಎಂದುಬಿಟ್ಟ ಆಂಡ್ರ್ಯೂ.!
ಜೀವನ ಹಾಳು ಮಾಡಿಕೊಂಡೆ.!
ಧನರಾಜ್ ಜೊತೆಗೆ ಮಾತಿನ ಸಮರ ನಡೆದ್ಮೇಲೆ, ''ನನಗೆ ಯಾವ ಬಿಗ್ ಬಾಸ್ ಕೂಡ ಬೇಡ. ನಾನು ಯಾಕೆ ಬರಬೇಕಿತ್ತು ಇಲ್ಲಿಗೆ.? ನನಗೆ ಹೆಸರು ಬೇಡ, ಜನಪ್ರಿಯತೆ ಬೇಡ. ನಾನು ಇಲ್ಲಿಗೆ ಬಂದು ನನ್ನ ಮರ್ಯಾದೆಯನ್ನ ನಾನೇ ಕಳೆದುಕೊಳ್ಳುತ್ತಿದ್ದೇನೆ. ಇಲ್ಲಿ ನಾನೇ ಸಂತ್ರಸ್ಥೆ ಆಗಿರುವುದು. ವೀಕೆಂಡ್ ನಲ್ಲಿ ನನ್ನದೇ ತಪ್ಪು ಅನ್ನೋ ತರಹ ಮಾತನಾಡುತ್ತಾರೆ. ಇಲ್ಲಿ ಬಂದು ನನ್ನ ಜೀವನವನ್ನು ಹಾಳು ಮಾಡಿಕೊಂಡೆ'' ಎಂದು ಕಣ್ಣೀರಿಟ್ಟರು ಅಕ್ಷತಾ.
ಅಕ್ಷತಾ ಜೊತೆ ಅಂಟಿಕೊಂಡೇ ಇರುವ ರಾಕೇಶ್ ಗೆ ಬಿಸಿ ಮುಟ್ಟಿಸಿದ 'ಬಿಗ್ ಬಾಸ್' ಸ್ಪರ್ಧಿಗಳು.!
ರಾಕೇಶ್ ಮತ್ತು ಅಕ್ಷತಾ ನಡುವೆ ಕಿತ್ತಾಟ
ಲಕ್ಷುರಿ ಬಜೆಟ್ ನಲ್ಲಿ ಸಸ್ಯಹಾರಿಗಳನ್ನು ಪರಿಗಣಿಸಿಲ್ಲ ಅಂತ ರಾಕೇಶ್ ಮತ್ತು ಅಕ್ಷತಾ ನಡುವೆ ಕಿತ್ತಾಟ ನಡೆಯಿತು. ಇದರಿಂದ ಅಕ್ಷತಾ ಮತ್ತಷ್ಟು ಬೇಸರಗೊಂಡರು.
'ಐ ಲವ್ ಯು ರಾಕಿ' ಎನ್ನುವ ಅಕ್ಷತಾ-ರಾಕೇಶ್ ನಡುವಿನ ಸಂಬಂಧ ಎಂಥದ್ದು.?
ಮಾರ್ಯದೆ ಕಳೆದುಕೊಳ್ಳಲು ಇಲ್ಲಿಗೆ ಬರಬೇಕಿತ್ತಾ.?
''ಯಾಕಾದ್ರೂ ಬಂದೆ ನಾನು ಇಲ್ಲಿಗೆ.? ಮರ್ಯಾದೆ ಕಳೆದುಕೊಳ್ಳಲು ಇಲ್ಲಿಗೆ ಬರಬೇಕಾ.?'' ಎನ್ನುತ್ತಾ ಅಕ್ಷತಾ ಬೇಸರ ಮಾಡಿಕೊಳ್ಳುತ್ತಿದ್ದರು. ಆಗ ಅಕ್ಷತಾ ರನ್ನ ರಾಕೇಶ್ ಸಮಾಧಾನ ಪಡಿಸಿದರು.
ಅಕ್ಷತಾ ಕಣ್ಣೀರು ಹಾಕಿದರೂ, ರಾಕೇಶ್ ಬಿಡುವ ಹಾಗೆ ಕಾಣುತ್ತಿಲ್ಲ.!