Don't Miss!
- News ರಾಜ್ಯದ ವಿವಿಧೆಡೆ ಮಳೆರಾಯನ ಆರ್ಭಟ; ಕರ್ನಾಟಕದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟು ? ಇಲ್ಲಿದೆ ಸಂಪೂರ್ಣ ವಿವರ
- Sports 'ಟಿ20 ವಿಶ್ವಕಪ್ಗೆ ಈತನನ್ನು ಆಯ್ಕೆ ಮಾಡಿ'; ಅಜಿತ್ ಅಗರ್ಕರ್ಗೆ ಬಂತು ದೊಡ್ಡ ಮನವಿ!
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಾಮಿನೇಷನ್ ನಲ್ಲಿ 'ಗ್ರೂಪ್' ಉಳಿಸಿದ ಕವಿತಾ ವಿರುದ್ಧ ಸ್ಪರ್ಧಿಗಳು ಸಿಡಿಮಿಡಿ.!
Recommended Video
ನಿಮಗೆಲ್ಲ ಗೊತ್ತಿರುವ ಹಾಗೆ ಈ ವಾರ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆಗಿರುವವರು ಕವಿತಾ. ನಾಮಿನೇಷನ್ ಪ್ರಕ್ರಿಯೆಯಲ್ಲಿ ಜಯಶ್ರೀ ಮತ್ತು ಶಶಿ ಹೆಸರನ್ನ ಯಾರು ತೆಗೆದುಕೊಳ್ಳಲಿಲ್ಲ. ಹೀಗಾಗಿ, ಅವರಿಬ್ಬರು ಈ ವಾರ ಸೇಫ್ ಆಗಿದ್ದರು.
ಸೇಫ್ ಆಗಿರುವ ಸ್ಪರ್ಧಿಗಳ ಪೈಕಿ ಇಬ್ಬರನ್ನು ನಾಮಿನೇಟ್ ಮಾಡುವ ಅಧಿಕಾರ ಕವಿತಾಗೆ ಸಿಕ್ಕಾಗ, ಆಕೆ ಆಯ್ದುಕೊಂಡಿದ್ದು ನವೀನ್ ಮತ್ತು ರಶ್ಮಿ ಹೆಸರನ್ನು.! ನಾಮಿನೇಷನ್ ವೇಳೆ ಜಯಶ್ರೀ ಮತ್ತು ಶಶಿ ಹೆಸರನ್ನು ತೆಗೆದುಕೊಳ್ಳದ ಕವಿತಾ ವಿರುದ್ಧ ಇತರೆ ಸ್ಪರ್ಧಿಗಳು ಸಿಡಿಮಿಡಿಗೊಂಡರು.
ಕವಿತಾ-ಶಶಿ-ಜಯಶ್ರೀ... ಗ್ರೂಪ್ ಮಾಡಿಕೊಂಡು ಆಟ ಆಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ನಾಮಿನೇಷನ್ ಪ್ರಕ್ರಿಯೆಯಲ್ಲಿ ಈ 'ತ್ರಿಮೂರ್ತಿ'ಗಳು ಸೇಫ್ ಆಗಿರುವುದು ಇತರರಿಗೆ ಕಿರಿಕಿರಿ ತರಿಸಿದೆ.
'ಬಿಗ್ ಬಾಸ್': ಈ ವಾರ ಅಕ್ಷತಾಗೆ ನೀವೆಲ್ಲ ವೋಟ್ ಹಾಕ್ತೀರಾ.?
''ಕವಿತಾ.. ಅವಳ ಗ್ರೂಪ್ ನಲ್ಲಿ ಒಬ್ಬರನ್ನ ನಾಮಿನೇಟ್ ಮಾಡಿದ್ರೆ, ಫೇರ್ ಆಗಿ ಆಡುತ್ತಿದ್ದಾರೆ ಎನ್ನಬಹುದಿತ್ತು. ಅಲ್ಲೂ ಗ್ರೂಪ್ ಮಾಡಿಕೊಂಡು ಆಡುತ್ತಿದ್ದಾರೆ. ಹಾಗ್ನೋಡಿದ್ರೆ, ಇಡೀ ವಾರ ಜಯಶ್ರೀ ಏನೂ ಮಾಡಿಲ್ಲ. ನಾಮಿನೇಷನ್ ಗೆ ಬಂದಿಲ್ಲ ಅಂದ್ರೆ, ಜನರು ಹೊರಗೆ ಹಾಕಲು ನಾವೇ ಚಾನ್ಸ್ ಕೊಡದ ಹಾಗೆ ಆಯ್ತಲ್ಲ'' ಅನ್ನೋದು ರಾಪಿಡ್ ರಶ್ಮಿ ವಾದ.
''ಈ ಮೂವರು ಸೇಫ್ ಆಗಿ ಇದ್ದು ಇದ್ದು ಫೈನಲ್ ವರೆಗೂ ಬಂದುಬಿಡ್ತಾರೆ'' ಎಂಬುದು ಬಹುತೇಕ ಸ್ಪರ್ಧಿಗಳ ಅಭಿಪ್ರಾಯ.
ಕ್ಷಣಾರ್ಧದಲ್ಲಿ ಡೇಂಜರ್ ಝೋನ್ ನಿಂದ ಬಚಾವ್ ಆದ ರಾಕೇಶ್.!
ಹಾಗ್ನೋಡಿದ್ರೆ, ಕವಿತಾ ಕ್ಯಾಪ್ಟನ್ ಆಗಲು ಸಹಾಯ ಮಾಡಿದವರು ನವೀನ್. ಆದ್ರೆ, ನವೀನ್ ರನ್ನೇ ಕವಿತಾ ನಾಮಿನೇಟ್ ಮಾಡಿದರು. ಹೀಗಾಗಿ, ''ಇವಳನ್ನ ಕ್ಯಾಪ್ಟನ್ ಮಾಡಲು ನಾನು ನಿಂತುಕೊಂಡೆ.. ಹಿಂಗೆ ಅಂತ ಗೊತ್ತಿದ್ರೆ, ಹೊಡೆದು ಬೀಳಿಸುತ್ತಿದ್ದೆ'' ಅಂತ ಬೇಸರ ಪಟ್ಟುಕೊಳ್ತಿದ್ರು.
ಇತ್ತ ಕವಿತಾ, ''ಜಯಶ್ರೀ ರನ್ನ ನಾಮಿನೇಟ್ ಮಾಡಲು ನನಗೆ ಯಾವುದೇ ಕಾರಣ ಇರಲಿಲ್ಲ'' ಅಂತ ತಮ್ಮ ನಡೆಯನ್ನ ಸಮರ್ಥಿಸಿಕೊಂಡಿದ್ದಾರೆ.
ದುರಂತ ಅಂದ್ರೆ, ಸೇಫ್ ಆಗಿದ್ದ ಜಯಶ್ರೀ.. 'ನನ್ ಬಲೂನೇ ಸ್ಟ್ರಾಂಗು ಗುರು' ಚಟುವಟಿಕೆ ಮುಗಿದ್ಮೇಲೆ ನಾಮಿನೇಟ್ ಆಗ್ಬಿಟ್ಟರು. ಅದಕ್ಕೆ ಕಾರಣ ರಾಕೇಶ್.
ಅಂದ್ಹಾಗೆ, ಈ ವಾರ ಅಕ್ಷತಾ, ಆಂಡಿ, ಸೋನು, ಧನರಾಜ್, ರಶ್ಮಿ, ನವೀನ್ ಮತ್ತು ಜಯಶ್ರೀ ನಾಮಿನೇಟ್ ಆಗಿದ್ದಾರೆ. ಈ ಏಳು ಜನರ ಪೈಕಿ ನಿಮ್ಮ ಮತ ಯಾರಿಗೆ.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ..