Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕ್ಷಣಾರ್ಧದಲ್ಲಿ ಡೇಂಜರ್ ಝೋನ್ ನಿಂದ ಬಚಾವ್ ಆದ ರಾಕೇಶ್.!
'ಕಾಲ್ ಸೆಂಟರ್' ಟಾಸ್ಕ್ ನಲ್ಲಿ ಜಯಶ್ರೀ ಮತ್ತು ತಂಡಕ್ಕೆ ವಿಲನ್ ಆಗಿ ಕಾಡಿದ್ದ ರಾಕೇಶ್ ಈ ವಾರ 'ಬಿಗ್ ಬಾಸ್' ಮನೆಯಿಂದ ಹೊರಗೆ ಹೋಗಲು ನಾಮಿನೇಟ್ ಆಗಿದ್ದರು.
ರಾಕೇಶ್ ವಿರುದ್ಧ ಆಂಡ್ರ್ಯೂ, ಧನರಾಜ್ ಮತ್ತು ಶಶಿ ಮತ ಚಲಾಯಿಸಿದ್ದರು. ಮೂರು ವೋಟ್ ಗಳನ್ನು ಪಡೆದು ಎಲಿಮಿನೇಷನ್ ಟೆನ್ಷನ್ ಎದುರಿಸಬೇಕಿದ್ದ ರಾಕೇಶ್ ಕ್ಷಣಾರ್ಧದಲ್ಲಿ ಬಚಾವ್ ಆಗ್ಬಿಟ್ಟರು.
ಸೂಕ್ಷ್ಮತೆ ಅರ್ಥೈಸಿಕೊಳ್ಳದ, ಹೇಳಿದ್ದನ್ನ ಒಪ್ಪಿಕೊಳ್ಳದ ರಾಕೇಶ್-ಅಕ್ಷತಾಗೆ ಏನ್ನನ್ನಬೇಕು.?
ನಾಮಿನೇಟ್ ಆದ ಸ್ಪರ್ಧಿಗಳಿಗೆ ಒಂದು ಚಾನ್ಸ್ ಕೊಡಲು 'ನನ್ ಬಲೂನೇ ಸ್ಟ್ರಾಂಗು ಗುರು' ಎಂಬ ಚಟುವಟಿಕೆಯನ್ನ 'ಬಿಗ್ ಬಾಸ್' ನೀಡಿದರು. ಇದರ ಅನುಸಾರ, ಟಾಸ್ಕ್ ಕೊನೆಯಲ್ಲಿ ಯಾರ ಬಲೂನ್ ಒಡೆಯದೇ ಇರುತ್ತದೋ, ಅವರು ಸೇಫ್ ಆಗಬಹುದಿತ್ತು ಮತ್ತು ಅವರ ಜಾಗಕ್ಕೆ ಸೇಫ್ ಆಗಿರುವ ಸದಸ್ಯರನ್ನು ನಾಮಿನೇಟ್ ಮಾಡಬಹುದಿತ್ತು.
ಸುದೀಪ್ ಗೆ ಅಗೌರವ ತೋರಿದ ರಾಕೇಶ್-ಅಕ್ಷತಾ ಬಗ್ಗೆ ವೀಕ್ಷಕರು ಕೆಂಡಾಮಂಡಲ.!
ಚಟುವಟಿಕೆಯ ಅಂತ್ಯದಲ್ಲಿ ರಾಕೇಶ್ ರವರ ಒಂದು ಬಲೂನ್ ಉಳಿದಿತ್ತು. ಪರಿಣಾಮ, ಸೇಫ್ ಆದ ರಾಕೇಶ್, ಜಯಶ್ರೀರನ್ನ ಡೇಂಜರ್ ಝೋನ್ ಗೆ ತಳ್ಳಿದರು.
ತಾನೇ ಸರಿ ಎನ್ನುವ 'ಸ್ವಾರ್ಥಿ' ರಾಕೇಶ್ ಬಾಯಿಗೆ ಬೀಗ ಜಡಿದ ಸುದೀಪ್.!
ಜಯಶ್ರೀ ಜೊತೆಗೆ ಈ ವಾರ ಅಕ್ಷತಾ, ಆಂಡಿ, ಸೋನು, ಧನರಾಜ್, ರಶ್ಮಿ ಮತ್ತು ನವೀನ್ ನಾಮಿನೇಟ್ ಆಗಿದ್ದಾರೆ. ಈ ಏಳು ಜನರ ಪೈಕಿ ನಿಮ್ಮ ಮತ ಯಾರಿಗೆ.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ..