ಕ್ಷಣಾರ್ಧದಲ್ಲಿ ಡೇಂಜರ್ ಝೋನ್ ನಿಂದ ಬಚಾವ್ ಆದ ರಾಕೇಶ್.!
'ಕಾಲ್ ಸೆಂಟರ್' ಟಾಸ್ಕ್ ನಲ್ಲಿ ಜಯಶ್ರೀ ಮತ್ತು ತಂಡಕ್ಕೆ ವಿಲನ್ ಆಗಿ ಕಾಡಿದ್ದ ರಾಕೇಶ್ ಈ ವಾರ 'ಬಿಗ್ ಬಾಸ್' ಮನೆಯಿಂದ ಹೊರಗೆ ಹೋಗಲು ನಾಮಿನೇಟ್ ಆಗಿದ್ದರು.
ರಾಕೇಶ್ ವಿರುದ್ಧ ಆಂಡ್ರ್ಯೂ, ಧನರಾಜ್ ಮತ್ತು ಶಶಿ ಮತ ಚಲಾಯಿಸಿದ್ದರು. ಮೂರು ವೋಟ್ ಗಳನ್ನು ಪಡೆದು ಎಲಿಮಿನೇಷನ್ ಟೆನ್ಷನ್ ಎದುರಿಸಬೇಕಿದ್ದ ರಾಕೇಶ್ ಕ್ಷಣಾರ್ಧದಲ್ಲಿ ಬಚಾವ್ ಆಗ್ಬಿಟ್ಟರು.
ನಾಮಿನೇಟ್ ಆದ ಸ್ಪರ್ಧಿಗಳಿಗೆ ಒಂದು ಚಾನ್ಸ್ ಕೊಡಲು 'ನನ್ ಬಲೂನೇ ಸ್ಟ್ರಾಂಗು ಗುರು' ಎಂಬ ಚಟುವಟಿಕೆಯನ್ನ 'ಬಿಗ್ ಬಾಸ್' ನೀಡಿದರು. ಇದರ ಅನುಸಾರ, ಟಾಸ್ಕ್ ಕೊನೆಯಲ್ಲಿ ಯಾರ ಬಲೂನ್ ಒಡೆಯದೇ ಇರುತ್ತದೋ, ಅವರು ಸೇಫ್ ಆಗಬಹುದಿತ್ತು ಮತ್ತು ಅವರ ಜಾಗಕ್ಕೆ ಸೇಫ್ ಆಗಿರುವ ಸದಸ್ಯರನ್ನು ನಾಮಿನೇಟ್ ಮಾಡಬಹುದಿತ್ತು.

ಚಟುವಟಿಕೆಯ ಅಂತ್ಯದಲ್ಲಿ ರಾಕೇಶ್ ರವರ ಒಂದು ಬಲೂನ್ ಉಳಿದಿತ್ತು. ಪರಿಣಾಮ, ಸೇಫ್ ಆದ ರಾಕೇಶ್, ಜಯಶ್ರೀರನ್ನ ಡೇಂಜರ್ ಝೋನ್ ಗೆ ತಳ್ಳಿದರು.
ಜಯಶ್ರೀ ಜೊತೆಗೆ ಈ ವಾರ ಅಕ್ಷತಾ, ಆಂಡಿ, ಸೋನು, ಧನರಾಜ್, ರಶ್ಮಿ ಮತ್ತು ನವೀನ್ ನಾಮಿನೇಟ್ ಆಗಿದ್ದಾರೆ. ಈ ಏಳು ಜನರ ಪೈಕಿ ನಿಮ್ಮ ಮತ ಯಾರಿಗೆ.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ..


Click it and Unblock the Notifications











