Don't Miss!
- News Namma Metro: 2023-24ರಲ್ಲಿ ಮೆಟ್ರೋ ವಾರ್ಷಿಕ ಆದಾಯದಲ್ಲಿ ಭಾರೀ ಏರಿಕೆ: ಖರ್ಚು-ಆದಾಯದ ಮಾಹಿತಿ?
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Sports IPL 2024: ಮುಂಬೈ ಇಂಡಿಯನ್ಸ್ ವಿರುದ್ಧ ಶತಕ; ರೋಹಿತ್, ಕೊಹ್ಲಿಗೆ ಕ್ರೆಡಿಟ್ ನೀಡಿದ ಯಶಸ್ವಿ ಜೈಸ್ವಾಲ್!
- Technology Itel: ಭಾರತದಲ್ಲಿ ಐಟೆಲ್ S24 ಲಾಂಚ್! 108MP ಕ್ಯಾಮೆರಾ.. ಬೆಲೆ ಇಷ್ಟೇ
- Lifestyle ಪ್ರವಾಹಕ್ಕೆ ಕಾರಣವಾಗೋದು ಮಳೆಯಲ್ಲ ಬೇಸಿಗೆಯ ಬಿಸಿಲು..! ನಂಬಲು ಸಾಧ್ಯವಿಲ್ಲ ಅಂದ್ರೆ ಈ ವಿಡಿಯೋ ನೋಡಿ..!
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಂಬರ್ 1 ಸ್ಥಾನಕ್ಕೆ ಪಟ್ಟು ಹಿಡಿದು ನಿಂತ 'ಚಿನ್ನು' ಕವಿತಾ.!
Recommended Video
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಐವತ್ತು ದಿನಗಳು ಯಶಸ್ವಿಯಾಗಿ ಮುಗಿದಿದೆ. ಇನ್ನೂ ಐವತ್ತು ದಿನಗಳ ಕಾಲ 'ಬಿಗ್ ಬಾಸ್' ಮನೆಯಲ್ಲಿ ಗಟ್ಟಿಯಾಗಿ ನೆಲೆಯೂರುವಲ್ಲಿ ಯಾರು ಯಶಸ್ವಿ ಆಗುತ್ತಾರೆ ಅಂತ ಈಗಲೇ ಹೇಳುವುದು ಕಷ್ಟ.
'ಬಿಗ್ ಬಾಸ್' ಆಡಿಸುವ ಆಟದಲ್ಲಿ ಯಾವಾಗ, ಏನು ಬೇಕಾದರೂ ಆಗಬಹುದು. ಏನೇ ಆದರೂ, ಯಾರು ಏನೇ ಹೇಳಿದರೂ... ''ನಾನು ಮಾತ್ರ ನಂಬರ್ 1 ಸ್ಥಾನದಲ್ಲೇ ನಿಲ್ಲುವೆ'' ಅಂತ 'ಚಿನ್ನು' ಖ್ಯಾತಿಯ ಕವಿತಾ ಪಟ್ಟು ಹಿಡಿದು ನಿಂತಿದ್ದರು.
ಹಾಗ್ನೋಡಿದ್ರೆ, ಕವಿತಾ ಅಂಡ್ ಟೀಮ್ ಮೊದಲ ನಾಲ್ಕು ಸ್ಥಾನಗಳನ್ನು ಆಕ್ರಮಿಸಿಕೊಂಡಿದ್ದರು. ಮೊದಲ ನಾಲ್ಕು ಸ್ಥಾನಗಳನ್ನು ಬಿಟ್ಟುಕೊಡಲು ಕವಿತಾ, ಶಶಿ, ಜಯಶ್ರೀ ಮತ್ತು ಧನರಾಜ್ ತಯಾರಿರಲಿಲ್ಲ. ಉಳಿದವರು, ಉಳಿದ ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಗಿತ್ತು.
ಅಷ್ಟಕ್ಕೂ, ಏನೀ ಚಟುವಟಿಕೆ ಅಂದ್ರಾ.? ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...
ಸ್ಪರ್ಧಿಗಳ ಸ್ಥಾನಮಾನ
'ಬಿಗ್ ಬಾಸ್' ಮನೆಯಲ್ಲಿ ಸ್ಪರ್ಧಿಗಳ ಸ್ಥಾನಮಾನವನ್ನು ತಿಳಿಯಲು 'ಸ್ಥಾನಮಾನ' ಎಂಬ ವಿಶೇಷ ಚಟುವಟಿಕೆ ನೀಡಲಾಗಿತ್ತು. ಇದರ ಅನುಸಾರ, 'ಬಿಗ್ ಬಾಸ್' ಮನೆಯಲ್ಲಿ ಇರಲು ಅತ್ಯಂತ ಸೂಕ್ತ ಎನಿಸುವವರಿಗೆ ಮೊದಲ ಸ್ಥಾನ, 'ಬಿಗ್ ಬಾಸ್' ಮನೆಯಲ್ಲಿ ಇರಲು ಸೂಕ್ತವಲ್ಲದ ಸದಸ್ಯರಿಗೆ 11ನೇ ಸ್ಥಾನ ನೀಡಬೇಕಿತ್ತು.
'ರೊಮ್ಯಾಂಟಿಕ್' ರಾಕೇಶ್ ಗೆ ಕ್ಲೀನ್ ಬೌಲ್ಡ್ ಆದ 'ಸುಂದರಿ' ಕವಿತಾ.!
ನಂಬರ್ 1 ಸ್ಥಾನದ ಮೇಲೆ ಕವಿತಾ ಕಣ್ಣು
''ಮೊದಲನೇ ಸ್ಥಾನದಲ್ಲಿ ಇರಲು ಎಲ್ಲರೂ ಇಲ್ಲಿಗೆ ಬಂದಿದ್ದಾರೆ. ಗೆಲ್ಲಲು ನಾನು ಇಲ್ಲಿಗೆ ಬಂದಿರುವೆ. ಹೀಗಾಗಿ ಮೊದಲನೇ ಸ್ಥಾನದಲ್ಲಿ ಇರಲು ಬಯಸುವೆ'' ಎಂದು ವಾದಿಸಿದ ಕವಿತಾ, ನಂಬರ್ 1 ಸ್ಥಾನದಲ್ಲಿ ನಿಂತರು.
'ಸುಂದರಿ' ಕವಿತಾ ಮತ್ತು ಆಂಡ್ರ್ಯೂ ನಡುವೆ ಮತ್ತೆ ವಾಗ್ಯುದ್ಧ.!
ಪೈಪೋಟಿ ನೀಡಿದ ರಶ್ಮಿ, ಆಂಡಿ
ಮೊದಲನೇ ಸ್ಥಾನದಲ್ಲಿ ನಿಲ್ಲಲು ಕವಿತಾ ಜೊತೆ ರಶ್ಮಿ ಮತ್ತು ಆಂಡಿ ಪೈಪೋಟಿ ನಡೆಸಿದರು. ಆದ್ರೆ, ಕವಿತಾ ಮಾತ್ರ ತಮ್ಮ ಪಟ್ಟನ್ನು ಬಿಡಲಿಲ್ಲ. ಕವಿತಾಗೆ ಮೊದಲನೇ ಸ್ಥಾನ ನೀಡುವಲ್ಲಿ ಯಾರ ಸಮ್ಮತಿಯೂ ಇರಲಿಲ್ಲ. ಆದರೂ, ಕವಿತಾ ಮಾತ್ರ ಹಠ ನಿಲ್ಲಿಸಲಿಲ್ಲ.
ಪಕ್ಷಪಾತ ಮಾಡಿದ ಕವಿತಾ, ಸುದೀಪ್ ಮುಂದೆ ಕೊಟ್ಟ ಸಬೂಬು ಏನು.?
ಎರಡನೇ ಸ್ಥಾನಕ್ಕೆ ಜೋತು ಬಿದ್ದ ಶಶಿ
ಮೊದಲನೇ ಸ್ಥಾನದ ಮೇಲೆ ಕಣ್ಣಿಡದ ಶಶಿ, ಎರಡನೇ ಸ್ಥಾನದಲ್ಲಿ ನಿಂತಿದ್ದರು. ಇನ್ನೂ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಕ್ರಮವಾಗಿ ಜಯಶ್ರೀ ಮತ್ತು ಧನರಾಜ್ ನಿಂತರು.
'ಅರ್ಧ ತಲೆ ಬೋಳಿಸಿಕೊಳ್ಳುವೆ' ಎಂದು ಹೊಸ ಸವಾಲೆಸೆದ ಆಂಡಿ.!
ಕೊನೆಯ ಸ್ಥಾನ ಆಂಡಿ
ವಾದ-ವಿವಾದ ಜಾಸ್ತಿ ಆಗುತ್ತಿದ್ದಂತೆಯೇ, ಕೊನೆಯ ಸ್ಥಾನದಲ್ಲಿ ಆಂಡಿ ನಿಂತರು. ಉಳಿದವರು ಯಾವ ನಂಬರ್ ಖಾಲಿ ಇತ್ತೋ, ಆ ಜಾಗದಲ್ಲಿ ನಿಂತುಕೊಂಡರು.
ಕವಿತಾಗೆ ನಿಜವಾಗಲೂ ಪ್ರಪೋಸ್ ಮಾಡಿಬಿಟ್ರಾ 'ರೈತ' ಶಶಿ.?
ಮನಸಾಕ್ಷಿಗೆ ಅನುಗುಣವಾಗಿ ಯಾರೂ ನಿಂತಿಲ್ಲ.!
''ಮನಸಾಕ್ಷಿಗೆ ಅನುಗುಣವಾಗಿ ಯಾರೂ ಅವರವರ ಸ್ಥಾನದಲ್ಲಿ ನಿಂತಿಲ್ಲ'' ಎಂದು ಮುರಳಿ ಎಲ್ಲರ ಮುಂದೆ ಹೇಳಿದರು. ಆದರೂ, ''ನನಗೆ ಓವರ್ ಕಾನ್ಫಿಡೆನ್ಸ್ ಇಲ್ಲ. ಜನರ ಮೇಲೆ ನಂಬಿಕೆ ಇದೆ. ನಾನಿಲ್ಲಿ 'ಹೋಗಲಿ ಬಿಡು' ಅನ್ನೋಕೆ ಬಂದಿಲ್ಲ'' ಎಂದು ತಮ್ಮನ್ನ ತಾವು ಸಮರ್ಥಿಸಿಕೊಂಡರು ಕವಿತಾ.