Don't Miss!
- Lifestyle 3ನೇ ಬಾರಿ ಬಾಹ್ಯಾಕಾಶಕ್ಕೆ ಹಾರಲು ಮುಂದಾದ ಸುನೀತಾ ವಿಲಿಯಮ್ಸ್..!
- News ಡಾ.ಮಂಜುನಾಥ್ ಅವರಿಗೆ ಕೇಂದ್ರ ಸಚಿವ ಸ್ಥಾನ: ಸುಳಿವು ಕೊಟ್ಟ ಹೆಚ್ ಡಿ ದೇವೇಗೌಡ
- Automobiles Maruti Suzuki: 1 ವರ್ಷದಲ್ಲಿಯೇ ಹೊಸ ದಾಖಲೆ.. 134,735 ಫ್ರಾಂಕ್ಸ್ ಕಾರುಗಳು ಮಾರಾಟ, ಬೆಲೆ ರೂ.7.51 ಲಕ್ಷ
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಏನ್ ಆಶ್ಚರ್ಯ: 'ಜೀವದ ಗೆಳತಿ' ಜಯಶ್ರೀಯನ್ನೇ ನಾಮಿನೇಟ್ ಮಾಡಿದ ಕವಿತಾ.!
'ಬಿಗ್ ಬಾಸ್' ಮನೆಯಲ್ಲಿ ಯಾರು ಯಾವಾಗ ಯಾರ ವಿರುದ್ಧ ತಿರುಗಿ ಬೀಳ್ತಾರೆ ಅಂತ ಹೇಳುವುದೇ ಕಷ್ಟ. ಇವತ್ತು ದೋಸ್ತ್ ಗಳಾಗಿದ್ದವರು ನಾಳೆ ದುಷ್ಮನ್ ಆಗಬಹುದು. ಬೆನ್ನಿಗೆ ಚೂರಿ ಹಾಕಬಹುದು. ಹಾವು-ಏಣಿ ಅಂತಹ ಈ ಆಟದಲ್ಲಿ ಇವೆಲ್ಲವೂ ಮಾಮೂಲು.
'ಬಿಗ್ ಬಾಸ್' ಮನೆಯಲ್ಲಿ ಮೊದಲ ದಿನದಿಂದಲೂ ಕವಿತಾ ಮತ್ತು ಜಯಶ್ರೀ ಅತ್ಯಂತ ಆತ್ಮೀಯ ಗೆಳತಿಯರು. ಅಸಲಿಗೆ, ಇವರಿಬ್ಬರು 'ಬಿಗ್ ಬಾಸ್'ಗೆ ಬರುವ ಮೊದಲಿನಿಂದಲೂ ಫ್ರೆಂಡ್ಸ್ ಅಂತೆ. ಅದೇ ಫ್ರೆಂಡ್ ಶಿಪ್ 'ಬಿಗ್ ಬಾಸ್' ಮನೆಯಲ್ಲೂ ಮುಂದುವರೆಯಿತು.
ಕವಿತಾ ಮತ್ತು ಜಯಶ್ರೀಯೊಂದಿಗೆ ಶಶಿ ಮತ್ತು ಧನರಾಜ್ ಕೂಡ ಸೇರಿಕೊಂಡರು. ಈ ನಾಲ್ವರದ್ದು ಒಂದು ಗುಂಪು ಎಂದು 'ಬಿಗ್ ಬಾಸ್' ಮನೆಯಲ್ಲಿ ಬ್ರ್ಯಾಂಡ್ ಆಗಿದೆ.
ಇಲ್ಲಿಯವರೆಗೂ ಈ ನಾಲ್ವರು ಯಾವುದರಲ್ಲಿಯೂ ಒಬ್ಬರನ್ನೊಬ್ಬರು ಬಿಟ್ಟುಕೊಟ್ಟಿರಲಿಲ್ಲ. ಆದ್ರೀಗ, ಜಯಶ್ರೀ ಯವರನ್ನೇ ಹೊರಗೆ ಕಳುಹಿಸಲು ಕವಿತಾ ಪ್ಲಾನ್ ಮಾಡಿದ್ದಾರೆ. ಮುಂದೆ ಓದಿರಿ...
ಅಚ್ಚರಿ ಅಂದ್ರೆ ಇದೇ.!
ನಾಮಿನೇಷನ್ ವೇಳೆ ನಡೆದ ಅಚ್ಚರಿ ಅಂದ್ರೆ ಇದೇ ನೋಡಿ. ಒಂಬತ್ತನೇ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಜಯಶ್ರೀ ಹೆಸರನ್ನ ಕವಿತಾ ತೆಗೆದುಕೊಂಡಿದ್ದಾರೆ.
'ಬಿಗ್ ಬಾಸ್' ಮನೆಯಲ್ಲಿ ಗುಂಪುಗಾರಿಕೆ: ತ್ರಿಮೂರ್ತಿಗಳ ಮೇಲೆ ಎಲ್ಲರ ಕಣ್ಣು.!
ಕವಿತಾ ಕೊಟ್ಟ ಕಾರಣ ಏನು.?
''ಪ್ರತಿಯೊಂದು ವಿಚಾರವನ್ನೂ ಜಯಶ್ರೀ ವೈಯುಕ್ತಿಕವಾಗಿ ಪರಿಗಣಿಸುತ್ತಿದ್ದಾರೆ. ಕ್ರೀಡಾ ಮನೋಭಾವದಿಂದ ಆಡುತ್ತಿಲ್ಲ. ಅವರಿಗೆ ಪರ್ಸನಲ್ ಪ್ರಾಬ್ಲಂಗಳಿದೆ. ಎಲ್ಲರ ಜೊತೆ ಮಿಂಗಲ್ ಆಗಬೇಕು ಅಂತ ನನಗೆ ಅನ್ಸುತ್ತೆ'' ಎಂಬ ಕಾರಣವನ್ನು ನೀಡಿ ಜಯಶ್ರೀ ಯನ್ನ ಕವಿತಾ ನಾಮಿನೇಟ್ ಮಾಡಿದ್ದಾರೆ.
'ತ್ರಿಮೂರ್ತಿ'ಗಳಿಗೆ ಕ್ಲಾಸ್ ತೆಗೆದುಕೊಂಡ ಸುದೀಪ್: ತಪ್ಪೊಪ್ಪಿಕೊಂಡ ಕವಿತಾ.!
ಅಂದು ಹಾಗೆ, ಇಂದು ಹೀಗೆ...
ಹಾಗ್ನೋಡಿದ್ರೆ, ಕವಿತಾ ಕ್ಯಾಪ್ಟನ್ ಆಗಿದ್ದಾಗ.. ತಮ್ಮ 'ಗ್ರೂಪ್'ನವರನ್ನು ಸೇಫ್ ಮಾಡಿದ್ದಕ್ಕೆ ಇತರೆ ಸ್ಪರ್ಧಿಗಳು ಸಿಡಿಮಿಡಿಗೊಂಡಿದ್ದರು. ಅಂದು ಗ್ರೂಪ್ ನ ಉಳಿಸಿದ್ದ ಕವಿತಾ ಇಂದು ಅದೇ ಗುಂಪಿನ 'ಗೌರವ ಅಧ್ಯಕ್ಷ'ರನ್ನೇ ಔಟ್ ಮಾಡಲು ಹೊರಟಿದ್ದಾರೆ. ಕವಿತಾ ರವರ ಈ ನಡೆ ಜಯಶ್ರೀಗೆ ಗೊತ್ತಾದರೆ.?
ನಾಮಿನೇಷನ್ ನಲ್ಲಿ 'ಗ್ರೂಪ್' ಉಳಿಸಿದ ಕವಿತಾ ವಿರುದ್ಧ ಸ್ಪರ್ಧಿಗಳು ಸಿಡಿಮಿಡಿ.!
ಜಯಶ್ರೀಗೆ ನಿಮ್ಮ ಬೆಂಬಲ ಇದ್ಯಾ.?
ಅಂದ್ಹಾಗೆ, ಜಯಶ್ರೀ ಈ ವಾರ ನಾಮಿನೇಟ್ ಆಗಿದ್ದಾರೆ. ಜಯಶ್ರೀಗೆ ನಿಮ್ಮ ಬೆಂಬಲ ಇದ್ಯಾ.? ಈ ವಾರ ಯಾರು ಔಟ್ ಆಗಬೇಕು.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.