Don't Miss!
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮುರಿದು ಬಿದ್ದ 'ಗೆಳೆತನ': ರಾಕೇಶ್-ಅಕ್ಷತಾ ನಡುವೆ ಈಗ ಬರೀ ಜಗಳ.!
''ರಾಕೇಶ್ ರಿಂದ ದೂರ ಇರು'' ಅಂತ ತಾಯಿಯಿಂದ ಕಟ್ಟುನಿಟ್ಟಿನ ಆದೇಶ ಬಂದ್ಮೇಲೆ, ಎಂ.ಜೆ.ರಾಕೇಶ್ ರಿಂದ ಅಕ್ಷತಾ ಡಿಸ್ಟೆನ್ಸ್ ಮೇನ್ಟೇನ್ ಮಾಡಿದ್ದರು. ಆದ್ರೆ, ಅದ್ಯಾವಾಗ 'ಬಿಗ್ ಬಾಸ್' ಮನೆಯೊಳಗೆ ವೈಲ್ಡ್ ಕಾರ್ಡ್ ಎಂಟ್ರಿ ರೂಪದಲ್ಲಿ ಮೂವರು ಹುಡುಗಿಯರು ಕಾಲಿಟ್ರೋ, ರಾಕೇಶ್ ಮತ್ತು ಅಕ್ಷತಾ ನಡುವೆ ಗಲಾಟೆ ತಾರಕಕ್ಕೇರಿದೆ.
ಅಕ್ಷತಾ ದೂರ ಸರಿದ್ಮೇಲೆ, ಜೀವಿತಾ ಹಿಂದೆ ಬಿದ್ದಿದ್ದಾರೆ ರಾಕೇಶ್. ಇನ್ನೂ ಮೇಘಶ್ರೀ ಮತ್ತು ನಿವೇದಿತಾ ಜೊತೆಗೂ ರಾಕೇಶ್ ಒಡನಾಟ ಚೆನ್ನಾಗಿದೆ. ಇದು ಅಕ್ಷತಾಗೆ ಇಷ್ಟ ಆಗುತ್ತಿಲ್ಲ.
ಇನ್ನೂ ನಿವೇದಿತಾ ಗೌಡ ಕಂಡ್ರೆ ಅಕ್ಷತಾಗೆ ಆಗ್ಬರ್ತಿಲ್ಲ. ನಿವೇದಿತಾ ಗೌಡ ಜೊತೆಗೆ ರಾಕೇಶ್ ಮಾತನಾಡಿದರೆ, ಅಕ್ಷತಾ ಉರಿದು ಬೀಳ್ತಿದ್ದಾರೆ. ಈ ಎಲ್ಲದರ ನಡುವೆ ನಾಮಿನೇಷನ್ ನಲ್ಲಿ ಅಕ್ಷತಾನ ರಾಕೇಶ್ ಸೇಫ್ ಮಾಡಲಿಲ್ಲ. ಹೀಗಾಗಿ, ಇಬ್ಬರ ನಡುವೆ ಆಗಾಗ ಜಟಾಪಟಿ ನಡೆಯುತ್ತಲೇ ಇದೆ. ಮುಂದೆ ಓದಿರಿ...
ರಾಕೇಶ್ ಮೇಲೆ ಕೆಂಡಕಾರಿದ ಅಕ್ಷತಾ
ಒಂಬತ್ತನೇ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ನಾಮಿನೇಟ್ ಆಗಿರುವ ಸ್ಪರ್ಧಿಗಳ ಪೈಕಿ ಯಾರಾದರೂ ಒಬ್ಬರನ್ನ ಸೇಫ್ ಮಾಡುವ ಅಧಿಕಾರ ಕ್ಯಾಪ್ಟನ್ ರಾಕೇಶ್ ಕೈಯಲ್ಲಿತ್ತು. ಆಗ ರಾಕೇಶ್ ಮುರಳಿಯನ್ನ ಸೇಫ್ ಮಾಡಿದರು. ಅಕ್ಷತಾನ ಬಚಾವ್ ಮಾಡಲಿಲ್ಲ. ಹೀಗಾಗಿ ರಾಕೇಶ್ ಮೇಲೆ ಅಕ್ಷತಾಗೆ ಕೆಂಡದಷ್ಟು ಕೋಪ ಇದೆ.
ಅಕ್ಷತಾ ಋಣ ತೀರಿಸಲು ರಾಕೇಶ್ ಮನಸ್ಸು ಮಾಡಲೇ ಇಲ್ಲ.!
ಟಾಸ್ಕ್ ನಲ್ಲಿ ಸಿಟ್ಟು ಹೊರಹಾಕಿದ ಅಕ್ಷತಾ
'ಬಿಗ್ ಬಾಸ್ ವಿಶ್ವವಿದ್ಯಾನಿಲಯ' ಟಾಸ್ಕ್ ನಲ್ಲಿ ರಾಕೇಶ್ ಮೇಲೆ ಇದ್ದ ಸಿಟ್ಟನ್ನೆಲ್ಲಾ ಅಕ್ಷತಾ ಹೊರಹಾಕಿದರು. ಚಟುವಟಿಕೆ ವೇಳೆ ಉದಾಹರಣೆ ನೀಡುವ ನೆಪದಲ್ಲಿ ರಾಕೇಶ್ ಬಗ್ಗೆಯೇ ಅಕ್ಷತಾ ಪದೇ ಪದೇ ಬೆಟ್ಟು ಮಾಡಿ ತೋರಿಸುತ್ತಿದ್ದರು.
ಅಕ್ಷತಾ ಮುಂದೆ ಹೀಗೊಂದು ಕಲರ್ ಕಾಗೆ ಹಾರಿಸಿದ್ದ ರಾಕೇಶ್.!
ಧಿಕ್ಕಾರ ಕೂಗಿದ ಅಕ್ಷತಾ
'ಕೋಳಿ ಮಂಜ.. ಹುಡುಗಿಯರ ಮೇಲೆ ಹಾರುವ ಹುಂಜ'' ಎನ್ನುತ್ತಾ ಚಟುವಟಿಕೆಯಲ್ಲಿ ರಾಕೇಶ್ ವಿರುದ್ಧ ಅಕ್ಷತಾ ಧಿಕ್ಕಾರ ಕೂಡ ಕೂಗಿದರು. ಒಟ್ನಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ರಾಕೇಶ್ ನ ಅಕ್ಷತಾ ಟಾರ್ಗೆಟ್ ಮಾಡಿದರು.
ಪ್ರೀತಿಯ 'ಪುಟ್ಟ'ನ ಸೇಫ್ ಮಾಡದ ರಾಕೇಶ್: ಅಕ್ಷತಾ ನಿಮಗಿದು ಆಗ್ಬೇಕಿತ್ತು.!
ತಿರುಗೇಟು ಕೊಟ್ಟ ರಾಕೇಶ್
'ಬಿಗ್ ಬಾಸ್ ವಿಶ್ವವಿದ್ಯಾನಿಲಯ' ಚಟುವಟಿಕೆ ಮುಗಿದ ಮೇಲೆ ''ಈ ಲೆವೆಲ್ ಗೆ ನೀವು ಇಳಿಯುತ್ತೀರಾ ಅಂತ ನಾನು ಅಂದುಕೊಂಡಿರಲಿಲ್ಲ. ನನ್ನ ಇಡೀ ಟಾಸ್ಕ್ ನ ನೀವು ಕೆಡಿಸಿದ್ರಿ. ಪ್ರತಿ ಬಾರಿ ನನ್ನ ಮೇಲೆ ಚಾಡಿ ಹೇಳಿದ್ರಿ. ಚೀಪ್ ಹೆಸರು ಕೊಟ್ಟು ನನ್ನ ಚಿಕ್ಕದಾಗಿ ತೋರಿಸಿದ್ರಿ'' ಅಂತ ಅಕ್ಷತಾಗೆ ರಾಕೇಶ್ ತಿರುಗೇಟು ಕೊಟ್ಟರು.
ರಾಕೇಶ್ ಗೆ ಮಾನ, ಮರ್ಯಾದೆ ಇಲ್ಲ ಎಂದ ಆಂಡಿ: ಕಣ್ಣೀರಿಟ್ಟ ಅಕ್ಷತಾ.!
ಇನ್ಮುಂದೆ ಹೇಗೆ.?
ಇಲ್ಲಿಯವರೆಗೂ ಗೆಳೆಯರಾಗಿದ್ದ ಅಕ್ಷತಾ-ರಾಕೇಶ್ ಇದೀಗ ಹಾವು-ಮುಂಗುಸಿ ತರಹ ಕಚ್ಚಾಡುತ್ತಿದ್ದಾರೆ. ಇವರಿಬ್ಬರ ನಡುವಿನ ಗಲಾಟೆ ಹೀಗೇ ಮುಂದುವರೆಯುತ್ತಾ.? ಕಾದು ನೋಡಬೇಕು.