Don't Miss!
- News Poornachandra Tejaswi: ವಿಸ್ಮಯಲೋಕವನ್ನೇ ತೆರೆದಿಡುವ ತೇಜಸ್ವಿಯವರ ಪುಸ್ತಕಗಳು
- Lifestyle ಗ್ರಹಣ ಕಾಲದಲ್ಲಿ ಆಹಾರ ಸೇವಿಸಬಾರದೇಕೆ.? ಹಿರಿಯರ ವಾದವೇನು..?
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಕ್ಷತಾಗೆ ರಾಕೇಶ್ 'ಥರ್ಡ್ ಕ್ಲಾಸ್' ಎಂದಿದ್ದು ಸರಿನಾ.?
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ 'ವಿಚಿತ್ರ' ಅಂತ ಅನಿಸೋದು ಅಕ್ಷತಾ ಮತ್ತು ರಾಕೇಶ್ ನಡುವಿನ ಬಾಂಧವ್ಯ. ಯಾಕಂದ್ರೆ, ಇವರಿಬ್ಬರು ಅದ್ಯಾವಾಗ, ಯಾಕೆ ಜಗಳ ಆಡುತ್ತಾರೋ.? ಹೇಗೆ ರಾಜಿ ಮಾಡಿಕೊಳ್ತಾರೋ.? ಎಂಬುದೇ ಗೊತ್ತಾಗಲ್ಲ.
ಒಂದೊಂದು ಬಾರಿ ಒಂದೊಂದು ರೀತಿ ಇದ್ದು, ಒಂದೊಂದು ಹೇಳಿಕೆ ನೀಡುವ ಇವಬ್ಬರದ್ದು ಗೇಮ್ ಪ್ಲಾನೋ, ಸ್ಟ್ರಾಟೆಜಿನೋ... ಅರ್ಥವಾಗದು. ಇತ್ತೀಚೆಗೆ ನಡೆದ ಜಗಳವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ...
ವಿನಾಕಾರಣ ''ಲೋ ಮಗನೇ ಕತ್ತಿನ ಪಟ್ಟಿ ಹಿಡಿದು ಕಪಾಳಕ್ಕೆ ಹೊಡೆಯುವೆ'' ಅಂತ ಅಕ್ಷತಾ ಹೇಳಿದರೆ, ಆಕೆಗೆ ''ಡೌನ್ ಮಾರ್ಕೆಟ್, ಥರ್ಡ್ ಕ್ಲಾಸ್'' ಅಂತೆಲ್ಲಾ ರಾಕೇಶ್ ಬೈದಿದ್ದರು.
ಇವರಿಬ್ಬರ ಈ ಜಗಳ ಡ್ರಾಮಾವನ್ನ ನೋಡಿ ನೋಡಿ ಬೇಸೆತ್ತ ಸುದೀಪ್ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಏನಂದರು ಗೊತ್ತಾ.?
ಇದೆಲ್ಲ ಬೇಕಾ.?
''ಡೌನ್ ಮಾರ್ಕೆಟ್, ಥರ್ಡ್ ಕ್ಲಾಸ್ ಅಂತೆಲ್ಲಾ ಅಕ್ಷತಾಗೆ ಹೇಳುತ್ತೀರಾ. ಇದೆಲ್ಲ ಬೇಕಾ.? ಎರಡು ಊರಿನ ಮಧ್ಯೆ ಜಗಳ ಆಗುತ್ತಿದೆ ಅಂದ್ರೆ, ಒಬ್ಬರು ಕತ್ತಿಯನ್ನು ಕೆಳಗೆ ಬಿಟ್ಟರೆ ಮಾತ್ರ ನೆಮ್ಮದಿ. ಇಲ್ಲಾಂದ್ರೆ ಹೆಣಗಳು ಉರುಳುತ್ತವೆ'' ಎಂದು ರಾಕೇಶ್ ಗೆ ಸುದೀಪ್ ಬುದ್ಧಿವಾದ ಹೇಳಿದರು.
ಎಂ.ಜೆ.ರಾಕೇಶ್ ಜೊತೆ ಸೇರಿ ಅಕ್ಷತಾ ಪಾಂಡವಪುರ ಫೂಲ್ ಆಗುತ್ತಿದ್ದಾರೆ.!
ಯಾಕೆ ಬೇಕಿತ್ತು.?
''ನಿಮಗೆ ಕೆಲವು ಇಷ್ಟ ಆಗಲಿಲ್ಲ ಅಂದ್ರೆ, 'ಲೋ ಮಗನೇ.. ಕತ್ತಿನ ಪಟ್ಟಿ ಹಿಡಿದು ಕಪಾಳಕ್ಕೆ ಹೊಡೆಯುವೆ ಅಂತೆಲ್ಲಾ ಮಾತನಾಡುತ್ತೀರಾ. ಆದ್ರೆ, ಅಲ್ಲಿ ಜಗಳವೇ ಇರಲ್ಲ. ಹಳೇ ಸಿಟ್ಟನ್ನ ಇಟ್ಟುಕೊಂಡು ಏನೇನೋ ಮಾತಾಡ್ತೀರಾ. ಯಾರಾದರೂ ನಿಮಗೆ ಅದೇ ತರಹ ಮಾತನಾಡಿದರೆ.? ಇದು ಯಾಕೆ ಬೇಕಿತ್ತು.?'' ಎಂದು ಅಕ್ಷತಾಗೆ ಸುದೀಪ್ ಪ್ರಶ್ನಿಸಿದರು.
ರಾಕೇಶ್ ಬಗ್ಗೆ ಅಕ್ಷತಾ ಪಾಂಡವಪುರ ತಾಯಿಗೆ ಕೆಂಡದಷ್ಟು ಕೋಪ.?
ಅರ್ಥ ಮಾಡಿಕೊಳ್ಳುವುದು ಕಷ್ಟ
''ಅಕ್ಷತಾ ಮತ್ತು ರಾಕೇಶ್ ನಡುವೆ ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ. ಅರ್ಥ ಆಗಬೇಕು ಅಂತಲೂ ಅಲ್ಲ. ಆದ್ರೆ ಜೋಪಾನ. ಜಗಳ ಯಾಕೆ ಆಗುತ್ತೆ ಅಂತ ಗೊತ್ತಾಗಲ್ಲ. ಆದ್ರೆ, ಜಗಳ ಆದ್ಮೇಲೆ ರಾಜಿ ಆಗುತ್ತೆ. ರಾಜಿ ಆದ್ಮೇಲೆ ಮಿಕ್ಕಿದ್ದೆಲ್ಲ ಸಣ್ಣದಾಗಿ ಕಾಣುತ್ತದೆ'' ಎಂದು ಸುದೀಪ್ ಹೇಳಿದಾಗ, ''ಆ ತರಹ ಮಾತನಾಡಿದ್ದಕ್ಕೆ ಕ್ಷಮೆ ಕೇಳಿದ್ದೇನೆ'' ಅಂತ ಅಕ್ಷತಾ ಹೇಳಿದರು.
ಏನು ಮಾಡೋದು ಅಂತ ಗೊತ್ತಾಗದೆ, ರಾಕೇಶ್-ಅಕ್ಷತಾ ಜಗಳ ಆಡುತ್ತಿದ್ದಾರೆ.!
ಏನು ಪ್ರಾಬ್ಲಂ.?
''ಕ್ಷಮೆ ಕೇಳಿದ್ದೀರಾ. ಆದ್ರೆ, ನಿಮ್ಮಿಬ್ಬರ ನಡುವಿನ ಪ್ರಾಬ್ಲಂ ಏನು.?'' ಎಂದು ಸುದೀಪ್ ಪ್ರಶ್ನಿಸಿದರು. ಅದಕ್ಕೆ, ''ರಾಕೇಶ್ ಗೆ ನಾನು ಈ ಮನೆಯಲ್ಲಿ ಇರುವುದೇ ಪ್ರಾಬ್ಲಂ ಅನ್ಸುತ್ತೆ'' ಅಂತ ಅಕ್ಷತಾ ಹೇಳಿದರು. ಆಗ, ''ನಿಮ್ಮ ಪ್ರಾಬ್ಲಂ ನ ನೀವೇ ಬಗೆಹರಿಸಿಕೊಳ್ಳಿ'' ಎಂದು ನುಡಿದರು ಸುದೀಪ್.