Don't Miss!
- News ಮತದಾನಕ್ಕೆ ಕೌಂಟ್ಡೌನ್: ಚಾಮರಾಜನಗರ ಲೋಕಸಭಾ ಕ್ಷೇತ್ರದ ಮತಗಟ್ಟೆಗಳಲ್ಲಿ ಸಿದ್ಧತೆ ಹೇಗಿದೆ?-ಮಾಹಿತಿ
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Automobiles ಹೊಸ ಜೀಪ್ ರಾಂಗ್ಲರ್ ಸಂಪೂರ್ಣ ರಿವ್ಯೂ ವಿಡಿಯೋ: ಆಫ್ರೋಡ್ನಲ್ಲಿ ಇದನ್ನು ಮೀರಿಸುವವರಿಲ್ಲ!
- Lifestyle ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಎರಡನೇ ಫೈನಲಿಸ್ಟ್ ಧನರಾಜ್.!
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಮೊದಲ ಫೈನಲಿಸ್ಟ್ ಗಾಯಕ ನವೀನ್ ಸಜ್ಜು ಅನ್ನೋದು ನಿಮಗೆಲ್ಲ ಗೊತ್ತೇ ಇದೆ. ಇದೀಗ ಎರಡನೇ ಫೈನಲಿಸ್ಟ್ ಆಗಿ ಆಯ್ಕೆ ಆಗಿರುವವರು ಕಾಮನ್ ಮ್ಯಾನ್ ಧನರಾಜ್.
'ಬಿಗ್ ಬಾಸ್' ನೀಡಿದ ವಿಶೇಷ ಸವಾಲನ್ನು ಸ್ವೀಕರಿಸಿ, ಯಶಸ್ವಿಯಾಗಿ ಪೂರ್ಣಗೊಳಿಸಿದ ನವೀನ್ ಸಜ್ಜು ಫಿನಾಲೆ ವಾರಕ್ಕೆ ಟಿಕೆಟ್ ಪಡೆದರೆ, ಇತ್ತ 'ಬಿಗ್ ಬಾಸ್' ಮನೆಗೆ ಬಂದ ವಿಶೇಷ ಅತಿಥಿಗಳ ಮನಗೆದ್ದು ಧನರಾಜ್ ಫಿನಾಲೆ ವಾರಕ್ಕೆ ಲಗ್ಗೆ ಇಟ್ಟಿದ್ದಾರೆ.
ಒಳ್ಳೆ ಹುಡುಗ ಪ್ರಥಮ್, ಕಿರಿಕ್ ಕೀರ್ತಿ, ಸಂಜನಾ, ಕೃಷಿ ತಾಪಂಡ ಮತ್ತು ಸಮೀರಾಚಾರ್ಯ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದಾರೆ.
'ಬಿಗ್ ಬಾಸ್' ಮನೆಯಲ್ಲಿ ವಿಶೇಷ ಅತಿಥಿಗಳು: ಇನ್ಮೇಲೆ ಇವರೇ ಗೊಂಬೆ ಆಡ್ಸೋರು.!
'ಬಿಗ್ ಬಾಸ್' ಮನೆಯಲ್ಲಿರುವ ಸ್ಪರ್ಧಿಗಳ ಪೈಕಿ ಒಬ್ಬರನ್ನು ಸೇಫ್ ಮಾಡುವ ವಿಶೇಷ ಅಧಿಕಾರವನ್ನು ವಿಶೇಷ ಅತಿಥಿಗಳಿಗೆ 'ಬಿಗ್ ಬಾಸ್' ನೀಡಿದ್ದರು. ಇದರ ಅನುಸಾರ, ಜೆಂಟಲ್ ಮ್ಯಾನ್ ಧನರಾಜ್ ರನ್ನ ವಿಶೇಷ ಅತಿಥಿಗಳು ಒಮ್ಮತದ ನಿರ್ಧಾರದ ಮೇರೆಗೆ ಸೇಫ್ ಮಾಡಿದರು.
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಮೊದಲ ಫೈನಲಿಸ್ಟ್ ಗಾಯಕ ನವೀನ್.!
ವಿಶೇಷ ಅತಿಥಿಗಳಿಗೆ ಧನರಾಜ್ ಮೇಲೆ ಯಾವುದೇ ಆಕ್ಷೇಪಣೆ ಇರಲಿಲ್ಲ. ಹೀಗಾಗಿ, ಅವರನ್ನೇ ಫಿನಾಲೆ ವಾರಕ್ಕೆ ಡೈರೆಕ್ಟ್ ಆಗಿ ಕಳುಹಿಸಿಕೊಡಲಾಯಿತು. ಬಾಕಿ ಉಳಿದ ಐವರು (ಕವಿತಾ, ರಾಕೇಶ್, ಆಂಡ್ರ್ಯೂ, ರಶ್ಮಿ ಮತ್ತು ಶಶಿ) ಸದ್ಯ ಡೇಂಜರ್ ಝೋನ್ ನಲ್ಲಿದ್ದಾರೆ. ಈ ಐವರ ಪೈಕಿ ಯಾರು ಔಟ್ ಆಗಬೇಕು.? ನಿಮ್ಮ ಆಯ್ಕೆಯನ್ನ ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.