Don't Miss!
- News Namma Metro Service Extend: ಲೋಕಸಭಾ ಚುನಾವಣೆಗಾಗಿ ಮೆಟ್ರೋ ಸೇವೆ ವಿಸ್ತರಣೆ, ಗಮನಿಸಿ
- Automobiles Hero: ಮಧ್ಯಮ ವರ್ಗದವರ ನೆಚ್ಚಿನ ಬೈಕ್.. ರೂ.75 ಸಾವಿರ ಬೆಲೆ.. ಮೈಲೇಜ್ನಲ್ಲಿ ಸರಿ ಸಾಟಿಯಿಲ್ಲ!
- Lifestyle 3ನೇ ಬಾರಿ ಬಾಹ್ಯಾಕಾಶಕ್ಕೆ ಹಾರಲು ಮುಂದಾದ ಸುನೀತಾ ವಿಲಿಯಮ್ಸ್..!
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗೆಲ್ಲಲು ಬಂದಿಲ್ಲ ಎನ್ನುವ ರಾಕೇಶ್ ಫಿನಾಲೆಗೆ ಯಾಕ್ರೀ ಹೋಗಬೇಕು.?
''ನನಗೆ 'ಬಿಗ್ ಬಾಸ್' ಆಟ ಅಲ್ಲ. ಇದು ಜರ್ನಿ. ನಾನಿಲ್ಲಿ ಗೆಲ್ಲಲು ಬಂದಿಲ್ಲ'' ಅಂತ 'ಬಿಗ್ ಬಾಸ್' ಮನೆಯಲ್ಲೇ ಹಲವು ಬಾರಿ ಎಂ.ಜೆ.ರಾಕೇಶ್ ಹೇಳಿದ್ದಾರೆ. ಸಾಲದಕ್ಕೆ, ಅಕ್ಷತಾ ಮತ್ತು ರಾಕೇಶ್ ಟಾಪ್ 2 ಹಂತ ತಲುಪಿದರೆ, ''ಅಕ್ಷತಾಗೆ ಟ್ರೋಫಿ ಬಿಟ್ಟುಕೊಡುವೆ'' ಅಂತಲೂ ರಾಕೇಶ್ ಹೇಳಿಕೊಂಡಿದ್ದರು.
ಅಲ್ಲಿಗೆ, ಗೆಲ್ಲಬೇಕು ಎಂಬ ಛಲ ರಾಕೇಶ್ ಗೆ ಇದ್ದ ಹಾಗಿಲ್ಲ. ಇದ್ದರೂ, ಅದನ್ನ 'ಗುಡ್ನೆಸ್' ನೆಪದಲ್ಲಿ ರಾಕೇಶ್ ತೋರಿಸಿಕೊಳ್ಳುತ್ತಿಲ್ಲ. ಇಂತಿಪ್ಪ ರಾಕೇಶ್ ಫಿನಾಲೆ ವಾರಕ್ಕೆ ಯಾಕೆ ಹೋಗಬೇಕು.?
''ಗುಡ್ನೆಸ್', 'ಸಸ್ಯಾಹಾರ' ಮತ್ತು 'ಫಿಟ್ನೆಸ್'ನ 'ನಾನು ''ಪ್ರಮೋಟ್'' ಮಾಡುತ್ತಿರುವೆ. ಹೀಗಾಗಿ, ಫಿನಾಲೆ ವಾರಕ್ಕೆ ನಾನು ಹೋಗಬೇಕು'' ಎಂದು ರಾಕೇಶ್ ತಮ್ಮನ್ನ ತಾವು ಸಮರ್ಥಿಸಿಕೊಂಡರು.
''ನಾನು ಕೊಡುವವನು'' ಎನ್ನುತ್ತಾ ಅಕ್ಷತಾಗಾಗಿ ಔಟ್ ಆಗಲು ಸಿದ್ಧರಿದ್ದ ರಾಕೇಶ್ ಬಗ್ಗೆ 'ಬಿಗ್ ಬಾಸ್' ಮನೆಗೆ ಬಂದ ವಿಶೇಷ ಅತಿಥಿಗಳಿಗೆ ಆಕ್ಷೇಪಣೆ ಇತ್ತು. ಹೀಗಾಗಿ ಸ್ಪೆಷಲ್ ಗೆಸ್ಟ್ ಗಳು ರಾಕೇಶ್ ರನ್ನ ಸೇಫ್ ಮಾಡಲಿಲ್ಲ. ಮುಂದೆ ಓದಿರಿ...
'ಬಿಗ್ ಬಾಸ್' ಮನೆಗೆ ವಿಶೇಷ ಅತಿಥಿಗಳು
ಒಳ್ಳೆ ಹುಡುಗ ಪ್ರಥಮ್, ಕಿರಿಕ್ ಕೀರ್ತಿ, ಸಂಜನಾ, ಕೃಷಿ ತಾಪಂಡ ಮತ್ತು ಸಮೀರಾಚಾರ್ಯ ವಿಶೇಷ ಅತಿಥಿಗಳಾಗಿ 'ಬಿಗ್ ಬಾಸ್' ಔಟ್ ಹೌಸ್ ಗೆ ಎಂಟ್ರಿಕೊಟ್ಟರು. 'ಬಿಗ್ ಬಾಸ್' ಸ್ಪರ್ಧಿಗಳ ಪೈಕಿ ಒಬ್ಬರನ್ನು ಸೇಫ್ ಮಾಡುವ ಅಧಿಕಾರವನ್ನ ವಿಶೇಷ ಅತಿಥಿಗಳಿಗೆ 'ಬಿಗ್ ಬಾಸ್' ನೀಡಿದ್ದರು.
ಒಂದು ಚಪಾತಿ, ಪೀಸ್ ಹೀರೇಕಾಯಿಗಾಗಿ ಜಗಳ ಆಡಿದ ರಾಕೇಶ್ ಗುಡ್ನೆಸ್ ಎಲ್ಲಿ ಹೋಯ್ತು.?
ಸಮರ್ಥನೆ ಕೊಡಬೇಕಿದ್ದ ಸ್ಪರ್ಧಿಗಳು
''ಈ ವಾರ ತಾವು ಯಾಕೆ ಉಳಿದುಕೊಳ್ಳಬೇಕು.? ಫಿನಾಲೆ ವಾರಕ್ಕೆ ಯಾಕೆ ಹೋಗಬೇಕು.?'' ಎಂಬುದರ ಬಗ್ಗೆ ಸ್ಪರ್ಧಿಗಳು ತಮ್ಮನ್ನ ತಾವು ಸಮರ್ಥಿಸಿಕೊಳ್ಳಬೇಕಿತ್ತು. ಇದರ ಅನುಸಾರ, ವಿಶೇಷ ಅತಿಥಿಗಳು ಒಮ್ಮತದ ನಿರ್ಧಾರ ಕೈಗೊಳ್ಳಬೇಕಿತ್ತು.
ಅಕ್ಷತಾ ವಿಚಾರದಲ್ಲಿ ರಾಕೇಶ್ ಮುಖವಾಡ ಕಳಚಿದ ಸುದೀಪ್.!
ರಾಕೇಶ್ ಗೆ ಪ್ರಶ್ನೆ ಮಾಡಿದ ಕಿರಿಕ್ ಕೀರ್ತಿ
''ನಿನ್ನೆ ನೀವು ಅಕ್ಷತಾಗಾಗಿ ಆಟವನ್ನ ಬಿಟ್ಟುಕೊಡಲು ರೆಡಿ ಇದ್ರಿ. ಇವತ್ತು ಇರಬೇಕು ಅಂತ ಸಮರ್ಥಿಸಿಕೊಳ್ತೀರಾ. ಇದು ಹೇಗೆ ಸಾಧ್ಯ.?'' ಎಂದು ಎಂ.ಜೆ.ರಾಕೇಶ್ ಗೆ ಕಿರಿಕ್ ಕೀರ್ತಿ ಪ್ರಶ್ನೆ ಮಾಡಿದರು.
'ಗುಡ್ನೆಸ್' ಹೆಸರಲ್ಲಿ ರಾಕೇಶ್ ಆಡುತ್ತಿರುವ ಡಬಲ್ ಗೇಮ್ ಬಯಲು ಮಾಡಿದ ಆಂಡಿ.!
ರಾಕೇಶ್ ಹೇಳಿದ್ದೇನು.?
''ಬಿಟ್ಟುಕೊಡುವುದು ಸುಲಭವಾಗಿ ಇರಲಿಲ್ಲ. ಒಳ್ಳೆತನ ಮತ್ತು ಗುಡ್ನೆಸ್ ನಿಂದ ಈ ಜರ್ನಿಯನ್ನ ಕಂಪ್ಲೀಟ್ ಮಾಡಬೇಕು ಅಂತಿದ್ದೀನಿ. ನಿನ್ನೆ ನಾನು ತೋರಿಸಿದ್ದು ಒಳ್ಳೆತನ ಮತ್ತು ಗುಡ್ನೆಸ್. ತ್ಯಾಗ ಮಾಡಲು ನಾನು ಹೋಗಿದ್ದೆ'' ಅಂತ ರಾಕೇಶ್ ಹೇಳಿದರು.
ಮಾಡೋದೆಲ್ಲಾ ಮಾಡಿ ಕಣ್ಣೀರು ಹಾಕಿದ ರಾಕೇಶ್: ಹಿಂದಿದೆ ಹೊಸ ಸ್ಟ್ರಾಟೆಜಿ.!
ತೋರ್ಪಡಿಕೆಗಾಗಿ ಇಷ್ಟೆಲ್ಲಾ.?
''ತೋರ್ಪಡಿಕೆಗಾಗಿ ತ್ಯಾಗ ಮಾಡಲು ಮುಂದಾಗಿದ್ರಾ.?'' ಎಂದು ಪ್ರಥಮ್ ಪ್ರಶ್ನಿಸಿದರು. ಆಗ, ''ಹೊರಗೆ ಹೋಗುವ ಅಧಿಕಾರ ನನಗೆ ಕೊಟ್ಟಿದ್ದರೆ ನಾನು ಹೋಗುತ್ತಿದ್ದೆ'' ಎಂದರು ರಾಕೇಶ್.
ಮಾಡೋದೆಲ್ಲಾ ಮಾಡಿದ್ರೂ ಸಮರ್ಥನೆ ನೀಡುವಲ್ಲಿ ರಾಕೇಶ್ ಎತ್ತಿದ ಕೈ.!
ಇದು ಕಾಂಪಿಟೇಶನ್
''ಅಕ್ಷತಾನಾ ಆ ಕ್ಷಣದಲ್ಲಿ ಮನವೊಲಿಸಲು ಅಥವಾ ಗುಡ್ನೆಸ್ ಅಂತ ತೋರಿಸಿಕೊಳ್ಳುವ ಪ್ರಯತ್ನದಲ್ಲಿ ನೀವು ಜನರ ಅಭಿಪ್ರಾಯವನ್ನು ಗಾಳಿಗೆ ತೂರಿದ್ದೀರಾ'' ಅಂತ ಪ್ರಥಮ್ ಹೇಳಿದಾಗ, ''ಇಲ್ಲಿ ಅಕ್ಷತಾ ಅಥವಾ ಯಾರೇ ಇದ್ದಿದ್ದರೂ, ನಾನೇ ಹೊರಗೆ ಹೋಗುತ್ತಿದ್ದೆ'' ಅಂತ ಮತ್ತೆ ರಾಕೇಶ್ ಗುಡ್ನೆಸ್ ರಾಗ ಎಳೆಯುತ್ತಿದ್ದಂತೆಯೇ.. ''ನಿಮ್ಮ ದೃಷ್ಟಿಕೋನದಲ್ಲಿ ನೀವು ಹೇಳುತ್ತಿದ್ದೀರಾ. ಅದನ್ನ ಬೇರೆಯವರು ಮೆಚ್ಚಿಕೊಳ್ಳಬೇಕು ಎಂಬ ಯಾವ ನಿಯಮ ಕೂಡ ಇಲ್ಲ. ಇದು ಕಾಂಪಿಟೇಶನ್'' ಎಂದರು ಕಿರಿಕ್ ಕೀರ್ತಿ.
ವಿಶೇಷ ಅತಿಥಿಗಳು ಸೇಫ್ ಮಾಡಲಿಲ್ಲ.!
ವಿಶೇಷ ಅತಿಥಿಗಳು ರಾಕೇಶ್ ರನ್ನು ಸೇಫ್ ಮಾಡಲಿಲ್ಲ. ನೀವು ರಾಕೇಶ್ ಗೆ ಬೆಂಬಲ ಕೊಡ್ತೀರಾ.? ರಾಕೇಶ್ ಪರವಾಗಿ ವೋಟ್ ಮಾಡಿ, ಫಿನಾಲೆ ವಾರಕ್ಕೆ ಕಳುಹಿಸುತ್ತೀರಾ.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.