Don't Miss!
- News Mysuru Zoo: ಬೇಸಿಗೆಯಲ್ಲೂ ಮೈಸೂರು ಮೃಗಾಲಯ ಕೂಲ್.. ಕೂಲ್! ಹೇಗೆ ಗೊತ್ತಾ?
- Technology vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಹುಚ್ಚು ನಾಯಿ' ಎಂದ ಆಂಡ್ರ್ಯೂ: 'ಚಪ್ಪಲಿ ಕೈಗೆ ಬರುತ್ತೆ' ಅಂತ ಎಚ್ಚರಿಕೆ ಕೊಟ್ಟ ಅಕ್ಷತಾ.!
ಬಾಯಿಗೆ ಬಂದ ಹಾಗೆ ಮಾತನಾಡುವುದರಲ್ಲಿ... ಇನ್ನೊಬ್ಬರ ಟೆಂಪರ್ ರೈಸ್ ಮಾಡುವುದರಲ್ಲಿ... ಕಿರಿಕಿರಿ ತರುವುದರಲ್ಲಿ ಆಂಡ್ರ್ಯೂ ಎತ್ತಿದ ಕೈ.
ಆಂಡ್ರ್ಯೂಗೆ ಕಾಮಿಡಿ ಸೆನ್ಸ್ ಚೆನ್ನಾಗಿದೆ ನಿಜ. ಆದ್ರೆ, ಅದನ್ನೇ ದುರ್ಬಳಕೆ ಮಾಡಿಕೊಂಡು ಬೇಕಾಬಿಟ್ಟಿ ಮಾತನಾಡುತ್ತಾ ಇತರೆ ಸ್ಪರ್ಧಿಗಳ ಜೊತೆ ಕಾಲು ಕೆರೆದುಕೊಂಡು ಜಗಳಕ್ಕೆ ನಿಲ್ಲುತ್ತಾರೆ ಈ ಆಂಡ್ರ್ಯೂ. ನಿನ್ನೆ ಅಕ್ಷತಾ ವಿಷಯದಲ್ಲಿ ಆಗಿದ್ದೂ ಇದೇ.
ಅಡುಗೆ ಮನೆಯ ಡಿಪಾರ್ಟ್ಮೆಂಟ್ ನಲ್ಲಿ ಆಂಡ್ರ್ಯೂ ಇದ್ಮೇಲೆ, 'ಕಿಚನ್ ಲೀಡರ್' ಹೇಳಿದ ಕೆಲಸವನ್ನ ಆಂಡ್ರ್ಯೂ ಮಾಡಲೇಬೇಕು. ಪಾತ್ರೆ ತೊಳೆಯುವ ಜವಾಬ್ದಾರಿ ಆಂಡ್ರ್ಯೂ ಮೇಲಿತ್ತು. ಪಾತ್ರೆ ತೊಳೆಯುವ ಕೆಲಸ ಇನ್ನೂ ಪೆಂಡಿಂಗ್ ನಲ್ಲಿದ್ದ ಕಾರಣ ಆಂಡ್ರ್ಯೂ ಮತ್ತು ಅಕ್ಷತಾ ನಡುವೆ ಮಾತಿನ ಚಕಮಕಿ ನಡೆಯಿತು. ಮುಂದೆ ಓದಿರಿ...
ಕೆಣಕುವ ಆಂಡ್ರ್ಯೂ
''ಪಾತ್ರೆ ಇನ್ನೂ ಬಾಕಿ ಇದೆ... ತೊಳೆಯಬೇಕು'' ಅಂತ ಅಕ್ಷತಾ ಹೇಳಲು ಬಂದರೆ, ಅದಕ್ಕೆ ತಾಳ್ಮೆಯಿಂದ ಪ್ರತಿಕ್ರಿಯೆ ಕೊಡದ ಆಂಡ್ರ್ಯೂ ''ಹುಚ್ಚು ನಾಯಿ.. ನನಗೇನೂ ಹೇಳೇ ಇಲ್ಲ. ಅವಳೇ ಮಾತನಾಡುತ್ತಾಳೆ'' ಅಂತ ನಾಲಿಗೆ ಹೊರಳಿದ ಹಾಗೆ ಕಾಮೆಂಟ್ ಮಾಡಿದರು.
ರಾಕೇಶ್-ಅಕ್ಷತಾ ನಡುವೆ ಏನಿದೆ-ಏನಿಲ್ಲ.? ಗಾಸಿಪ್ ಗಳಿಗೆ ಸಿಕ್ಕ ಸ್ಪಷ್ಟನೆ ಇದು..
ತಿರುಗೇಟು ಕೊಟ್ಟ ಅಕ್ಷತಾ
''ಹುಚ್ಚು ನಾಯಿ ಅಂತೆಲ್ಲಾ ಹೇಳಬೇಡ. ಮಾತನಾಡಲು ನನಗೂ ಬರುತ್ತೆ. ಚಪ್ಪಲಿ ಕೈಗೆ ಬರುತ್ತೆ. ಕೈಗೆ ಬಂದ್ಮೇಲೆ ಮುಂದೇನಾಗುತ್ತೆ ಅಂತ ನಿನಗೂ ಗೊತ್ತು'' ಎನ್ನುತ್ತಾ ಆಂಡ್ರ್ಯೂಗೆ ತಿರುಗೇಟು ಕೊಟ್ಟರು ಅಕ್ಷತಾ.
ಉಲ್ಟಾ ಪಲ್ಟಾ ಮಾತನಾಡಿದ ಆಂಡ್ರ್ಯೂ: ಪಿತ್ತ ನೆತ್ತಿಗೇರಿಸಿಕೊಂಡ ಧನರಾಜ್.!
ಪಿತ್ತ ನೆತ್ತಿಗೇರಿಸುವುದರಲ್ಲಿ ನಂಬರ್ 1
''ಚಪ್ಪಲಿ ಕೈಗೆ ಬರುತ್ತೆ'' ಅಂತ ಅಕ್ಷತಾ ಹೇಳಿದ್ದಕ್ಕೆ, ''ಧಮ್ ಇದ್ದರೆ ಹೊಡಿ.. ಹೊಡಿ'' ಅಂತ ಪಿತ್ತ ನೆತ್ತಿಗೇರಿಸುವ ಕೆಲಸ ಮಾಡಿದರೆ ಹೊರತು ಪಾತ್ರೆ ತೊಳೆಯಲು ಮಾತ್ರ ಆಂಡ್ರ್ಯೂ ಮುಂದಾಗಲಿಲ್ಲ.
'ಬಿಗ್' ಕಿತ್ತಾಟ: ರಶ್ಮಿ 'ಲೋಕಲ್ ಆಂಟಿ', ಸ್ಲಂ ಕ್ಯಾಟಗರಿ ಎಂದ ಆಂಡ್ರ್ಯೂ.!
ಬುದ್ಧಿ ಬಂದಿಲ್ಲ.!
''ಅವರು ಹಾಗೆ ಹೇಳಿದಕ್ಕೆ ನಾನು ಕೌಂಟರ್ ಕೊಟ್ಟೆ'' ಅಂತ ಪ್ರತಿ ಬಾರಿ ಸಮಜಾಯಿಷಿ ಕೊಡುವ ಆಂಡ್ರ್ಯೂಗೆ ಸುದೀಪ್ ಎಚ್ಚರಿಕೆ ಕೂಡ ಕೊಟ್ಟಿದ್ದರು. ''ಮಾತಿನ ಮೇಲೆ ನಿಗಾ ಇರಲಿ'' ಅಂತ ಎಲ್ಲರಿಗೂ ಕಿವಿಮಾತು ಹೇಳಿದ್ದರು. ಇಷ್ಟಾದ್ರೂ, ಆಂಡ್ರ್ಯೂಗೆ ಬುದ್ಧಿ ಬಂದಿಲ್ಲ. ಜಗಳ ಆಡುತ್ತಿದ್ದರೆ, 'ಬಿಗ್ ಬಾಸ್' ಮನೆಯಲ್ಲಿ ಹೆಚ್ಚು ದಿನ ಇರಬಹುದು ಅನ್ನೋದು ಅವರ ಸ್ಟ್ರಾಟೆಜಿ ಆಗಿರಬಹುದು.!