Don't Miss!
- Sports 'ಟಿ20 ವಿಶ್ವಕಪ್ಗೆ ಈತನನ್ನು ಆಯ್ಕೆ ಮಾಡಿ'; ಅಜಿತ್ ಅಗರ್ಕರ್ಗೆ ಬಂತು ದೊಡ್ಡ ಮನವಿ!
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- News Realme Narzo 70: ಭರ್ಜರಿ ಕ್ಯಾಮೆರಾ ಫೀಚರ್ಗಳೊಂದಿಗೆ ರಿಯಲ್ಮಿ ನಾರ್ಜೊ 70 ಗ್ರ್ಯಾಂಡ್ ಲಾಂಚ್
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಾಲಿಗೆ ಮೇಲೆ ಹಿಡಿತ ಇಲ್ಲದೆ ಮಾತನಾಡಿದ್ದ ಜಯಶ್ರೀ: ಕ್ಲಾಸ್ ತೆಗೆದುಕೊಂಡ ಸುದೀಪ್.!
ಕಿರುತೆರೆಯ ಖ್ಯಾತ ನಟಿ ಜಯಶ್ರೀ 'ಬಿಗ್ ಬಾಸ್' ಮನೆಯಲ್ಲಿ ರಿಮೋಟ್ ಕಂಟ್ರೋಲ್ ಅಂತಲೇ ಹೆಸರುವಾಸಿ. 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ಮೊದಲ ದಿನದಿಂದಲೂ ಜಯಶ್ರೀ ಕಂಡ್ರೆ ರಾಪಿಡ್ ರಶ್ಮಿಗೆ ಆಗ್ಬರ್ತಿಲ್ಲ.
ಜಯಶ್ರೀ ಹಾಗೂ ರಾಪಿಡ್ ರಶ್ಮಿ ನಡುವೆ 'ಅಡುಗೆ ಮನೆ' ವಿಚಾರಕ್ಕೆ ಹಲವು ಬಾರಿ ಜಗಳ, ವಾಕ್ಸಮರ ನಡೆದಿದೆ. ಮೊಟ್ಟೆ ವಿಚಾರದಲ್ಲಂತೂ ಇಬ್ಬರ ನಡುವೆ ಮಾತಿನ ಚಕಮಕಿಯೇ ನಡೆದು ಹೋಯ್ತು.
ಅಂದು ಹಾಲಿಗಾಗಿ ಕಿತ್ತಾಟ: ಇಂದು ಮೊಟ್ಟೆಗಾಗಿ ರಂಪಾಟ.!
ಮಾತಿನ ಭರದಲ್ಲಿ ರಾಪಿಡ್ ರಶ್ಮಿ ಹೊರಗೆ ಹೋದರೆ ''ಮೊಟ್ಟೆ ತೆಗೆದುಕೊಂಡು ಹೊಡೆಯುತ್ತಾರೆ'' ಎಂದರು. ಇದರಿಂದ ರೊಚ್ಚಿಗೆದ್ದ ಜಯಶ್ರೀ, ನಾಲಿಗೆ ಮೇಲಿನ ಹಿಡಿತ ತಪ್ಪಿ ''ನಿನಗೆ ಚಪ್ಪಲಿ ತಗೊಂಡು ಹೊಡೆಯುತ್ತಾರೆ'' ಎಂದು ಬಿಟ್ಟರು.
ಇಷ್ಟೆ ಅಲ್ಲ.. ಆಗಾಗ ಸಿಟ್ಟಲ್ಲಿ ಜಯಶ್ರೀ ಬಾಯಿಂದ ಕೆಲ ಪದಗಳು ಹೊರಗೆ ಬಂದಿವೆ. ಇದನ್ನೆಲ್ಲ ಗಮನಿಸಿದ ಕಿಚ್ಚ ಸುದೀಪ್, 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ, ''ಜಯಶ್ರೀ, ನಿಮ್ಮ ಕನ್ನಡ ಬಹಳ ಸುಂದರವಾಗಿದೆ. ಒಳ್ಳೆ ಕನ್ನಡ ಮಾತನಾಡಿ. ಒಂದು ತಪ್ಪಾಗಿದ್ದರೆ, ನಾನು ಈ ಮಾತನ್ನು ಹೇಳುತ್ತಿರಲಿಲ್ಲ. ಸಂದರ್ಭಕ್ಕೆ ತಕ್ಕಂತೆ ಬೇರೆ ಬೇರೆ ಜಾಗದಲ್ಲಿ ಬೇರೆ ಬೇರೆ ಕನ್ನಡ ಮಾತನಾಡಿದಾಗ, ನೀವು ಕೆಳಗೆ ಹೋಗುತ್ತಿದ್ದೀರಾ'' ಎಂದು ಕ್ಲಾಸ್ ತೆಗೆದುಕೊಂಡರು.
'ಬಿಗ್ ಬಾಸ್' ಮನೆಯ ವಿಷ ಸರ್ಪ, ಕುತಂತ್ರಿ, ಗೋಮುಖ ವ್ಯಾಘ್ರ ಯಾರು ಗೊತ್ತೇ.?
ಆಗ, ''ನನ್ನ ತಪ್ಪಾಗಿದ್ದಕ್ಕೆ ನಾನು ಅಲ್ಲೇ ಬಂದು ಕ್ಷಮೆ ಕೇಳಿದೆ. ತಪ್ಪಾಗಿದೆ, ಕ್ಷಮಿಸಿ'' ಎಂದು ಜಯಶ್ರೀ ಕ್ಷಮೆ ಕೇಳಿದರು.