Don't Miss!
- Finance Tumakuru namma metro: ಮಾದಾವರದಿಂದ ತುಮಕೂರು ಮೆಟ್ರೋ ಕಾರಿಡಾರ್ ಅಪಡೇಟ್
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Automobiles XUV300: ಮಹೀಂದ್ರಾ ಎಕ್ಸ್ಯುವಿ300 ಕಾರನ್ನು ನಿಮ್ಮ ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Technology OnePlus: ಒನ್ಪ್ಲಸ್ ವಾಚ್ 2 ನಾರ್ಡಿಕ್ ಬ್ಲೂ ಆವೃತ್ತಿ ಲಾಂಚ್! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಂಡ್ರ್ಯೂ ಪರವಾಗಿ ಬಸ್ಕಿ ಹೊಡೆದು ಶಿಕ್ಷೆ ಅನುಭವಿಸಿದ ಕವಿತಾ.!
Recommended Video
ಒಂದು ವಾರದ ಹಿಂದೆಯಷ್ಟೇ, ಆಂಡ್ರ್ಯೂ ಮತ್ತು ಕವಿತಾ ನಡುವೆ ಆದ ರಾದ್ಧಾಂತದ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ''ದೊಡ್ಡ ರಾಮಾಯಣ ಆಗಲು ನಾನೇ ಕಾರಣ'' ಎಂದು ತಪ್ಪೊಪ್ಪಿಕೊಂಡು ಆಂಡ್ರ್ಯೂ ರಿಂದ ಕವಿತಾ ಕೊಂಚ ದೂರ ಉಳಿದಿದ್ದಾರೆ.
ಸದ್ಯ ಮನೆಯ ಕ್ಯಾಪ್ಟನ್ ಆಗಿ ಕವಿತಾ ಗೌಡ ಆಯ್ಕೆ ಆಗಿದ್ದಾರೆ. 'ಬಿಗ್ ಬಾಸ್' ಮನೆಯಲ್ಲಿ ಲೈಟ್ಸ್ ಆನ್ ಆಗಿದ್ದಾಗ, ನಿದ್ದೆಗೆ ಜಾರುವ ಸ್ಪರ್ಧಿಗಳು 25 ಬಸ್ಕಿ ಹೊಡೆಯಬೇಕು ಎಂದು ಕವಿತಾ ನಿಯಮ ರೂಪಿಸಿದ್ದರು.
ಕವಿತಾ ಕಣ್ಣೀರಿಟ್ಟು ರಂಪಾಟ ಮಾಡಲು ಕಾರಣ ಆಂಡ್ರ್ಯೂ ಅಲ್ಲ, ಮತ್ಯಾರು.?
ಒಂದೇ ದಿನದಲ್ಲಿ ಆಂಡ್ರ್ಯೂ ಮೂರು ಬಾರಿ ನಿದ್ದೆ ಮಾಡಿದ್ದಾರೆ. ಮೂರಿ ಬಾರಿ 'ಎದ್ದೇಳು ಮಂಜುನಾಥ..' ಹಾಡು ಪ್ಲೇ ಆದ ಕಾರಣ ಆಂಡ್ರ್ಯೂ ಬದಲು ಕ್ಯಾಪ್ಟನ್ ಅಗಿ ತಾವೇ ಶಿಕ್ಷೆ ಅನುಭವಿಸಿದರು ಕವಿತಾ ಗೌಡ.
'ತ್ರಿಮೂರ್ತಿ'ಗಳಿಗೆ ಕ್ಲಾಸ್ ತೆಗೆದುಕೊಂಡ ಸುದೀಪ್: ತಪ್ಪೊಪ್ಪಿಕೊಂಡ ಕವಿತಾ.!
''ನಿದ್ದೆ ಮಾಡಬೇಡ ಅಂದ್ರೆ ಎದ್ದು ಓಡಾಡಲು ಆಗಲ್ಲ. ಶಿಕ್ಷೆ ಕೂಡ ತೆಗೆದುಕೊಳ್ಳಲು ಆಗಲ್ಲ. ನಿನ್ನ ಶಿಕ್ಷೆಯನ್ನ ನಾನೇ ತೆಗೆದುಕೊಳ್ಳುವೆ'' ಎಂದು ಆಂಡ್ರ್ಯೂಗೆ ಹೇಳುತ್ತಾ ಕವಿತಾ ಗೌಡ 75 ಬಸ್ಕಿ ಹೊಡೆದರು.
ಎಲ್ಲರ ಮುಂದೆ ಆಂಡ್ರ್ಯೂ ಬಳಿ ಕ್ಷಮೆ ಕೇಳಿದ ಕವಿತಾ.!
''ನಾನು ಅವನಿಗೆ ಏನೂ ಹೇಳಲ್ಲ. ಹೇಳಿದರೂ ಅವನು ಕೇಳಲ್ಲ. ಅತೀ ಮಾಡುತ್ತಾನೆ. ಹೀಗಾಗಿ ನಾನೇ ಶಿಕ್ಷೆ ತಗೊಂಡೆ'' ಎಂದು ಕವಿತಾ ತಮ್ಮನ್ನ ತಾವು ಸಮರ್ಥಿಸಿಕೊಂಡರು.
ಅತ್ತ ಆಂಡ್ರ್ಯೂ, ''ಪಾಪ.. ನಾನು ಬಸ್ಕಿ ಹೊಡೆದರೆ ಸುಸ್ತಾಗುವೆ ಅಂತ ಅವಳೇ ಹೊಡೆದಳು'' ಎನ್ನುತ್ತಾ ಕಾಮಿಡಿ ಮಾಡುತ್ತಿದ್ದರು. ಸದಾ ತಲೆಹರಟೆ ಮಾಡುವ ಆಂಡ್ರ್ಯೂಗೆ ಶಿಸ್ತು ಯಾವಾಗ ಬರುತ್ತದೋ.?!