Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಮರಿದ ಧನರಾಜ್ ಕನಸು: ಬೆಂಕಿಗೆ ಆಹುತಿಯಾದ ಧನರಾಜ್ ಫೋಟೋಗಳು.!
ಹೆಸರಿನಲ್ಲಿ 'ಧನ' ಇದ್ದರೂ, ನಿಜ ಬದುಕಿನಲ್ಲಿ 'ಧನಲಕ್ಷ್ಮಿ' ಒಲಿದಿರಲಿಲ್ಲ. ಹೊಟ್ಟೆ ಪಾಡಿಗಾಗಿ ಧನರಾಜ್ ಮಾಡದ ಕೆಲಸಗಳೇ ಇಲ್ಲ. ಅದ್ಭುತವಾಗಿ ಮಿಮಿಕ್ರಿ ಮಾಡುವ ಪ್ರತಿಭೆ ಹೊಂದಿರುವ ಧನರಾಜ್ ವಾಯ್ಸ್ ಓವರ್ ಕಮ್ ಡಬ್ಬಿಂಗ್ ಆರ್ಟಿಸ್ಟ್ ಆಗಿದ್ದಾರೆ.
ನಟ ಆಗಬೇಕು ಎಂದುಕೊಂಡಿರುವ ಧನರಾಜ್ ಗೆ ಈವರೆಗೂ ಅವಕಾಶಗಳೇ ಸಿಕ್ಕಿಲ್ಲ. ಬ್ಯಾಡ್ ಲಕ್ ನಿಂದ ಹಲವು ಬಾರಿ ಸೋಲು ಅನುಭವಿಸಿರುವ ಧನರಾಜ್, 'ಬಿಗ್ ಬಾಸ್' ಮೂಲಕ ಭಾಗ್ಯದ ಲಕ್ಷ್ಮಿಯ ಕೃಪೆ ಸಿಗಬಹುದು ಎಂದು ನಿರೀಕ್ಷಿಸಿದ್ದರು.
''ತಮ್ಮಲ್ಲಿರುವ ಪ್ರತಿಭೆಯಿಂದ 'ಬಿಗ್ ಬಾಸ್' ಗೆಲ್ಲುವೆ'' ಎಂಬ ಆತ್ಮವಿಶ್ವಾಸದಿಂದ 'ದೊಡ್ಮನೆ'ಯೊಳಗೆ ಧನರಾಜ್ ಕಾಲಿಟ್ಟಿದ್ದರು. ಆದ್ರೀಗ, 'ಬಿಗ್ ಬಾಸ್' ಗೆಲ್ಲುವ ಧನರಾಜ್ ಕನಸು ನುಚ್ಚುನೂರಾಗಿದೆ. ಧನರಾಜ್ ಫೋಟೋಗಳು ಬೆಂಕಿಗೆ ಆಹುತಿಯಾದಂತೆ ಅವರ ಆಸೆಗಳು ಕೂಡ ಕಮರಿ ಹೋಗಿದೆ. ಮುಂದೆ ಓದಿರಿ...
ಇಲ್ಲೂ ಬ್ಯಾಡ್ ಲಕ್.!
'ಬಿಗ್ ಬಾಸ್' ಮನೆಯಿಂದ ತಮ್ಮ ಅದೃಷ್ಟ ಖುಲಾಯಿಸಬಹುದು ಎಂದು ಧನರಾಜ್ ಊಹಿಸಿದ್ದರು. ಆದ್ರೆ, ಇಲ್ಲೂ 'ಬ್ಯಾಡ್ ಲಕ್' ಧನರಾಜ್ ರನ್ನ ಫಾಲೋ ಮಾಡಿದೆ. ಗ್ರ್ಯಾಂಡ್ ಫಿನಾಲೆಗೆ ಇನ್ನೊಂದೇ ಹೆಜ್ಜೆ ಬಾಕಿ ಇರುವಾಗ, ಧನರಾಜ್ ಎಡವಿ ಬಿದ್ದಿದ್ದಾರೆ.
ಶಾಕಿಂಗ್ ಎಲಿಮಿನೇಷನ್: 'ಬಿಗ್ ಬಾಸ್' ಮನೆಯಿಂದ ಧನರಾಜ್ ಔಟ್.?
ಮಿಡ್ ನೈಟ್ ಎಲಿಮಿನೇಷನ್ ಶಾಕ್
'ಬಿಗ್ ಬಾಸ್' ಮನೆಯಲ್ಲಿ ಭಾನುವಾರ ರಾತ್ರಿ ಎಲಿಮಿನೇಷನ್ ನಡೆಯಿತು. ಇದರಲ್ಲಿ 'ದೊಡ್ಮನೆ'ಯಿಂದ ಹೊರಬಂದವರು ಧನರಾಜ್. 'ಬಿಗ್ ಬಾಸ್' ಮನೆಯಲ್ಲಿ ಧನರಾಜ್ 'ಅಜಾತಶತ್ರು' ಆಗಿದ್ದರೂ, ಅವರೇ ಔಟ್ ಆಗಿರುವುದು ಮಾತ್ರ ಬೇಸರದ ಸಂಗತಿ.
ಅದೃಷ್ಟ ಪರೀಕ್ಷೆಗಾಗಿ 'ಬಿಗ್ ಬಾಸ್' ಮನೆಗೆ ಬಂದಿರುವ ಧನರಾಜ್ ಯಾರು.?
ವೀಕ್ಷಕರ ಬೆಂಬಲ ಸಿಗಲಿಲ್ವಾ.?
ಕಳೆದ ಶನಿವಾರ 'ಬಿಗ್ ಬಾಸ್' ಮನೆಯಿಂದ ರಾಕೇಶ್ ಔಟ್ ಆದ್ಮೇಲೆ, ಉಳಿದ ಆರು ಮಂದಿ ನೇರವಾಗಿ ನಾಮಿನೇಟ್ ಆಗಿದ್ದರು. ನವೀನ್ ಸಜ್ಜು, ರಾಪಿಡ್ ರಶ್ಮಿ, ಕವಿತಾ, ಶಶಿ, ಧನರಾಜ್ ಮತ್ತು ಆಂಡಿ ಟಾಪ್ 5 ಹಂತ ತಲುಪಲು ವೀಕ್ಷಕರ ಬೆಂಬಲ ಅತ್ಯವಶ್ಯಕವಾಗಿತ್ತು. ಆರು ಮಂದಿ ಪೈಕಿ ಧನರಾಜ್ ಗೆ ಕಮ್ಮಿ ವೋಟ್ಸ್ ಲಭ್ಯವಾಗಿದೆ ಎಂದು ಅವರನ್ನ ಎಲಿಮಿನೇಟ್ ಮಾಡಲಾಗಿದೆ.
ಫೋಟೋಗಳಿಗೆ ಬೆಂಕಿ.!
ವಾರ ವಾರವೂ ಎಲಿಮಿನೇಷನ್ ನಡೆದ ಹಾಗೆ, ಮಿಡ್ ನೈಟ್ ನಲ್ಲಿ ನಡೆಯಲಿಲ್ಲ. ವೀಕ್ಷಕರ ಮತಗಳೆಲ್ಲವೂ ಬಂದ ಮೇಲೆ, ಆರು ಸ್ಪರ್ಧಿಗಳನ್ನ ಗಾರ್ಡನ್ ಏರಿಯಾಗೆ ಕರೆಯಲಾಯಿತು. ಎಲ್ಲರ ಫೋಟೋಗಳನ್ನು ಎದುರಿಗೆ ಇರಿಸಲಾಗಿತ್ತು. ಯಾರ ಫೋಟೋ ಬೆಂಕಿಗೆ ಆಹುತಿ ಆಗುತ್ತದೋ, ಅವರು ಔಟ್ ಎಂದು 'ಬಿಗ್ ಬಾಸ್' ಘೋಷಿಸಿದರು. ಅದರಂತೆ, ಧನರಾಜ್ ಫೋಟೋಗೆ ಬೆಂಕಿ ಬಿತ್ತು. 'ಬಿಗ್ ಬಾಸ್' ಮನೆಯಿಂದ ಧನರಾಜ್ ಹೊರನಡೆದರು.