twitter
    For Quick Alerts
    ALLOW NOTIFICATIONS  
    For Daily Alerts

    'ತ್ರಿಮೂರ್ತಿ'ಗಳಿಗೆ ಕ್ಲಾಸ್ ತೆಗೆದುಕೊಂಡ ಸುದೀಪ್: ತಪ್ಪೊಪ್ಪಿಕೊಂಡ ಕವಿತಾ.!

    |

    'ಬಿಗ್ ಬಾಸ್' ಮನೆಯಲ್ಲಿ ಕಳೆದ ವಾರ ನಡೆದ ರಂಪ-ರಾಮಾಯಣ ನಿಮಗೆಲ್ಲ ಗೊತ್ತೇ ಇದೆ. ನಾಮಿನೇಷನ್ ನಲ್ಲಿ ಸೇಫ್ ಆಗಲು, ಆಂಡ್ರ್ಯೂ ಜೊತೆಗೆ ಪ್ರತಿ ದಿನ ಹತ್ತು ನಿಮಿಷ ಮಾತನಾಡಲು ಕವಿತಾ 'ಡೀಲ್' ಮಾಡಿಕೊಂಡರು.

    ಬಳಿಕ ಜಯಶ್ರೀ ಮಾತನ್ನು ಕೇಳಿ ಕನ್ ಫ್ಯೂಸ್ ಆದ ಕವಿತಾ ಆಂಡ್ರ್ಯೂ ಮೇಲೆ ''Uncomfortable ಮಾಡುತ್ತಿದ್ದಾರೆ'' ಅಂತ ಆರೋಪ ಹೊರಿಸಿದರು. ಇಬ್ಬರ ನಡುವೆ ನಡೆದ 'ಡೀಲ್'ನ ಮೂರನೇಯವರ ಬಳಿ ಹಂಚಿಕೊಂಡಿದ್ದೇ 'ಚಿನ್ನು' ಕವಿತಾ. ಸಾಲದಕ್ಕೆ, 'ನ್ಯಾಯ ಇಲ್ಲಿದೆ' ಟಾಸ್ಕ್ ನಲ್ಲಿ 'ಡೀಲ್' ವಿಚಾರವನ್ನ ಬಯಲಿಗೆ ತಂದಿದ್ದೂ ಕೂಡ ಕವಿತಾ.

    ಕೊನೆಗೆ 'ಕಾಫಿ ವಿತ್ ಕ್ಯಾಪ್ಟನ್' ಚಾಟ್ ಶೋ ಮುಗಿದ್ಮೇಲೆ, ಕಣ್ಣೀರು ಸುರಿಸಲು ಕವಿತಾ ಆರಂಭಿಸಿದರೆ, ಇತ್ತ ಆಂಡ್ರ್ಯೂ ವಿರುದ್ಧ ಜಯಶ್ರೀ ಮತ್ತು ಶಶಿ ಸಿಡಿದೆದ್ದರು. ''ವಿಷಯವನ್ನ ಅನವಶ್ಯಕವಾಗಿ ಶಶಿ ಮತ್ತು ಜಯಶ್ರೀ ದೊಡ್ಡದು ಮಾಡುತ್ತಿದ್ದಾರೆ'' ಅಂತ ಆಂಡ್ರ್ಯೂ ಆರೋಪಿಸಿದರು. ಇದೇ ಸಿಟ್ಟಿಗೆ ಗೋಡೆಗೆ ಕೈ ಗುದ್ದುಕೊಂಡ ಶಶಿ ಮೂಳೆ ಮುರಿದುಕೊಂಡರು.

    ಇದನ್ನೆಲ್ಲ ಗಮನಿಸಿದ ಸುದೀಪ್ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಕವಿತಾ, ಜಯಶ್ರೀ ಮತ್ತು ಶಶಿ (ತ್ರಿಮೂರ್ತಿಗಳು) ಗೆ ಕ್ಲಾಸ್ ತೆಗೆದುಕೊಂಡರು. ಕವಿತಾಗೆ ತಮ್ಮ ತಪ್ಪನ್ನ ಸುದೀಪ್ ಅರ್ಥ ಮಾಡಿಸಿದರು. ಜಯಶ್ರೀ ಮತ್ತು ಶಶಿ ಎಡವಿದ್ದೆಲ್ಲಿ ಎಂಬುದನ್ನೂ ಸುದೀಪ್ ಮನವರಿಕೆ ಮಾಡಿಸಿದರು. ಮುಂದೆ ಓದಿರಿ...

    'ವಾರದ ಕಥೆ ಕಿಚ್ಚನ ಜೊತೆ'

    'ವಾರದ ಕಥೆ ಕಿಚ್ಚನ ಜೊತೆ'

    'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಕವಿತಾ-ಆಂಡ್ರ್ಯೂ ನಡುವಿನ ವಿವಾದದ ಬಗ್ಗೆ ಆಂಡ್ರ್ಯೂ ಬಳಿ ಸುದೀಪ್ ವಿವರಣೆ ಕೇಳಿದರು. ಅದಕ್ಕೆ ಆಂಡ್ರ್ಯೂ ಕೊಟ್ಟರ ಉತ್ತರ...

    ಕವಿತಾ ಕಣ್ಣೀರಿಟ್ಟು ರಂಪಾಟ ಮಾಡಲು ಕಾರಣ ಆಂಡ್ರ್ಯೂ ಅಲ್ಲ, ಮತ್ಯಾರು.?ಕವಿತಾ ಕಣ್ಣೀರಿಟ್ಟು ರಂಪಾಟ ಮಾಡಲು ಕಾರಣ ಆಂಡ್ರ್ಯೂ ಅಲ್ಲ, ಮತ್ಯಾರು.?

    ಆಂಡ್ರ್ಯೂ ಹೇಳಿದ್ದೇನು.?

    ಆಂಡ್ರ್ಯೂ ಹೇಳಿದ್ದೇನು.?

    ''ಹುಡುಗಿಯರ ಮೇಲೆ ಹುಡುಗರಿಗೆ ಫೀಲಿಂಗ್ ಬರುವುದು ಯಾವುದೇ ತಪ್ಪಿಲ್ಲ. ಫೀಲಿಂಗ್ ಇಟ್ಟುಕೊಂಡು ನಾನು ಕವಿತಾಗೆ ಯಾವುದೇ ತೊಂದರೆ ಕೊಟ್ಟಿಲ್ಲ. ಈ ವಿಷಯವನ್ನು ಬಳಸಿಕೊಂಡು ಜಯಶ್ರೀ ಮತ್ತು ಶಶಿ ದೊಡ್ಡದು ಮಾಡಿದರು. ಅವರಿಗೆ ಕವಿತಾ ಮೇಲೆ ಅಷ್ಟೊಂದು ಕೇರ್ ಇದ್ದಿದ್ದರೆ, ಇಬ್ಬರೇ ಕೂತುಕೊಂಡು ಪರಿಹಾರ ಮಾಡಿಕೊಳ್ಳಿ ಅಂತ ನಮಗೆ ಹೇಳುತ್ತಿದ್ದರು'' ಎಂದರು ಆಂಡ್ರ್ಯೂ.

    ಕವಿತಾ-ಆಂಡ್ರ್ಯೂ ಜಗಳಕ್ಕೆ ಶಶಿ ಸೀಮೆಎಣ್ಣೆಯಾದ್ರೆ, ಜಯಶ್ರೀ ಬೆಂಕಿಪಟ್ಟಣ.!ಕವಿತಾ-ಆಂಡ್ರ್ಯೂ ಜಗಳಕ್ಕೆ ಶಶಿ ಸೀಮೆಎಣ್ಣೆಯಾದ್ರೆ, ಜಯಶ್ರೀ ಬೆಂಕಿಪಟ್ಟಣ.!

    ತಮ್ಮ ತಪ್ಪಿನ ಬಗ್ಗೆ ಕವಿತಾಗೆ ಅರಿವು

    ತಮ್ಮ ತಪ್ಪಿನ ಬಗ್ಗೆ ಕವಿತಾಗೆ ಅರಿವು

    ''ಎಲ್ಲವೂ ಶುರುವಾಗಿದ್ದು ಕನ್ಫೆಶನ್ ರೂಮ್ ನಿಂದ. ಆಂಡ್ರ್ಯೂ ಗಿದ್ದ ಫೀಲಿಂಗ್ಸ್ ನಿಮಗೆ ಗೊತ್ತಿತ್ತು ಅಂತ ಹೇಳಿದ್ರಿ. ''ಬಿಟ್ಟುಕೊಟ್ಟು ಬಿಡ್ತೀಯಾ, ಟೈಮ್ ಕೊಡ್ತೀನಿ'' ಅಂತ ಮಾತುಕತೆ ಶುರುವಾಗಿದ್ದೇ ನಿಮ್ಮಿಂದ. ನಾಮಿನೇಷನ್ ನಿಂದ ತಪ್ಪಿಸಿಕೊಳ್ಳಲು, ಹತ್ತು ನಿಮಿಷ ಮಾತನಾಡುವ ಒಪ್ಪಂದಕ್ಕೆ ಬರ್ತೀರಾ. ಡೀಲ್ ಅಂತ ಮೊದಲು ಕರೆದಿದ್ದೇ ತಾವು. ಈಗ ನೀವೇ ಯೋಚಿಸಿ.. ಆಂಡ್ರ್ಯೂ ಈ ವಿಚಾರವನ್ನು ಯಾರ ಬಳಿಯೂ ಹೇಳಿರಲಿಲ್ಲ. ತಾವೇ ಜಯಶ್ರೀ ಬಳಿ ಹೇಳಿದ್ರಿ. ಎರಡು ದಿನ ಆದ್ಮೇಲೆ, ವಿಚಾರವನ್ನು ಕಟಕಟೆಗೆ ತರ್ತೀರಾ. ದೊಡ್ಡ ರಾಮಾಯಣ ಆಗುತ್ತೆ. ತಗೊಂಡಿದ್ದನ್ನ ತಗೊಂಡ ಮೇಲೆ ಕೊಡಬೇಕಾಗಿದ್ದನ್ನ ಕೊಡಲ್ಲ ಅಂದ್ರೆ ತಪ್ಪಾಗುತ್ತೆ. ಅವಕಾಶವಾದಿ ಅನ್ನೋದು ಇದಕ್ಕೆ'' ಎಂದು ಕವಿತಾಗೆ ತಮ್ಮ ತಪ್ಪನ್ನ ಸುದೀಪ್ ಅರ್ಥ ಮಾಡಿಸಿದರು.

    ಕಣ್ಣೀರಿಟ್ಟು ಕೂಗಾಡಿದ ಕವಿತಾ, ಅತ್ತ ಆಂಡ್ರ್ಯೂ, ರೊಚ್ಚಿಗೆದ್ದ ಶಶಿ ಕೈಗೆ ಪೆಟ್ಟು.!ಕಣ್ಣೀರಿಟ್ಟು ಕೂಗಾಡಿದ ಕವಿತಾ, ಅತ್ತ ಆಂಡ್ರ್ಯೂ, ರೊಚ್ಚಿಗೆದ್ದ ಶಶಿ ಕೈಗೆ ಪೆಟ್ಟು.!

    ಕವಿತಾ ಕೊಟ್ಟ ಸಬೂಬು ಏನು.?

    ಕವಿತಾ ಕೊಟ್ಟ ಸಬೂಬು ಏನು.?

    ''ಕೊಟ್ಟಿರುವ ಮಾತನ್ನು ಉಳಿಸಿಕೊಂಡಿದ್ದೇನೆ. Uncomfortable ಫೀಲ್ ಆದರೆ ಬರಲ್ಲ ಅಂತ ಆಂಡ್ರ್ಯೂಗೆ ಮೊದಲೇ ಹೇಳಿದ್ದೆ. ನಾನು ಬರೆದ ದೂರು ಕಟಕಟೆಗೆ ಬರುತ್ತೆ ಅಂತ ನಾನು ಯೋಚಿಸಿರಲಿಲ್ಲ'' ಅಂತ ಕವಿತಾ ಹೇಳಿದಾಗ, ''ಹಾಗಿದ್ರೆ, ಇದು ನಾನು ಪ್ರೈವೇಟ್ ಆಗಿ ದೂರು ಬರ್ದಿರೋದು, ಕಟಕಟೆಗೆ ಬರುವುದು ಬೇಡ ಅಂತ ಮೊದಲೇ ಹೇಳಬಹುದಿತ್ತು. ಇದರಲ್ಲಿ ನಿಮ್ಮ ವ್ಯಕ್ತಿತ್ವ ಮತ್ತು ಓರ್ವ ಹುಡುಗನ ವ್ಯಕ್ತಿತ್ವ ಹೊರಗೆ ಬಂತು. ಚರ್ಚೆಯಲ್ಲಿ ಬಗೆಹರಿಯಬಹುದಾದ ವಿಷಯಕ್ಕೆ ಯುದ್ಧ ಮಾಡಿದ್ರಿ'' ಎಂದುಬಿಟ್ಟರು ಸುದೀಪ್.

    ಕವಿತಾ ಗೊಳೋ ಎನ್ನಲು ಕಾರಣವಾದ ಆ ಚಾಟ್ ಶೋನಲ್ಲಿ ನಡೆದಿದ್ದೇನು.?ಕವಿತಾ ಗೊಳೋ ಎನ್ನಲು ಕಾರಣವಾದ ಆ ಚಾಟ್ ಶೋನಲ್ಲಿ ನಡೆದಿದ್ದೇನು.?

    ಜಯಶ್ರೀಗೆ ಸುದೀಪ್ ಕ್ಲಾಸ್

    ಜಯಶ್ರೀಗೆ ಸುದೀಪ್ ಕ್ಲಾಸ್

    ''ಒಪ್ಪಂದಕ್ಕೆ ಬಂದ್ಮೇಲೆ, ಅವನ ಜೊತೆಗೆ ಮಾತನಾಡುವುದು ಸರಿ ಅಲ್ಲ ಅಂತ ನೀವು ಹೇಳ್ತೀರಾ. ಕವಿತಾಗೆ ಕನ್ ಫ್ಯೂಶನ್ ಶುರುವಾಗುವುದು ಅಲ್ಲೇ. ಕವಿತಾಗೆ ಅವರ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಇದೆ. ನೀವು ಮತ್ತು ಶಶಿ ಇದರಲ್ಲಿ ಬರಲಿಲ್ಲ ಅಂದಿದ್ದರೆ, ಈ ವಿಷಯ ಇಷ್ಟೊಂದು ದೊಡ್ಡದು ಆಗುತ್ತಿರಲಿಲ್ಲ'' ಅಂತ ಜಯಶ್ರೀಗೆ ಕ್ಲಿಯರ್ ಆಗಿ ಹೇಳಿದರು ಸುದೀಪ್.

    'ಬಿಗ್ ಬಾಸ್' ಮನೆಯಲ್ಲಿ ಗುಂಪುಗಾರಿಕೆ: ತ್ರಿಮೂರ್ತಿಗಳ ಮೇಲೆ ಎಲ್ಲರ ಕಣ್ಣು.!'ಬಿಗ್ ಬಾಸ್' ಮನೆಯಲ್ಲಿ ಗುಂಪುಗಾರಿಕೆ: ತ್ರಿಮೂರ್ತಿಗಳ ಮೇಲೆ ಎಲ್ಲರ ಕಣ್ಣು.!

    ಶಶಿಗೆ ಸುದೀಪ್ ಸಲಹೆ

    ಶಶಿಗೆ ಸುದೀಪ್ ಸಲಹೆ

    ''ಕೆಲವೊಮ್ಮೆ ನಮ್ಮದು ಯಾವುದಲ್ಲವೋ, ಅದು ನಮ್ಮದಲ್ಲ. ಅನ್ಯಾಯವಾಗಿ ಕೈ ಡ್ಯಾಮೇಜ್ ಮಾಡಿಕೊಂಡ್ರಿ'' ಅಂತ ಸುದೀಪ್ ಹೇಳಿದಾಗ, ''ಕವಿತಾ ಅಳುವುದನ್ನು ನನ್ನ ಕೈಯಲ್ಲಿ ನೋಡಲು ಆಗಲಿಲ್ಲ. ಆಂಡ್ರ್ಯೂ ಇನ್ನೂ ಮಾತನಾಡುತ್ತಲೇ ಇದ್ದಿದ್ದಕ್ಕೆ, ಹಾಗೇ ಆಯಿತು'' ಎಂದು ತಮ್ಮನ್ನ ತಾವು ಸಮರ್ಥಿಸಿಕೊಂಡರು ಶಶಿ.

    ಕವಿತಾ-ಆಂಡ್ರ್ಯೂ ರಂಪಾಟ: ಇಬ್ಬರಲ್ಲಿ ಯಾರು ಸರಿ.? ಯಾರು ತಪ್ಪು.?ಕವಿತಾ-ಆಂಡ್ರ್ಯೂ ರಂಪಾಟ: ಇಬ್ಬರಲ್ಲಿ ಯಾರು ಸರಿ.? ಯಾರು ತಪ್ಪು.?

    ತಪ್ಪೊಪ್ಪಿಕೊಂಡ ಕವಿತಾ

    ತಪ್ಪೊಪ್ಪಿಕೊಂಡ ಕವಿತಾ

    ''ಒಪ್ಪಂದ ಮುರಿದುಕೊಂಡಿದ್ದು ತಪ್ಪಲ್ಲ. ಆದ್ರೆ, ಒಳ್ಳೆಯ ರೀತಿಯಲ್ಲಿ ಒಪ್ಪಂದ ಬ್ರೇಕ್ ಮಾಡಿಕೊಳ್ಳಬಹುದಿತ್ತು'' ಅಂತ ಸುದೀಪ್ ಹೇಳಿದಾಗ, ''ನಾನು ಒಪ್ಪಿಕೊಳ್ಳುವೆ. ನಂದೇ ತಪ್ಪು. ವಿಚಾರವನ್ನು ನಾನೇ ಹೊರಗೆ ಹೇಳಿದ್ದು. ಕಟಕಟೆಗೆ ಹೋಗುವ ಮುನ್ನ ನಾನು ಆಂಡ್ರ್ಯೂ ಜೊತೆಗೆ ಮಾತನಾಡಬೇಕಿತ್ತು'' ಎಂದು ತಪ್ಪೊಪ್ಪಿಕೊಂಡರು ಕವಿತಾ.

    'ಕವಿತಾ ಕಡೆಯಿಂದ ನನಗೆ ಮೋಸ ಆಗಿದೆ' ಎಂದ ಆಂಡ್ರ್ಯೂ.!'ಕವಿತಾ ಕಡೆಯಿಂದ ನನಗೆ ಮೋಸ ಆಗಿದೆ' ಎಂದ ಆಂಡ್ರ್ಯೂ.!

    ಜಯಶ್ರೀಗೆ ಸುದೀಪ್ ಸಲಹೆ

    ಜಯಶ್ರೀಗೆ ಸುದೀಪ್ ಸಲಹೆ

    ''ಅವಶ್ಯಕತೆ ಇಲ್ಲದ ಕಡೆ ಸಲಹೆ ಕೊಡಬೇಡಿ. ಯಾಕಂದ್ರೆ, ಬಿಗ್ ಬಾಸ್ ಮನೆಗೆ ಬಂದಿರುವವರೆಲ್ಲರೂ ಬುದ್ಧಿವಂತರೇ'' ಎಂದು ಜಯಶ್ರೀಗೆ ಸುದೀಪ್ ಸಲಹೆ ಕೊಟ್ಟರು. ಜೊತೆಗೆ ಶಶಿಗೂ ಬುದ್ಧಿ ಮಾತು ಹೇಳಿದರು.

    'ಆಂಡ್ರ್ಯೂ ನನ್ನನ್ನು ಹಿಂಸಿಸುತ್ತಿದ್ದಾನೆ': 'ಬಿಗ್' ಆರೋಪ ಮಾಡಿದ 'ಚಿನ್ನು' ಕವಿತಾ'ಆಂಡ್ರ್ಯೂ ನನ್ನನ್ನು ಹಿಂಸಿಸುತ್ತಿದ್ದಾನೆ': 'ಬಿಗ್' ಆರೋಪ ಮಾಡಿದ 'ಚಿನ್ನು' ಕವಿತಾ

    ಶೇಕ್ ಹ್ಯಾಂಡ್

    ಶೇಕ್ ಹ್ಯಾಂಡ್

    ವಿವಾದವನ್ನು ಮರೆತು ಎಲ್ಲರೂ ಖುಷಿ ಖುಷಿ ಆಗಿರಿ ಎಂದು ಜಯಶ್ರೀ-ಶಶಿ-ಕವಿತಾ ಮತ್ತು ಆಂಡ್ರ್ಯೂಗೆ ಪರಸ್ಪರ ಹ್ಯಾಂಡ್ ಶೇಕ್ ಮಾಡಿಸಿದರು ಸುದೀಪ್.

    ಒಲ್ಲದ ಮನಸ್ಸಿನಿಂದ ಡೀಲ್ ಮಾಡಿಕೊಂಡು ಹಳ್ಳಕ್ಕೆ ಬಿದ್ದ ಆಂಡಿ.!ಒಲ್ಲದ ಮನಸ್ಸಿನಿಂದ ಡೀಲ್ ಮಾಡಿಕೊಂಡು ಹಳ್ಳಕ್ಕೆ ಬಿದ್ದ ಆಂಡಿ.!

    English summary
    Bigg Boss Kannada 6: Week 5: Sudeep schools Kavitha Gowda, Jayashree and Shashi over Andrew issue.
    Tuesday, November 27, 2018, 18:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X