Don't Miss!
- Automobiles Honda: ಭಾರತದಲ್ಲಿ ಹೋಂಡಾ ಹೊಸ ಮೈಲಿಗಲ್ಲು: ಎಷ್ಟು ಮಂದಿಯ ಬಳಿ ಆಕ್ಟೀವಾ, ಶೈನ್ ಇದೆ ಹೇಳಿ?
- Lifestyle ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- News India Unemployment: ದೇಶದಲ್ಲಿ ಯುವ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಳ: ಬೆಚ್ಚಿಬೀಳಿಸುವ ವರದಿ ಬಹಿರಂಗ!
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Technology iPhones: ಬೇಕಿತ್ತಾ ಇದೆಲ್ಲ? ನಕಲಿ ಐಫೋನ್ ಮೂಲಕ ಆಪಲ್ಗೆ ಪಂಗನಾಮ ಹಾಕಿದವನಿಗೆ ಜೈಲೂಟ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಂಡ್ರ್ಯೂ-ಧನರಾಜ್ ಕಿತ್ತಾಟ: ವೀಕ್ಷಕರ ಸಪೋರ್ಟ್ ಯಾರಿಗೆ.?
ಕಾಲು ಕೆರೆದುಕೊಂಡು ಜಗಳಕ್ಕೆ ನಿಲ್ಲೋದ್ರಲ್ಲಿ ಆಂಡ್ರ್ಯೂ ಸದಾ ಮುಂದು. ಅದಾಗಲೇ 'ಬಿಗ್ ಬಾಸ್' ಮನೆಯ ಹಲವು ಸ್ಪರ್ಧಿಗಳ ಜೊತೆಗೆ ಆಂಡ್ರ್ಯೂ ಕಿತ್ತಾಟ ಮಾಡಿಕೊಂಡಿದ್ದು ಆಗಿದೆ. ಮೊನ್ನೆಯಂತೂ ಕ್ಷುಲ್ಲಕ ಕಾರಣಕ್ಕೆ ಆಂಡ್ರ್ಯೂ-ಧನರಾಜ್ ನಡುವೆ ಮಾತಿನ ಚಕಮಕಿ ನಡೆಯಿತು.
ಈ ಗಲಾಟೆಯಲ್ಲಿ ಹಲವು ಸ್ಪರ್ಧಿಗಳು ಧನರಾಜ್ ಪರ ದನಿಯೆತ್ತಿದರು. ಹಾಗಾದ್ರೆ, ವೀಕ್ಷಕರು ಕೂಡ ಆಂಡ್ರ್ಯೂ ವಿರುದ್ಧವಾಗಿದ್ದಾರಾ.? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.
ಧನರಾಜ್-ಆಂಡ್ರ್ಯೂ ನಡುವೆ ಆದ ಗಲಾಟೆ ಬಗ್ಗೆ ವೀಕ್ಷಕರು ಕಲರ್ಸ್ ಸೂಪರ್ ವಾಹಿನಿಯ ಫೇಸ್ ಬುಕ್ ಪುಟದಲ್ಲಿ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ. ಧನರಾಜ್ ಪರವಾಗಿ ವೀಕ್ಷಕರು ಇದ್ದಾರೋ, ಇಲ್ವೋ ಎಂಬುದನ್ನ ನೀವೇ ನೋಡಿ, ಕೆಳಗಿರುವ ಕಾಮೆಂಟ್ಸ್ ನಲ್ಲಿ...
ಧನರಾಜ್ ಗೆ ವೀಕ್ಷಕರ ಸಪೋರ್ಟ್
''ಅಪ್ಪನ ಬಗ್ಗೆ ಮಾತನಾಡಿದರೆ ಯಾರಿಗಾದರೂ ಸಿಟ್ಟು ಬರುತ್ತೆ ತಾನೇ.? ಈ ಜಗಳದಲ್ಲಿ ನಾನು ಧನರಾಜ್ ಗೆ ಸಪೋರ್ಟ್ ಮಾಡುವೆ'' ಎಂದು ವೀಕ್ಷಕರೊಬ್ಬರು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ, ಆಂಡ್ರ್ಯೂ ವಿರುದ್ಧವಾಗಿಯೂ ಕಾಮೆಂಟ್ಸ್ ಬಂದಿವೆ.
'ಬಿಗ್' ಕಿತ್ತಾಟ: ರಶ್ಮಿ 'ಲೋಕಲ್ ಆಂಟಿ', ಸ್ಲಂ ಕ್ಯಾಟಗರಿ ಎಂದ ಆಂಡ್ರ್ಯೂ.!
ಆಂಡ್ರ್ಯೂ ತಪ್ಪಿದೆ
''ಜಗಳದಲ್ಲಿ ಫ್ಯಾಮಿಲಿಯನ್ನ ತರಬೇಡಿ ಅಂತ ಧನರಾಜ್ ಹಲವು ಬಾರಿ ಮನವಿ ಮಾಡಿದ್ದಾರೆ. ಇದರಲ್ಲಿ ಆಂಡ್ರ್ಯೂ ತಪ್ಪಿದೆ. ಕಾಮಿಡಿ ಅಂತ ಏನೇನೋ ಮಾಡಲು ಹೋದರೆ ಅತಿಯಾಗುತ್ತೆ'' ಎನ್ನುತ್ತಿದ್ದಾರೆ ವೀಕ್ಷಕರು.
'ಬಿಗ್ ಬಾಸ್ ಕನ್ನಡ-6': ಈ ವಾರ ಗಂಟು-ಮೂಟೆ ಕಟ್ಟಿಕೊಂಡು ಹೊರಗೆ ಹೋಗೋರು ಯಾರು.?
ಸಿಕ್ಕಿದ್ದೇ ಚಾನ್ಸ್
''ಧನರಾಜ್ ಗುಂಪು ಅಡುಗೆ ಮನೆಯಲ್ಲಿ ಇದೆ. ಆಂಡ್ರ್ಯೂ ಒಬ್ಬ ಬೇರೆ ಗುಂಪು ಅಲ್ಲವೇ. ಅದಕ್ಕೆ ಅಡುಗೆ ಮನೆಗೆ ಬರಬೇಡ ಅಂದ. ಇನ್ನೂ ಆಂಡ್ರ್ಯೂ ಕೇಳಬೇಕಾ. ಸಿಕ್ಕಿದ್ದೇ ಚಾನ್ಸ್ ಅನ್ಕೊಂಡು ಜಗಳ ಶುರು ಮಾಡ್ತಾನೆ'' ಎಂಬುದು ವೀಕ್ಷಕರ ಅಭಿಪ್ರಾಯ.
ಉಲ್ಟಾ ಪಲ್ಟಾ ಮಾತನಾಡಿದ ಆಂಡ್ರ್ಯೂ: ಪಿತ್ತ ನೆತ್ತಿಗೇರಿಸಿಕೊಂಡ ಧನರಾಜ್.!
ಇಬ್ಬರದ್ದೂ ತಪ್ಪಿದೆ
''ಇದರಲ್ಲಿ ಇಬ್ಬರದ್ದೂ ತಪ್ಪು. ಆದರೆ ಧನರಾಜ್ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಬಿಗ್ ಬಾಸ್ ಅಧಿಕಾರ ಕೊಟ್ಟರೆ ನಿನ್ನ ಮೇಲೆ ಉಪಯೋಗಿಸುತ್ತೇನೆ ಎಂದದ್ದು ದೊಡ್ಡ ತಪ್ಪು'' ಅಂತಾವ್ರೆ ವೀಕ್ಷಕರು.
ಎಲ್ಲವೂ ಸ್ಕ್ರಿಪ್ಟೆಡ್
''ಇದೆಲ್ಲ ಟಿ.ಆರ್.ಪಿ ಸ್ಟಂಟ್. 'ಬಿಗ್ ಬಾಸ್' ಮನೆಯಲ್ಲಿ ಆಂಡ್ರ್ಯೂ ಅವಶ್ಯಕತೆ ಇಲ್ಲ. ಜಗಳದಲ್ಲಿ ಅಷ್ಟೊಂದು ಎಳೆಯುವಂಥದ್ದು ಏನೂ ಇರಲಿಲ್ಲ. ಆದರೂ ದೊಡ್ಡ ಜಗಳ ಆಯ್ತು. ಶೋ ಸ್ಕ್ರಿಪ್ಟೆಡ್ ಅನ್ನೋದಕ್ಕೆ ಇದೇ ಸಾಕ್ಷಿ'' ಎನ್ನುವುದು ಕೆಲವರ ಅಭಿಪ್ರಾಯ.