Don't Miss!
- News ಮೈಸೂರು: ಪ್ರಧಾನಿ ಮೋದಿ ಕುರಿತಾದ ಹಾಡು ಶೇರ್ ಮಾಡಿ ಎಂದಿದ್ದಕ್ಕೆ ಯುವಕನ ಮೇಲೆ ಹಲ್ಲೆ
- Lifestyle ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
- Sports LSG vs CSK IPL 2024: ಮತ್ತೊಮ್ಮೆ ಧೋನಿ, ಜಡೇಜಾ ಅಬ್ಬರ; ಲಕ್ನೋ ತಂಡಕ್ಕೆ ಸವಾಲಿನ ಗುರಿ ನೀಡಿದ ಸಿಎಸ್ಕೆ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುದೀಪ್ ಕಡೆಯಿಂದ ಸತತವಾಗಿ ಎರಡು ಬಾರಿ ಚಪ್ಪಾಳೆ ಗಿಟ್ಟಿಸಿದ ನವೀನ್.!
'ಬಿಗ್ ಬಾಸ್' ಕೊಡುವ ವಿಶೇಷ ಚಟುವಟಿಕೆಗಳಲ್ಲಿ ಉತ್ತಮ ಪ್ರದರ್ಶನ ಕೊಡುವವರಿಗೆ ಸುದೀಪ್ ಕಡೆಯಿಂದ 'ಮೆಚ್ಚುಗೆಯ ಚಪ್ಪಾಳೆ' ಸಿಗುತ್ತಿರುವುದು ನಿಮಗೆಲ್ಲಾ ಗೊತ್ತೇ ಇದೆ.
ಕಳೆದ ವಾರ ಕ್ಯಾಪ್ಟನ್ ಆಗಿ ಆಯ್ಕೆ ಆದ ನವೀನ್ ಸಜ್ಜುಗೆ ಸುದೀಪ್ ಚಪ್ಪಾಳೆ ತಟ್ಟಿದ್ದರು. ಈ ವಾರವೂ ಗಾಯಕ ನವೀನ್ ಸಜ್ಜು ರವರಿಗೆ ಸುದೀಪ್ ಕಡೆಯಿಂದ ಚಪ್ಪಾಳೆ ಲಭಿಸಿದೆ. ಸತತವಾಗಿ ಎರಡು ವಾರಗಳ ಕಾಲ ಸುದೀಪ್ ಕಡೆಯಿಂದ 'ಮೆಚ್ಚುಗೆಯ ಚಪ್ಪಾಳೆ' ಸಿಕ್ಕಿರುವುದು ನವೀನ್ ಸಜ್ಜುಗೆ ಮಾತ್ರ.
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಮೊದಲ ಫೈನಲಿಸ್ಟ್ ಗಾಯಕ ನವೀನ್.!
'ಬಿಗ್ ಬಾಸ್' ನೀಡಿದ್ದ ವಿಶೇಷ ಸವಾಲಿನಲ್ಲಿ ನವೀನ್ ಚೆನ್ನಾಗಿ ಪರ್ಫಾರ್ಮ್ ಮಾಡಿ ನವೀನ್ ವಿಜೇತರಾದರು. ಅಲ್ಲದೇ, ಗ್ರ್ಯಾಂಡ್ ಫಿನಾಲೆ ವೀಕ್ ಗೆ ಡೈರೆಕ್ಟ್ ಎಂಟ್ರಿ ಪಡೆದರು. ಹೀಗಾಗಿ, ಸುದೀಪ್ ಶ್ಲಾಘನೆ ನವೀನ್ ಪಾಲಾಗಿದೆ.
ಹೊಟ್ಟೆಪಾಡಿಗಾಗಿ ಗಾಯಕ ನವೀನ್ ಸಜ್ಜು ಮಾಡದೇ ಇರುವ ಕೆಲಸಗಳೇ ಇಲ್ಲ.!
''ಈ ವಾರ ತುಂಬಾ ಅದ್ಭುತವಾಗಿ ಆಟ ಆಡಿದ್ರಿ. ಹೀಗಾಗಿ, ಈ ವಾರವೂ ಸ್ಪೆಷಲ್ ಚಪ್ಪಾಳೆ ನಿಮಗೆ. ಕಾರ್ ಟಾಸ್ಕ್ ನಲ್ಲಿ ನಿಮ್ಮ ಪ್ರದರ್ಶನ ಚೆನ್ನಾಗಿತ್ತು. ಒಂಟಿ ಕಾಲಿನಲ್ಲಿ ನಿಂತಿದ್ರಿ. ನಿಮಗೆ ವಿಶೇಷ ಅಧಿಕಾರ ಸಿಕ್ಕಿದೆ. ಫಿನಾಲೆ ವಾರಕ್ಕೆ ನಿಮಗೆ ಡೈರೆಕ್ಟ್ ಟಿಕೆಟ್ ಸಿಕ್ಕಿದೆ'' ಅಂತ ನವೀನ್ ಗೆ ಸುದೀಪ್ ಶುಭಾಶಯ ತಿಳಿಸಿದರು.