Don't Miss!
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಡಿದ ಮಾತನ್ನ ಈಡೇರಿಸಿದ ಶಿವಣ್ಣ: 'ಬಿಗ್ ಬಾಸ್' ಸ್ಪರ್ಧಿಗಳಿಗೆ ಭರ್ಜರಿ ಬಾಡೂಟ.!
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಮೊದಲ ವಾರಾಂತ್ಯಕ್ಕೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹಾಗೂ ನಿರ್ದೇಶಕ ಪ್ರೇಮ್ 'ಬಿಗ್ ಬಾಸ್' ಮನೆಯೊಳಗೆ ಅತಿಥಿಗಳಾಗಿ ಎಂಟ್ರಿಕೊಟ್ಟಿದ್ದರು.
'ದಿ ವಿಲನ್' ಚಿತ್ರದ ಪ್ರಚಾರ ನಿಮಿತ್ತ ಶಿವಣ್ಣ ಹಾಗೂ ಪ್ರೇಮ್ 'ಬಿಗ್ ಬಾಸ್' ಮನೆಗೆ ಬಂದಿದ್ದರು. ಜೊತೆಗೆ, ಸ್ಪರ್ಧಿಗಳಿಗೆ 'ದಿ ವಿಲನ್' ಟಾಸ್ಕ್ ಕೂಡ ಕೊಟ್ಟಿದ್ದರು. ಟಾಸ್ಕ್ ನಲ್ಲಿ ವಿಜೇತರಾದ ಆಂಡ್ರ್ಯೂಗೆ ಶಿವಣ್ಣ ಕಡೆಯಿಂದ 'ಸುರಕ್ಷ ಕವಚ' ಲಭಿಸಿತು.
ಇಷ್ಟೆಲ್ಲ ಮುಗಿದ ಮೇಲೆ ಎಲ್ಲಾ ಸ್ಪರ್ಧಿಗಳು ಶಿವರಾಜ್ ಕುಮಾರ್ ಮುಂದೆ 'ಊಟ'ದ ಬೇಡಿಕೆ ಇಟ್ಟರು. ಕೆಲ ಸ್ಪರ್ಧಿಗಳು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ''ನನಗೆ ಚಿಕನ್ ಬೇಕು'', ''ನಾನು ಮಟನ್ ತಿನ್ನಬೇಕು'', ''ನನಗೆ ಜೋಳದ ರೊಟ್ಟಿ ಕಳುಹಿಸಿಕೊಡಿ'' ಅಂತ ಶಿವಣ್ಣನ ಬಳಿ ಕೇಳಿಕೊಂಡರು.
ಭ್ರಮೆ ಅಲ್ಲ: 'ಬಿಗ್ ಬಾಸ್' ಮನೆಯೊಳಗೆ ಹೋಗಿ ಬಂದ ಶಿವಣ್ಣ-ಪ್ರೇಮ್.!
ಯಾವುದಕ್ಕೂ 'ಇಲ್ಲ' ಎನ್ನದ ಶಿವರಾಜ್ ಕುಮಾರ್, ''ನಾನು 'ಬಿಗ್ ಬಾಸ್' ಬಳಿ ಮನವಿ ಮಾಡುತ್ತೇನೆ. ಮುಂದಿನ ವಾರದ ಹೊತ್ತಿಗೆ ನನ್ನ ಕಡೆಯಿಂದ ನಿಮಗೆಲ್ಲ ಊಟ ದೊರೆಯಲಿದೆ'' ಅಂತ ಹೇಳಿ ಸ್ಪರ್ಧಿಗಳ ಬೇಡಿಕೆಗೆ 'ತಥಾಸ್ತು' ಎಂದರು.
ಇತ್ತ ಶಿವಣ್ಣ ಮಾತು ಕೊಟ್ಟಿದ್ದರಿಂದ, 'ಬಿಗ್ ಬಾಸ್' ಕೂಡ ಅನುಮತಿ ಕೊಡಲೇಬೇಕಾಗಿ ಬಂತು. ಆಡಿದ ಮಾತಿನಂತೆ ಎರಡನೇ ವಾರಾಂತ್ಯಕ್ಕೆ ಎಲ್ಲಾ ಸ್ಪರ್ಧಿಗಳಿಗೆ ಶಿವಣ್ಣ ಬಾಡೂಟ ಕಳುಹಿಸಿಕೊಟ್ಟರು. ಕರುನಾಡ ಚಕ್ರವರ್ತಿ ಶಿವಣ್ಣನಿಗೆ ಎಲ್ಲರೂ ಥ್ಯಾಂಕ್ಸ್ ಹೇಳಿದರು.
'ಅಯ್ಯೋ.. ಈ ಬಾರಿಯ ಬಿಗ್ ಬಾಸ್ ಬೋರ್ ಅನಿಸ್ತಿದೆ' ಎಂದು ಮೂಗು ಮುರಿದ ವೀಕ್ಷಕರು.!
ಶಿವಣ್ಣ ಕಳುಹಿಸಿದ ಬಾಡೂಟದ ಸವಿಯನ್ನ ಎಲ್ಲರೂ ಸವಿಯುತ್ತಿದ್ದರೆ, ಆಂಡ್ರ್ಯೂ ಮಾತ್ರ ಎಲ್ಲರ ತಟ್ಟೆಯನ್ನೇ ನೋಡುತ್ತಿದ್ದರು. ಕಾರಣ, 'ಬಿಗ್ ಬಾಸ್' ಆಂಡ್ರ್ಯೂಗೆ ಕೊಟ್ಟಿದ್ದ ಶಿಕ್ಷೆ.! ಕದ್ದು ಚಾಕಲೇಟ್ ತಿಂದಿದ್ದ ಆಂಡ್ರ್ಯೂಗೆ ಶಿವಣ್ಣ ಕಳುಹಿಸಿದ್ದ ಊಟ ಸವಿಯುವ ಅವಕಾಶವನ್ನ 'ಬಿಗ್ ಬಾಸ್' ನೀಡಲಿಲ್ಲ.
ಅಂತೂ ಶಿವಣ್ಣನ ಕೃಪೆಯಿಂದ ಎರಡನೇ ವಾರವೇ ಭರ್ಜರಿ ಬಾಡೂಟ ಸವಿದು ಸ್ಪರ್ಧಿಗಳೆಲ್ಲಾ ಖುಷಿಯಾದರು.