Don't Miss!
- Sports ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ; ದಿಗ್ಗಜರ ಸಾಲಿಗೆ ಸೇರಿದ ಶ್ರೇಷ್ಠ ಬ್ಯಾಟರ್
- News Heavy Rain: ಭಾರೀ ಗಾಳಿ, ಮಳೆಗೆ ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು: ಸಿಡಿಲು ಬಡಿದು 25 ಮೇಕೆಗಳ ಸಾವು
- Technology ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
- Lifestyle ಹೊಟ್ಟೆಯೇ ಇಲ್ಲದೆ ಬದುಕಿದ್ದ ನತಾಶಾ ದಿಡ್ಡಿ ನಿಧನ...! ಈಕೆ ಯಾರು ಗೊತ್ತಾ?
- Finance ಸುಗಮ, ಸುರಕ್ಷಿತ ಸಂಚಾರಕ್ಕಾಗಿ ವಿಶೇಷ ಅಭಿಯಾನ ಆರಂಭಿಸಿದ ಬೆಂಗಳೂರು ಸಂಚಾರಿ ಪೊಲೀಸ್
- Automobiles ಹಲವು ಆಯ್ಕೆಗಳಲ್ಲಿ ಸಿಗಲಿದೆ 5 ಡೋರ್ ಥಾರ್: ಸುದ್ದಿ ತಿಳಿದು ನಿಟ್ಟುಸಿರು ಬಿಟ್ಟ ಮಹೀಂದ್ರಾ ಫ್ಯಾನ್ಸ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಿಗ್ ಬಾಸ್': ಈ ವಾರ ಅಕ್ಷತಾಗೆ ನೀವೆಲ್ಲ ವೋಟ್ ಹಾಕ್ತೀರಾ.?
Recommended Video
''ರಾಕೇಶ್ ಮತ್ತು ಅಕ್ಷತಾ ರನ್ನ ಮೊದಲು ಹೊರಗೆ ಹಾಕಿ'' - ಹೀಗೆನ್ನುವ ನೂರಾರು ಕಾಮೆಂಟ್ ಗಳು ಕಲರ್ಸ್ ಸೂಪರ್ ಅಫೀಶಿಯಲ್ ಫೇಸ್ ಬುಕ್ ಪುಟದಲ್ಲಿಯೇ ಇವೆ.
''ರಾಕೇಶ್-ಅಕ್ಷತಾ ನಡುವಿನ ಗೆಳೆತನವನ್ನು ನೋಡಲು ಆಗುತ್ತಿಲ್ಲ. ಪ್ಲೀಸ್ ಅವರಿಬ್ಬರನ್ನು ಆಚೆ ಹಾಕಿ'' ಅಂತ ವೀಕ್ಷಕರು ಮೂರ್ನಾಲ್ಕು ವಾರಗಳಿಂದಲೂ ಆಗ್ರಹಿಸುತ್ತಿದ್ದಾರೆ.
ಈ ವಾರ ನಾಮಿನೇಷನ್ ಪ್ರಕ್ರಿಯೆಯಿಂದ ರಾಕೇಶ್ ಬಚಾವ್ ಆಗ್ಬಿಟ್ಟರು. ಡೇಂಜರ್ ಝೋನ್ ನಲ್ಲಿ ಅಕ್ಷತಾ ಇದ್ದಾರೆ. ಅಕ್ಷತಾಗೆ ವೋಟ್ ಹಾಕಿ ಸೇಫ್ ಮಾಡುವುದು, ಬಿಡುವುದು ಈಗ ವೀಕ್ಷಕರ ಕೈಯಲ್ಲಿದೆ.
ಅಷ್ಟಕ್ಕೂ, ಈ ವಾರ ಅಕ್ಷತಾ ಜೊತೆಗೆ ಯಾರ್ಯಾರು ನಾಮಿನೇಟ್ ಆಗಿದ್ದಾರೆ ಅಂದ್ರಾ.? ಫೋಟೋ ಸ್ಲೈಡ್ ಗಳಲ್ಲಿ ಓದಿರಿ...
ಅಕ್ಷತಾಗೆ ಅತಿ ಹೆಚ್ಚು ವೋಟ್ ಗಳು.!
ಮುರಳಿ, ನವೀನ್, ಧನರಾಜ್, ಸೋನು ಪಾಟೀಲ್, ಜಯಶ್ರೀ ಮತ್ತು ಶಶಿ ಕುಮಾರ್... ಅಕ್ಷತಾ ವಿರುದ್ಧ ಮತ ಚಲಾಯಿಸಿದರು. ಹೀಗಾಗಿ, ಅಕ್ಷತಾ ಪಾಂಡವಪುರ ನಾಮಿನೇಟ್ ಆಗಲೇ ಬೇಕಾಯಿತು.
ಕ್ಷುಲ್ಲಕ ಕಾರಣಕ್ಕೆ ಸುದೀಪ್ ಮೇಲೆ 'ಪಕ್ಷಪಾತ'ದ ಆರೋಪ ಮಾಡಿದ ಅಕ್ಷತಾ.!
ಡೇಂಜರ್ ಝೋನ್ ನಲ್ಲಿ ಆಂಡಿ
ಪಾಯಸದಲ್ಲಿ ಖಾರದ ಪುಡಿ ಬೆರೆಸಿದ ಆಂಡಿ ಈ ವಾರ ನಾಮಿನೇಟ್ ಆಗಿದ್ದಾರೆ. ಮುರಳಿ, ಅಕ್ಷತಾ, ನವೀನ್ ಮತ್ತು ಜಯಶ್ರೀ.. ಆಂಡ್ರ್ಯೂ ರನ್ನ ನಾಮಿನೇಟ್ ಮಾಡಿದರು.
ಸುದೀಪ್ ಗೆ ಅಗೌರವ ತೋರಿದ ರಾಕೇಶ್-ಅಕ್ಷತಾ ಬಗ್ಗೆ ವೀಕ್ಷಕರು ಕೆಂಡಾಮಂಡಲ.!
ನಾಮಿನೇಟ್ ಆದ ಸೋನು ಪಾಟೀಲ್
ಅಕ್ಷತಾ ಮತ್ತು ರಾಕೇಶ್ ರಿಂದಾಗಿ ಸೋನು ಪಾಟೀಲ್ ಈ ವಾರ 'ಬಿಗ್ ಬಾಸ್' ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ.
ಸೂಕ್ಷ್ಮತೆ ಅರ್ಥೈಸಿಕೊಳ್ಳದ, ಹೇಳಿದ್ದನ್ನ ಒಪ್ಪಿಕೊಳ್ಳದ ರಾಕೇಶ್-ಅಕ್ಷತಾಗೆ ಏನ್ನನ್ನಬೇಕು.?
ಧನರಾಜ್ ಗೆ ಎಲಿಮಿನೇಷನ್ ಪರೀಕ್ಷೆ
ರಶ್ಮಿ ಮತ್ತು ರಾಕೇಶ್ ಮತ ಚಲಾವಣೆ ಮಾಡಿದ ಪರಿಣಾಮ ಧನರಾಜ್ ಕೂಡ ಎಲಿಮಿನೇಷನ್ ಪರೀಕ್ಷೆ ಎದುರಿಸಬೇಕಾಗಿದೆ.
ರಾಕೇಶ್ ಎಷ್ಟೇ ಬ್ರೇನ್ ವಾಶ್ ಮಾಡಿದರೂ ಅಕ್ಷತಾ ಬಗ್ಗಲಿಲ್ಲ.!
ಕ್ಯಾಪ್ಟನ್ ಕವಿತಾ ಕೃಪೆ
ವಾರದ ಕ್ಯಾಪ್ಟನ್ ಆಗಿರುವ ಕವಿತಾಗೆ ಇಬ್ಬರನ್ನು ನಾಮಿನೇಟ್ ಮಾಡುವ ಅಧಿಕಾರ ಇತ್ತು. ಇದನ್ನ ಬಳಸಿಕೊಂಡ ಕವಿತಾ ರಶ್ಮಿ ಮತ್ತು ನವೀನ್ ರನ್ನ ನಾಮಿನೇಟ್ ಮಾಡಿದರು.
ಬಚಾವ್ ಆದ ರಾಕೇಶ್
ನಾಮಿನೇಟ್ ಆಗಿದ್ದ ರಾಕೇಶ್, 'ನನ್ ಬಲೂನೇ ಸ್ಟ್ರಾಂಗು ಗುರು' ಚಟುವಟಿಕೆಯಲ್ಲಿ ಗೆದ್ದು ಸೇಫ್ ಆದರು. ರಾಕೇಶ್ ಬದಲು ಜಯಶ್ರೀ ನಾಮಿನೇಟ್ ಆಗಬೇಕಾಯಿತು.
ನಿಮ್ಮ ಮತ ಯಾರಿಗೆ.?
ಅಕ್ಷತಾ, ಆಂಡಿ, ಸೋನು, ಧನರಾಜ್, ರಶ್ಮಿ, ನವೀನ್ ಮತ್ತು ಜಯಶ್ರೀ.. ಈ ಏಳು ಜನರ ಪೈಕಿ ನಿಮ್ಮ ಮತ ಯಾರಿಗೆ.? ಯಾರು ಔಟ್ ಆಗಬೇಕು ಎಂಬುದು ನಿಮ್ಮ ಇಚ್ಛೆ.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.