twitter
    For Quick Alerts
    ALLOW NOTIFICATIONS  
    For Daily Alerts

    ಡೇಂಜರ್ ಝೋನ್ ನಲ್ಲಿ ಏಳು ಮಂದಿ: ನಿಮ್ಮ ಬೆಂಬಲ ಯಾರಿಗೆ.?

    |

    'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಿಂದ ಅಕ್ಷತಾ ಮತ್ತು ರಾಕೇಶ್ ಔಟ್ ಆಗಬೇಕು ಎಂಬುದು ಬಹುತೇಕ ವೀಕ್ಷಕರ ಒತ್ತಾಯ. ಇಷ್ಟು ದಿನ ರಾಕೇಶ್ ಹಾಗೂ ಅಕ್ಷತಾ ಸೇಫ್ ಆಗುತ್ತಲೇ ಇದ್ದರು. ಈ ವಾರವೂ ಹಾಗೇ ಸೇಫ್ ಆಗಲು ಸಾಧ್ಯವೇ.? ಕೊಂಚ ಕಷ್ಟ.!

    ಯಾಕಂದ್ರೆ, ರಾಕೇಶ್ ಮತ್ತು ಅಕ್ಷತಾ ಜೊತೆಗೆ ಈ ವಾರ ಡೇಂಜರ್ ಝೋನ್ ನಲ್ಲಿ ಇರುವವರು ಶಶಿ, ಕವಿತಾ, ಜಯಶ್ರೀ, ನಯನ ಮತ್ತು ಧನರಾಜ್.

    ಒಂದ್ಕಡೆ ಗ್ರೂಪಿಸಂ ಮಾಡುತ್ತಿರುವ ಶಶಿ, ಕವಿತಾ, ಜಯಶ್ರೀ ಮತ್ತು ಧನರಾಜ್ ಒಟ್ಟೊಟ್ಟಿಗೆ ನಾಮಿನೇಟ್ ಆಗಿದ್ದಾರೆ. ಅತ್ತ ಅಕ್ಷತಾ ಮತ್ತು ರಾಕೇಶ್ ಕೂಡ ಟಾರ್ಗೆಟ್ ಆಗಿದ್ದಾರೆ. ಈ ನಡುವೆ ಸಿಂಗಲ್ ಸಿಂಹಿಣಿ ನಯನಗೂ ಎಲಿಮಿನೇಷನ್ ಟೆನ್ಷನ್ ಮೂಡಿದೆ.

    ಎಂಟನೇ ವಾರದ ನಾಮಿನೇಷನ್ ಪ್ರಕ್ರಿಯೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿರಿ...

    ರಾಕೇಶ್ ವಿರುದ್ಧ ನಾಲ್ಕು ಮತಗಳು.!

    ರಾಕೇಶ್ ವಿರುದ್ಧ ನಾಲ್ಕು ಮತಗಳು.!

    ತಾನೇ ದೊಡ್ಡ ಗೇಮ್ ಪ್ಲೇಯರ್ ಎಂದುಕೊಂಡಿರುವ ರಾಕೇಶ್ ಈ ವಾರ ನಾಮಿನೇಟ್ ಆಗಿದ್ದಾರೆ. ಎಂ.ಜೆ ರಾಕೇಶ್ ಬಗ್ಗೆ ವೀಕ್ಷಕರ ವಲಯದಲ್ಲಿ ಉತ್ತಮ ಅಭಿಪ್ರಾಯ ಇಲ್ಲ. ಹೀಗಿರುವಾಗ, ಎಂ.ಜೆ ರಾಕೇಶ್ ಈ ವಾರ ಸೇಫ್ ಆಗ್ತಾರಾ.? ನೋಡಬೇಕು.

    ಮಾಡೋದೆಲ್ಲಾ ಮಾಡಿದ್ರೂ ಸಮರ್ಥನೆ ನೀಡುವಲ್ಲಿ ರಾಕೇಶ್ ಎತ್ತಿದ ಕೈ.!ಮಾಡೋದೆಲ್ಲಾ ಮಾಡಿದ್ರೂ ಸಮರ್ಥನೆ ನೀಡುವಲ್ಲಿ ರಾಕೇಶ್ ಎತ್ತಿದ ಕೈ.!

    ಟಾರ್ಗೆಟ್ ಆದ ಶಶಿ

    ಟಾರ್ಗೆಟ್ ಆದ ಶಶಿ

    ಕವಿತಾ-ಆಂಡಿ ಜಗಳದಲ್ಲಿ ಮೂಗು ತೂರಿಸಿ, ಕೈ ಮೂಳೆ ಮುರಿದುಕೊಂಡ ಮೇಲೆ ಶಶಿ ನಾಮಿನೇಟ್ ಆಗಿರಲಿಲ್ಲ. ಆದ್ರೆ, ಈ ವಾರ ನಾಮಿನೇಷನ್ ನಿಂದ ಶಶಿ ಮಿಸ್ ಆಗಲಿಲ್ಲ.

    ಬಿಗ್ ಬಾಸ್.. ಈ ಬಾರಿ ನೀವು ವೀಕ್ಷಕರಿಗೆ ಈ ಅವಕಾಶ ನೀಡಿಲ್ಲ ಯಾಕೆ.?ಬಿಗ್ ಬಾಸ್.. ಈ ಬಾರಿ ನೀವು ವೀಕ್ಷಕರಿಗೆ ಈ ಅವಕಾಶ ನೀಡಿಲ್ಲ ಯಾಕೆ.?

    ಡೇಂಜರ್ ಝೋನ್ ನಲ್ಲಿ ಅಕ್ಷತಾ

    ಡೇಂಜರ್ ಝೋನ್ ನಲ್ಲಿ ಅಕ್ಷತಾ

    ಅಕ್ಷತಾಗೆ ಈ ವಾರವೂ ನಾಮಿನೇಷನ್ ತಲೆ ಬಿಸಿ ತಪ್ಪಿಲ್ಲ. ರಾಕೇಶ್ ಜೊತೆಗಿನ ಗೆಳೆತನವೇ ಅಕ್ಷತಾ ಪದೇ ಪದೇ ನಾಮಿನೇಟ್ ಆಗಲು ಕಾರಣವಾಗಿದೆ.

    ಸುದೀಪ್ ಮಾತು ಕೇಳದ ಅಕ್ಷತಾಗೆ ತಾಯಿ ಕಡೆಯಿಂದ ಬಂತು ಕಟ್ಟುನಿಟ್ಟಿನ ಆದೇಶ.!ಸುದೀಪ್ ಮಾತು ಕೇಳದ ಅಕ್ಷತಾಗೆ ತಾಯಿ ಕಡೆಯಿಂದ ಬಂತು ಕಟ್ಟುನಿಟ್ಟಿನ ಆದೇಶ.!

    ಟಾರ್ಗೆಟ್ ಆದ ಕವಿತಾ

    ಟಾರ್ಗೆಟ್ ಆದ ಕವಿತಾ

    ಕ್ಯಾಪ್ಟನ್ ಆಗಿದ್ದಾಗ ಪಕ್ಷಪಾತ ಮಾಡಿದ ಕಾರಣಕ್ಕೆ ಕವಿತಾ ಈ ವಾರ ಟಾರ್ಗೆಟ್ ಆಗಿದ್ದಾರೆ. ಪದೇ ಪದೇ ತಪ್ಪು ಮಾಡಿ ಕ್ಷಮೆ ಕೇಳುವ ಕವಿತಾ ಈ ಶನಿವಾರ ಬಚಾವ್ ಆಗುತ್ತಾರಾ.?

    ಸೇಡು ತೀರಿಸಿಕೊಂಡ ಕವಿತಾ: ಕ್ಯಾಪ್ಟನ್ ಆಗದ ಆಂಡಿ.!ಸೇಡು ತೀರಿಸಿಕೊಂಡ ಕವಿತಾ: ಕ್ಯಾಪ್ಟನ್ ಆಗದ ಆಂಡಿ.!

    ಜಯಶ್ರೀ ಮಿಸ್ ಆಗಲಿಲ್ಲ

    ಜಯಶ್ರೀ ಮಿಸ್ ಆಗಲಿಲ್ಲ

    'ಬಿಗ್ ಬಾಸ್' ಮನೆಯ ರಿಮೋಟ್ ಕಂಟ್ರೋಲ್ ಜಯಶ್ರೀ ಈ ವಾರ ನಾಮಿನೇಟ್ ಆಗಿದ್ದಾರೆ. ಜಯಶ್ರೀ ಪರವಾಗಿ ನೀವು ಮತ ಚಲಾವಣೆ ಮಾಡ್ತೀರಾ.?

    ಮುರಳಿ ಕಣ್ಣು ಇವರಿಬ್ಬರ ಮೇಲೆ

    ಮುರಳಿ ಕಣ್ಣು ಇವರಿಬ್ಬರ ಮೇಲೆ

    ರಶ್ಮಿ, ನಯನ ಮತ್ತು ಧನರಾಜ್ ಗೆ ನಾಮಿನೇಷನ್ ನಲ್ಲಿ ತಲಾ ಒಂದೊಂದು ಮತಗಳು ಬಿದ್ದಿದ್ದವು. ಈ ಮೂವರ ಪೈಕಿ ಇಬ್ಬರನ್ನು ನಾಮಿನೇಟ್ ಮಾಡುವ ಅಧಿಕಾರ ಕ್ಯಾಪ್ಟನ್ ಮುರಳಿಗೆ ಲಭಿಸಿತು. ಹೀಗಾಗಿ, ಧನರಾಜ್ ಮತ್ತು ನಯನ ರನ್ನ ಮುರಳಿ ನಾಮಿನೇಟ್ ಮಾಡಿದರು.

    ನಿಮ್ಮ ಬೆಂಬಲ ಯಾರಿಗೆ.?

    ನಿಮ್ಮ ಬೆಂಬಲ ಯಾರಿಗೆ.?

    ರಾಕೇಶ್, ಅಕ್ಷತಾ, ಶಶಿ, ಕವಿತಾ, ಜಯಶ್ರೀ, ಧನರಾಜ್ ಮತ್ತು ನಯನ... ಈ ಏಳು ಮಂದಿ ಪೈಕಿ ನಿಮ್ಮ ಬೆಂಬಲ ಯಾರಿಗೆ.? ಯಾರು ಸೇಫ್ ಆಗಬೇಕು.? ಯಾರು ಔಟ್ ಆಗಬೇಕು.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

    English summary
    Bigg Boss Kannada 6: Week 8: 7 Contestants are nominated for this week's elimination.
    Tuesday, December 11, 2018, 18:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X