Don't Miss!
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡೇಂಜರ್ ಝೋನ್ ನಲ್ಲಿ ಏಳು ಮಂದಿ: ನಿಮ್ಮ ಬೆಂಬಲ ಯಾರಿಗೆ.?
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಿಂದ ಅಕ್ಷತಾ ಮತ್ತು ರಾಕೇಶ್ ಔಟ್ ಆಗಬೇಕು ಎಂಬುದು ಬಹುತೇಕ ವೀಕ್ಷಕರ ಒತ್ತಾಯ. ಇಷ್ಟು ದಿನ ರಾಕೇಶ್ ಹಾಗೂ ಅಕ್ಷತಾ ಸೇಫ್ ಆಗುತ್ತಲೇ ಇದ್ದರು. ಈ ವಾರವೂ ಹಾಗೇ ಸೇಫ್ ಆಗಲು ಸಾಧ್ಯವೇ.? ಕೊಂಚ ಕಷ್ಟ.!
ಯಾಕಂದ್ರೆ, ರಾಕೇಶ್ ಮತ್ತು ಅಕ್ಷತಾ ಜೊತೆಗೆ ಈ ವಾರ ಡೇಂಜರ್ ಝೋನ್ ನಲ್ಲಿ ಇರುವವರು ಶಶಿ, ಕವಿತಾ, ಜಯಶ್ರೀ, ನಯನ ಮತ್ತು ಧನರಾಜ್.
ಒಂದ್ಕಡೆ ಗ್ರೂಪಿಸಂ ಮಾಡುತ್ತಿರುವ ಶಶಿ, ಕವಿತಾ, ಜಯಶ್ರೀ ಮತ್ತು ಧನರಾಜ್ ಒಟ್ಟೊಟ್ಟಿಗೆ ನಾಮಿನೇಟ್ ಆಗಿದ್ದಾರೆ. ಅತ್ತ ಅಕ್ಷತಾ ಮತ್ತು ರಾಕೇಶ್ ಕೂಡ ಟಾರ್ಗೆಟ್ ಆಗಿದ್ದಾರೆ. ಈ ನಡುವೆ ಸಿಂಗಲ್ ಸಿಂಹಿಣಿ ನಯನಗೂ ಎಲಿಮಿನೇಷನ್ ಟೆನ್ಷನ್ ಮೂಡಿದೆ.
ಎಂಟನೇ ವಾರದ ನಾಮಿನೇಷನ್ ಪ್ರಕ್ರಿಯೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿರಿ...
ರಾಕೇಶ್ ವಿರುದ್ಧ ನಾಲ್ಕು ಮತಗಳು.!
ತಾನೇ ದೊಡ್ಡ ಗೇಮ್ ಪ್ಲೇಯರ್ ಎಂದುಕೊಂಡಿರುವ ರಾಕೇಶ್ ಈ ವಾರ ನಾಮಿನೇಟ್ ಆಗಿದ್ದಾರೆ. ಎಂ.ಜೆ ರಾಕೇಶ್ ಬಗ್ಗೆ ವೀಕ್ಷಕರ ವಲಯದಲ್ಲಿ ಉತ್ತಮ ಅಭಿಪ್ರಾಯ ಇಲ್ಲ. ಹೀಗಿರುವಾಗ, ಎಂ.ಜೆ ರಾಕೇಶ್ ಈ ವಾರ ಸೇಫ್ ಆಗ್ತಾರಾ.? ನೋಡಬೇಕು.
ಮಾಡೋದೆಲ್ಲಾ ಮಾಡಿದ್ರೂ ಸಮರ್ಥನೆ ನೀಡುವಲ್ಲಿ ರಾಕೇಶ್ ಎತ್ತಿದ ಕೈ.!
ಟಾರ್ಗೆಟ್ ಆದ ಶಶಿ
ಕವಿತಾ-ಆಂಡಿ ಜಗಳದಲ್ಲಿ ಮೂಗು ತೂರಿಸಿ, ಕೈ ಮೂಳೆ ಮುರಿದುಕೊಂಡ ಮೇಲೆ ಶಶಿ ನಾಮಿನೇಟ್ ಆಗಿರಲಿಲ್ಲ. ಆದ್ರೆ, ಈ ವಾರ ನಾಮಿನೇಷನ್ ನಿಂದ ಶಶಿ ಮಿಸ್ ಆಗಲಿಲ್ಲ.
ಬಿಗ್ ಬಾಸ್.. ಈ ಬಾರಿ ನೀವು ವೀಕ್ಷಕರಿಗೆ ಈ ಅವಕಾಶ ನೀಡಿಲ್ಲ ಯಾಕೆ.?
ಡೇಂಜರ್ ಝೋನ್ ನಲ್ಲಿ ಅಕ್ಷತಾ
ಅಕ್ಷತಾಗೆ ಈ ವಾರವೂ ನಾಮಿನೇಷನ್ ತಲೆ ಬಿಸಿ ತಪ್ಪಿಲ್ಲ. ರಾಕೇಶ್ ಜೊತೆಗಿನ ಗೆಳೆತನವೇ ಅಕ್ಷತಾ ಪದೇ ಪದೇ ನಾಮಿನೇಟ್ ಆಗಲು ಕಾರಣವಾಗಿದೆ.
ಸುದೀಪ್ ಮಾತು ಕೇಳದ ಅಕ್ಷತಾಗೆ ತಾಯಿ ಕಡೆಯಿಂದ ಬಂತು ಕಟ್ಟುನಿಟ್ಟಿನ ಆದೇಶ.!
ಟಾರ್ಗೆಟ್ ಆದ ಕವಿತಾ
ಕ್ಯಾಪ್ಟನ್ ಆಗಿದ್ದಾಗ ಪಕ್ಷಪಾತ ಮಾಡಿದ ಕಾರಣಕ್ಕೆ ಕವಿತಾ ಈ ವಾರ ಟಾರ್ಗೆಟ್ ಆಗಿದ್ದಾರೆ. ಪದೇ ಪದೇ ತಪ್ಪು ಮಾಡಿ ಕ್ಷಮೆ ಕೇಳುವ ಕವಿತಾ ಈ ಶನಿವಾರ ಬಚಾವ್ ಆಗುತ್ತಾರಾ.?
ಸೇಡು ತೀರಿಸಿಕೊಂಡ ಕವಿತಾ: ಕ್ಯಾಪ್ಟನ್ ಆಗದ ಆಂಡಿ.!
ಜಯಶ್ರೀ ಮಿಸ್ ಆಗಲಿಲ್ಲ
'ಬಿಗ್ ಬಾಸ್' ಮನೆಯ ರಿಮೋಟ್ ಕಂಟ್ರೋಲ್ ಜಯಶ್ರೀ ಈ ವಾರ ನಾಮಿನೇಟ್ ಆಗಿದ್ದಾರೆ. ಜಯಶ್ರೀ ಪರವಾಗಿ ನೀವು ಮತ ಚಲಾವಣೆ ಮಾಡ್ತೀರಾ.?
ಮುರಳಿ ಕಣ್ಣು ಇವರಿಬ್ಬರ ಮೇಲೆ
ರಶ್ಮಿ, ನಯನ ಮತ್ತು ಧನರಾಜ್ ಗೆ ನಾಮಿನೇಷನ್ ನಲ್ಲಿ ತಲಾ ಒಂದೊಂದು ಮತಗಳು ಬಿದ್ದಿದ್ದವು. ಈ ಮೂವರ ಪೈಕಿ ಇಬ್ಬರನ್ನು ನಾಮಿನೇಟ್ ಮಾಡುವ ಅಧಿಕಾರ ಕ್ಯಾಪ್ಟನ್ ಮುರಳಿಗೆ ಲಭಿಸಿತು. ಹೀಗಾಗಿ, ಧನರಾಜ್ ಮತ್ತು ನಯನ ರನ್ನ ಮುರಳಿ ನಾಮಿನೇಟ್ ಮಾಡಿದರು.
ನಿಮ್ಮ ಬೆಂಬಲ ಯಾರಿಗೆ.?
ರಾಕೇಶ್, ಅಕ್ಷತಾ, ಶಶಿ, ಕವಿತಾ, ಜಯಶ್ರೀ, ಧನರಾಜ್ ಮತ್ತು ನಯನ... ಈ ಏಳು ಮಂದಿ ಪೈಕಿ ನಿಮ್ಮ ಬೆಂಬಲ ಯಾರಿಗೆ.? ಯಾರು ಸೇಫ್ ಆಗಬೇಕು.? ಯಾರು ಔಟ್ ಆಗಬೇಕು.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.