Don't Miss!
- News ಎನ್ಕೌಂಟರ್ ಮಾಡುವುದಾಗಿ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ!
- Lifestyle ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- Finance 2.3 ಲಕ್ಷ ರೂಪಾಯಿಗೆ 9 ನಿಂಬೆಹಣ್ಣು ಹರಾಜು, ಏನಿದರ ವಿಶೇಷತೆ ತಿಳಿಯಿರಿ
- Sports RR vs DC: ಐಪಿಎಲ್ನಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾದ ರಿಷಭ್ ಪಂತ್
- Technology ಮತ್ತೊಂದು ಅಗ್ಗದ 5G ಫೋನ್ ಲಾಂಚ್ ಮಾಡಲು ಸಜ್ಜಾದ ರಿಯಲ್ಮಿ!..ಫೀಚರ್ಸ್ ಏನು?
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಪ್ಪಿನ ಅರಿವಾದ ಮೇಲೆ ಸುದೀಪ್ ಮುಂದೆ ಚೈತ್ರಗೆ ಕ್ಷಮೆ ಕೇಳಿದ ಸುಜಾತ.!
Recommended Video
'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ಎರಡನೇ ವಾರ ದೊಡ್ಡ ಗಲಾಟೆ ಆಗಿದ್ದು ಒಂದು ಆಪಲ್ ವಿಚಾರಕ್ಕೆ. ರಾತ್ರೋರಾತ್ರಿ ಹೊಟ್ಟೆ ಹಸಿವಾದಾಗ, ಚೈತ್ರ ಕೋಟೂರು ಒಂದು ಆಪಲ್ ತಿಂದಿದ್ದರು. ಅದು ಅಡುಗೆ ಮನೆಯ ತಂಡದಲ್ಲಿದ್ದ ಚಂದನ್ ಆಚಾರ್ ಗೆ ತಿಳಿಸಿ ಒಂದು ಆಪಲ್ ತೆಗೆದುಕೊಂಡಿದ್ದರು ಚೈತ್ರ. ಅಲ್ಲದೇ, ಚಂದನ್ ಆಚಾರ್, ರಾಜು ತಾಳಿಕೋಟೆ ಮತ್ತು ಕುರಿ ಪ್ರತಾಪ್ ಜೊತೆಗೂ ಚೈತ್ರ ಕೋಟೂರು ಒಂದು ಆಪಲ್ ನ ಹಂಚಿಕೊಂಡಿದ್ದರು.
ಈ ವಿಚಾರ ಸುಜಾತ ಕಿವಿಗೆ ಬಿದ್ದ ಮೇಲೆ ದೊಡ್ಡ ರಂಪ ಆಗಿತ್ತು. ''ಕಾಮನ್ ಸೆನ್ಸ್ ಇಲ್ಲ.. ಕದ್ದು ತಿನ್ನುತ್ತಾರೆ'' ಅಂತೆಲ್ಲಾ ಚೈತ್ರ ಕೋಟೂರು ಮೇಲೆ ಸುಜಾತ ಕೂಗಾಡಿದ್ದರು.
ಇದೇ ಟಾಪಿಕ್ ಕುರಿತಾಗಿ ಕಿಚ್ಚ ಸುದೀಪ್ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಪಂಚಾಯಿತಿ ನಡೆಸಿದರು. ಸುದೀಪ್ ಆಡಿದ ಮಾತುಗಳಿಂದ ತಮ್ಮ ತಪ್ಪು ಅರಿತ ಸುಜಾತ, ಚೈತ್ರ ಕೋಟೂರುಗೆ ಕ್ಷಮೆ ಕೇಳಿದರು. ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ, ಓದಿರಿ...
ಸುಜಾತಗೆ ಬಂತು ವೂಟ್ ಪ್ರಶ್ನೆ
ಕೊಡಚಾದ್ರಿ ಮೂಲದ ಪ್ರವೀಣಾ ಎಂಬುವರು ಜರ್ಮನಿಯಿಂದ ಕಳುಹಿಸಿರುವ ವಿಡಿಯೋದಲ್ಲಿ, ''ಒಂದು ಸೇಬಿಗೆ ಅಷ್ಟೊಂದು ದೊಡ್ಡ ಗಲಾಟೆ ಮಾಡುವ ಅವಶ್ಯಕತೆ ಇತ್ತಾ.? ನಿಮಗೆ ಆಪ್ತವಾಗಿರುವವರು ತಿಂದಿದ್ದರೆ, ಇಷ್ಟು ದೊಡ್ಡದಾಗಿ ಜಗಳ ಮಾಡುತ್ತಿದ್ರಾ.?'' ಎಂದು ಸುಜಾತಗೆ ಪ್ರಶ್ನೆ ಕೇಳಿದರು.
ಎರಡು ವಾರ: 'ಬಿಗ್ ಬಾಸ್' ಮನೆಯೊಳಗೆ ಏನ್ ನಡೀತಿದೆ.? ವೀಕ್ಷಕರಿಗೆ ಅರ್ಥ ಆಗ್ತಿಲ್ಲ.!
ಸುಜಾತಾ ಕೊಟ್ಟ ಉತ್ತರ ಏನು.?
''ಯಾರೇ ಆಗಿದ್ದರೂ ಖಂಡಿತ ಹೀಗೆ ಮಾಡುತ್ತಿದ್ದೆ. ಕೊಟ್ಟಿರುವ ಹಣ್ಣು ಎಲ್ಲರಿಗೂ ಸಮನಾಗಿ ಭಾಗ ಮಾಡಬೇಕು ಅನ್ನೋದು ನನ್ನ ಅನಿಸಿಕೆ'' ಎಂದರು ಸುಜಾತ.
'ಬಿಗ್ ಬಾಸ್': ಇಡೀ ಸಂಚಿಕೆಯನ್ನು ಕೊಂದ ಒಂದು ಆಪಲ್.!
ಚೈತ್ರ ಹೇಳಿದ್ದೇನು.?
''ನನಗೆ ಹುಷಾರಿರಲಿಲ್ಲ. ವೈಯುಕ್ತಿಕ ಸಮಸ್ಯೆ ಇತ್ತು. ಹೊಟ್ಟೆ ನೋವಿದ್ದ ಕಾರಣ ಆಪಲ್ ತಿಂದೆ. ನಾನು ಕದ್ದು ತಿನ್ನಲಿಲ್ಲ. ಚಂದನ್ ಇರುವುದು ಕಿಚನ್ ಡಿಪಾರ್ಟ್ಮೆಂಟ್ ನಲ್ಲಿ. ಹೀಗಾಗಿ ಅವರಿಗೆ ಹೇಳಿ ಆಪಲ್ ತೆಗೆದುಕೊಂಡೆ'' ಎಂದರು ಚೈತ್ರ ಕೋಟೂರು
'ಬಿಗ್ ಬಾಸ್ ಕನ್ನಡ-7': ಟಾರ್ಗೆಟ್ ಆದ 'ಅನ್ನಪೂರ್ಣೇಶ್ವರಿ' ಸುಜಾತ
ಸುದೀಪ್ ಏನಂದರು.?
''ಆಪಲ್ ಯಾವಾಗ ತಿನ್ನಬೇಕು, ಯಾವಾಗ ತಿನ್ನಬಾರದು ಎಂಬ ರೂಲ್ ಯಾರದ್ದು.? ಸೇಬಿನ ಮೇಲೆ ಎಲ್ಲರಿಗೂ ಸಮನಾಗಿ ಹಕ್ಕಿದೆ. ಯಾರಿಗೆ ಯಾವಾಗ ತಿನ್ನಬೇಕು ಅನ್ಸುತ್ತೋ, ಆಗ ತಿನ್ನುತ್ತಾರೆ. ನಗುಮುಖದಲ್ಲೇ ಚೈತ್ರಗೆ 'ನಿಮ್ಮ ಲೆಕ್ಕದಲ್ಲಿ ಒಂದು ಆಪಲ್ ಕಮ್ಮಿ ಆಗಿದೆ' ಎಂದು ಹೇಳಿದ್ದರೆ ಇಷ್ಟೊಂದು ದೊಡ್ಡ ಗಲಾಟೆ ಆಗುತ್ತಿರಲಿಲ್ಲ'' ಎನ್ನುತ್ತ ಸುಜಾತಗೆ ಸುದೀಪ್ ಬಿಸಿ ಮುಟ್ಟಿಸಿದರು.
ಕ್ಷಮೆ ಕೇಳಿದ ಸುಜಾತ
ಸುದೀಪ್ ಆಡಿದ ಮಾತುಗಳನ್ನು ಕೇಳಿ, ''ಹೌದು.. ಈ ತರಹ ಮಾಡಬಹುದಿತ್ತು. ಐ ಆಮ್ ಸಾರಿ ಚೈತ್ರ.. ನಾನು ತಪ್ಪು ಮಾಡಿದೆ'' ಎಂದು ಚೈತ್ರ ಬಳಿ ಸುಜಾತ ಕ್ಷಮೆ ಕೇಳಿದರು.
ಟಾರ್ಗೆಟ್ ಆದ ಸುಜಾತ
''ಹೆಚ್ಚು ಕಿರುಚಾಡುತ್ತಾರೆ'' ಅಂತ ಸುಜಾತ ಕಡೆ ಶೈನ್ ಶೆಟ್ಟಿ, ಚಂದನಾ, ಕಿಶನ್ ಬೆಟ್ಟು ಮಾಡಿ ತೋರಿಸಿದ ಮೇಲೆ ''ನನ್ನ ವಾಯ್ಸ್ ತುಂಬಾ ಜೋರು. ಇನ್ಮೇಲೆ ಮೆಲ್ಲಗೆ ಮಾತನಾಡಲು ಪ್ರಯತ್ನ ಪಡುವೆ'' ಎಂದರು ಸುಜಾತ. ಆಡಿದ ಮಾತಿನಂತೆ ಇನ್ಮುಂದೆ ಸುಜಾತ ಬದಲಾಗುತ್ತಾರಾ, ನೋಡೋಣ.