Don't Miss!
- News ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಇಬ್ಬರು ಶಂಕಿತರ ಸುಳಿವು ಕೊಟ್ಟರೆ ₹20 ಲಕ್ಷ ಬಹುಮಾನ
- Sports RCB VS KKR: ಟಾಸ್ ಗೆದ್ದ ಕೆಕೆಆರ್ ಫೀಲ್ಡೀಂಗ್ ಆಯ್ಕೆ: ಆರ್ಸಿಬಿ ತಂಡದಲ್ಲಿ ಇಲ್ಲ ಬದಲಾವಣೆ
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರೊಚ್ಚಿಗೆದ್ದ ರಾಜು ತಾಳಿಕೋಟೆ: ಇಲ್ಲಿವರೆಗೂ ಒಂದು ಲೆಕ್ಕ, ಇನ್ಮೇಲೆ ಬೇರೆ ಲೆಕ್ಕ.!
ರಾಜು ತಾಳಿಕೋಟೆ.. ಹೇಳಿ ಕೇಳಿ ಇವರು ಹಾಸ್ಯ ನಟ. ರಂಗಭೂಮಿ ಮತ್ತು ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ರಾಜು ತಾಳಿಕೋಟೆ ಹೆಚ್ಚು ಕಾಣಿಸಿಕೊಂಡಿದ್ದಾರೆ. ಹೀಗಾಗಿ, 'ಬಿಗ್ ಬಾಸ್' ಮನೆಯೊಳಗೆ ಇವರೊಂಥರಾ ''ಕಾಮಿಡಿ ಕ್ಯಾರೆಕ್ಟರ್'' ಅಂತ ಹಲವು ಸ್ಪರ್ಧಿಗಳು ಭಾವಿಸಿದ್ದಾರೆ.
ಕಾಮಿಡಿ ನಟ ಆಗಿರೋದ್ರಿಂದ ಇವರ ಮಾತುಗಳನ್ನ ಯಾರೂ ಸೀರಿಯಸ್ ಆಗಿ ಪರಿಗಣಿಸುತ್ತಿಲ್ಲ. 'ಬಿಗ್ ಬಾಸ್' ಕೊಡುವ ಚಟುವಟಿಕೆಗಳಲ್ಲಿ ಕೈಲಾದಷ್ಟು ಶ್ರಮ ಹಾಕಿದರೂ, ಯಾರೂ ಗುರುತಿಸುತ್ತಿಲ್ಲ. ಇವೆಲ್ಲದರ ಜೊತೆಗೆ ''ಊರಿಗೆ ಹೋಗಬೇಕು, ಮನೆಯವರನ್ನು ನೋಡಬೇಕು'' ಅಂತ ರಾಜು ತಾಳಿಕೋಟೆ ಹೇಳಿದ್ದು ಕೆಲ ಸ್ಪರ್ಧಿಗಳಿಗೆ 'ಟಾರ್ಗೆಟ್ ಮಾಡುವ ಅಸ್ತ್ರ'ವಾಗಿದೆ.
ನಿನ್ನೆ ನಡೆದ ಓಪನ್ ನಾಮಿನೇಶನ್ ಪ್ರಕ್ರಿಯೆಯಲ್ಲೂ ''ರಾಜು ತಾಳಿಕೋಟೆಗೆ ಸ್ಪರ್ಧಾತ್ಮಕ ಮನೋಭಾವ ಇಲ್ಲ'' ಅಂತ ಕೆಲ ಸ್ಪರ್ಧಿಗಳು ತಿವಿದರು. ಪರಿಣಾಮ ರಾಜು ತಾಳಿಕೋಟೆ ರೊಚ್ಚಿಗೆದ್ದಿದ್ದಾರೆ. ''ಇನ್ಮೇಲೆ ಸಮರ್ಥರು ಯಾರು ಅಂತ ತೋರಿಸುವೆ. ಯುದ್ಧ ಶುರು'' ಅಂತ ಹೇಳುವ ಮೂಲಕ ಹೊಸ ಗೇಮ್ ಪ್ಲಾನ್ ಗೆ ರಾಜು ತಾಳಿಕೋಟೆ ನಾಂದಿ ಹಾಡಿದ್ದಾರೆ. ಮುಂದೆ ಓದಿರಿ...
ಕೇಳಿ ಕೇಳಿ ಬೇಸೆತ್ತ ರಾಜು ತಾಳಿಕೋಟೆ
''ರಾಜು ತಾಳಿಕೋಟೆಗೆ ಸ್ಪರ್ಧಾತ್ಮಕ ಮನೋಭಾವ ಇಲ್ಲ. ಯಾವಾಗಲೂ ಮನೆಗೆ ಹೋಗಬೇಕು ಅಂತಿರುತ್ತಾರೆ'' ಎಂಬ ಕಾರಣಗಳನ್ನು ಇಟ್ಟುಕೊಂಡು ಪದೇ ಪದೇ ಟಾರ್ಗೆಟ್ ಮಾಡಿದ್ರಿಂದ ರಾಜು ತಾಳಿಕೋಟೆ ಬೇಸೆತ್ತಿದ್ದಾರೆ. ಹೀಗಾಗಿ, ನಾಮಿನೇಶನ್ ಪ್ರಕ್ರಿಯೆಯಲ್ಲಿ ಶೈನ್ ಶೆಟ್ಟಿ ಮತ್ತು ವಾಸುಕಿ ವೈಭವ್ ವಿರುದ್ಧ ರಾಜು ತಾಳಿಕೋಟೆ ನೇರವಾಗಿ ತಿರುಗೇಟು ಕೊಟ್ಟರು.
ಬೆಂಕಿಗೆ ಬಿತ್ತು ಫೋಟೋಗಳು: 'ಬಿಗ್ ಬಾಸ್' ಮನೆಯಲ್ಲಿನ್ನೂ ಯುದ್ಧ ಶುರು.!
ಸಿಟ್ಟು ಹೊರಹಾಕಿದ ರಾಜು ತಾಳಿಕೋಟೆ
ಚಟುವಟಿಕೆಯಲ್ಲಿ ರಾಜು ತಾಳಿಕೋಟೆ ಮೂರು ಗಂಟೆ ಲಾಟೀನು ಹಿಡಿದಿದ್ದರು. ಆದರೆ, ಶೈನ್ ಶೆಟ್ಟಿ ಕೇವಲ ಎರಡು ಗಂಟೆ ಮಾತ್ರ ಲಾಟೀನು ಹಿಡಿದಿದ್ದರು. ಇದನ್ನ ಪ್ರಸ್ತಾಪಿಸಿ ಶೈನ್ ಶೆಟ್ಟಿಯನ್ನ ರಾಜು ತಾಳಿಕೋಟೆ ನಾಮಿನೇಟ್ ಮಾಡಿದರು. ಇನ್ನೂ ''ವಾಸುಕಿ ವೈಭವ್ ಪೆದ್ದ'' ಎಂದು ತಮ್ಮ ಸಿಟ್ಟನ್ನ ರಾಜು ತಾಳಿಕೋಟೆ ಹೊರಹಾಕಿದರು.
ತಾಯಿಯ ಕ್ಷಮೆ ಕೇಳಿ ಭಾವುಕರಾದ ರಾಜು ತಾಳಿಕೋಟೆ
ಇನ್ಮೇಲೆ ಹೊಸ ಲೆಕ್ಕ.!
''ನಾನು ಅಸಮರ್ಥ ಅಂತ ತಿಳಿದುಕೊಂಡಿರುವ ಎಲ್ಲರಿಗೂ ನಾನು ಸಮರ್ಥ ಅಂತ ತೋರಿಸಿಕೊಳ್ಳಬೇಕಾಗಿದೆ. ಇಷ್ಟು ದಿನ ನಾನು ಊರಿಗೆ ಹೋಗಬೇಕು ಅಂತಿದ್ದೆ. ಇನ್ಮೇಲೆ ಹಾಗೆ ಹೇಳಲ್ಲ. ಡೈರೆಕ್ಟ್ ಯುದ್ಧವೇ. ಯುದ್ಧ ಮಾಡಲು ಬತ್ತಳಿಕೆಯಲ್ಲಿ ಸಾಕಷ್ಟು ಅಸ್ತ್ರಗಳನ್ನು ಹೊತ್ತು ತಂದಿದ್ದೇನೆ. ಅದನ್ನೆಲ್ಲ ಉಪಯೋಗಿಸಬಾರದು ಅಂತ ಇಷ್ಟು ದಿನ ಸುಮ್ಮನೆ ಇದ್ದೆ. ಇನ್ಮೇಲೆ ಬಳಸುತ್ತೇನೆ. ನಾನು ಮಂಗನ ಜಾತಿಯವನು'' ಅಂತ ರಾಜು ತಾಳಿಕೋಟೆ ಹೇಳಿದ್ದಾರೆ. ಇದನ್ನ ನೋಡಿದರೆ ಅವರು ಜಿದ್ದಿಗೆ ಬಿದ್ದಿರುವುದು ಸ್ಪಷ್ಟ.
ಪಕ್ಕಾ ಪ್ಲಾನ್ ಮಾಡುತ್ತಿರುವ ರಾಜು ತಾಳಿಕೋಟೆ
'ಬಿಗ್ ಬಾಸ್' ಮನೆಯಲ್ಲಿ ಹೆಚ್ಚು ದಿನ ಉಳಿಯಲು ಗ್ರೂಪಿಸಂ ಸೇರಿದಂತೆ ಹಲವು ಪ್ಲಾನ್ ಗಳನ್ನು ರಾಜು ತಾಳಿಕೋಟೆ ಮಾಡುತ್ತಿದ್ದಾರೆ. ತಮ್ಮ ಗುಂಪಿಗೆ ಚಂದನ್ ಆಚಾರ್ ನ ಸೆಳೆಯಲು ರಾಜು ತಾಳಿಕೋಟೆ ಶತ ಪ್ರಯತ್ನ ಮಾಡಿದ್ದಾರೆ. ವಾಸುಕಿ ವೈಭವ್ ಮತ್ತು ಶೈನ್ ಶೆಟ್ಟಿ ಗ್ಯಾಂಗ್ ನ ಬ್ರೇಕ್ ಮಾಡುವಲ್ಲಿ ರಾಜು ತಾಳಿಕೋಟೆ ಯಶಸ್ವಿ ಆಗ್ತಾರಾ.? ನೋಡಬೇಕು. ಅಂದ್ಹಾಗೆ, ರಾಜು ತಾಳಿಕೋಟೆ ಈ ವಾರ ನಾಮಿನೇಟ್ ಆಗಿದ್ದಾರೆ. ಅವರನ್ನ ಸೇಫ್ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ.