Don't Miss!
- News Karnataka Lok Sabha: 28 ಕ್ಷೇತ್ರಗಳ ಜಾತಿವಾರು ಅಭ್ಯರ್ಥಿಗಳ ಯಾರು? ಮಾಹಿತಿ ಇಲ್ಲಿದೆ
- Automobiles ಎಲೆಕ್ಟ್ರಿಕ್ ಲೋಕಕ್ಕೆ ಎಸ್ಯುವಿ ದೈತ್ಯನ ಎಂಟ್ರಿ: ಇನ್ನು ಉಳಿದ ಕಾರುಗಳನ್ನು ದೇವರೇ ಕಾಪಾಡಬೇಕು!
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Finance ಬೆಂಗಳೂರು-ತುಮಕೂರು ನಮ್ಮ ಮೆಟ್ರೋ ಯೋಜನೆ: ಬರಲಿವೆ 19 ಎತ್ತರದ ನಿಲ್ದಾಣಗಳು
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಂಟಿ ಎಂದು ರೇಗಿಸಿದ ಕಿಶನ್, ವಾಸುಕಿ: ಕಣ್ಣೀರಿಟ್ಟ ಭೂಮಿ ಶೆಟ್ಟಿ
ಕರಾವಳಿ ಕುವರಿ ಭೂಮಿ ಶೆಟ್ಟಿ ಸೂಕ್ಷ್ಮ ಮನಸ್ಸಿನ 'ಕಿನ್ನರಿ'. ಎಲ್ಲರೊಂದಿಗೆ ಆತ್ಮೀಯವಾಗಿ ಇರುವ ಭೂಮಿ ಶೆಟ್ಟಿಗೆ ಯಾರಾದರೂ ಸ್ವಲ್ಪ ಕಾಲೆಳೆದರೂ ಸಾಕು ಕಣ್ಣೀರ ಕೋಡಿ ಹರಿದು ಬಿಡುತ್ತದೆ. ಸ್ನೇಹದಲ್ಲಿ ಕೊಂಚ ಗ್ಯಾಪ್ ಇದೆ ಅಂತ ಅನಿಸಿದರೂ, ಅದನ್ನ ಭೂಮಿ ಶೆಟ್ಟಿ ಸಕಾರಾತ್ಮಕವಾಗಿ ಸ್ವೀಕರಿಸುವುದಿಲ್ಲ. ಇದೇ ಕಾರಣಕ್ಕೆ 'ಬಿಗ್ ಬಾಸ್' ಮನೆಯೊಳಗೆ ಭೂಮಿ ಶೆಟ್ಟಿ ಮತ್ತು ಪ್ರಿಯಾಂಕಾ ನಡುವೆ ಮನಸ್ತಾಪ ಆಗಿತ್ತು.
ಸದ್ಯಕ್ಕೆ ಭೂಮಿ ಶೆಟ್ಟಿ ಮತ್ತು ಪ್ರಿಯಾಂಕಾ ನಡುವೆ ಭಿನ್ನಾಭಿಪ್ರಾಯ ಏನೇ ಇದ್ದರೂ.. ಇಬ್ಬರ ಸ್ನೇಹ ಮಾತ್ರ ಗಟ್ಟಿಯಾಗಿದೆ. ಈ ನಡುವೆ 'ರಣರಂಗ' ಚಟುವಟಿಕೆಯ ಗ್ಯಾಪ್ ನಲ್ಲಿ ವಾಸುಕಿ ವೈಭವ್ ಮತ್ತು ಕಿಶನ್.. ಭೂಮಿ ಶೆಟ್ಟಿಗೆ 'ಆಂಟಿ ಆಂಟಿ' ಅಂತ ರೇಗಿಸುತ್ತಿದ್ದರು.
ಕುಂದಾಪುರದ ಮೀನು ರಾಯಲ್ ಶೆಟ್ರನ್ನ ಮೆಚ್ಚಿದ ಕಿಚ್ಚ ಸುದೀಪ್.!
ಇಬ್ಬರ ಮುಂದೆ ಪ್ರತಿಕ್ರಿಯೆ ಕೊಡದ ಭೂಮಿ ಶೆಟ್ಟಿ ಬಾಯ್ತಂಬ ಸಕ್ಕರೆ ಹಾಕಿಕೊಂಡು ಸುಮ್ಮನಾದರು. ಬಳಿಕ ಪ್ರಿಯಾಂಕಾ ಮುಂದೆ ಕಣ್ಣೀರು ಸುರಿಸಿದರು. ''ನನ್ನ ಜೊತೆ ನೀನು ಹೆಚ್ಚು ಮಾತನಾಡಲ್ಲ'' ಎನ್ನುತ್ತ ಪ್ರಿಯಾಂಕಾ ಜೊತೆ ಗೋಳು ತೋಡಿಕೊಂಡರು ಭೂಮಿ ಶೆಟ್ಟಿ.
ಓಹ್.. ವಾಸುಕಿ ವೈಭವ್ ಮದುವೆ ಆಗುವ ಹುಡುಗಿ ಭೂಮಿ ಶೆಟ್ಟಿ ತರಹ ಇರ್ಬೇಕು.!
ಚಟುವಟಿಕೆಗಳಲ್ಲಿ ಅನಿಸಿದ್ದನ್ನ ನೇರವಾಗಿ ಮಾತನಾಡುವ ಭೂಮಿ ಶೆಟ್ಟಿ ಸ್ನೇಹ-ಸಂಬಂಧಗಳಲ್ಲಿ ತುಂಬಾ ಭಾವುಕರು. ಸಣ್ಣ ಸಣ್ಣ ವಿಚಾರಕ್ಕೂ ಕಣ್ಣೀರು ಹಾಕಿ ಬೇಸರ ಮಾಡಿಕೊಳ್ಳುವ ಭೂಮಿ ಶೆಟ್ಟಿ 'ಬಿಗ್ ಬಾಸ್' ಮನೆಯಲ್ಲಿ ನೂರು ದಿನ ತುಂಬಿಸುತ್ತಾರಾ.?