Don't Miss!
- Technology ಅಗ್ಗದ ದರದಲ್ಲಿ 5G ಫೋನ್ ಖರೀದಿಸಬೇಕೆ?..ಈ ಆಫರ್ ಮಿಸ್ ಮಾಡ್ಕೋಬೇಡಿ!
- Automobiles Kia: ಬಹುನಿರೀಕ್ಷಿತ ಕಿಯಾ ಕ್ಲಾವಿಸ್ ಮೈಕ್ರೋ ಎಸ್ಯುವಿ ಶೀಘ್ರದಲ್ಲೇ ಬಿಡಗಡೆ
- News ಚಾಮರಾಜನಗರ ಜಿಲ್ಲೆಯ ಹಲವು ಗ್ರಾಮಗಳ ಜನರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ-ಇವರ ಬೇಡಿಕೆ ಏನು ಗೊತ್ತಾ?
- Finance Bullet train: ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್ಗೆ ಶೀಘ್ರ ಚಾಲನೆ, ಗಂಟೆಗೆ 250 ವೇಗ
- Lifestyle ಬೇಸಿಗೆಯಲ್ಲಿ ದಿನಾ ಎಳನೀರು ಕುಡಿದರೆ ಏನಾಗುತ್ತೆ? ಯಾವ ಸಮಯದಲ್ಲಿ ಎಳನೀರು ಕುಡಿಯಬೇಕು?
- Sports India's Squad For T20 World Cup: ಟಿ20 ವಿಶ್ವಕಪ್ಗೆ ಸಂಭಾವ್ಯ 20 ಸದಸ್ಯರ ಭಾರತ ತಂಡ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತೆಂಗಿನಕಾಯಿ ತಿಕ್ಕಾಟ: ಸುದೀಪ್ ಮುಂದೆ ಕ್ಷಮೆ ಕೇಳಿದ ಜೈಜಗದೀಶ್
Recommended Video
'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ನಾಲ್ಕನೇ ವಾರ 'ರಣರಂಗ' ಎಂಬ ಲಕ್ಷುರಿ ಬಜೆಟ್ ಟಾಸ್ಕ್ ಚಾಲ್ತಿಯಲ್ಲಿತ್ತು. 'ರಣರಂಗ' ಚಟುವಟಿಕೆಯಲ್ಲಿ ಮೊಟ್ಟ ಮೊದಲ ರಂಪ ಆರಂಭವಾಗಿದ್ದು ಜೈಜಗದೀಶ್ ರಿಂದ.
ತಮ್ಮ ತಂಡದ ಗೋಪುರವನ್ನು ಎದುರಾಳಿಗಳಿಂದ ಕಾಪಾಡಿಕೊಳ್ಳಲು ಜೈಜಗದೀಶ್ ಕೈಯಲ್ಲಿ ತೆಂಗಿನಕಾಯಿ ಹಿಡಿದುಕೊಂಡಿದ್ದರು. ಎದುರಾಳಿ ತಂಡದ ಸದಸ್ಯರು ಗೋಪುರವನ್ನು ಹೊಡೆದುರುಳಿಸಲು ಬಾಲ್ ಗಳನ್ನ ಎಸೆಯುತ್ತಿದ್ದಾಗ, ಅದನ್ನ ತಡೆಯಲು ಚೈತ್ರ ಕೋಟೂರು ಕಾಲು ಬಳಿ ಜೈಜಗದೀಶ್ ತೆಂಗಿನಕಾಯಿ ಎಸೆದರು. ಇದೇ ವಿಷಯಕ್ಕೆ ಅಂದು ದೊಡ್ಡ ಗಲಾಟೆ ನಡೆದಿತ್ತು.
ಇದೇ ವಿಚಾರದ ಕುರಿತು 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಸುದೀಪ್ ಪಂಚಾಯತಿ ನಡೆಸಿದರು. ''ಜೈಜಗದೀಶ್ ತೆಂಗಿನಕಾಯಿ ಎಸೆದಿದ್ದು ಸರಿ ಅಲ್ಲ'' ಅಂತ ಸುದೀಪ್ ಹೇಳಿದರು.
'ಜೈಜಗದೀಶ್ ಗಿಂತ ಚಿಕ್ಕ ಮಕ್ಕಳೇ ಎಷ್ಟೋ ವಾಸಿ': ಕೆರಳಿದ ಹರೀಶ್ ರಾಜ್.!
ಆಗ ''ತೆಂಗಿನಕಾಯಿ ಯಾಕೆ ಕೊಟ್ಟರು ಅಂತ ಗೊತ್ತಿರಲಿಲ್ಲ. ಬಾಲ್ ಹೊಡೆಯೋಕೆ ಸ್ಟಾರ್ಟ್ ಮಾಡಿದಾಗ, ಹೊಡೆಯಬೇಡಿ ಅಂತ ನಾನು ತೆಂಗಿನಕಾಯಿ ಇಟ್ಟುಕೊಂಡು ಹೆದರಿಸುತ್ತಿದ್ದೆ. ಹೊಡೆಯುವ ಉದ್ದೇಶ ನನಗಿರಲಿಲ್ಲ. ನಮ್ಮ ಗೋಪುರ ಕೆಡವಲು ಮುಂದೆ ಬಂದಾಗ ನಾನು ನೆಲಕ್ಕೆ ತೆಂಗಿನಕಾಯಿ ಎಸೆದೆ. ನನ್ನಿಂದ ತಪ್ಪಾಯ್ತು. ಕ್ಷಮಿಸಿ'' ಎಂದು ಜೈಜಗದೀಶ್ ಕ್ಷಮೆ ಕೇಳಿದರು.