Don't Miss!
- Technology Earbuds: 2000 ರೂ. ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್ಬಡ್ಸ್! ಸಖತ್ ಫೀಚರ್ಸ್...
- Finance mukesh ambaniಗೆ 67 ವರ್ಷ, ಅವರು ಹೊಂದಿರುವ ದುಬಾರಿ ವಸ್ತುಗಳು ಏನೇನು ಗೊತ್ತಾ?
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
380 ರೂಪಾಯಿಯನ್ನ ಇಟ್ಟುಕೊಂಡು ಬೆಂಗಳೂರಿಗೆ ಬಂದ ರವಿ ಬೆಳಗೆರೆ ಇಂದು ಕೋಟ್ಯಧೀಶ್ವರ.!
ಅದೃಷ್ಟ ಅನ್ನೋದು ಯಾವಾಗ ಹೇಗೆ ಬರುತ್ತೆ ಅಂತ ಹೇಳುವುದೇ ಕಷ್ಟ. ಬಳ್ಳಾರಿಯಲ್ಲಿ ಇರುವಾಗ ಕಷ್ಟದ ಜೀವನ ಸಾಗಿಸಿದ ರವಿ ಬೆಳಗೆರೆ ಬೆಂಗಳೂರಿನ ಕಡೆ ಮುಖ ಮಾಡಿದರು.
ಬೆಂಗಳೂರಿಗೆ ಬಂದು ಹಲವು ಪತ್ರಿಕೆಗಳಲ್ಲಿ ಕೆಲಸ ಮಾಡಿದ ರವಿ ಬೆಳಗೆರೆ ಮುಂದೆ ಸ್ವಂತ ಪತ್ರಿಕೆ 'ಹಾಯ್ ಬೆಂಗಳೂರು' ತೆರೆಯುತ್ತಾರೆ. 'ಹಾಯ್ ಬೆಂಗಳೂರು' ಪತ್ರಿಕೆಯಿಂದ ರವಿ ಬೆಳಗೆರೆ ನಸೀಬು ಬದಲಾಗುತ್ತೆ.
Recommended Video
ಕೇವಲ 380 ರೂಪಾಯಿಯನ್ನ ಜೇಬಿನಲ್ಲಿ ಇಟ್ಟುಕೊಂಡು ಬೆಂಗಳೂರಿಗೆ ಬರುವ ರವಿ ಬೆಳಗೆರೆ 'ಹಾಯ್ ಬೆಂಗಳೂರು' ಪತ್ರಿಕೆಯಿಂದ, 'ಕ್ರೈಂ ಡೈರಿ' ಎಂಬ ಕಾರ್ಯಕ್ರಮದಿಂದ ಕೋಟ್ಯಾಂತರ ರೂಪಾಯಿ ಸಂಪಾದಿಸುತ್ತಾರೆ. ಇದನ್ನೆಲ್ಲ ಸ್ವತಃ ರವಿ ಬೆಳಗೆರೆ 'ಬಿಗ್ ಬಾಸ್' ಮನೆಯಲ್ಲಿ ಹೇಳಿಕೊಂಡಿದ್ದಾರೆ. ಆ ಕಥೆ ಇಲ್ಲಿದೆ ನೋಡಿ...
ಪತ್ರಿಕೆಯಿಂದ ಲಾಭ
''ಬೆಂಗಳೂರಿಗೆ ಬಂದಾಗ ನನ್ನ ಬಳಿ ಇದ್ದದ್ದು ಕೇವಲ 380 ರೂಪಾಯಿ ಮತ್ತು ಒಂದು ಮೋಟರ್ ಸೈಕಲ್. ಎಲ್ಲ ಪತಿಕೆಗಳಲ್ಲಿ ಕೆಲಸ ಮಾಡಿ, ಎಲ್ಲರ ಬಳಿ ಜಗಳ ಮಾಡಿ ಕೊನೆಗೆ ನನ್ನದೇ ಪತ್ರಿಕೆ ಶುರು ಮಾಡಿದೆ. ಊಟಕ್ಕೆ ಆದರೆ ಸಾಕು ಅಂತ ಸ್ವಂತ ಪೇಪರ್ ಮಾಡಿದೆ. ಅದರಿಂದ ತುಂಬಾ ಲಾಭ ಬಂತು'' - ರವಿ ಬೆಳಗೆರೆ
'ಬಿಗ್ ಬಾಸ್' ಮನೆಯೊಳಗೂ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಸದ್ದು.!
ಕೋಟಿ ಕೋಟಿ ದುಡ್ಡು
''ಕೋಟ್ಯಾಂತರ ರೂಪಾಯಿ ದುಡ್ಡು ಬಂತು. ಒಂದು 'ಕ್ರೈಂ ಡೈರಿ' ಕಾರ್ಯಕ್ರಮ ಮಾಡಿದ್ಮೇಲೆ, ಕೋಟಿಗಟ್ಟಲೆ ದುಡ್ಡು ಬಂತು. 'ಎಂದೂ ಮರೆಯದ ಹಾಡು' ಮಾಡಿದೆ. ಇಂದಿಗೂ ಜನ ಆ ಕಾರ್ಯಕ್ರಮವನ್ನು ಮರೆತಿಲ್ಲ'' - ರವಿ ಬೆಳಗೆರೆ
ರವಿ ಬೆಳಗೆರೆ ಅಭಿಮಾನಿಗಳಿಗೆ ಬೇಸರದ ಸುದ್ದಿಯೊಂದು ಇಲ್ಲಿದೆ.!
ಪ್ರಾರ್ಥನಾ ಶಾಲೆ
''ಬಂದ ದುಡ್ಡನ್ನೆಲ್ಲ ಸೇರಿಸಿ 'ಪ್ರಾರ್ಥನಾ' ಅಂತ ಸ್ಕೂಲ್ ಮಾಡಿದೆ. ನನ್ನ ತಾಯಿಯ ಹೆಸರು ಪಾರ್ವತಿ. ನನ್ನ ತಾಯಿಯ ಸ್ಮರಣೆಯಲ್ಲಿ 'ಪ್ರಾರ್ಥನಾ' ಅಂತ ಶಾಲೆ ಓಪನ್ ಮಾಡಿದೆ. ನನ್ನ ಸ್ಕೂಲ್ ನ ವೈಶಿಷ್ಟ್ಯ ಏನು ಅಂದರೆ, ಅಪ್ಲಿಕೇಶನ್ ಫಾರ್ಮ್ ನಲ್ಲಿ ಜಾತಿ ಅನ್ನೋದೇ ಇಲ್ಲ'' - ರವಿ ಬೆಳಗೆರೆ
'ಅವರು ನನ್ನನ್ನೂ ಬಿಟ್ಟಿಲ್ಲ': ರವಿ ಬೆಳಗೆರೆ ಬಗ್ಗೆ ದುನಿಯಾ ರಶ್ಮಿ ಹೇಳಿದ್ದೇನು.?
ಇಂದು ಅಮ್ಮ ಇರಬೇಕಿತ್ತು
''ನಾವ್ಯಾರೂ ಕೂಡ ಯಾವ ಮಗುವಿನಿಂದಲೂ ಡೊನೇಶನ್ ತೆಗೆದುಕೊಳ್ಳುವುದಿಲ್ಲ. ಎಂಟು ಸಾವಿರ ಮಕ್ಕಳು ಓದುತ್ತಾರೆ. ನನ್ನ ಬಳಿ ಐದು ಕಾರು ಇದೆ. ಆದರೆ ನನ್ನ ಬಳಿ ಈಗ ತಾಯಿ ಇಲ್ಲ. ಒಂದು ಬಾರಿ ಅವಳು ಬಂದು ಇದನ್ನೆಲ್ಲ ನೋಡಿದರೆ ಸಾಕಿತ್ತು'' ಅಂತ ಕಣ್ಣೀರಿಟ್ಟರು ರವಿ ಬೆಳಗೆರೆ