Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಂದೂಕು ಇಲ್ಲದೆ ರವಿ ಹೊರಗೆ ಬರಲ್ಲ: ಜೀವದ ಭಯದ ಬಗ್ಗೆ ಬಾಯಿ ಬಿಟ್ಟ ಬೆಳಗೆರೆ.!
ಕನ್ನಡ ಪತ್ರಿಕೋದ್ಯಮ ಕಂಡ ಓರ್ವ ಸೆಲೆಬ್ರಿಟಿ ಜರ್ನಲಿಸ್ಟ್ ಅಂದ್ರೆ ಅದು ರವಿ ಬೆಳಗೆರೆ. 'ಹಾಯ್ ಬೆಂಗಳೂರು' ಪತ್ರಿಕೆಗೆ ಪ್ರಧಾನ ಸಂಪಾದಕರಾಗಿರುವ ರವಿ ಬೆಳಗೆರೆಗೆ ದೊಡ್ಡ ಫ್ಯಾನ್ ಫಾಲೋವಿಂಗ್ ಇದೆ.
ತಾರೆಯರು, ರಾಜಕಾರಣಿಗಳು, ರೌಡಿಗಳು... ಹೀಗೆ ಹಲವು ಪ್ರಭಾವಿಗಳ ಕುರಿತು ವರದಿ ಪ್ರಕಟಿಸಿರುವ ರವಿ ಬೆಳಗೆರೆಗೆ ಜೀವ ಭಯ ಇದೆಯಂತೆ. ಬಂದೂಕು ಇಲ್ಲದೆ ರವಿ ಬೆಳಗೆರೆ ಹೊರಗೆಲ್ಲೂ ಹೋಗಲ್ವಂತೆ. ಹಾಗಂತ ಖುದ್ದು ಅವರೇ 'ಬಿಗ್ ಬಾಸ್' ಮನೆಯಲ್ಲಿ ಹೇಳಿಕೊಂಡಿದ್ದಾರೆ.
Recommended Video
ರವಿ ಬೆಳಗೆರೆ ಔಟ್ ಅಂಡ್ ಇನ್: ಸುದ್ದಿ ಆಗಿದ್ದೇ ಒಂದು, ನಡೆದಿರೋದು ಮತ್ತೊಂದು.!
''ನನಗೆ ಒಂದು ಬೇರೆ ಮುಖ ಇದೆ. ರವಿ ಬೆಳಗೆರೆ ಅಂದ್ರೆ ತುಂಬಾ ಅಪಾಯಕಾರಿ, ಒರಟ ಅಂತಾರೆ. ಹೌದು, ನಾನು ಹಾಗೆ ಇರದೇ ಹೋಗಿದ್ದರೆ ನನ್ನನ್ನ ಇಷ್ಟೊತ್ತಿಗೆ ಮುಗಿಸಿ ಬಿಡುತ್ತಿದ್ದರು''
''ಬಂದೂಕು ಇಲ್ಲದೆ ನಾನು ಹೊರಗೆ ಬರುವುದಿಲ್ಲ. ಆದರೆ ಬಂದೂಕು ಬಳಸುವ ಮನಸ್ಸು ನನಗೆ ಇಲ್ಲ. ಯಾರನ್ನೂ ಕೊಲ್ಲಲು, ಶೂಟ್ ಮಾಡಲು ನನಗೆ ಇಷ್ಟ ಇಲ್ಲ. ನನಗೆ ಬಹಳ ಮೃದುವಾದ ಮನಸ್ಸು ಇದೆ'' ಎಂದಿದ್ದಾರೆ ರವಿ ಬೆಳಗೆರೆ.
ರವಿ ಬೆಳಗೆರೆ ಅಭಿಮಾನಿಗಳಿಗೆ ಬೇಸರದ ಸುದ್ದಿಯೊಂದು ಇಲ್ಲಿದೆ.!
ಅಂದ್ಹಾಗೆ, ವರ್ಷದ ಹಿಂದೆ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿಯನ್ನ ಕೊಲ್ಲಲು ಸುಪಾರಿ ಕೊಟ್ಟ ಕೇಸಿನಲ್ಲಿ ರವಿ ಬೆಳಗೆರೆ ಬಂಧನಕ್ಕೊಳಗಾಗಿದ್ದರು. ಬಳಿಕ ಜಾಮೀನಿನ ಮೂಲಕ ಬಿಡುಗಡೆಗೊಂಡಿದ್ದರು.