Don't Miss!
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- News Mandya: ಏಪ್ರಿಲ್ 24 ರಿಂದ 26ರ ವರೆಗೆ ಮಂಡ್ಯದಲ್ಲಿ ಪ್ರತಿಬಂಧಕಾಜ್ಞೆ ಜಾರಿ
- Automobiles ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಂಪ ಆದ್ಮೇಲೆ ಜೈಜಗದೀಶ್ ಬಳಿ ಕ್ಷಮೆ ಕೇಳಿದ ಕಿಶನ್
Recommended Video
''ಎಲ್ಲರ ಬಗ್ಗೆ ಜೈಜಗದೀಶ್ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ಎಲ್ಲರಿಗೂ ಕೆಟ್ಟ ಮಾತಿನಲ್ಲಿ ಬೈಯ್ಯುತ್ತಾರೆ'' ಅಂತ ಡ್ಯಾನ್ಸರ್ ಕಿಶನ್ ಆರೋಪ ಮಾಡಿದ್ದರು. ಇದೇ ವಿಚಾರಕ್ಕೆ 'ಬಿಗ್ ಬಾಸ್' ಮನೆಯೊಳಗೆ ರಂಪ ಕೂಡ ಆಗಿತ್ತು.
ಎಲ್ಲರ ಮುಂದೆ ಕಿಶನ್ ಬೆಟ್ಟು ಮಾಡಿ ತೋರಿಸಿದ್ದರಿಂದ, ನಟ ಜೈಜಗದೀಶ್ ರವರಿಗೆ ಅವಮಾನ ಆಯ್ತು. ಹೀಗಾಗಿ, ಜೈಜಗದೀಶ್ ಬೇಸರ ಮಾಡಿಕೊಂಡಿದ್ದರು.
''ಕಿಶನ್ ಮಾಡಿದ್ದು ಸರಿಯಲ್ಲ. ಜೈಜಗದೀಶ್ ರನ್ನ ಸಪರೇಟ್ ಆಗಿ ಕರೆದು ಮಾತನಾಡಬೇಕಿತ್ತು'' ಎಂಬ ಅಭಿಪ್ರಾಯ 'ಬಿಗ್ ಬಾಸ್' ಮನೆಯಲ್ಲಿ ವ್ಯಕ್ತವಾದ ಮೇಲೆ ಜೈಜಗದೀಶ್ ಬಳಿ ಕಿಶನ್ ಕ್ಷಮೆ ಕೇಳಿದ್ದಾರೆ.
''ದಯವಿಟ್ಟು ಕ್ಷಮಿಸಿ. ನನ್ನ ಉದ್ದೇಶ ಅದಲ್ಲ'' ಅಂತ ಜೈಜಗದೀಶ್ ಬಳಿ ಕಿಶನ್ ಕೈಮುಗಿದು ಕೇಳಿಕೊಂಡರು.
ಜೈಜಗದೀಶ್ ಮೇಲೆ ಇದೇನಿದು ಗಂಭೀರ ಆರೋಪ.?
ಅದಾಗಲೇ ಮುನಿಸಿಕೊಂಡಿದ್ದ ಜೈಜಗದೀಶ್, ''ತಪ್ಪು ಮಾಡಿ ಆಯ್ತಲ್ಲ.. ಅವಮಾನ ಮಾಡಾಯ್ತಲ್ಲ.. ಬಿಟ್ಟುಬಿಡು.. ಏನೇ ಇದ್ದರೂ, ಒಬ್ಬರನ್ನೇ ಕರೆದು ಹೇಳಬೇಕಿತ್ತು. ಹೀರೋ ಆಗಲು ಪ್ರಯತ್ನ ಪಟ್ಟೆ. ನೀನೀಗ ಹೀರೋ. ನಿನಗೆ ಯಾರು ಹೇಳಿಕೊಟ್ಟರೋ, ಏನೋ ಗೊತ್ತಿಲ್ಲ'' ಅಂತ ಕೋಪದಿಂದ ನುಡಿದರು.
ಕಿಶನ್ ಕ್ಷಮೆ ಕೇಳಿದರೂ, ಜೈಜಗದೀಶ್ ಗೆ ಕಿಶನ್ ಮೇಲಿನ ಬೇಸರ ಮಾತ್ರ ಹಾಗೇ ಇದೆ.