twitter
    For Quick Alerts
    ALLOW NOTIFICATIONS  
    For Daily Alerts

    ರಂಪ ಆದ್ಮೇಲೆ ಜೈಜಗದೀಶ್ ಬಳಿ ಕ್ಷಮೆ ಕೇಳಿದ ಕಿಶನ್

    |

    Recommended Video

    Kishan apologizes to Jai Jagadeesh

    ''ಎಲ್ಲರ ಬಗ್ಗೆ ಜೈಜಗದೀಶ್ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ಎಲ್ಲರಿಗೂ ಕೆಟ್ಟ ಮಾತಿನಲ್ಲಿ ಬೈಯ್ಯುತ್ತಾರೆ'' ಅಂತ ಡ್ಯಾನ್ಸರ್ ಕಿಶನ್ ಆರೋಪ ಮಾಡಿದ್ದರು. ಇದೇ ವಿಚಾರಕ್ಕೆ 'ಬಿಗ್ ಬಾಸ್' ಮನೆಯೊಳಗೆ ರಂಪ ಕೂಡ ಆಗಿತ್ತು.

    ಎಲ್ಲರ ಮುಂದೆ ಕಿಶನ್ ಬೆಟ್ಟು ಮಾಡಿ ತೋರಿಸಿದ್ದರಿಂದ, ನಟ ಜೈಜಗದೀಶ್ ರವರಿಗೆ ಅವಮಾನ ಆಯ್ತು. ಹೀಗಾಗಿ, ಜೈಜಗದೀಶ್ ಬೇಸರ ಮಾಡಿಕೊಂಡಿದ್ದರು.

    ''ಕಿಶನ್ ಮಾಡಿದ್ದು ಸರಿಯಲ್ಲ. ಜೈಜಗದೀಶ್ ರನ್ನ ಸಪರೇಟ್ ಆಗಿ ಕರೆದು ಮಾತನಾಡಬೇಕಿತ್ತು'' ಎಂಬ ಅಭಿಪ್ರಾಯ 'ಬಿಗ್ ಬಾಸ್' ಮನೆಯಲ್ಲಿ ವ್ಯಕ್ತವಾದ ಮೇಲೆ ಜೈಜಗದೀಶ್ ಬಳಿ ಕಿಶನ್ ಕ್ಷಮೆ ಕೇಳಿದ್ದಾರೆ.

    bigg-boss-kannada-7-day-9-kishan-apologizes-jai-jagadeesh

    ''ದಯವಿಟ್ಟು ಕ್ಷಮಿಸಿ. ನನ್ನ ಉದ್ದೇಶ ಅದಲ್ಲ'' ಅಂತ ಜೈಜಗದೀಶ್ ಬಳಿ ಕಿಶನ್ ಕೈಮುಗಿದು ಕೇಳಿಕೊಂಡರು.

    ಜೈಜಗದೀಶ್ ಮೇಲೆ ಇದೇನಿದು ಗಂಭೀರ ಆರೋಪ.?ಜೈಜಗದೀಶ್ ಮೇಲೆ ಇದೇನಿದು ಗಂಭೀರ ಆರೋಪ.?

    ಅದಾಗಲೇ ಮುನಿಸಿಕೊಂಡಿದ್ದ ಜೈಜಗದೀಶ್, ''ತಪ್ಪು ಮಾಡಿ ಆಯ್ತಲ್ಲ.. ಅವಮಾನ ಮಾಡಾಯ್ತಲ್ಲ.. ಬಿಟ್ಟುಬಿಡು.. ಏನೇ ಇದ್ದರೂ, ಒಬ್ಬರನ್ನೇ ಕರೆದು ಹೇಳಬೇಕಿತ್ತು. ಹೀರೋ ಆಗಲು ಪ್ರಯತ್ನ ಪಟ್ಟೆ. ನೀನೀಗ ಹೀರೋ. ನಿನಗೆ ಯಾರು ಹೇಳಿಕೊಟ್ಟರೋ, ಏನೋ ಗೊತ್ತಿಲ್ಲ'' ಅಂತ ಕೋಪದಿಂದ ನುಡಿದರು.

    ಕಿಶನ್ ಕ್ಷಮೆ ಕೇಳಿದರೂ, ಜೈಜಗದೀಶ್ ಗೆ ಕಿಶನ್ ಮೇಲಿನ ಬೇಸರ ಮಾತ್ರ ಹಾಗೇ ಇದೆ.

    English summary
    Bigg Boss Kannada 7: Day 9: Kishan apologizes Jai Jagadeesh.
    Wednesday, October 23, 2019, 6:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X