Don't Miss!
- News Government Employees; ಸರ್ಕಾರಿ ನೌಕರರ ಜೀವ ವಿಮೆ ಪಾಲಿಸಿ ಅವಧಿ ಏರಿಕೆ
- Lifestyle ಬಾಯಿ ರುಚಿಗೆ ಗರಿ ಗರಿ ನಿಪ್ಪಟ್ಟು..! ಮನೆಯಲ್ಲೇ ಮಾಡಿ ಟೆಸ್ಟಿ ತಿಂಡಿ
- Automobiles Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಒಂದು ವಾರದ 'ಬಿಗ್ ಬಾಸ್': ರವಿ ಬೆಳಗೆರೆ ಕಿಂಗ್, ಮಿಕ್ಕವರೆಲ್ಲ ಠುಸ್.!
Recommended Video
ಬಹಳ ನಿರೀಕ್ಷೆಯೊಂದಿಗೆ 'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮ ಶುರುವಾಯ್ತು. ಕಾಮನ್ ಮ್ಯಾನ್ ಗಳನ್ನೆಲ್ಲ ಪರಿಗಣಿಸದೇ, ಸೆಲೆಬ್ರಿಟಿಗಳಿಗೆ ಮಾತ್ರ ಆಹ್ವಾನ ನೀಡಿ, ಕಲರ್ಸ್ ಸೂಪರ್ ನಿಂದ ಕಲರ್ಸ್ ಕನ್ನಡಕ್ಕೆ ಪ್ರೋಗ್ರಾಂ ಶಿಫ್ಟ್ ಮಾಡಿದ್ರಿಂದ ಈ ಬಾರಿಯ 'ಬಿಗ್ ಬಾಸ್' ಹೆವಿ ಟಿ.ಆರ್.ಪಿ ಗಳಿಸಬಹುದು ಎಂಬ ಲೆಕ್ಕಾಚಾರ ಎಲ್ಲರ ತಲೆಯಲ್ಲೂ ಇತ್ತು.
ಮೊದಲ ನೋಟಕ್ಕೆ 'ಬಿಗ್ ಬಾಸ್ ಕನ್ನಡ-7' ಸ್ಪರ್ಧಿಗಳು ಓಕೆ. ಎಲ್ಲರೂ ಗೊತ್ತಿರುವ ಮುಖಗಳೇ. ಮುಕ್ಕಾಲು ಭಾಗ ಕಿರುತೆರೆ ಲೋಕದವರೇ ತುಂಬಿಕೊಂಡಿದ್ದರೂ, ವೀಕ್ಷಕರ ಪಾಲಿಗೆ ಟಿ.ಆರ್.ಪಿ ಕಾ ಮಾಮ್ಲಾ ಅಂತನಿಸಿದ್ದು ರವಿ ಬೆಳಗೆರೆ ಮಾತ್ರ.!
ರವಿ ಬೆಳಗೆರೆ ಬಗ್ಗೆ ಹೈ ಎಕ್ಸ್ ಪೆಕ್ಟೇಶನ್ ಇಟ್ಟುಕೊಂಡಿದ್ದ ಜನರಿಗೆ ಮೊದಲ ದಿನವೇ ಶಾಕ್ ಸಿಕ್ಬಿಡ್ತು. ''ರವಿ ಬೆಳಗೆರೆ ಸ್ಪರ್ಧಿ ಅಲ್ಲ, ಬರೀ ಅತಿಥಿ ಅಷ್ಟೇ. ಶನಿವಾರದವರೆಗೆ ಮಾತ್ರ ಅವರ ವಾಸ'' ಎಂದು 'ಬಿಗ್ ಬಾಸ್' ಹೇಳಿದ್ಮೇಲೆ ನೋಡುಗರು ಸಹಜವಾಗಿ ಬೇಸರ ಮಾಡಿಕೊಂಡಿದ್ದಾರೆ. ಯಾಕಂದ್ರೆ, ಒಂದುವರೆ ಗಂಟೆಯ ಶೋ ಕಂಟೆಂಟ್ ನಲ್ಲಿ ರವಿ ಬೆಳಗೆರೆ ಬಿಟ್ಟರೆ ಇನ್ಯಾರೂ ಕಿಂಗ್ ಆಗುತ್ತಿಲ್ಲ. ಕೆಲ ಸ್ಪರ್ಧಿಗಳಂತೂ ಫ್ರೇಮ್ ಗೆ ಸಿಗುತ್ತಿಲ್ಲ. ಮುಂದೆ ಓದಿರಿ...
ರವಿ ಬೆಳಗೆರೆ ಈಸ್ ಬಾಸ್.!
'ಬಿಗ್ ಬಾಸ್' ಕಾರ್ಯಕ್ರಮದ ಪ್ರತಿ ಸಂಚಿಕೆಯ ಕಂಟೆಂಟ್ ವಿಷಯಕ್ಕೆ ಬಂದರೆ ಹಿರಿಯ ಪತ್ರಕರ್ತ, ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕ ರವಿ ಬೆಳಗೆರೆ ಈಸ್ ಬಾಸ್. ಚಿತ್ರರಂಗದವರ ಬಗ್ಗೆ, ಪ್ರಖ್ಯಾತರ ಬಗ್ಗೆ ಮೊದಲ ದಿನದಿಂದಲೂ ಒಂದಲ್ಲಾ ಒಂದು ಸಂಗತಿಗಳನ್ನು ಬಹಿರಂಗ ಪಡಿಸಿ ಫುಟೇಜ್ ಪಡೆಯುವಲ್ಲಿ ರವಿ ಬೆಳಗೆರೆ ಯಶಸ್ವಿ ಆಗಿದ್ದಾರೆ.
ಜಾಂಡೀಸ್ ತಪಾಸಣೆ: 'ಬಿಗ್ ಬಾಸ್' ಮನೆಯಿಂದ ಹೊರ ಬಂದ ಕಿಶನ್.!
ಕಮಾಲ್ ಮಾಡದ ಕುರಿ
ಕಾಮಿಡಿ ನಟ ಕುರಿ ಪ್ರತಾಪ್ ಮೇಲೆ ಹೈ ಹೋಪ್ಸ್ ಇದ್ದದ್ದು ಸತ್ಯ. 'ಬಿಗ್ ಬಾಸ್' ಮನೆಯಲ್ಲಿ ಕುರಿ ಪ್ರತಾಪ್ ನಗುವಿನ ಇಂಜೆಕ್ಷನ್ ಕೊಡ್ತಾರೆ ಅಂತ ಭಾವಿಸಿದ್ದರೆ, ಅದ್ಯಾಕೋ ಅವರು ಮಂಕಾಗಿದ್ದಾರೆ. ಆಗೊಮ್ಮೆ ಈಗೊಮ್ಮೆ ಕಾಮಿಡಿ ಪಂಚ್ ಕೊಟ್ಟರೂ ಕುರಿ ಪ್ರತಾಪ್ ನಿರೀಕ್ಷೆ ಮಟ್ಟ ತಲುಪಿಲ್ಲ.
ರವಿ ಬೆಳಗೆರೆ ಕಥೆ ಕೇಳಿ ಉಘೇ ಉಘೇ ಎನ್ನುತ್ತಿರುವ ಟ್ವೀಟಿಗರು
ಹೆಂಗಳೆಯರ ಮನ ಗೆಲ್ಲುತ್ತಿರುವ ದುನಿಯಾ ರಶ್ಮಿ
ಸೈಲೆಂಟ್ ಆಗಿದ್ದರೂ ದುನಿಯಾ ರಶ್ಮಿ ಹೆಂಗಳೆಯರ ಮನ ಗೆಲ್ಲುತ್ತಿದ್ದಾರೆ. ತಮ್ಮ ಕುಟುಂಬ, ಕಷ್ಟದ ದಿನಗಳ ಬಗ್ಗೆ ಮನಬಿಚ್ಚಿ ಮಾತನಾಡುತ್ತಿರುವ ರಶ್ಮಿಗೆ ಫ್ಯಾನ್ ಫಾಲೋವಿಂಗ್ ಬಿಲ್ಡ್ ಆಗುತ್ತಿದೆ.
380 ರೂಪಾಯಿಯನ್ನ ಇಟ್ಟುಕೊಂಡು ಬೆಂಗಳೂರಿಗೆ ಬಂದ ರವಿ ಬೆಳಗೆರೆ ಇಂದು ಕೋಟ್ಯಧೀಶ್ವರ.!
ಆಗೊಮ್ಮೆ ಈಗೊಮ್ಮೆ ಕಾಣುವ ಜೈಜಗದೀಶ್
ಅಡುಗೆ ಮನೆ ಡಿಪಾರ್ಟ್ಮೆಂಟ್ ಸೇರಿರುವ ಜೈಜಗದೀಶ್ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ತಿದ್ದಾರೆ. ಚಿತ್ರರಂಗದಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತ ಜೈಜಗದೀಶ್ ಪ್ರಮುಖ ಸ್ಪರ್ಧಿಯಾಗಿ ಗುರುತಿಸಿಕೊಳ್ತಿದ್ದಾರೆ.
'ನಾನು ತಾಯಿಯ ಮಗ': ಅಮ್ಮನ ಬಗ್ಗೆ ಮಾತಾಡಿ ಭಾವುಕರಾದ ರವಿ ಬೆಳಗೆರೆ
ಇದ್ದಿದ್ದರಲ್ಲಿ ಇವರು ಓಕೆ
ಶೈನ್ ಶೆಟ್ಟಿ, ಪ್ರಿಯಾಂಕಾ, ವಾಸುಕಿ ವೈಭವ್, ಹರೀಶ್ ರಾಜ್, ಚೈತ್ರ ಕೊಟ್ಟೂರು, ದೀಪಿಕಾ ದಾಸ್... ಹಾಡು, ಡ್ಯಾನ್ಸ್, ಮಿಮಿಕ್ರಿ, ಕಾಮಿಡಿ ಮಾಡಿಕೊಂಡು ವೀಕ್ಷಕರಿಗೆ ಮನರಂಜನೆ ಕೊಡ್ತಿದ್ದಾರೆ.
ಇವರೆಲ್ಲ ಏನ್ ಮಾಡ್ತಿದ್ದಾರೆ.?
ಭೂಮಿ ಶೆಟ್ಟಿ, ಚಂದನ್ ಆಚಾರ್, ಚಂದನ ಅನಂತ ಕೃಷ್ಣ, ಗುರುಲಿಂಗ ಸ್ವಾಮಿ, ರಾಜು ತಾಳಿಕೋಟೆ, ಚೈತ್ರ ವಾಸುದೇವನ್, ಸುಜಾತ ಏನ್ ಮಾಡ್ತಿದ್ದಾರೆ ಅಂತಲೇ ವೀಕ್ಷಕರಿಗೆ ಗೊತ್ತಾಗುತ್ತಿಲ್ಲ. ಇವರಲ್ಲಿ ಕೆಲವರಂತೂ ಯಾವ ಕ್ಯಾಮರಾ ಫ್ರೇಮ್ ಗೂ ಸಿಗುತ್ತಿಲ್ಲ.
ಬಹುತೇಕರು ಠುಸ್
ಸದ್ಯ 'ಬಿಗ್ ಬಾಸ್' ಮನೆ ಸೇರಿರುವ ಸ್ಪರ್ಧಿಗಳ ಪೈಕಿ ಬಹುತೇಕರು ಕಂಟೆಂಟ್ ನಲ್ಲಿ ಠುಸ್ ಆಗಿದ್ದಾರೆ. ಸಮಾನ ಮನಸ್ಕರೇ ಹೆಚ್ಚಾಗಿರುವುದರಿಂದ ಇನ್ನೂ ಗದ್ದಲ-ಗಲಾಟೆ ಆರಂಭ ಆಗಿಲ್ಲ.
ಕೆಲಸ ಮಾಡದ ಟಾಸ್ಕ್ ಗಳು.!
'ಅಪ್ಪ-ಅಮ್ಮ'ನ ಬಗ್ಗೆ ಮಾತನಾಡುವ ಒಂದು ಟಾಸ್ಕ್ ಬಿಟ್ಟರೆ ಈ ಒಂದು ವಾರದಲ್ಲಿ 'ಬಿಗ್ ಬಾಸ್' ಕೊಟ್ಟಿದ್ದ ಯಾವ ಟಾಸ್ಕ್ ಗಳು ಅಷ್ಟಾಗಿ ವರ್ಕ್ ಆಗಿಲ್ಲ. ಸದ್ಯಕ್ಕೆ ಚೈತ್ರ ಕೊಟ್ಟೂರ್-ಶೈನ್ ಶೆಟ್ಟಿ-ಪ್ರಿಯಾಂಕಾ ಮಧ್ಯೆ ಲವ್ ಟ್ರೈಯಾಂಗಲ್ ಆಗಿದೆ. ಅಷ್ಟು ಬಿಟ್ಟರೆ 'ಬಿಗ್ ಬಾಸ್' ಮನೆಯಲ್ಲಿ ಇನ್ನೂ ಕಿಡಿ ಹೊತ್ತಿಕೊಂಡಿಲ್ಲ.