Don't Miss!
- News Bengaluru-Tumkur Metro: 52.41 ಕಿ.ಮೀ. ಮಾರ್ಗ, 19 ನಿಲ್ದಾಣಗಳು; ತುಮಕೂರು-ಬೆಂಗಳೂರು ಮೆಟ್ರೋ ಅಪ್ಡೇಟ್
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯಾರು ಏನೇ ಅಂದ್ರೂ ಜೈಜಗದೀಶ್ ಮಾಡಿದ್ದು ತಪ್ಪು ಅಂತಿದ್ದಾರೆ ವೀಕ್ಷಕರು.!
Recommended Video
'ಬಿಗ್ ಬಾಸ್' ಮನೆಯಲ್ಲಿ ಸದ್ಯ ಹಾಟ್ ಟಾಪಿಕ್ ಆಗಿರೋದು ಕನ್ನಡ ಚಿತ್ರರಂಗದ ಹಿರಿಯ ನಟ ಜೈಜಗದೀಶ್ ಮತ್ತು ಕಿಶನ್. 'ಬಿಗ್ ಬಾಸ್' ಮನೆಯ ಕಿಚನ್ ಟೀಮ್ ಸೇರಿರುವ ಜೈಜಗದೀಶ್ ಎಲ್ಲರಿಗೂ ಬಾಯಿಗೆ ಬಂದ ಹಾಗೆ ಬೈಯ್ಯುತ್ತಾರೆ, ಕೆಟ್ಟ ಪದ ಬಳಕೆ ಮಾಡುತ್ತಾರೆ ಅಂತ ಕಿಶನ್ ಬೆಟ್ಟು ಮಾಡಿ ತೋರಿಸಿದ್ದರು.
ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ವಾಕ್ಸಮರ ನಡೆದಿತ್ತು. ಜೈಜಗದೀಶ್ ಗೆ ಕಿಶನ್ ಕ್ಷಮೆಯನ್ನೂ ಕೇಳಿದ್ದರು. ಅಲ್ಲಿಗೆ ಈ ಮ್ಯಾಟರ್ ಗೆ 'ಬಿಗ್ ಬಾಸ್' ಮನೆಯೊಳಗೆ ಫುಲ್ ಸ್ಟಾಪ್ ಬಿದ್ದಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಜೈಜಗದೀಶ್ ಮತ್ತು ಕಿಶನ್ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ.
ಜೈಜಗದೀಶ್ ಪರವಾಗಿ 'ಬಿಗ್ ಬಾಸ್' ಮನೆಯಲ್ಲಿ ಸುಜಾತ, ಶೈನ್ ಶೆಟ್ಟಿ, ಹರೀಶ್ ರಾಜ್ ಬ್ಯಾಟಿಂಗ್ ಮಾಡಿರಬಹುದು. ಆದರೆ ವೀಕ್ಷಕರ ಕಣ್ಣಲ್ಲಿ ಮಾತ್ರ ಕಿಶನ್ ಹೀರೋ ಆಗಿದ್ದಾರೆ. ಸಿಡುಕು ಸ್ವಭಾವದ ಜೈಜಗದೀಶ್ ಮಾತುಗಳು ವೀಕ್ಷಕರಿಗೆ ರುಚಿಸಿಲ್ಲ. ಅದಕ್ಕೆ ಸಾಕ್ಷಿ ಕಲರ್ಸ್ ಕನ್ನಡ ವಾಹಿನಿ ಅಫೀಶಿಯಲ್ ಫೇಸ್ ಬುಕ್ ಪುಟದಲ್ಲಿಯೇ ವ್ಯಕ್ತವಾಗುತ್ತಿರುವ ಕಾಮೆಂಟ್ಸ್. ಮುಂದೆ ಓದಿರಿ...
ರವಿ ಬೆಳಗೆರೆ ಎಷ್ಟೋ ವಾಸಿ.!
''ಜೈಜಗದೀಶ್ ಅವರಿಗಿಂತ ರವಿ ಬೆಳಗೆರೆ ಎಷ್ಟೋ ವಾಸಿ. ಜೈಜಗದೀಶ್ ಸೀನಿಯರ್ ಆರ್ಟಿಸ್ಟ್ ಇರಬಹುದು. ಆದರೆ ತುಂಬಾ ಸಿಡುಕ. ಎಲ್ಲರೊಂದಿಗೆ ತಮಾಷೆಯಾಗಿ ಇರಲ್ಲ'' ಎಂದು ವೀಕ್ಷಕರೊಬ್ಬರು ಫೇಸ್ ಬುಕ್ ನಲ್ಲಿ ಕಾಮೆಂಟ್ ಮಾಡಿದ್ದಾರೆ.
ಜೈಜಗದೀಶ್ ಮೇಲೆ ಇದೇನಿದು ಗಂಭೀರ ಆರೋಪ.?
ತಾಳ್ಮೆ ಎನ್ನುವುದೇ ಇಲ್ಲ.!
''ಜೈಜಗದೀಶ್ ಗೆ ಮುಂಗೋಪ ಜಾಸ್ತಿ. ತಾಳ್ಮೆ ಎನ್ನುವುದೇ ಇಲ್ಲ. ವಯಸ್ಸಿನಲ್ಲಿ ದೊಡ್ಡವರು ಇರಬಹುದು. ಹಾಗಂತ ಏನು ಬೇಕಾದರೂ ಹೇಳುವುದು ಸರಿಯಲ್ಲ'' ಎನ್ನುತ್ತಿದ್ದಾರೆ ವೀಕ್ಷಕರು.
ರಂಪ ಆದ್ಮೇಲೆ ಜೈಜಗದೀಶ್ ಬಳಿ ಕ್ಷಮೆ ಕೇಳಿದ ಕಿಶನ್
ವಿಲನ್ ತರಹ ಮಾತಾಡುತ್ತಾರೆ.!
''ಜೈಜಗದೀಶ್ ವಿಲನ್ ತರಹ ಮಾತಾಡುತ್ತಾರೆ. ಇನ್ನೊಬ್ಬರಿಗೆ ಹೇಳಿ ಕೊಡುವ ವಯಸ್ಸಿನಲ್ಲಿ ತಾವೇ ಸರಿಯಾಗಿ ಮಾತಾಡಲ್ಲ. ದೊಡ್ಡವರು ಚಿಕ್ಕವರು ಬರಲ್ಲ. ಕಿಶನ್ ಕ್ಷಮೆ ಕೇಳಿದ್ದಾರೆ. ರಿಯಲಿ ಗ್ರೇಟ್'' ಅಂತ ಕಿಶನ್ ಗೆ ಜೈಕಾರ ಹಾಕುತ್ತಿದ್ದಾರೆ ವೀಕ್ಷಕರು.
ಕ್ಷಮೆ ಕೇಳುವ ಅಗತ್ಯ ಇರಲಿಲ್ಲ.!
''ಕಿಶನ್ ಕ್ಷಮೆ ಕೇಳುವ ಅಗತ್ಯ ಇರಲಿಲ್ಲ. ಜೈಜಗದೀಶ್ ಅವರಿಗೆ ಕೆಟ್ಟ ಪದ ಬಳಕೆ ಮಾಡಬೇಡಿ ಅಂತ ಹೇಳಿದರು ಅಷ್ಟೇ. ಇದರಲ್ಲಿ ಯಾವುದೇ ತಪ್ಪಿಲ್ಲ'' ಅಂತ ವೀಕ್ಷಕರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ. ಅಂದ್ಹಾಗೆ ಇದೇ ಟಾಪಿಕ್ ಬಗ್ಗೆ ನೀವು ಏನಂತೀರಿ... ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.