Don't Miss!
- News Mysuru Zoo: ಬೇಸಿಗೆಯಲ್ಲೂ ಮೈಸೂರು ಮೃಗಾಲಯ ಕೂಲ್.. ಕೂಲ್! ಹೇಗೆ ಗೊತ್ತಾ?
- Technology vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಿಗ್ ಬಾಸ್ ಕನ್ನಡ-7': ಮೊದಲ ವಾರವೇ ಔಟ್ ಆದ ಗುರುಲಿಂಗ ಸ್ವಾಮೀಜಿ
'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದ ಮೊದಲ ವಾರ ಗುರುಲಿಂಗ ಸ್ವಾಮೀಜಿ ಔಟ್ ಆಗಿದ್ದಾರೆ. 'ಬಿಗ್ ಬಾಸ್' ಮನೆಯಲ್ಲಿ ಬಹುತೇಕ ಸೈಲೆಂಟ್ ಆಗಿದ್ದ ಗುರುಲಿಂಗ ಸ್ವಾಮೀಜಿ ಮಡಿ-ಮೈಲಿಗೆ ಬಗ್ಗೆ ಹೆಚ್ಚು ಗಮನ ಕೊಟ್ಟರು ಅನ್ನೋದು ಬಿಟ್ಟರೆ ಯಾವುದೇ ವಿವಾದಕ್ಕೆ, ಜಗಳಕ್ಕೆ ಸಾಕ್ಷಿ ಆಗಲಿಲ್ಲ.
ಟಾಸ್ಕ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ, ಗುರುಲಿಂಗ ಸ್ವಾಮೀಜಿಗೆ ಅದ್ಯಾಕೋ ವೀಕ್ಷಕರಿಂದ ಬೆಂಬಲ ವ್ಯಕ್ತವಾಗಿಲ್ಲ. 'ಬಿಗ್ ಬಾಸ್' ಕಡೆಯಿಂದ ಬರುವ ಹಣವನ್ನು ನೆರೆ ಪರಿಹಾರಕ್ಕೆ ನೀಡುವುದಾಗಿ ಗುರುಲಿಂಗ ಸ್ವಾಮೀಜಿ ಘೋಷಿಸಿದ್ದರು. ಆದರೆ ಒಂದೇ ವಾರಕ್ಕೆ ಗುರುಲಿಂಗ ಸ್ವಾಮೀಜಿ ಹೊರಬಂದಿರುವುದು ಬೇಸರದ ಸಂಗತಿ.
ಬಿಗ್ ಬಾಸ್: ಮೊದಲ ದಿನವೇ ರವಿ ಬೆಳಗೆರೆಗೆ ಶಾಕ್.!
ಗುರುಲಿಂಗ ಸ್ವಾಮೀಜಿ ಪ್ರಸ್ತುತ ಅಗಡಿ ಅಕ್ಕಿ ಮಠದ ಪೀಠಾಧಿಪತಿ. ಇಲ್ಲಿಯವರೆಗೂ 'ಬಿಗ್ ಬಾಸ್' ಶೋ ನೋಡದ ಸ್ವಾಮೀಜಿ, ಒಂದೊಳ್ಳೆ ಉದ್ದೇಶ ಇಟ್ಟುಕೊಂಡು 'ಬಿಗ್ ಬಾಸ್' ಮನೆಯೊಳಗೆ ಬಂದಿದ್ದರು. ಆದರೆ ಮೊದಲ ವಾರಕ್ಕೆ ಅವರ ಜರ್ನಿ ಮುಕ್ತಾಯಗೊಂಡಿದೆ.
ಅಂದ್ಹಾಗೆ, ಮೊದಲ ವಾರ 'ಬಿಗ್ ಬಾಸ್' ಮನೆಯಿಂದ ಹೊರಗೆ ಹೋಗಲು ಆರು ಮಂದಿ ನಾಮಿನೇಟ್ ಆಗಿದ್ದರು. ಗುರುಲಿಂಗ ಸ್ವಾಮೀಜಿ ಜೊತೆಗೆ ಚೈತ್ರ ವಾಸುದೇವನ್, ಚೈತ್ರ ಕೊಟ್ಟೂರ್, ರಾಜು ತಾಳಿಕೋಟೆ, ಕುರಿ ಪ್ರತಾಪ್ ಮತ್ತು ರವಿ ಬೆಳಗೆರೆ ಡೇಂಜರ್ ಝೋನ್ ನಲ್ಲಿದ್ದರು.
ಬಿಗ್ ಬಾಸ್ ಮನೆಗೆ ಬಂದಿರುವ ಗುರುಲಿಂಗ ಸ್ಮಾಮೀಜಿ ಯಾರು?
ಅನಾರೋಗ್ಯದ ಕಾರಣ ವೈದ್ಯರ ಸಲಹೆ ಮೇರೆಗೆ ರವಿ ಬೆಳಗೆರೆ ಯವರನ್ನ ಆಟದಲ್ಲಿ ಮುಂದುವರೆಸದಿರಲು 'ಬಿಗ್ ಬಾಸ್' ನಿರ್ಧರಿಸಿದರು. ಹೀಗಾಗಿ ಸ್ಪರ್ಧಿಯಾಗಿದ್ದ ರವಿ ಬೆಳಗೆರೆ ಸ್ಥಾನ ಅತಿಥಿಯಾಗಿ ಬದಲಾಯಿತು. ಉಳಿದ ಐದು ಮಂದಿಯ ಪೈಕಿ ಗುರುಲಿಂಗ ಸ್ವಾಮೀಜಿ ಅವರಿಗೆ ಕಮ್ಮಿ ವೋಟ್ಸ್ ಬಂದ ಪರಿಣಾಮ ಎವಿಕ್ಟ್ ಮಾಡಲಾಗಿದೆ.
ಅತ್ತ ಗೆಸ್ಟ್ ಆಗಿದ್ದ ರವಿ ಬೆಳಗೆರೆ ಕೂಡ 'ಬಿಗ್ ಬಾಸ್' ಮನೆಯಿಂದ ಹೊರಬಂದಿದ್ದಾರೆ.