Don't Miss!
- News ಸಿಎಂ ಸಿದ್ದರಾಮಯ್ಯಗೆ ಡಾ.ಕೆ.ಸುಧಾಕರ್ ಸವಾಲು!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Sports PBKS vs MI IPL 2024: ಪಂಜಾಬ್ ರಾಜರಿಗೆ ಮುಂಬೈ ಇಂಡಿಯನ್ಸ್ ಸವಾಲು; ಟಾಸ್ ವರದಿ, ಆಡುವ 11ರ ಬಳಗ
- Lifestyle ಊಟದ ರುಚಿ ಹೆಚ್ಚಿಸುತ್ತೆ ಚೌಳಿಕಾಯಿ ಪಲ್ಯ..! ಹೀಗೆ ಮಾಡಿ
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹುಟ್ಟುಹಬ್ಬದಂದು ಕಣ್ಣೀರು ಹಾಕುತ್ತಾ 'ಬಿಗ್ ಬಾಸ್' ಮನೆಯಿಂದ ಆಚೆ ಬಂದ ಚೈತ್ರ ಕೋಟೂರು
Recommended Video
'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ನಾಲ್ಕನೇ ವಾರದ ಅಂತ್ಯಕ್ಕೆ ನಟಿ, ಬರಹಗಾರ್ತಿ ಚೈತ್ರ ಕೋಟೂರುಗೆ ಗೇಟ್ ಪಾಸ್ ಸಿಕ್ಕಿದೆ. ಹಾಗ್ನೋಡಿದ್ರೆ, ಚೈತ್ರ ಕೋಟೂರು ಜನ್ಮದಿನದ ಸಂಭ್ರಮದಲ್ಲಿದ್ದರು. ಬರ್ತಡೇ ಮೂಡ್ ನಲ್ಲಿ ಖುಷಿ ಖುಷಿಯಾಗಿ ಇರುವಾಗಲೇ ಚೈತ್ರ ಕೋಟೂರುಗೆ ಎಲಿಮಿನೇಷನ್ ಶಾಕ್ ಲಭಿಸಿದೆ.
ಮೊದಲ ಎರಡು ವಾರಗಳ ಕಾಲ 'ಬಿಗ್ ಬಾಸ್' ಮನೆಯೊಳಗೆ ಚೈತ್ರ ಕೋಟೂರು ಹೆಚ್ಚು ಸೌಂಡ್ ಮಾಡಿದ್ದರು. ನಾಮಿನೇಟ್ ಆದಾಗ ಮಾತ್ರ 'ಡ್ರಾಮಾ' ಮಾಡುವ ಚೈತ್ರ ಕೋಟೂರು ಅವರ ಗೇಮ್ ಪ್ಲಾನ್ ನ ಶೈನ್ ಶೆಟ್ಟಿ ಡೀಕೋಡ್ ಮಾಡಿದ್ದರು.
'ಅಸ್ಪೃಶ್ಯತೆ' ವಿವಾದ: ಕೈ ಮುಗಿದು ಕ್ಷಮೆ ಕೇಳಿದ ಚೈತ್ರ ಕೋಟೂರು
ಅಂದ್ಹಾಗೆ, ಚೈತ್ರ ಕೋಟೂರು ಜೊತೆಗೆ ಈ ವಾರ ಡೇಂಜರ್ ಝೋನ್ ನಲ್ಲಿದ್ದವರು ರಾಜು ತಾಳಿಕೋಟೆ, ಶೈನ್ ಶೆಟ್ಟಿ, ಪ್ರಿಯಾಂಕಾ, ದೀಪಿಕಾ ದಾಸ್, ಚಂದನ್ ಆಚಾರ್ ಮತ್ತು ಭೂಮಿ ಶೆಟ್ಟಿ. ಇತರರಿಗಿಂತ ಕಮ್ಮಿ ವೋಟ್ಸ್ ಪಡೆದುಕೊಂಡ ಚೈತ್ರ ಕೋಟೂರು ಔಟ್ ಆಗಿದ್ದಾರೆ.
'ಅಸ್ಪೃಶ್ಯತೆ' ಬಗ್ಗೆ ಅವಹೇಳನ: ಚೈತ್ರ ಕೋಟೂರು ವಿರುದ್ಧ ಹೋರಾಟಕ್ಕಿಳಿದ ಅಂಬೇಡ್ಕರ್ ಸೇನೆ.!
''ಈ ಮನೆಯಲ್ಲಿ ನನ್ನನ್ನ ಯಾರೂ ಅರ್ಥ ಮಾಡಿಕೊಳ್ಳಲಿಲ್ಲ'' ಎಂದು ಹೇಳುತ್ತ ಕಣ್ಣೀರು ಸುರಿಸುತ್ತಾ ಚೈತ್ರ ಕೋಟೂರು ಹೊರಗೆ ಬಂದಿದ್ದಾರೆ. ತೆರೆ ಮೇಲೆ ಮಿಂಚುವ ಆಫರ್ ಗಳು ಬಂದಿದ್ದರೂ, ಅದನ್ನ ತಿರಸ್ಕರಿಸಿ ಬರವಣಿಗೆ ಬಗ್ಗೆ ಹೆಚ್ಚು ಗಮನ ಹರಿಸಿದ್ದ ಚೈತ್ರ ಕೋಟೂರು ಅದೃಷ್ಟ ಪರೀಕ್ಷೆಗಾಗಿ 'ಬಿಗ್ ಬಾಸ್' ಮನೆಯೊಳಗೆ ಬಂದಿದ್ದರು. ಆದರೆ ನಾಲ್ಕೇ ವಾರಕ್ಕೆ ಚೈತ್ರ ಕೋಟೂರು ಆಟ ಅಂತ್ಯಗೊಂಡಿದೆ.