Don't Miss!
- News ಬೆಂಗಳೂರು ನಮ್ಮ ಮೆಟ್ರೋ ಬೆಳಗ್ಗೆ 03:35ಕ್ಕೆ ಆರಂಭ: ಏಕೆ? ಕಾರಣ ಇಲ್ಲಿದೆ
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಗ್ಬಾಸ್ ಮನೆಯ ಅಗ್ನಿಕುಂಡ ಪ್ರವೇಶಿಸಿದ ಅಗ್ನಿಸಾಕ್ಷಿಯ ವೈಷ್ಣವಿ
ಜನಪ್ರಿಯ ಧಾರಾವಾಹಿ 'ಅಗ್ನಿಸಾಕ್ಷಿ'ಯಲ್ಲಿ ಸನ್ನಿಧಿ ಪಾತ್ರ ನಿರ್ವಹಿಸುವ ವೈಷ್ಣವಿ ಅವರು ಬಿಗ್ಬಾಸ್ ಮನೆಯನ್ನು ಪ್ರವೇಶಿಸಿದ್ದಾರೆ.
ಸೂಕ್ಷ್ಮ ಸ್ವಭಾವದ, ಮಿತ ಭಾಷಿ ಆಗಿರುವ ವೈಷ್ಣವಿ ಅವರು 'ಅಗ್ನಿಕುಂಡ' ಎನಿಸಿಕೊಂಡಿರುವ ಬಿಗ್ಬಾಸ್ ಮನೆ ಪ್ರವೇಶ ಮಾಡಿರುವುದು ಹಲವರಿಗೆ ಶಾಕ್ ನೀಡಿದೆ.
ಅತ್ಯುತ್ತಮ ಭರತನಾಟ್ಯ ನೃತ್ಯಗಾರ್ತಿ ಆಗಿರುವ ವೈಷ್ಣವಿ ಅವರು 'ಅಗ್ನಿಸಾಕ್ಷಿ' ಧಾರಾವಾಹಿ ಮೂಲಕ ಕೋಟ್ಯಂತರ ಜನರ ಮನ ಗೆದ್ದಿದ್ದಾರೆ. ಈ ನಟಿಯು ಬಿಗ್ಬಾಸ್ ನೀಡಿದ ಆಫರ್ ಅನ್ನು ಕೊನೆಯ ವರೆಗೆ ಒಪ್ಪಿಕೊಂಡಿರಲಿಲ್ಲವಂತೆ. ಇದಕ್ಕೆ ಕಾರಣ ಹಲವರು ವೈಷ್ಣವಿಗೆ ಸಲಹೆ ನೀಡಿದ್ದರಂತೆ, 'ಬಿಗ್ಬಾಸ್ ಶೋ ಗೆ ಹೋಗಬೇಡ, ನಿನಗೆ ಸರಿಬರುವುದಿಲ್ಲ, ಹೆಸರು ಕೆಡಿಸಿಕೊಳ್ಳುತ್ತೀಯಾ' ಎಂದು. ಆದರೆ ನಂತರ ಬಿಗ್ಬಾಸ್ ತಂಡದವರೊಂದಿಗೆ ಖಾಸಗಿಯಾಗಿ ಮಾತನಾಡಿದ ಬಳಿಕ ಬಿಗ್ಬಾಸ್ ಮನೆಗೆ ಬರಲು ಒಪ್ಪಿದರಂತೆ ಈ ನಟಿ.
ವೈಷ್ಣವಿ ತಮ್ಮ ತಾಯಿಗೆ ಬಹುವಾಗಿ ಹೆದರುತ್ತಾರಂತೆ. 'ತಾಯಿ ಬಹಳ ಶಿಸ್ತಿನಿಂದ ಬೆಳೆಸಿದ್ದಾರೆ ನನ್ನನ್ನು' ಎಂದು ಬಿಗ್ಬಾಸ್ ವೇದಿಕೆ ಮೇಲೆ ಹೇಳಿದ ವೈಷ್ಣವಿ. ಆದರೆ ಅಪ್ಪ ಬಹಳ ಮುದ್ದಾಗಿ ಸಾಕಿದ್ದಾರೆ. ಇಬ್ಬರನ್ನೂ ಸಹ ಬಹುವಾಗಿ ನಾನು ಮಿಸ್ ಮಾಡಿಕೊಳ್ಳಲಿದ್ದೇನೆ ಎಂದಿದ್ದಾರೆ ವೈಷ್ಣವಿ.
ಬಿಗ್ಬಾಸ್ ಸೀಸನ್ 08 ಈಗಾಗಲೇ ಆರಂಭವಾಗಿದ್ದು.ಬಿಗ್ಬಾಸ್ ಮನೆಯಲ್ಲಿ ಟಿಕ್ಟಾಕ್ ಸ್ಟಾರ್ ಧನುಶ್ರಿ. ನಟ ಶಂಕರ್ ಅಶ್ವತ್ಥ್ , ನಟಿ ಶುಭಾ ಪೂಂಜಾ, ಗಾಯಕ ವಿಶ್ವ, ಬೈಕ್ ರೇಸರ್ ಅರವಿಂದ್, ಸಿನಿಮಾ ನಟಿ ನಿಧಿ ಸುಬ್ಬಯ್ಯ ಅವರುಗಳು ಮನೆ ಪ್ರವೇಶಿಸಿದ್ದಾರೆ.