Don't Miss!
- News Rameshwar Cafe: ರಾಮೇಶ್ವರ ಕೆಫೆ ಬಾಂಬ್ ಸ್ಪೋಟ ಪ್ರಕರಣ: ದಾಳಿಗೆ ಸಹಾಯ ಮಾಡಿದ ವ್ಯಕ್ತಿ ಬಂಧನ- ತೀರ್ಥಹಳ್ಳಿ ಉಗ್ರನೊಂದಿಗೆ ಸಂಪರ್
- Lifestyle 2024: ಮದುವೆ, ಗಾಡಿ ಖರೀದಿ, ಗೃಹ ಪ್ರವೇಶ ಹೀಗೆ ಶುಭ ಕಾರ್ಯಕ್ಕೆ ಏಪ್ರಿಲ್ನಲ್ಲಿರುವ ಶುಭ ದಿನಾಂಕಗಳಿವು
- Finance 2023 ಡಿಸೆಂಬರ್ ವೇಳೆಗೆ 160 ಲಕ್ಷ ಕೋಟಿ ರೂ. ದಾಟಿದ ಸರ್ಕಾರದ ಸಾಲ!
- Automobiles Vande Bharat: ವಂದೇ ಭಾರತ್ ಸ್ಲೀಪರ್ ವಿಶೇಷತೆಗಳು: ಇಂಟೀರಿಯರ್ಗೆ ಫಿದಾ ಆಗ್ತೀರ!
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಗ್ಬಾಸ್ ಮನೆಯ ಅಗ್ನಿಕುಂಡ ಪ್ರವೇಶಿಸಿದ ಅಗ್ನಿಸಾಕ್ಷಿಯ ವೈಷ್ಣವಿ
ಜನಪ್ರಿಯ ಧಾರಾವಾಹಿ 'ಅಗ್ನಿಸಾಕ್ಷಿ'ಯಲ್ಲಿ ಸನ್ನಿಧಿ ಪಾತ್ರ ನಿರ್ವಹಿಸುವ ವೈಷ್ಣವಿ ಅವರು ಬಿಗ್ಬಾಸ್ ಮನೆಯನ್ನು ಪ್ರವೇಶಿಸಿದ್ದಾರೆ.
ಸೂಕ್ಷ್ಮ ಸ್ವಭಾವದ, ಮಿತ ಭಾಷಿ ಆಗಿರುವ ವೈಷ್ಣವಿ ಅವರು 'ಅಗ್ನಿಕುಂಡ' ಎನಿಸಿಕೊಂಡಿರುವ ಬಿಗ್ಬಾಸ್ ಮನೆ ಪ್ರವೇಶ ಮಾಡಿರುವುದು ಹಲವರಿಗೆ ಶಾಕ್ ನೀಡಿದೆ.
ಅತ್ಯುತ್ತಮ ಭರತನಾಟ್ಯ ನೃತ್ಯಗಾರ್ತಿ ಆಗಿರುವ ವೈಷ್ಣವಿ ಅವರು 'ಅಗ್ನಿಸಾಕ್ಷಿ' ಧಾರಾವಾಹಿ ಮೂಲಕ ಕೋಟ್ಯಂತರ ಜನರ ಮನ ಗೆದ್ದಿದ್ದಾರೆ. ಈ ನಟಿಯು ಬಿಗ್ಬಾಸ್ ನೀಡಿದ ಆಫರ್ ಅನ್ನು ಕೊನೆಯ ವರೆಗೆ ಒಪ್ಪಿಕೊಂಡಿರಲಿಲ್ಲವಂತೆ. ಇದಕ್ಕೆ ಕಾರಣ ಹಲವರು ವೈಷ್ಣವಿಗೆ ಸಲಹೆ ನೀಡಿದ್ದರಂತೆ, 'ಬಿಗ್ಬಾಸ್ ಶೋ ಗೆ ಹೋಗಬೇಡ, ನಿನಗೆ ಸರಿಬರುವುದಿಲ್ಲ, ಹೆಸರು ಕೆಡಿಸಿಕೊಳ್ಳುತ್ತೀಯಾ' ಎಂದು. ಆದರೆ ನಂತರ ಬಿಗ್ಬಾಸ್ ತಂಡದವರೊಂದಿಗೆ ಖಾಸಗಿಯಾಗಿ ಮಾತನಾಡಿದ ಬಳಿಕ ಬಿಗ್ಬಾಸ್ ಮನೆಗೆ ಬರಲು ಒಪ್ಪಿದರಂತೆ ಈ ನಟಿ.
ವೈಷ್ಣವಿ ತಮ್ಮ ತಾಯಿಗೆ ಬಹುವಾಗಿ ಹೆದರುತ್ತಾರಂತೆ. 'ತಾಯಿ ಬಹಳ ಶಿಸ್ತಿನಿಂದ ಬೆಳೆಸಿದ್ದಾರೆ ನನ್ನನ್ನು' ಎಂದು ಬಿಗ್ಬಾಸ್ ವೇದಿಕೆ ಮೇಲೆ ಹೇಳಿದ ವೈಷ್ಣವಿ. ಆದರೆ ಅಪ್ಪ ಬಹಳ ಮುದ್ದಾಗಿ ಸಾಕಿದ್ದಾರೆ. ಇಬ್ಬರನ್ನೂ ಸಹ ಬಹುವಾಗಿ ನಾನು ಮಿಸ್ ಮಾಡಿಕೊಳ್ಳಲಿದ್ದೇನೆ ಎಂದಿದ್ದಾರೆ ವೈಷ್ಣವಿ.
ಬಿಗ್ಬಾಸ್ ಸೀಸನ್ 08 ಈಗಾಗಲೇ ಆರಂಭವಾಗಿದ್ದು.ಬಿಗ್ಬಾಸ್ ಮನೆಯಲ್ಲಿ ಟಿಕ್ಟಾಕ್ ಸ್ಟಾರ್ ಧನುಶ್ರಿ. ನಟ ಶಂಕರ್ ಅಶ್ವತ್ಥ್ , ನಟಿ ಶುಭಾ ಪೂಂಜಾ, ಗಾಯಕ ವಿಶ್ವ, ಬೈಕ್ ರೇಸರ್ ಅರವಿಂದ್, ಸಿನಿಮಾ ನಟಿ ನಿಧಿ ಸುಬ್ಬಯ್ಯ ಅವರುಗಳು ಮನೆ ಪ್ರವೇಶಿಸಿದ್ದಾರೆ.