Don't Miss!
- News Acid Attack: ಆಸ್ತಿ ವಿವಾದ: ಮಗನ ಮೇಲೆ 'ಆಸಿಡ್' ಎರಚಿದ ತಂದೆ
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Lifestyle ಮೈ ತೂಕ ಕಡಿಮೆಯಾಗಲು ಈ ಪುದೀನಾ ನೀರು ಸಹಕಾರಿಯೇ? ಇದರ ಇತರ ಪ್ರಯೋಜನಗಳೇನು?
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಗ್ ಬಾಸ್ ನಾಲ್ಕನೇ ಸ್ಪರ್ಧಿ: ಧಾರಾವಾಡ ಗಾಯಕ ವಿಶ್ವನಾಥ್ ಯಾರು?
ಬಿಗ್ ಬಾಸ್ ಕನ್ನಡ 8ನೇ ಆವೃತ್ತಿ ಅತ್ಯಂತ ಕಿರಿಯ ಸ್ಪರ್ಧಿಯಾಗಿ 'ಹಾಡು ಕರ್ನಾಟಕ' ಖ್ಯಾತಿಯ ವಿಶ್ವನಾಥ್ ಮನೆ ಪ್ರವೇಶಿಸಿದ್ದಾರೆ. ನಾಲ್ಕನೇ ಸ್ಪರ್ಧಿಯಾಗಿ ಬಿಗ್ ಮನೆಗೆ ಎಂಟ್ರಿ ಪಡೆದ ವಿಶ್ವ ದೊಡ್ಡ ಗಾಯಕನಾಗಬೇಕೆಂಬ ಮಹಾದಾಸೆ ಹೊಂದಿದ್ದಾರೆ.
ಮೂಲತಃ ಧಾರಾವಾಡದ ಯುವ ಪ್ರತಿಭೆ ವಿಶ್ವ ಸಣ್ಣ ವಯಸ್ಸಿನಿಂದಲೂ ಸಂಗೀತದ ಮೇಲೆ ಆಸಕ್ತಿ ಹೊಂದಿದ್ದಾರೆ. 19 ವರ್ಷದ ವಿಶ್ವನಾಥ್ ಹಾಡು ಬರೆಯುತ್ತಾರೆ, ಕಂಪೋಸ್ ಮಾಡ್ತಾರೆ ಹಾಗೂ ಹಾಡುಗಳನ್ನು ಹಾಡುತ್ತಾರೆ.
ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಧನುಶ್ರೀ ಯಾರು, ಹಿನ್ನೆಲೆ ಏನು?
ಧಾರಾವಾಡದಲ್ಲಿ ಹುಟ್ಟಿ ಬೆಳೆದಿರುವ ವಿಶ್ವನಾಥ್ ತಮ್ಮ ಅಜ್ಜ-ಅಜ್ಜಿಯ ಪ್ರಭಾವದಿಂದ ಸಂಗೀತ ಕಲಿತಿದ್ದಾರೆ. ಅವರ ಹೆಸರು ವಿಶ್ವನಾಥ್, ಅಜ್ಜನ ಹೆಸರನ್ನೇ ಇವರಿಗೆ ಇಡಲಾಗಿದೆ. ಹದಿಮೂರು ವರ್ಷದಿಂದ ಸಂಗೀತ ಅಭ್ಯಾಸ ಮಾಡ್ತಿದ್ದಾರೆ. ತಮ್ಮದೇ ಒಂದು ತಂಡವನ್ನು ಕಟ್ಟಿಕೊಂಡಿದ್ದಾರೆ.
''ಬಿಗ್ ಬಾಸ್ಗೆ ಬರಬೇಕೆನ್ನುವುದು ಬಹಳ ದಿನಗಳ ಆಸೆಯಾಗಿತ್ತು. ಆದರೆ, ಅವಕಾಶ ಸಿಕ್ಕಿರಲಿಲ್ಲ. ಆದ್ರೀಗ, ಅವಕಾಶ ಬಂದಾಗ ತುಂಬಾ ಖುಷಿ ಆಯ್ತು'' ಎಂದು ವಿಶ್ವನಾಥ್ ಸಂತಸ ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ ಕನ್ನಡ 8: ದೊಡ್ಮನೆ ಸೇರಲಿದ್ದಾರೆ 'ಮಿಸ್ ಇಂಡಿಯಾ ಸೌತ್?
''ನನ್ನ ಜೀವನದಲ್ಲಿ ಅತಿ ದೊಡ್ಡ ವೇದಿಕೆಯಲ್ಲಿ ಸ್ಪರ್ಧೆ ಮಾಡಲು ಬಂದಿದ್ದೇನೆ. ಇಲ್ಲಿಂದ ನನ್ನ ಲೈಫ್ ಬದಲಾಗುತ್ತೆ ಎಂಬ ಆಶಯ ಹೊಂದಿದ್ದೇನೆ. ಬೆಳೆಯಬೇಕು ಎಂಬ ಛಲ ಹೊಂದಿರುವವರಿಗೆ ಇಂತಹ ಅವಕಾಶ ಸಿಕ್ಕಿದಾಗ ಯಾರೂ ಬಿಡಲ್ಲ. ನಾನಂತೂ ಬಿಡಲ್ಲ, ನಾನು ಚಾಲೆಂಜಿಂಗ್ ಪರ್ಸನ್'' ಎಂದು ವಿಶ್ವ ಹೇಳಿಕೊಂಡಿದ್ದಾರೆ.