Don't Miss!
- News ಕಲೆ ಮತ್ತು ಕಲೆಗಾರ! ಪ್ರಧಾನಿ ನರೇಂದ್ರ ಮೋದಿ ಕಾಲೆಳೆದ ಸಿಎಂ ಸಿದ್ದರಾಮಯ್ಯ
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಗ್ಬಾಸ್ ಕನ್ನಡ 8 ರಿಂದ ಹೊರ ಹೋದ ಮೊದಲ ಸ್ಪರ್ಧಿ ಧನುಶ್ರಿ
ಬಿಗ್ ಬಾಸ್ ಕನ್ನಡ 8 ರ ಮೊದಲ ವಾರ ಒಬ್ಬ ಸ್ಪರ್ಧಿ ಹೊರಗೆ ಹೋಗಿದ್ದಾರೆ. ಬಿಗ್ಬಾಸ್ ಸೀಸನ್ನ ಮೊದಲ ಎಲಿಮಿನೇಶನ್ನಲ್ಲಿ ಟಿಕ್ಟಾಕ್ ಸ್ಟಾರ್ ಧನುಶ್ರಿ ಮನೆಯಿಂದ ಹೊರಗೆ ಹೋಗಿದ್ದಾರೆ.
Recommended Video
ಮೊದಲ ವಾರ ಐದು ಮಂದಿ ನಾಮಿನೇಟ್ ಆಗಿದ್ದರು, ನಿರ್ಮಲಾ, ರಘು ಗೌಡ, ವಿಶ್ವ ಹಾಗೂ ಶುಭಾ ಪೂಂಜಾ. ಇದರಲ್ಲಿ ಶನಿವಾರದ ಎಪಿಸೋಡ್ನಲ್ಲಿ ಶುಭಾ ಪೂಂಜಾ ಹಾಗೂ ವಿಶ್ವ ಅವರುಗಳು ಸೇಫ್ ಆಗಿದ್ದರು.
ಭಾನುವಾರದ ಸಂಚಿಕೆ ಆರಂಭಿಸಿದ ಸುದೀಪ್ ಅವರು ಮೊದಲು ರಘು ಗೌಡ ಅವರನ್ನು ಸೇಫ್ ಮಾಡಿದರು. ಆ ನಂತರ ಉಳಿದ ಇಬ್ಬರಲ್ಲಿ ಧನುಶ್ರಿ ಅವರನ್ನು ಹೊರಗೆ ಹೋಗಲು ಬಿಗ್ಬಾಸ್ ಸೂಚಿಸಿದರು ಅಂತೆಯೇ ಧನುಶ್ರಿ ಮೊದಲ ಸ್ಪರ್ಧಿಯಾಗಿ ಹೊರಗೆ ಬಂದರು.
ಹೊರಗೆ ಹೋಗುವ ಮುನ್ನ ಧನುಶ್ರಿ ಅವರಿಗೆ ವಿಶೇಷ ಅಧಿಕಾರವೊಂದನ್ನು ಬಿಗ್ಬಾಸ್ ನೀಡಿದರು. ಒಬ್ಬರನ್ನು ನಾಮಿನೇಷನ್ನಿಂದ ಉಳಿಸುವ ಅಧಿಕಾರ ನೀಡಿದರು. ಆ ಅಧಿಕಾರವನ್ನು ಬಳಸಿಕೊಂಡ ಧನುಶ್ರಿ ಅವರು ರಘು ಗೌಡ ಅವರನ್ನು ನಾಮಿನೇಷನ್ ನಿಂದ ಉಳಿಸಿದರು.
ಟಿಕ್ಟಾಕ್ ಸ್ಟಾರ್ ಆಗಿದ್ಧ ಧನುಶ್ರಿ ಅವರು ಒಳ್ಳೆಯ ಸ್ಪರ್ಧಿ ಎಂದೇ ಎಣಿಸಲಾಗಿತ್ತು. ಆದರೆ ಅವರು ಮೊದಲನೇಯ ವಾರದಲ್ಲಿಯೇ ಮನೆಯಿಂದ ಹೊರಗೆ ಹೋಗಿದ್ದಾರೆ.
ಶುಭಾ ಪೂಂಜಾ ಅವರು ಬಿಗ್ಬಾಸ್ ಮನೆಯಿಂದ ಹೊರಗೆ ಹೋಗುತ್ತಾರೆ ಎಂದು ಸುದ್ದಿಗಳು ಹರಿದಾಡಿತ್ತು, ಆದರೆ ಧನುಶ್ರಿ ಅವರು ಮೊದಲನೇ ಸ್ಪರ್ಧಿ ಆಗಿ ಹೊರಹೋಗಿದ್ದಾರೆ.