Don't Miss!
- News 5 ವರ್ಷಗಳಲ್ಲಿ ಕರ್ನಾಟಕ ಸಂಸದರ ಸಾಧನೆ ಏನು? ಅಧ್ಯಯನ ಹೇಳೋದೇನು?
- Sports ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಕೆಎಲ್ ರಾಹುಲ್ಗೆ ಸ್ಥಾನ?; ರಾಬಿನ್ ಉತ್ತಪ್ಪ ಹೇಳಿದ್ದೇನು?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಗ್ಬಾಸ್: ಕೊಡಲಿ ಬಳಸಿ ನಾಮಿನೇಷನ್ ಕತ್ತಿಯಿಂದ ಬಚಾವಾದ ಗೀತಾ ಭಟ್
ಬಿಗ್ಬಾಸ್ ಮನೆಯಲ್ಲಿ ಮೊದಲ ದಿನವೇ ಲ್ಯಾಗ್ ಮಂಜು, ಪ್ರಶಾಂತ್ ಸಂಬರ್ಗಿ, ನಿಧಿ ಸುಬ್ಬಯ್ಯ, ಧನುಶ್ರಿ ಅವರುಗಳು ಇತರ ಸ್ಪರ್ಧಿಗಳಿಂದ ನಾಮಿನೇಟ್ ಆದರು. ನಿರ್ಮಲಾ ಅವರು ನೇರವಾಗಿ ನಾಮಿನೇಟ್ ಆಗಿದ್ದರು.
ಬಿಗ್ಬಾಸ್ ಕೊಟ್ಟ ವಿಶೇಷ ಅವಕಾಶದಿಂದ ಪ್ರಶಾಂತ್ ಸಂಬರ್ಗಿ ಹಾಗೂ ಲ್ಯಾಗ್ ಮಂಜು ಅವರುಗಳು ಆಟವಾಡಿ ಗೆದ್ದು ನಾಮಿನೇಷನ್ ತೂಗುಕತ್ತಿಯಿಂದ ಪಾರಾಗಿ ಸೇಫ್ಝೋನ್ಗೆ ಹೋದರು.
ಆದರೆ ನಿಧಿ ಸುಬ್ಬಯ್ಯ ಹಾಗೂ ಟಿಕ್ಟಾಕ್ ಸ್ಟಾರ್ ಧನುಶ್ರಿ ಅವರುಗಳು ಮೇಲೆ ನಾಮಿನೇಟ್ ತೂಗುಗತ್ತಿ ತೂಗುತ್ತಲೇ ಇತ್ತು.
ಸೇಫ್ ಆಗುವ ಮೊದಲ ಅವಕಾಶ ದೊರಕಿದ್ದು ನೀಧಿ ಸುಬ್ಬಯ್ಯ ಅವರಿಗೆ, ಅವರು ಆಯ್ಕೆ ಮಾಡಿಕೊಂಡಿದ್ದು ದಿವ್ಯಾ ಉರುಡುಗ ಅವರನ್ನು. ಅದಾದ ನಂತರ ಧನುಶ್ರಿ ಆಯ್ಕೆ ಮಾಡಿಕೊಂಡಿದ್ದು ಗೀತಾ ಭಟ್ ಅನ್ನು.
ಈಜು ಕೊಳದಲ್ಲಿ ಬಿಗ್ಬಾಸ್ ಆಡಿಸಿದ ಆಟದಲ್ಲಿ ದಿವ್ಯಾ ಉರುಡುಗ ಅವರು ವಿಜೇತರಾದ ಕಾರಣ ನಿಧಿ ಸುಬ್ಬಯ್ಯ ಅವರ ನಾಮಿನೇಟ್ ಮುಂದುವರೆಯಿತು.
ಆ ನಂತರ ಧನುಶ್ರೀ ಅವರು ತಮ್ಮ ಪ್ರತಿಸ್ಪರ್ಧಿಯಾಗಿ ಗೀತಾ ಭಟ್ ಅವರನ್ನು ಆಯ್ಕೆ ಮಾಡಿಕೊಂಡರು. ಅವರಿಬ್ಬರಿಗೂ ಕಟ್ಟಿಗೆ ಕಡಿಯುವ ಟಾಸ್ಕ್ ನೀಡಿದರು ಬಿಗ್ಬಾಸ್.
ಗೀತಾ ಭಟ್ ಅವರು ಅದ್ಭುತವಾಗಿ ಆಡಿ ಧನುಶ್ರೀ ಗಿಂತಲೂ ಬಹಳ ಬೇಗವೇ ಎರಡು ತುಂಡು ಕಟ್ಟಿಗೆಯನ್ನು ಎಂಟು ತುಂಡುಗಳನ್ನಾಗಿ ಮಾಡಿ ಟಾಸ್ಕ್ ನಲ್ಲಿ ಗೆದ್ದರು. ಆ ಮೂಲಕ ಗೀತಾ ಭಟ್ ಮತ್ತೆ ಸೇಫ್ ಆದರು. ಧನುಶ್ರೀ ಅವರ ನಾಮಿನೇಷನ್ ಮುಂದುವರೆಯಿತು.
ಅಲ್ಲಿಗೆ ಅಂತಿಮವಾಗಿ ನಿಧಿ ಸುಬ್ಬಯ್ಯ, ಧನುಶ್ರಿ, ರಘು ಗೌಡ ಹಾಗೂ ವಿಶ್ವ ಅವರುಗಳು ಬಿಗ್ಬಾಸ್ ಮನೆಯಿಂದ ಮೊದಲ ವಾರ ಹೊಗಲು ನಾಮಿನೇಟ್ ಆಗಿರುವ ಸದಸ್ಯರಾಗಿದ್ದಾರೆ.