Don't Miss!
- News Bengaluru-Tumkur Metro: 52.41 ಕಿ.ಮೀ. ಮಾರ್ಗ, 19 ನಿಲ್ದಾಣಗಳು; ತುಮಕೂರು-ಬೆಂಗಳೂರು ಮೆಟ್ರೋ ಅಪ್ಡೇಟ್
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಗ್ಬಾಸ್: ಕೊಡಲಿ ಬಳಸಿ ನಾಮಿನೇಷನ್ ಕತ್ತಿಯಿಂದ ಬಚಾವಾದ ಗೀತಾ ಭಟ್
ಬಿಗ್ಬಾಸ್ ಮನೆಯಲ್ಲಿ ಮೊದಲ ದಿನವೇ ಲ್ಯಾಗ್ ಮಂಜು, ಪ್ರಶಾಂತ್ ಸಂಬರ್ಗಿ, ನಿಧಿ ಸುಬ್ಬಯ್ಯ, ಧನುಶ್ರಿ ಅವರುಗಳು ಇತರ ಸ್ಪರ್ಧಿಗಳಿಂದ ನಾಮಿನೇಟ್ ಆದರು. ನಿರ್ಮಲಾ ಅವರು ನೇರವಾಗಿ ನಾಮಿನೇಟ್ ಆಗಿದ್ದರು.
ಬಿಗ್ಬಾಸ್ ಕೊಟ್ಟ ವಿಶೇಷ ಅವಕಾಶದಿಂದ ಪ್ರಶಾಂತ್ ಸಂಬರ್ಗಿ ಹಾಗೂ ಲ್ಯಾಗ್ ಮಂಜು ಅವರುಗಳು ಆಟವಾಡಿ ಗೆದ್ದು ನಾಮಿನೇಷನ್ ತೂಗುಕತ್ತಿಯಿಂದ ಪಾರಾಗಿ ಸೇಫ್ಝೋನ್ಗೆ ಹೋದರು.
ಆದರೆ ನಿಧಿ ಸುಬ್ಬಯ್ಯ ಹಾಗೂ ಟಿಕ್ಟಾಕ್ ಸ್ಟಾರ್ ಧನುಶ್ರಿ ಅವರುಗಳು ಮೇಲೆ ನಾಮಿನೇಟ್ ತೂಗುಗತ್ತಿ ತೂಗುತ್ತಲೇ ಇತ್ತು.
ಸೇಫ್ ಆಗುವ ಮೊದಲ ಅವಕಾಶ ದೊರಕಿದ್ದು ನೀಧಿ ಸುಬ್ಬಯ್ಯ ಅವರಿಗೆ, ಅವರು ಆಯ್ಕೆ ಮಾಡಿಕೊಂಡಿದ್ದು ದಿವ್ಯಾ ಉರುಡುಗ ಅವರನ್ನು. ಅದಾದ ನಂತರ ಧನುಶ್ರಿ ಆಯ್ಕೆ ಮಾಡಿಕೊಂಡಿದ್ದು ಗೀತಾ ಭಟ್ ಅನ್ನು.
ಈಜು ಕೊಳದಲ್ಲಿ ಬಿಗ್ಬಾಸ್ ಆಡಿಸಿದ ಆಟದಲ್ಲಿ ದಿವ್ಯಾ ಉರುಡುಗ ಅವರು ವಿಜೇತರಾದ ಕಾರಣ ನಿಧಿ ಸುಬ್ಬಯ್ಯ ಅವರ ನಾಮಿನೇಟ್ ಮುಂದುವರೆಯಿತು.
ಆ ನಂತರ ಧನುಶ್ರೀ ಅವರು ತಮ್ಮ ಪ್ರತಿಸ್ಪರ್ಧಿಯಾಗಿ ಗೀತಾ ಭಟ್ ಅವರನ್ನು ಆಯ್ಕೆ ಮಾಡಿಕೊಂಡರು. ಅವರಿಬ್ಬರಿಗೂ ಕಟ್ಟಿಗೆ ಕಡಿಯುವ ಟಾಸ್ಕ್ ನೀಡಿದರು ಬಿಗ್ಬಾಸ್.
ಗೀತಾ ಭಟ್ ಅವರು ಅದ್ಭುತವಾಗಿ ಆಡಿ ಧನುಶ್ರೀ ಗಿಂತಲೂ ಬಹಳ ಬೇಗವೇ ಎರಡು ತುಂಡು ಕಟ್ಟಿಗೆಯನ್ನು ಎಂಟು ತುಂಡುಗಳನ್ನಾಗಿ ಮಾಡಿ ಟಾಸ್ಕ್ ನಲ್ಲಿ ಗೆದ್ದರು. ಆ ಮೂಲಕ ಗೀತಾ ಭಟ್ ಮತ್ತೆ ಸೇಫ್ ಆದರು. ಧನುಶ್ರೀ ಅವರ ನಾಮಿನೇಷನ್ ಮುಂದುವರೆಯಿತು.
ಅಲ್ಲಿಗೆ ಅಂತಿಮವಾಗಿ ನಿಧಿ ಸುಬ್ಬಯ್ಯ, ಧನುಶ್ರಿ, ರಘು ಗೌಡ ಹಾಗೂ ವಿಶ್ವ ಅವರುಗಳು ಬಿಗ್ಬಾಸ್ ಮನೆಯಿಂದ ಮೊದಲ ವಾರ ಹೊಗಲು ನಾಮಿನೇಟ್ ಆಗಿರುವ ಸದಸ್ಯರಾಗಿದ್ದಾರೆ.