Don't Miss!
- News 56 ಇಂಚಿನ ಎದೆ ಇದ್ದರೆ ಸಾಲದು, ಎದೆಯೊಳಗೆ ಹೃದಯ ಇರಬೇಕು: ಮೋದಿ ವಿರುದ್ದ ಸಿದ್ದರಾಮಯ್ಯ ವಾಗ್ದಾಳಿ
- Lifestyle ಟ್ರೆಂಡ್ನಲ್ಲಿದೆ ಸೆಕ್ಸಿ ವಾಟರ್, ಏನಿದು ಸೆಕ್ಸಿ ವಾಟರ್, ಈ ವಾಟರ್ ಪ್ರಯೋಜನವೇನು?
- Sports ಮತ್ತೆ ಪಾಕಿಸ್ತಾನ ಕ್ರಿಕೆಟ್ ತಂಡದ ಚುಕ್ಕಾಣಿ ಬಾಬರ್ ಅಜಮ್ ಕೈಗೆ?
- Finance ಐಟಿಆರ್ ಸಲ್ಲಿಸಿದ್ದರೂ, ಆದಾಯ ತೆರಿಗೆ ಇಲಾಖೆಯಿಂದ ನಿಮಗೆ ಇಮೇಲ್ ಬಂದಿದೆಯೇ?
- Automobiles ಜಿಮ್ನಿಗೆ ಸೆಡ್ಡು ಹೊಡೆಯಲು ಎಂಜಿ ಮಾಸ್ಟರ್ ಪ್ಲಾನ್: ಸದ್ಯದಲ್ಲೇ ಕಾಮೆಟ್ ಆಧರಿಸಿ 5 ಡೋರ್ ಕಾರು ಭಾರತಕ್ಕೆ?
- Technology ರೆಡ್ಮಿಯ ಈ ಮೊಬೈಲ್ಗೆ ಇರುವ ಬಿಗ್ ಆಫರ್ ತಿಳಿದ್ರೆ, ಖಂಡಿತಾ ವಾವ್ ಅಂತೀರಾ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಗ್ಬಾಸ್ ಮನೆಯಲ್ಲಿ ಆಯ್ತು ಮಂಜನ ಮದುವೆ
ಬಿಗ್ಬಾಸ್ ಮನೆಯಲ್ಲಿ ನಿನ್ನೆ ಒಂದು ಲವ್ ಸ್ಟೋರಿ ಪ್ರಾರಂಭವಾಗುವ ಲಕ್ಷಣಗಳು ಗೋಚರಿಸಿತ್ತು, ಆದರೆ ಇಂದು ಮದುವೆಯೇ ನಡೆದು ಹೋಯ್ತು. ಆದರೆ ಈ ಮದುವೆ ಫೇಕ್ ಮದುವೆ.
ಬಿಗ್ಬಾಸ್ ಮನೆಯಲ್ಲಿ ತಮ್ಮ ಹಾಸ್ಯದಿಂದ ಗಮನ ಸೆಳೆಯುತ್ತಿರುವ ಲ್ಯಾಗ್ ಮಂಜು ಅಲಿಯಾಸ್ ಪಾವಗಡ ಮಂಜು ಅವರಿಗೂ ದಿವ್ಯಾ ಸುರೇಶ್ ಅವರಿಗೂ 'ಮದುವೆ' ಆಗಿದೆ.
ಮಂಜು ಹಾಗೂ ಚಂದ್ರಕಲಾ ಅವರು ನಿನ್ನೆಯಿಂದಲೂ ಹಳ್ಳಿಯ ಅತ್ತೆ-ಅಳಿಯನಂತೆ ಮಾತನಾಡುತ್ತಿದ್ದರು. ಇಂದು ಮಂಜು ಅವರ ಹಳೆಯ ಚಿತ್ರವೊಂದನ್ನು ಬಿಗ್ಬಾಸ್ ಪ್ರದರ್ಶಿಸಿದರು. ಆಗ ಮತ್ತೆ ಮಂಜು ಮತ್ತು ಚಂದ್ರಕಲಾ ಅವರು ಅತ್ತೆ-ಅಳಿಯನ ಮಾತು ಪ್ರಾರಂಭಿಸಿದರು.
ಇದೇ ಸಂದರ್ಭದಲ್ಲಿ ದಿವ್ಯಾ ಸುರೇಶ್ ಹಾಗೂ ಮಂಜು ಗಂಡ-ಹೆಂಡತಿಯಂತೆ ನಾಟಕವಾಡಲಿ ಎಂದರು ಎಲ್ಲರೂ. ಮಂಜು-ದಿವ್ಯಾ ಅವರು ನಟಿಸಲು ಒಪ್ಪಿದರು. ಈ ಸಮಯ ಮಂಜು, ತಮ್ಮ ಕೊರಳಿನಲ್ಲಿದ್ದ ಮೈಕ್ ಬ್ಯಾಗ್ ಅನ್ನು ದಿವ್ಯಾ ಅವರಿಗೆ ತಿಳಿಯದಂತೆ ಅವರ ಕೊರಳಿಗೆ ಹಾಕಿ, 'ನಮಗೆ ಮದುವೆ ಆಯ್ತು' ಎಂದು ಘೋಷಿಸಿದರು.
ಆ ನಂತರ ದಿವ್ಯಾ ಅವರು ತಮ್ಮ ಕೊರಳಲ್ಲಲ್ಲಿದ್ದ ಮಂಜು ಅವರ ಮೈಕ್ ಬ್ಯಾಗ್ ಅನ್ನು ಮರಳಿ ಮಂಜು ಅವರಿಗೆ ಹಾಕಿದರು. ಇಬ್ಬರ ಮದುವೆ ಆಯಿತು ಎಂದು ಬಿಗ್ಬಾಸ್ ಸ್ಪರ್ಧಿಗಳು ಚಪ್ಪಾಳೆ ತಟ್ಟಿದರು.
ಆ ನಂತರ ಮಂಜು ಅವರು ದಿವ್ಯಾ ಅವರನ್ನು ತಮ್ಮ ಪತ್ನಿ ಎಂದು ಊಹಿಸಿಕೊಂಡು ತಮಾಷೆಯ ಮಾತನ್ನಾಡಿದರು. ಆದರೆ ಇದು ದಿವ್ಯಾ ಅವರಿಗೆ ಇಷ್ಟವಾಗಲಿಲ್ಲ. ಅವರು ಮನೆಯ ಕ್ಯಾಮೆರಾ ಬಳಿ ಬಂದು. 'ಕೆಲವೊಂದು ಮಾತುಗಳು ನನಗೆ ಹರ್ಟ್ ಆಗುತ್ತಿವೆ' ಎಂದು ಹೇಳಿ ಕಣ್ಣೀರು ಹಾಕಿದರು. ಮಂಜು ಅವರ ತಮಾಷೆಯ ಮಾತುಗಳು ದಿವ್ಯಾ ಸುರೇಶ್ ಅವರಿಗೆ ಹರ್ಟ್ ಆಗುತ್ತಿವೆ ಎಂಬುದು ಸ್ಪಷ್ಟವಾಗಿ ಅವರ ವರ್ತನೆಯಿಂದಲೇ ಗೊತ್ತಾಗುತ್ತಿತ್ತು.
ನಂತರ ದಿವ್ಯಾ ಸುರೇಶ್ ಹಾಗೂ ನಿರ್ಮಲಾ ಅವರು ಮಾತನಾಡುತ್ತಿರಬೇಕಾದರೆ, ದಿವ್ಯಾ ಸುರೇಶ್ ಅವರು, ಪ್ರಶಾಂತ್ ಸಂಬರ್ಗಿ ಕುರಿತು ದೂರು ಹೇಳಿದರು. ''ನೀನು ಸಖತ್ ಸ್ಕೋಪ್ ಹೊಡಿತೀಯಾ ಅಲ್ವಾ'' ಎಂದು ಪ್ರಶಾಂತ್ ಸಂಬರ್ಗಿ ಹೇಳಿದರು, ''ಏನು ಸ್ಕೋಪ್ ತಗೋತಿದ್ದೀನಿ ಹೇಳಿ?'' ಎಂದು ನಾನು ಕೇಳಿದೆ, ಅವರೇನು ಹೇಳಲಿಲ್ಲ, ಹಾಗೆಯೇ ಹೊರಟುಹೋದರು' ಎಂದರು ದಿವ್ಯಾ ಸುರೇಶ್. ಆಗ ಅಲ್ಲಿಯೇ ಇದ್ದ ಪಾವಗಡ ಮಂಜು, ದಿವ್ಯಾ ಅವರಿಗೆ ಬೆಂಬಲಿಸಿ ಮಾತನಾಡಿದರು.