Don't Miss!
- News Kolar Lok Sabha elections: ಕೋಲಾರ ಲೋಕಸಭಾ ಕ್ಷೇತ್ರದಲ್ಲಿ 'ಸ್ಥಳೀಯ' V/s 'ಹೊರಗಿನವ' ಫೈಟ್!
- Finance bangalore royal challengers ತಂಡದಿಂದ ನಗರದ ಎರಡು ಕೆರೆಗಳ ಪುನರುಜ್ಜೀವನ
- Automobiles ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ನನ್ನ ಪತ್ನಿಗೆ ಕಣ್ಣೀರು ಹಾಕೋಕು ಬರುತ್ತೆ, ಗನ್ ಹಿಡಿಯೋಕು ಬರುತ್ತೆ': ಪತ್ನಿ ಬಗ್ಗೆ ಸತ್ಯ ಸ್ಪಷ್ಟನೆ
ಬಿಗ್ ಬಾಸ್ ಎಂಟನೇ ಆವೃತ್ತಿ ಕೊನೆಯ ಸ್ಪರ್ಧಿಯಾಗಿ ದೊಡ್ಮನೆ ಪ್ರವೇಶ ಮಾಡಿದ ನಿರ್ಮಲಾ ಚೆನ್ನಪ್ಪ ಒಳ್ಳೆಯ ಕಾಂಪಿಟೇಟರ್ ಎಂದು ವಿಶ್ಲೇಷಿಸಲಾಗಿದೆ. ಮೊದಲೆರಡು ದಿನ ಒಳ್ಳೆಯ ಆಟ ಪ್ರದರ್ಶಿಸಿದ್ದರು. ಆದ್ರೆ, ನಿರ್ಮಲಾ ಚೆನ್ನಪ್ಪ ಕಳೆದ ಎರಡು ದಿನಗಳಿಂದ ನಡೆದುಕೊಳ್ಳುತ್ತಿರುವ ರೀತಿ ಮನೆಯಲ್ಲಿರುವ ಇತರೆ ಸದಸ್ಯರಿಗೆ ಆತಂಕ ಸೃಷ್ಟಿಸಿದೆ.
ಒಬ್ಬೊಬ್ಬರೆ ಕುಳಿತುಕೊಳ್ಳುತ್ತಿದ್ದಾರೆ, ಒಬ್ಬೊಬ್ಬರೆ ಮಾತನಾಡುತ್ತಿದ್ದಾರೆ, ರಾತ್ರಿ ಸಮಯ ವಿಚಿತ್ರವಾಗಿ ವರ್ತಿಸುತ್ತಿದ್ದಾರೆ. ಇದೆಲ್ಲವೂ ಸ್ಪರ್ಧಿಗಳಿಗೆ ಭಯ ಹುಟ್ಟಿಸಿದೆ. ಪ್ರೇಕ್ಷಕರಿಗೂ ನಿರ್ಮಲಾ ಅವರ ಮನಸ್ಥಿತಿ ಹಾಗೂ ಅವರ ನಡೆ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ. ಈ ರೀತಿ ಉದ್ದೇಶಪೂರ್ವವಾಗಿ ಮಾಡುತ್ತಿದ್ದಾರಾ ಅಥವಾ ಅವರು ಇರೋದೇ ಹಾಗೇನಾ ಎಂಬ ಚರ್ಚೆ ನಡೆಯುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಪತ್ನಿಯ ನಡೆ ಗಮನಿಸಿದ ಪತಿ ಸರ್ದಾರ್ ಸತ್ಯ ಫೇಸ್ಬುಕ್ ಲೈವ್ನಲ್ಲಿ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ...
ಬಿಗ್ಬಾಸ್: ಮನೆಯ ಸದಸ್ಯರಲ್ಲಿ ಭಯ ಹುಟ್ಟಿಸಿದ ನಿರ್ಮಲಾ
ಬಿಗ್ ಬಾಸ್ ಎನ್ನುವುದು ಒಂದು ಆಟ
''ಅವರು ಏನು ಎನ್ನುವುದು ನನಗೆ ತಿಳಿದಿದೆ. ಬಿಗ್ ಬಾಸ್ ಎನ್ನುವುದು ಒಂದು ಆಟ. ಎಲ್ಲರು ಅಲ್ಲಿ ಸೇರಿರುವುದು ಊಟ ಮಾಡಿ ಮಲುಗುವುದಕ್ಕೆ ಹೋಗಿಲ್ಲ. ಪ್ರತಿಯೊಬ್ಬರು ಅವರವರ ಆಟಗಳನ್ನು ಶುರು ಮಾಡ್ತಾರೆ. ಪ್ರತಿಯೊಬ್ಬರು ಅವರಿಗೆ ಅನಿಸಿದ್ದನ್ನ ಮಾಡ್ತಾರೆ. ಬಿಗ್ ಬಾಸ್ ಎನ್ನುವುದು ಅತ್ಯಂತ ದೊಡ್ಡ ಮನರಂಜನೆ ವೇದಿಕೆ. ಅಲ್ಲಿಗೆ ಹೋದ್ಮೇಲೆ ಏನು ಮಾಡಬೇಕೋ ಅದನ್ನು ಮಾಡಬೇಕು ಅಲ್ಲವೇ?'' ಎಂದು ಸತ್ಯ ಪತ್ನಿಯನ್ನು ಸಮರ್ಥಿಸಿಕೊಂಡಿದ್ದಾರೆ.
ತಾಳ್ಮೆಯಿಂದ ಕಾಯೋಣ
''ಬಿಗ್ ಬಾಸ್ ಅಂದ್ರೆ ಅಲ್ಲಿ ಒಂದಿಷ್ಟು ನಿಯಮಗಳಿವೆ, ನೂರು ದಿನ ಇರಬೇಕು, ನೂರು ದಿನ ಅಲ್ಲಿರುವುದು ದೊಡ್ಡ ವಿಷ್ಯ. ಅದಕ್ಕೆ ತಕ್ಕಂತೆ ಮನರಂಜಿಸುತ್ತಾ ಹೋಗಬೇಕು. ಆ ಬಗ್ಗೆ ನಾವು ಇಲ್ಲಿ ಕೂತು ಮಾತನಾಡಬಾರದು. ನೋಡಿ ಸಂತೋಷ ಪಡಬೇಕು. ಮುಂದೆ ಏನಾಗುತ್ತದೆ ಎಂದು ತಾಳ್ಮೆಯಿಂದ ಕಾದು ನೋಡೋಣ'' ಎಂದು ಸತ್ಯ ಹೇಳಿದರು.
ಇಡೀ ಮನೆ ನಿರ್ಮಲಾಗೆ ಡಿಸ್ಲೈಕ್ ಕೊಟ್ಟರು: ಒಬ್ಬರಿಂದ ಮಾತ್ರ ಲೈಕ್!
ನಾನು ತಲೆಕೆಡಿಸಿಕೊಳ್ಳಲ್ಲ
''ಎಪಿಸೋಡ್ ನೋಡಿದ್ರೆ ಎಲ್ಲವೂ ಅರ್ಥವಾಗುತ್ತದೆ. ನಾನು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲ್ಲ. ಬಿಗ್ ಬಾಸ್ನಲ್ಲಿ ಮಜಾ ಇರಬೇಕು, ಅಲ್ಲಿ ಏನೇ ನಡೆದರು ಮನರಂಜನೆ ದೃಷ್ಟಿಯಿಂದ ಅಷ್ಟೇ. ನಾನು ಎಪಿಸೋಡ್ ನೋಡಿ ಖುಷಿ ಪಡ್ತೀನಿ'' ಅಷ್ಟೇ ಎಂದು ಸತ್ಯ ನೆಟ್ಟಿಗರಿಗೆ ಪ್ರತಿಕ್ರಿಯಿಸಿದ್ದಾರೆ.
ಕಣ್ಣೀರು ಹಾಕೋಕು ಬರುತ್ತೆ, ಗನ್ ಹಿಡಿಯೋಕು ಬರುತ್ತೆ
''ನಿರ್ಮಲಾ ಬಹಳ ಗಟ್ಟಿಯಾಗಿದ್ದಾರೆ. ವೇದಿಕೆ ಮೇಲೆ ಆಕ್ಟ್ ಮಾಡೋಕೆ ಬರುತ್ತೆ, ವೇದಿಕೆ ಹಿಂದೆ ಕೆಲಸ ಮಾಡೋಕು ಬರುತ್ತೆ. ಅವಳಿಗೆ ಕಣ್ಣೀರು ಹಾಕೋಕು ಬರುತ್ತೆ, ಗನ್ ಹಿಡಿಯೋಕೆ ಬರುತ್ತೆ'' ಎಂದು ಸತ್ಯ ಪತ್ನಿಯನ್ನು ಸಮರ್ಥಿಸಿಕೊಂಡಿದ್ದಾರೆ.
ನಾಮಿನೇಷನ್ ತೂಗುಗತ್ತಿಯಿಂದ ನಿರ್ಮಲಾ ಅವರನ್ನು ಬಚಾವ್ ಮಾಡಿದ್ದೇಕೆ ಪ್ರಶಾಂತ್ ಸಂಬರ್ಗಿ?
ಬಿಗ್ ಬಾಸ್ ಮನೆಯಲ್ಲಿ ನಿರ್ಮಲಾ ಟಾರ್ಗೆಟ್
ನಿರ್ಮಲಾ ಒಬ್ಬೊಬ್ಬರೆ ಸಮಯ ಕಳೆಯುತ್ತಿರುವುದು ಮನೆಯ ಸದಸ್ಯರಿಗೆ ಇಷ್ಟವಾಗುತ್ತಿಲ್ಲ. ಈ ಕಾರಣದಿಂದ ಮನೆಯಲ್ಲಿರುವವರೆಲ್ಲವೂ ನಿರ್ಮಲಾ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಮನೆಯಲ್ಲಿ ಇಷ್ಟ ಆಗದ ಸ್ಪರ್ಧಿಗಳಿಗೆ ಕೆಂಪು ಬ್ಯಾಡ್ಜ್ ಕೊಡಬೇಕು ಎಂದು ಬಿಗ್ ಬಾಸ್ ಸೂಚಿಸಿದ್ದರು. ಅದರಲ್ಲಿ ಹತ್ತಕ್ಕಿಂತ ಹೆಚ್ಚು ಮಂದಿ ನಿರ್ಮಲಾ ಅವರಿಗೆ ಕೆಂಪು ಬ್ಯಾಡ್ಜ್ ಕೊಟ್ಟರು.