Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಅಣ್ಣ ಎಂದು ಕೂಗಬೇಡ': ಮಂಜು ಪಾವಗಡಗೆ ಅಣ್ಣ ಎಂದಿದ್ದು ಯಾರು?
'ಮಜಾಭಾರತ' ಖ್ಯಾತಿಯ ಲ್ಯಾಗ್ ಮಂಜು ಬಿಗ್ ಬಾಸ್ ಮನೆಯ ರೋಮಿಯೋ ಆಗುವ ಕಡೆ ಹೊರಟಿದ್ದಾರೆ. ಇಂದಿನ ಪ್ರೋಮೋ ಸಹ ಅದಕ್ಕೆ ತಕ್ಕಂತಿದೆ. ರೋಮಿಯೋ ಅಥವಾ ಲವರ್ ಬಾಯ್ ಆಗುವ ಸೂಚನೆ ಕೊಡ್ತಿರುವ ಮಂಜು ಪಾವಗಡ ಅವರನ್ನು ನಟಿಯೊಬ್ಬರು ಅಣ್ಣ ಎಂದು ಕರೆದರು.
ಅಣ್ಣ ಎಂದು ಕರೆದ ಹಿನ್ನೆಲೆ ಮಂಜು ಪಾವಗಡ ''ನನ್ನನ್ನು ಅಣ್ಣ ಎಂದು ಕೂಗಬೇಡಿ'' ಎಂದು ಹೇಳಿಬಿಟ್ಟರು. ಅಣ್ಣ ಎನ್ನುವುದು ಬೇಡ, ಮಂಜು ಎಂದು ಕರೆಯಿರಿ ಎಂದರು. ಅಷ್ಟಕ್ಕೂ, ಮಂಜು ಪಾವಗಡ ಅವರನ್ನು ಅಣ್ಣ ಎಂದಿದ್ದು ಯಾರು? ಯಾವ ಸಂದರ್ಭದಲ್ಲಿ ಅಣ್ಣ ಎಂದರು? ಮುಂದೆ ಓದಿ...
ಊಟ ಮಾಡುತ್ತಿದ್ದ ಸಮಯದಲ್ಲಿ ಮಂಜು ಎಂಟ್ರಿ
ಎಂಟನೇ ಆವೃತ್ತಿಯಲ್ಲಿ ಹತ್ತನೇ ಸ್ಪರ್ಧಿಯಾಗಿ ಮಂಜು ಪಾವಗಡ ಬಿಗ್ ಬಾಸ್ ಮನೆ ಪ್ರವೇಶ ಮಾಡಿದರು. ಇತರೆ ಸ್ಪರ್ಧಿಗಳು ಊಟ ಮಾಡುತ್ತಿದ್ದ ವೇಳೆ ಮಂಜು ಪಾವಗಡ ಎಂಟ್ರಿಯಾಗಿತ್ತು. ಮನೆಯೊಳಗೆ ಹೋದ ನಂತರ ಅದಾಗಲೇ ಅಲ್ಲಿದ್ದ ಸ್ಪರ್ಧಿಗಳ ಪರಿಚಯ ಮಾಡಿಕೊಂಡರು.
Bigg Boss Kannada 8 : ಬಿಗ್ ಮನೆ ಪ್ರವೇಶ ಮಾಡಿದ 17 ಸ್ಪರ್ಧಿಗಳ ವಿವರ
'ಊಟ ಮಾಡಿಕೊಳ್ಳಿ ಅಣ್ಣ'
ಆಗತಾನೆ ಮನೆಯೊಳಗೆ ಬಂದ ಮಂಜು ಪಾವಗಡ ಅವರನ್ನು ಟಿಕ್ಟಾಕ್ ಖ್ಯಾತಿಯ ಧನುಶ್ರೀ ''ನೀವು ಊಟ ಮಾಡಿಕೊಳ್ಳಿ ಅಣ್ಣ'' ಎಂದರು. ಅಣ್ಣ ಎಂದು ಕರೆದಿದ್ದಕ್ಕೆ ''ನೀವು ನನ್ನ ಅಣ್ಣ ಎಂದು ಕರೆಯಬೇಡಿ, ಮಂಜು ಎಂದು ಕೂಗಿ'' ಎಂದರು. ''ಮಂಜು ಅಂತಾನೆ ಹೇಳ್ತೇನೆ ಬಿಡಿ'' ಎಂದು ಧನುಶ್ರೀ ಉತ್ತರಿಸಿದರು.
ಲ್ಯಾಗ್ ಎಂಬ ಟ್ಯಾಗ್ ಲೈನ್ ಏಕೆ?
'ಮಜಾಭಾರತ' ಖ್ಯಾತಿಯ ಮಂಜು ಪಾವಗಡ ಅವರನ್ನು ಲ್ಯಾಗ್ ಮಂಜು ಎಂದು ಕರೆಯುತ್ತಾರೆ. ಲ್ಯಾಗ್ ಟ್ಯಾಗ್ಲೈನ್ ಏಕೆ ಎಂದು ಮನೆಯವರು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಮಂಜು ''ಡೈಲಾಗ್ ಪ್ರಾಕ್ಟೀಸ್ ಸಮಯದಲ್ಲಿ ನಾನು ಸ್ವಲ್ಪ ನಿಧಾನ, ಎಲ್ಲರೂ ಪ್ರಾಕ್ಟೀಸ್ ಆದ್ಮೇಲೆ ನಾನು ಮಾಡ್ತಿದ್ದೆ'' ಅದಕ್ಕೆ ಲ್ಯಾಗ್ ಮಂಜು ಅಂತಾರೆ ಎಂದು ತಿಳಿಸಿದರು.
ಬಿಗ್ ಬಾಸ್ ಮನೆಯಲ್ಲಿರುವ ಮಹಿಳಾ ಮಣಿಯರು
ಟಿಕ್ಟಾಕ್ ಸುಂದರಿ ಧನುಶ್ರೀ, ನಟಿ ಶುಭ ಪೂಂಜಾ, ಅಗ್ನಿಸಾಕ್ಷಿ ವೈಷ್ಣವಿ ಗೌಡ, ನಿಧಿ ಸುಬ್ಬಯ್ಯ, ಬ್ರಹ್ಮಗಂಟು ಖ್ಯಾತಿಯ ಗೀತಾ ಭಟ್, ಸೌತ್ ಇಂಡಿಯಾ ಮಿಸ್ ಖ್ಯಾತಿಯ ದಿವ್ಯ ಸುರೇಶ್, ಕಿರುತೆರೆ ಹಿರಿಯ ಕಲಾವಿದೆ ಚಂದ್ರಕಲಾ ಮೋಹನ್, ನಟಿ ದಿವ್ಯ ಉರುಡಗ ಹಾಗೂ ನಿರ್ಮಲಾ ಸತ್ಯ ಈ ಸಲ ದೊಡ್ಮನೆಯಲ್ಲಿರುವ ಮಹಿಳಾ ಮಣಿಯರು.