Don't Miss!
- News Namma Metro Blue Line: ಇತರ ಮಾರ್ಗಕ್ಕಿಂತಲೂ 'ನೀಲಿ' ಮಾರ್ಗದಲ್ಲಿ ವೇಗವಾಗಿ ಓಡಲಿವೆ ಮೆಟ್ರೋ, ಅಪ್ಡೇಟ್
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Sports CSK vs LSG IPL 2024: ಚೆನ್ನೈ vs ಲಕ್ನೋ ಹೈ-ವೋಲ್ಟೇಜ್ ಪಂದ್ಯದ ಟಾಸ್ ವರದಿ; ಆಡುವ 11ರ ಬಳಗ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೊದಲ ದಿನವೇ ಮಂಜು ಪಾವಗಡ ಹೃದಯ ಕದ್ದ ದಿವ್ಯ ಸುರೇಶ್
ಬಿಗ್ ಬಾಸ್ ಕನ್ನಡ ಎಂಟನೇ ಆವೃತ್ತಿ ಆರಂಭವಾಗಿದ್ದು, ಹದಿನೇಳು ಸ್ಪರ್ಧಿಗಳು ಈಗಾಗಲೇ ದೊಡ್ಮನೆ ಪ್ರವೇಶಿಸಿದ್ದಾರೆ. ಭಾನುವಾರ ಸಂಜೆ ಅದ್ಧೂರಿಯಾಗಿ ನಡೆದ ಓಪನಿಂಗ್ ಕಾರ್ಯಕ್ರಮದಲ್ಲಿ ಎಲ್ಲ ಸ್ಪರ್ಧಿಗಳು 'ಬಿಗ್' ಮನೆ ಸೇರಿದ್ದಾರೆ.
ಈ ಆವೃತ್ತಿಯಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ಗಳು, ಕಿರುತೆರೆ ಕಲಾವಿದರು ಹಾಗೂ ಸಿನಿಮಾ ನಟರು ಹೆಚ್ಚಿದ್ದಾರೆ. ಹದಿನೇಳು ಸ್ಪರ್ಧಿಗಳು, ನೂರು ದಿನ, ಅರ್ಧಕೋಟಿ ರೂಪಾಯಿಗಾಗಿ ಪೈಪೋಟಿ ನಡೆಸಲಿದ್ದಾರೆ. ಮಾರ್ಚ್ 1 ರಿಂದ ಪ್ರತಿದಿನದ ಸಂಚಿಕೆ ಪ್ರಸಾರವಾಗಲಿದೆ. ಸೋಮವಾರ ಎಪಿಸೋಡ್ಗೂ ಮುಂಚೆ ಪ್ರೋಮೋವೊಂದು ರಿಲೀಸ್ ಆಗಿದ್ದು, ಮೊದಲ ದಿನದಲ್ಲೇ ದಿವ್ಯ ಸುರೇಶ್ ಅವರು ಮಂಜುಪಾವಗಡ ಹೃದಯ ಕದ್ದಿದ್ದಾರೆ. ಮುಂದೆ ಓದಿ...
ಮಂಜು ಹೃದಯ ಕದ್ದ ದಿವ್ಯ ಸುರೇಶ್
ಬಿಗ್ ಬಾಸ್ ಕನ್ನಡ ಏಂಟನೇ ಆವೃತ್ತಿಯ ಮೊದಲ ದಿನದ ಪ್ರೋಮೋ ಬಿಡುಗಡೆಯಾಗಿದೆ. ಈ ಪ್ರೋಮೋ ಮಂಜು ಪಾವಗಡ ಮತ್ತು ದಿವ್ಯ ಸುರೇಶ್ ನಡುವಿನ ಸಂಭಾಷಣೆಯಾಗಿದ್ದು, ದಿವ್ಯ ಮಾತಿಗೆ ಮಜಾಭಾರತ ಮಂಜು ಫಿದಾ ಆಗಿದ್ದಾರೆ.
Bigg Boss Kannada 8 : ಬಿಗ್ ಮನೆ ಪ್ರವೇಶ ಮಾಡಿದ 17 ಸ್ಪರ್ಧಿಗಳ ವಿವರ
ನಿಮಗೋಸ್ಕರ ಏನು ಬೇಕಾದರು ಮಾಡ್ತೀನಿ
ಬಿಗ್ ಬಾಸ್ ಮನೆ ಪ್ರವೇಶ ಮಾಡಿರುವ ಸ್ಪರ್ಧಿಗಳ ತಮ್ಮ ಲಗೇಜ್ಗಳನ್ನು ಪಡೆದುಕೊಂಡು ಜೋಡಿಸಿಕೊಳ್ಳುತ್ತಿದ್ದಾರೆ. ಈ ಸಮಯದಲ್ಲಿ ದಿವ್ಯ ಸುರೇಶ್ ಅವರ ಬಳಿ ಬಂದ ಮಂಜು ಪಾವಗಡ, ''ನಿಮಗೆ ಏನು ಬೇಕು ಕೇಳಿ, ನಿಮಗೋಸ್ಕರ ಏನು ಬೇಕಾದರೂ ಮಾಡ್ತೀನಿ' ಅಂದರು. ಬಳಿಕ, ''ನಿಮ್ಮ ಕೈಯಲ್ಲಿ ಕೆಲಸ ಮಾಡಿಸಿ ಕಷ್ಟ ಕೊಡಲ್ಲ, ನಿಮ್ಮ ಕೈಗಳಿಗೆ ನೋವಾದರೆ ನನ್ನ ಮನಸ್ಸಿಗೆ ನೋವಾಗುತ್ತೆ'' ಎಂದುಬಿಟ್ಟರು.
ಏನೋ ಏನೋ ಆಗಿದೆ...
''ನಿಮ್ಮ ಕೈಗಳಿಗೆ ನೋವಾದರೆ ನನ್ನ ಮನಸ್ಸಿಗೆ ನೋವಾಗುತ್ತೆ'' ಎಂದು ದಿವ್ಯ ಸುರೇಶ್ ಅವರ ಮಾತು ಮಂಜು ಪಾವಗಡ ಹೃದಯ ಸ್ಪರ್ಶಿಸಿದೆ. ಇದೇ ಸಮಯಕ್ಕೆ ಬ್ಯಾಕ್ ಗ್ರೌಂಡ್ನಲ್ಲಿ ''ಏನೋ ಏನೋ ಆಗಿದೆ'' ಹಾಡು ಬೇರೆ ಹಾಕಿಬಿಟ್ಟಿದ್ದಾರೆ. ಇದರ ಮುಂದುವರಿದ ಭಾಗವನ್ನು ಇಂದಿನ ಸಂಚಿಕೆ ರಾತ್ರಿ 9.30ಕ್ಕೆ ನೋಡಬಹುದು.
ಯಾರು ಈ ದಿವ್ಯಾ ಸುರೇಶ್?
ದಿವ್ಯ ಸುರೇಶ್ ರೂಪದರ್ಶಿ, ಸಿನಿಮಾ ನಟಿ. 2017ರಲ್ಲಿ 'ಸೌತ್ ಇಂಡಿಯಾ ಮಿಸ್' ಪಟ್ಟ ಗೆದ್ದಿದ್ದಾರೆ. 2017ರಲ್ಲಿ ರಿಲೀಸ್ ಆಗಿದ್ದ ಕನ್ನಡ ಸಿನಿಮಾ 'ಹಿಲ್ಟನ್ ಹೌಸ್' ಚಿತ್ರದ ಮೂಲಕ ದಿವ್ಯ ಸುರೇಶ್ ಸ್ಯಾಂಡಲ್ವುಡ್ ಪ್ರವೇಶಿಸಿದ್ದರು. ನರೇಂದ್ರ ಬಾಬು ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಪ್ರಮುಖ ನಟಿಯಾಗಿ ಬಣ್ಣ ಹಚ್ಚಿದ್ದರು. 2019ರಲ್ಲಿ ತೆರೆಕಂಡ ''ಡಿಗ್ರಿ ಕಾಲೇಜ್'' ಮೂಲಕ ಟಾಲಿವುಡ್ ಇಂಡಸ್ಟ್ರಿ ಪ್ರವೇಶಿಸಿದರು.