Don't Miss!
- News ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನೇ ಗುರಿಯಾಗಿಸಿ ಐಟಿ ದಾಳಿ : ಡಿ ಕೆ ಶಿವಕುಮಾರ್ ಏನಂದ್ರು?
- Technology Poco: ವಿಶೇಷ ಟ್ಯಾಬ್ಲೆಟ್ ಲಾಂಚ್ ಮಾಡಲು ಸಿದ್ಧವಾಗ್ತಿದೆ ಪೊಕೊ! ಸಖತ್ ಸ್ಟೈಲಿಶ್..
- Lifestyle ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
BB9: ಎರಡನೇ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್ ಸದಸ್ಯರು ಇವರೇ
ಬಿಗ್ಬಾಸ್ ಸೀಸನ್ 9 ಮೊದಲ ವಾರ ಮುಗಿದು ಎರಡನೇ ವಾರ ಪ್ರಾರಂಭವಾಗಿದೆ. ಈಗಾಗಲೇ ಮನೆಯಿಂದ ಒಬ್ಬ ಸದಸ್ಯರು ಒಬ್ಬರು ಹೊರಗೆ ಹೋಗಿದ್ದಾರೆ.
ಇದೀಗ ಎರಡನೇ ವಾರ ಆರಂಭವಾಗಿದೆ. ಎರಡನೇ ವಾರ ಆರಂಭವಾಗುತ್ತಿದ್ದಂತೆ ಯಥಾವತ್ತು ನಾಮಿನೇಶನ್ ಪ್ರಕ್ರಿಯೆ ಸಹ ಆರಂಭವಾಗಿದೆ. ಮೊದಲ ವಾರ ನಾಮಿನೇಟ್ ಆಗಿದ್ದ ಐಶ್ವರ್ಯಾ ಪಿಸ್ಸೆ ಹೊರ ಹೋಗಿದ್ದಾರೆ. ಅದಾದ ಬಳಿಕ ಈಗ ಎರಡೇ ವಾರಾಂತ್ಯಕ್ಕೆ ಯಾರು ಹೊರ ಹೋಗಬೇಕು ಎಂಬ ಬಗ್ಗೆ ನಾಮಿನೇಶನ್ ನಡೆದಿದೆ.
ಬಿಗ್ಬಾಸ್ 16: ಸುಲಭವಿರಲ್ಲ ಟಾಸ್ಕ್ಗಳು, ಸ್ಪರ್ಧಿಗಳು ಯಾರ್ಯಾರು?
ಮೊದಲ ವಾರ ಬಿಗ್ಬಾಸ್ ಮನೆಯಿಂದ ಹೊರಗೆ ಹೋದ ಐಶ್ವರ್ಯಾ ಪಿಸ್ಸೆ ಮುಂದಿನ ವಾರಕ್ಕೆ ಆರ್ಯವರ್ಧನ್ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು. ಹಾಗಾಗಿ ಅವರನ್ನು ಹಾಗೂ ಇಮ್ಯುನಿಟಿ ಪಡೆದಿರುವ ವಿನೋದ್ ಗೊಬ್ರಗಾಲ ಅವರನ್ನು ಬಿಟ್ಟು ಉಳಿದವರನ್ನು ನಾಮಿನೇಟ್ ಮಾಡುವಂತೆ ಬಿಗ್ಬಾಸ್ ಸೂಚಿಸಿದ್ದರು.
ಬಿಗ್ಬಾಸ್ ಸೂಚನೆಯಂತೆ ಒಬ್ಬೊಬ್ಬರಾಗಿ ಕನ್ಫೆಶನ್ ರೂಂಗೆ ಹೋಗಿ ನಾಮಿನೇಟ್ ಮಾಡಿದರು. ಹೀಗೆ ನಾಮಿನೇಟ್ ಮಾಡಿದ ಹೆಚ್ಚು ಜನ ತೆಗೆದುಕೊಂಡಿದ್ದು ದರ್ಶ್ ಚಂದಪ್ಪ ಹೆಸರು. ಅದಾದ ಬಳಿಕ ಹೆಚ್ಚು ಜನ ಹೇಳಿದ ಹೆಸರು ನವಾಜ್. ವೈರಲ್ ಬಾಯ್ ಕೆಲಸ ಮಾಡುತ್ತಿಲ್ಲ, ಸರಿಯಾಗಿ ಎಲ್ಲರೊಟ್ಟಿಗೆ ಬೆರೆಯುತ್ತಿಲ್ಲ ಎಂಬುದು ಮುಖ್ಯ ಕಾರಣವಾಗಿ ನೀಡಿದರು.
ಬಳಿಕ ಮಯೂರಿ ಹೆಸರು ಹೆಚ್ಚು ಜನ ತೆಗೆದುಕೊಂಡರು. ಅವರು ಹೆಚ್ಚು ಬೆರೆಯುತ್ತಿಲ್ಲ ಎಂದು ಹಲವರು ದೂರಿದರು. ನಂತರ ಕೆಲವರು ಅಮೂಲ್ಯಾ, ಪ್ರಶಾಂತ್ ಸಂಬರ್ಗಿ, ದೀಪಿಕಾ ದಾಸ್ ಹಾಗೂ ನೇಹಾ ಗೌಡ ಹೆಸರು ತೆಗೆದುಕೊಂಡರು. ಆ ಬಳಿಕ ಕ್ಯಾಪ್ಟನ್ ವಿನೋದ್ ಅವರು ನೇರವಾಗಿ ಒಬ್ಬರನ್ನು ನಾಮಿನೇಟ್ ಮಾಡುವಂತೆ ಹೇಳಿದರು. ಕ್ಯಾಪ್ಟನ್ ವಿನೋದ್, ರೂಪೇಶ್ ರಾಜಣ್ಣ ಹೆಸರು ಹೇಳಿದರು.
ಅಲ್ಲಿಗೆ ಈ ವಾರ ಮನೆಯಿಂದ ಹೊರಗೆ ಹೋಗಲು, ದರ್ಶ್ ಚಂದಪ್ಪ, ನವಾಜ್, ಮಯೂರಿ, ಅಮೂಲ್ಯಾ, ದೀಪಿಕಾ, ಪ್ರಶಾಂತ್, ನೇಹಾ ಗೌಡ, ಆರ್ಯವರ್ಧನ್ ಹಾಗೂ ರೂಪೇಶ್ ರಾಜಣ್ಣ ಅವರುಗಳು ನಾಮಿನೇಟ್ ಆದರು. ಇಷ್ಟು ಜನರಲ್ಲಿ ಮನೆಯಿಂದ ಯಾರು ಹೊರಗೆ ಹೋಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.