BBK9:ರಾಕೇಶ್ – ಅಮೂಲ್ಯ ಅದೇನು ಮಾತಾಡ್ತಾರೆ..? ಆರ್ಯವರ್ಧನ್ ತಲೆಯಲ್ಲಿ ಹುಳ ಓಡಾಡ್ತಿದೆ!

By ಎಸ್ ಸುಮಂತ್

ರಾಕೇಶ್ ಅಡಿಗ ಬಿಗ್ ಬಾಸ್ ಓಟಿಟಿಯಿಂದ ಬಿಗ್ ಬಾಸ್ ಟಿವಿ ಸೀಸನ್‌ಗೆ ಎಂಟ್ರಿ ಪಡೆದಿದ್ದಾರೆ. ಕೊನೆಯಲ್ಲಿ ರಾಕೇಶ್‌ ಅವರೇ ಗೆಲ್ಲುತ್ತಾರೆ ಎಂಬ ಮಾತುಗಳು ಔಟ್ ಆದ ಮನೆ ಸದಸ್ಯರಿಂದಾನೇ ಬರುತ್ತಿದೆ. ಮನೆಯೊಳಗೂ ಎಲ್ಲರೊಟ್ಟಿಗೂ ತಾಳ್ಮೆಯಿಂದಾನೇ ನಡೆದುಕೊಳ್ಳುತ್ತಿದ್ದಾರೆ. ಆಟ ಆಡುವ ವಿಚಾರದಲ್ಲಿಯೂ ಅಷ್ಟೇ ಬೆಸ್ಟ್ ಪರ್ಫಾಮೆನ್ಸ್ ನೀಡುತ್ತಿದ್ದಾರೆ.

ಆದರೆ ಮನೆಯಲ್ಲಿ ಆರ್ಯವರ್ಧನ್ ಗುರೂಜಿಗೆ ರಾಕೇಶ್ ಹಾಗೂ ಅಮೂಲ್ಯ ಮೇಲೆ ಕಣ್ಣು ಬಿದ್ದಿದೆ. ಅದಕ್ಕೆ ಇಡೀ ಮನೆ ಮಾತಿನಿಂದ ಯುದ್ಧಕ್ಕೆ ತಿರುಗಿದೆ. ರಾಕೇಶ್‌ ಓಟಿಟಿಯಲ್ಲಿ ಸೋನು ಜೊತೆಗೆ ಕ್ಲೋಸ್ ಆಗಿದ್ದರು. ಟಿವಿ ಸೀಸನ್‌ನಲ್ಲಿ ಅಮೂಲ್ಯ ಜೊತೆಗೆ ಕ್ಲೋಸ್ ಆಗಿದ್ದಾರೆ. ಇದನ್ನು ಗುರೂಜಿಗೆ ಸಹಿಸಲು ಆಗುತ್ತಿಲ್ಲ.

ಆರ್ಯವರ್ಧನ್‌ಗೆ ಇರುವ ಅನುಮಾನವೇನು..?

ಆರ್ಯವರ್ಧನ್‌ಗೆ ಇರುವ ಅನುಮಾನವೇನು..?

ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಮತ್ತು ಅಮೂಲ್ಯ ತುಂಬಾನೇ ಆತ್ಮೀಯರಾಗಿ ಇರುತ್ತಾರೆ. ಎಲ್ಲಿಯೇ ಹೋದರೂ, ಎಲ್ಲಿಯೇ ಕೂತರು ಇಬ್ಬರು ಒಟ್ಟೊಟ್ಟಿಗೆನೇ ಇರುತ್ತಾರೆ. ಇದನ್ನು ಆರ್ಯವರ್ಧನ್ ಕಡೆಯಿಂದ ಸಹಿಸಿಕೊಳ್ಳಲು ಆಗುತ್ತಿಲ್ಲ. ಸೋಫಾ ಮೇಲೆ ಕೂತಿದ್ದಾಗ ಆರ್ಯವರ್ಧನ್ ತಮ್ಮ ಅನುಮಾನವನ್ನು ಹೊರ ಹಾಕಿದ್ದಾರೆ. "77 ದಿನವಾಗಿದೆ. ನೀವಿಬ್ಬರು ಸಿಕ್ಕಾಪಟ್ಟೆ ಮಾತನಾಡುತ್ತಾ ಇರುತ್ತೀರಾ. ಏನು ಅಂಥದ್ದು ಬಿಟ್ಟಿದ್ದೀರಾ ಅಂತ ಮಾತನಾಡುತ್ತೀರಾ" ಎಂದು ಪ್ರಶ್ನಿಸಿದ್ದಾರೆ.

ಗುರೂಜಿ ಮೇಲೆ ರಾಕೇಶ್ ಕೂಡ ಬೇಸರ

ಗುರೂಜಿ ಮೇಲೆ ರಾಕೇಶ್ ಕೂಡ ಬೇಸರ

ಆರ್ಯವರ್ಧನ್ ಮಾತಿಗೆ ರಾಕೇಶ್ ಬೇಸರ ಮಾಡಿಕೊಂಡಿದ್ದಾರೆ. "ಯಾರಾದ್ರೂ ಏನಾದರೂ ಅಂದರೆ ತಲೆಕೆಡಿಸಿಕೊಳ್ಳದೆ ಹೇಗೆ ಬದುಕುವುದು" ಎಂದಿದ್ದಾರೆ. ಅಮೂಲ್ಯ ಕೂಡ ಗರಂ ಆಗಿದ್ದು, "ನೀವೂ ನಾಳೆಯಿಂದ ಯಾಕೆ ನಮ್ಮ ಜೊತೆಗೆ ಬಂದು ಕುಳಿತುಕೊಳ್ಳಬಾರದು. ಈ ಥರದ್ದೆಲ್ಲಾ ಬೇಕಾದರೆ ರಾಕಿ ಹತ್ರ ಕೇಳಿ. ನನ್ನ ಮುಂದೆ ಮಾತ್ರ ಕೇಳಬೇಡಿ ಗುರುಗಳೇ. ಈ ಥರ ಆಲೋಚನೆ ಇರುವವರ ಬಳಿ ನಂಗೆ ಮಾತನಾಡೋದಕ್ಕೂ ಇಷ್ಟವಿಲ್ಲ" ಎಂದಿದ್ದಾರೆ.

ಪದೇ ಪದೆ ಅದೆ ಸಿನಿಮಾ ನೋಡೋದಕ್ಕೆ ಆಗುತ್ತಾ..?

ಪದೇ ಪದೆ ಅದೆ ಸಿನಿಮಾ ನೋಡೋದಕ್ಕೆ ಆಗುತ್ತಾ..?

ರಾಕೇಶ್ ಹಾಗೂ ಅಮೂಲ್ಯ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಜೋರು ಚರ್ಚೆಯಾಗುತ್ತಿದೆ. ಅಮೂಲ್ಯ ಕೊಟ್ಟ ಉತ್ತರಕ್ಕೆ ಗುರೂಜಿ ಕೂಡ ಟಾಂಗ್ ಕೊಟ್ಟಿದ್ದಾರೆ. "ಇವರೊಬ್ಬರ ಹತ್ರಾನೇ ಮೀಟಿಂಗ್ ನಡೆಯುತ್ತೆ. ಬೇರೆ ಯಾರ ಹತ್ರಾನು ಮೀಟಿಂಗ್ ಆಗಲ್ಲ. ಒಂದು ಪಿಕ್ಚರ್ ಬಗ್ಗೆ ಯಾರಾದರೂ ಸಖತ್ತಾಗಿದೆ, ಸೂಪರ್ ಆಗಿದೆ ಎಂದರೆ ಹೋಗಬಹುದು. ಅದೇ ಆ ಸಿನಿಮಾಗೆ ಯಾರಾದರೂ ಟಿಕೆಟ್ ತೆಗೆದುಕೊಂಡು ಕೂರುತ್ತಾರಾ..? ಇರುವ ವಿಚಾರವನ್ನು ನೇರವಾಗಿ ಕೇಳಿದೆ. ಇದು ನಿಮ್ಮ ಹುಟ್ಟುಗುಣ" ಎಂದಿದ್ದಾರೆ.

ರೂಪೇಶ್‌ಗೂ ಅವಾಜ್ ಹಾಕಿದ ಗುರೂಜಿ

ರೂಪೇಶ್‌ಗೂ ಅವಾಜ್ ಹಾಕಿದ ಗುರೂಜಿ

ಗುರೂಜಿ ಮತ್ತು ಅಮೂಲ್ಯ ನಡುವೆ ಮಾತುಕತೆ ನಡೆಯುತ್ತಲೆ ಇತ್ತು. ಆ ಕಡೆ ಅಮೂಲ್ಯಾನು ಸೋಲುತ್ತಿಲ್ಲ ಈ ಕಡೆ ಗುರೂಜಿಯೂ ಸುಮ್ಮನೆ ಆಗುತ್ತಿಲ್ಲ. ಮನೆಯವರಿಗೆಲ್ಲಾ ಇದೊಂಥರ ಬೇಸರದ ಸಂಗತಿಯೂ ಆಗಿತ್ತು. ರೂಪೇಶ್ ನಡುವೆ ಸಮಾಧಾನ ಮಾಡಲು ಯತ್ನಿಸಿದರು. "ಅಲ್ಲ ಗುರುಗಳೇ ನಾವೂ ಮಾತನಾಡುತ್ತೀವಿ. ಅದನ್ನು ತಪ್ಪು ಅನ್ನೋದಕ್ಕೆ ಆಗುತ್ತಾ" ಎಂದು ರೂಪೇಶ್ ಶೆಟ್ಟಿ ಕೇಳಿದರೆ, ಗುರೂಜಿ "ನಿಮ್ಮನ್ನು ಮಧ್ಯದಲ್ಲಿ ಬನ್ನಿ ಎಂದ್ನಾ" ಎಂದು ಮುಖಕ್ಕೆ ಹೊಡೆದವರಂತೆ ಹೇಳಿದ್ದಾರೆ. ಆ ಕಡೆ ರೂಪೇಶ್ ರಾಜಣ್ಣ ಕೂಡ ಸಮಾಧಾನ ಮಾಡಲು ಯತ್ನಿಸಿದ್ದಾರೆ. ಆದರೂ ಸಮಾಧಾನವಾಗಲೇ ಇಲ್ಲ. ಕಡೆಗೆ ರಾಜಣ್ಣ ಅವರೇ ಸೋಫಾ ಬಳಿ ಬಂದು ಅವರನ್ನು ಕರೆದುಕೊಂಡು ಹೋಗಿದ್ದಾರೆ.

More from Filmibeat

English summary
Bigg Boss Kannada 9 Dec 12th Episode Aryavardhan doubt for Rakesh Amulya, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X