twitter
    For Quick Alerts
    ALLOW NOTIFICATIONS  
    For Daily Alerts

    BBK9: ರೂಪೇಶ್ ಶೆಟ್ಟಿಯ ಪ್ರಾರ್ಥನೆ ದೇವರಿಗೆ ಕೇಳಿಸಲಿಲ್ಲ.. ಆರ್ಯವರ್ಧನ್ ಗುರೂಜಿ ಔಟ್..!

    By ಎಸ್ ಸುಮಂತ್
    |

    ಬಿಟ್ಟು ಹೋಗುವವರನ್ನು ತಬ್ಬಿ, ಕಣ್ಣೀರಿಟ್ಟು ಕಳುಹಿಸುವುದು ವಾಡಿಕೆ. ಆದರೆ ಪಕ್ಕನೆ ಮಿಸ್ ಆಗುವವರನ್ನು, ಅನಿರೀಕ್ಷಿತವಾಗಿ ಪಕ್ಕನೆ ಮಾಯವಾಗುವವರನ್ನು ಕಂಡಿದ್ದೇವೆ. ಏನೆ ಆಗಲಿ ಬಿಗ್ ಬಾಸ್ ಮನೆಯಿಂದ ಹೋಗುವುದು ಅನಿವಾರ್ಯ. ಫಿನಾಲೆಯಲ್ಲಿ ಐದೇ ಸದಸ್ಯರಿಗೆ ಜಾಗ ಇರುವುದರಿಂದ ಒಬ್ಬರು ಹೋಗಲೇಬೇಕಾಗಿದೆ.

    ಈ ಎಲಿಮಿನೇಷನ್ ಪ್ರಕ್ರಿಯೆ ಇನ್ನೊಂದು ಅರ್ಧಗಂಟೆಯಲ್ಲಿ ಶುರುವಾಗಲಿದೆ. ಎಲ್ಲರೂ ತಮ್ಮ ತಮ್ಮ ವಸ್ತುಗಳನ್ನು ಪ್ಯಾಕ್ ಮಾಡಿ ಸ್ಟೋರ್ ರೂಮಿನಲ್ಲಿಡಿ ಎಂದಾಗ ಎಲ್ಲರೂ ಶಾಕ್ ಆಗಿದ್ದಾರೆ. ಎಲ್ಲರೂ ತಬ್ಬಿಕೊಂಡು, ಒಬ್ಬರಿಗೊಬ್ಬರು ಆಲ್ ದಿ ಬೆಸ್ಟ್ ಹೇಳಿದ್ದಾರೆ. ಬಿಗ್ ಬಾಸ್ ಹೇಳಿದಂತೆ ತಮ್ಮ ವಸ್ತುಗಳನ್ನೆಲ್ಲಾ ತಂದು ಸ್ಟೋರ್ ರೂಮಿನಲ್ಲಿಟ್ಟು, ಗಟ್ಟಿ ಮನಸ್ಸಲ್ಲಿ ಸಿದ್ದರಾಗಿದ್ದಾರೆ.

    BBK9: ಆಸೆ ಹೇಳಪ್ಪ ಅಂದ್ರೆ BBK9: ಆಸೆ ಹೇಳಪ್ಪ ಅಂದ್ರೆ "ನಾನೇ ಬಿಗ್ ಬಾಸ್ ಗೆಲ್ಲಬೇಕು" ಎಂದ ಆರ್ಯವರ್ಧನ್!

    ಗಾರ್ಡನ್ ಏರಿಯಾಗೆ ಬಂದ ಮೇಲೆ ಏನಾಯ್ತು..?

    ಗಾರ್ಡನ್ ಏರಿಯಾಗೆ ಬಂದ ಮೇಲೆ ಏನಾಯ್ತು..?

    ಮನೆ ಮಂದಿಯೆಲ್ಲಾ ಗಾರ್ಡನ್ ಏರಿಯಾದ ಮಬ್ಬು ಬೆಳಕಲ್ಲಿ ಬಂದು ನಿಂತಿದ್ದಾರೆ. ಎಷ್ಟೆ ಸಮಾಧಾನ ಮಾಡಿಕೊಂಡರು ಎಲ್ಲರ ಮನಸ್ಸಲ್ಲೂ ಗಾಬರಿಯಿದ್ದದ್ದು ಕಂಡು ಬಂದಿತ್ತು. ತಮ್ಮ ವಸ್ತುಗಳು ಏನೇ ಮಿಸ್ಸಾದರೂ ವಾಪಾಸ್ ಕಳುಹಿಸಿಕೊಡಿ ಎಂದು ಎಲ್ಲರೂ ಅವರವರೇ ಸಮಾಧಾನ ಮಾಡಿಕೊಂಡರು. ಸೋಫಾ ಮೇಲೆ ಕೂತಿದ್ದಾಗ ಲೈಟ್ಸ್ ಆಫ್ ಆಯಿತು. ಮನೆಯ ಸದಸ್ಯರೆಲ್ಲಾ ಗಾರ್ಡನ್ ಏರಿಯಾಗೆ ಬಂದು ಸಾಲಾಗಿ ನಿಲ್ಲಿ ಎಂದು ಬಿಗ್ ಭಾಸ್ ಸೂಚನೆ ನೀಡಿತು. ಅದರಂತೆ ಎಲ್ಲರು ಬಂದು ನಿಂತರು. ಆಗ ಮತ್ತೆ ಬಿಗ್ ಬಾಸ್ ಸೂಚನೆ ನೀಡಿತು.

    ಎಲಿಮಿನೇಷನ್ ನಡೆದದ್ದು ಹೇಗೆ..?

    ಎಲಿಮಿನೇಷನ್ ನಡೆದದ್ದು ಹೇಗೆ..?

    ಬಿಗ್ ಬಾಸ್ ಆಟದ ಸೂಚನೆಯನ್ನು ನೀಡಿತ್ತು. ಮಧ್ಯರಾತ್ರಿಯಾದ ಮೇಲೆ ಒಬ್ಬ ಸದಸ್ಯ ವೇದಿಕೆ ಮೇಲೆರಬೇಕು. ಮ್ಯೂಸಿಕ್ ಆನ್ ಆಗುತ್ತೆ. ಸಾಕಷ್ಟು ಸಲ ಸದಸ್ಯ ಮೇಲೆ ಬರುತ್ತಾನೆ. ಮ್ಯೂಸಿಕ್ ಮುಗಿದ ಮೇಲೆ ಆ ಸದಸ್ಯ ಕಾಣಿಸಿಕೊಂಡರೆ ಬಂದು ತಮ್ಮ ಸ್ಥಾನದಲ್ಲಿ ನಿಲ್ಲಬೇಕು ಹೀಗೆ ಒಬ್ಬರಾದ ಮೇಲೆ ಒಬ್ಬರು ಹೋಗಬೇಕು ಎಂದು ಬಿಗ್ ಬಾಸ್ ಸೂಚನೆ ನೀಡಿತು. ಮೊದಲಿಗೆ ರಾಕಿ ನಿಂತಾಗ, ರಾಕಿಗೂ ಭಯ ಶುರುವಾಗಿತ್ತು. ಮ್ಯೂಸಿಕ್ ಆನ್ ಆಯ್ತು. ಎಲ್ಲರ ಮನಸ್ಸಲ್ಲೂ ದಿಗಿಲು. ಎರಡು ಮೂರು ಸಲ ಮೇಲೆ ಬರುವುದು, ಕೆಳಗೆ ಹೋಗುವುದನ್ನು ಮಾಡಲಾಯ್ತು. ಮ್ಯೂಸಿಕ್ ಆಫ್ ಆದರೂ ರಾಕಿ ವೇದಿಕೆಯಲ್ಲಿಯೇ ಕಂಡಿದ್ದಕ್ಕೆ ಸೇಫ್.

    ಟೆನ್ಶನ್ ಆದರೂ ಬೇಗ ಮುಗಿಯಲಿಲ್ಲ

    ಟೆನ್ಶನ್ ಆದರೂ ಬೇಗ ಮುಗಿಯಲಿಲ್ಲ

    ಈ ರೀತಿಯಾದ ಆಟ ಎರಡೂ ಬಾರಿ ನಡೆಯಿತು. ಆರ್ಯವರ್ಧನ್, ದಿವ್ಯಾ, ರಾಜಣ್ಣ, ದೀಪಿಕಾ ಹಾಗೂ ರೂಪೇಶ್ ಶೆಟ್ಟಿ ಎರಡು ಬಾರಿಯೂ ಹೊರಗೆ ಬಂದರು. ಮೂರನೇ ರೌಂಡ್ ಶುರುವಾಯ್ತು. ಆತಂಕವೇನು ಕಡಿಮೆಯಾಗಿರಲಿಲ್ಲ. ಬಿಗ್ ಬಾಸ್ ಕೂಡ ಅಷ್ಟೇ ಟೆನ್ಶನ್ ಕೊಡುತ್ತಾ ಆಟವಾಡಿಸುತ್ತಾ ಇದ್ದರು. ದಿವ್ಯಾ ಈ ಬಾರಿ ನಾನು ಹೋಗುತ್ತೀನಿ ಅಂತ ಹೇಳಿ ಎಲ್ಲರಿಗೂ ವೇದಿಕೆ ಮೇಲೆಯೇ ನಿಂತು ಆಲ್ ದಿ ಬೆಸ್ಟ್ ಹೇಳಿದರು. ಆದರೆ ದಿವ್ಯಾ ಸೇವ್ ಆದರು.

    ರಾಕೇಶ್‌ಗೆ ಇತ್ತು ನಂಬಿಕೆ

    ರಾಕೇಶ್‌ಗೆ ಇತ್ತು ನಂಬಿಕೆ

    ರೂಪೇಶ್ ಶೆಟ್ಟಿ ವೇದಿಕೆ ಮೇಲೆ ನಿಂತರು. ಅನ್ ಎಕ್ಸ್ಪೆಕ್ಟೆಡ್ ಟ್ವಿಸ್ಟ್ ಅಂತ ಹೇಳಿದ್ರಲ್ಲ ಅದು ಇದೆ ಆಗಿರಬೇಕು. ನಾನು ಹೋದರೆ ಎಲ್ಲರೂ ಮಿಸ್ ಮಾಡಿ. ನಾನು ಮತ್ತೆ ಬಾರದೆ ಇದ್ದರೆ ಲವ್ ಯೂ ಆಲ್ ಎಂದಿದ್ದಾರೆ. ಆಗ ರಾಕಿ, ಯಾವುದೇ ಕಾರಣಕ್ಕೂ ನೀನು ಹೋಗಲ್ಲ ಬಾರೋ ಕರ್ಮ ನೀನು ಎಂದಿದ್ದಾರೆ. ಎಷ್ಟೇ ಸಮಯ ಆದರೂ ಬರದೆ ಇದ್ದದ್ದನ್ನು ಕಂಡು ಆರ್ಯವರ್ಧನ್ ಕಣ್ಣೀರು ಹಾಕಿದ್ದಾರೆ. ಬಳಿಕ ರೂಪೇಶ್ ವಾಪಾಸ್ಸಾಗಿದ್ದಾರೆ.

    ಆಯವರ್ಧನ್ ಔಟ್

    ಆಯವರ್ಧನ್ ಔಟ್

    ಮೂರನೇ ರೌಂಡ್‌ನಲ್ಲಿ ಆರ್ಯವರ್ಧನ್ ಗುರೂಜಿ ಔಟ್ ಆಗಿದ್ದಾರೆ. ನಂಬರ್ ಮಾತ್ರ ಮೇಲೆ ಬಂದಿದೆ. ರೂಪೇಶ್ ಶೆಟ್ಟಿ ಎಷ್ಟು ಜೋರಾಗಿ ಕೂಗಿದರು ಬರಲೇ ಇಲ್ಲ. ಅಪ್ಪಾಜಿ, ಗುರೂಜಿ ಅಂತ ಕಿರುಚಿದರೂ ಬರಲಿಲ್ಲ. ರೂಪೇಶ್ ಶೆಟ್ಟಿ ಅದಕ್ಕೂ ಮುನ್ನ ಸಾಕಷ್ಟು ಸಲ ದೇವರನ್ನು ಬೇಡಿಕೊಂಡಿದ್ದರು. ಕಣ್ಣೀರು ಹಾಕಿದ್ದರು.

    English summary
    Bigg Boss Kannada 9 December 27th Episode About Aryavardhan Elimination. Here is the details.
    Tuesday, December 27, 2022, 23:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X