Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Bigg Boss Kannada 9 Grand Finale Live: ರೂಪೇಶ್ ಶೆಟ್ಟಿ ವಿನ್ನರ್, ರಾಕೇಶ್ ಅಡಿಗಗೆ ನಿರಾಸೆ
ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ ಕನ್ನಡದ 9 ನೇ ಸೀಸನ್ ಕೆಲವೇ ಗಂಟೆಗಳಲ್ಲಿ ಅಂತ್ಯವಾಗಲಿದೆ. ಗ್ರ್ಯಾಂಡ್ ಫಿನಾಲೆ ಆರಂಭವಾಗಿದ್ದು, ಈಗಾಗಲೇ ಫಿನಾಲೆಯ ಪ್ರೋಮೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಬಿಗ್ಬಾಸ್ ಒಟಿಟಿ ಎಂಬ ಮೊದಲ ಪ್ರಯೋಗದ ಯಶಸ್ಸಿನ ಬೆನ್ನಲ್ಲೆ ಸೆಪ್ಟೆಂಬರ್ 24 ರಂದು ಆರಂಭವಾದ ಬಿಗ್ಬಾಸ್ ಕನ್ನಡ ಸೀಸನ್ 09 ಕೆಲವು ಕಾರಣಗಳಿಗಾಗಿ ಗಮನ ಸೆಳೆದಿತ್ತು. ಈ ಹಿಂದೆ ಬಿಗ್ಬಾಸ್ನಲ್ಲಿ ಪಾಲ್ಗೊಂಡಿದ್ದ ಅನುಭವಿ ಸ್ಪರ್ಧಿಗಳು ಹಾಗೂ ಬಿಗ್ಬಾಸ್ ಒಟಿಟಿಯಲ್ಲಿ ಪಾಲ್ಗೊಂಡು ಗಮನ ಸೆಳೆದ ನಾಲ್ವರು ಸ್ಪರ್ಧಿಗಳು ಹಾಗೂ ಮೊದಲ ಬಾರಿ ಬಿಗ್ಬಾಸ್ಗೆ ಬಂದ ಕೆಲವರನ್ನು ಒಟ್ಟಿಗೆ ಮನೆಯಲ್ಲಿ ಸೇರಿಸಲಾಗಿತ್ತು.
ಪ್ರತಿಬಾರಿಯಂತೆ ಜಗಳ, ಪ್ರೀತಿ, ಅಳು, ನಗು, ಕುಣಿತ, ಹಾಡು, ತರ್ಲೆ, ಪ್ರೀತಿ, ಸ್ನೇಹ, ಯುಕ್ತಿ, ಕುಯುಕ್ತಿಗಳು ಬಿಗ್ಬಾಸ್ ಮನೆಯಲ್ಲಿ ನೋಡಲು ಸಿಕ್ಕಿತು. ಎಲ್ಲ ಅಡ್ಡಿ-ಆತಂಕಗಳನ್ನು ಮೀರಿ ಕೆಲವು ಸ್ಪರ್ಧಿಗಳು ಬಿಗ್ಬಾಸ್ನ ಫಿನಾಲೆ ವರೆಗು ಬಂದಿದ್ದು ಈ ಬಾರಿಯ ವಿನ್ನರ್ ಯಾರಾಗಲಿದ್ದಾರೆ ಎಂಬುದು ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ.
-
ರೂಪೇಶ್ ಶೆಟ್ಟಿಗೆ ಐವತ್ತು ಲಕ್ಷ ರುಪಾಯಿ ಬಹುಮಾನವನ್ನು ಸುದೀಪ್ ನೀಡಿದರು. ಜೊತೆಗೆ ಇಂಡಸ್ ಸ್ಟೀಲ್ಸ್ನವರು ಹತ್ತು ಲಕ್ಷ ಬಹುಮಾನ ಸಹ ನೀಡಿದರು.
-
ರಾಕೇಶ್ ಅಡಿಗ ಅವರಿಗೆ ಹನ್ನೆರಡು ಲಕ್ಷ ಬಹುಮಾನ ದೊರೆತಿದೆ. ಏಳು ಲಕ್ಷ ಬಹುಮಾನದ ಜೊತೆಗೆ ಅತ್ಯುತ್ತಮ ನಾಯಕ ಎಂಬ ಬಿರುದಿನ ಜೊತೆಗೆ ಐದು ಲಕ್ಷ ಬಹುಮಾನ ಒಟ್ಟು ಹನ್ನೆರಡು ಲಕ್ಷ ನೀಡಿದ್ದಾರೆ.
-
ರೂಪೇಶ್ ಶೆಟ್ಟಿ ಅವರು ಕಿಚ್ಚ ಸುದೀಪ್ ಸೇರಿದಂತೆ ತಮಗೆ ಮತ ಹಾಕಿದ ವೀಕ್ಷಕರು ಹಾಗೂ ಕುಟುಂಬದವರಿಗೆ, ಇತರೆ ಸ್ಪರ್ಧಿಗಳಿಗೆ, ತುಳು ಜನರಿಗೆ ಎಲ್ಲರಿಗೂ ಧನ್ಯವಾದ ಹೇಳಿದರು. ರಾಕೇಶ್ ಅಡಿಗ ಸೋತಿದ್ದರೂ ಸಹ ಅದನ್ನು ಧನಾತ್ಮಕವಾಗಿ ತೆಗೆದುಕೊಂಡರು.
-
ಬಿಗ್ಬಾಸ್ ಕನ್ನಡ ಸೀಸನ್ 09 ರ ವಿನ್ನರ್ ಆಗಿದ್ದಾರೆ ರೂಪೇಶ್ ಶೆಟ್ಟಿ. ಸುದೀಪ್ ಅವರು ರಾಕೇಶ್ ಹಾಗೂ ರೂಪೇಶ್ ಇಬ್ಬರ ಕೈಯನ್ನು ಹಿಡಿದುಕೊಂಡು ಕೊನೆಗೆ ಎತ್ತಿದ್ದು ರೂಪೇಶ್ ಶೆಟ್ಟಿ.
-
ಬಹುತೇಕ ಸ್ಪರ್ಧಿಗಳು ಅದರಲ್ಲಿಯೂ ಸಾನ್ಯಾ ಹೊರತಾಗಿ ಉಳಿದ ಮಹಿಳಾ ಸ್ಪರ್ಧಿಗಳೆಲ್ಲರೂ ರಾಕೇಶ್ ಅಡಿಗ ಗೆಲ್ಲಬೇಕು ಎಂದಿದ್ದಾರೆ. ಆರ್ಯವರ್ಧನ್, ರೂಪೇಶ್ ರಾಜಣ್ಣ, ಪ್ರಶಾಂತ್ ಸಂಬರ್ಗಿ ಅವರು ಮಾತ್ರವಷ್ಟೆ ರೂಪೇಶ್ ಶೆಟ್ಟಿ ಗೆಲ್ಲಬೇಕು ಎಂದು ಹೇಳಿದ್ದಾರೆ. ಇನ್ನುಳಿದ ಎಲ್ಲ ಸ್ಪರ್ಧಿಗಳು ರಾಕೇಶ್ ಅವರೇ ಗೆಲ್ಲಬೇಕು ಎಂದಿದ್ದಾರೆ.
-
ಫೈನಲ್ಗೆ ರೂಪೇಶ್ ಶೆಟ್ಟಿ ಹಾಗೂ ರಾಕೇಶ್ ಅಡಿಗ ಬಂದಿದ್ದಾರೆ. ನಟ ಸುದೀಪ್ ಈಗ ಬಿಗ್ಬಾಸ್ ಮನೆಯ ಒಳಗೆ ಹೋಗಿ ಇಬ್ಬರು ಫೈನಲಿಸ್ಟ್ಗಳನ್ನು ಹೊರಗೆ ಕರೆತಂದಿದ್ದಾರೆ.
-
ತಮ್ಮ ಜರ್ನಿಯ ವಿಡಿಯೋ ನೋಡಿ ಸ್ವತಃ ಸುದೀಪ್ ಭಾವುಕರಾದರು. ವಿಡಿಯೋದಲ್ಲಿ ಅವರು ತೋರಿಸಿದಷ್ಟು ನಾನು ಫರ್ಪೆಕ್ಟ್ ಅಲ್ಲ ಎಂದು ಭಾವುಕರಾಗಿ ಕಣ್ಣೀರು ಹಾಕಿದರು.
-
ಸುದೀಪ್ ಅವರ ಪಯಣದ ವಿಡಿಯೋವನ್ನು ವಿಶೇಷವಾಗಿ ಬಿಗ್ಬಾಸ್ ಪ್ರದರ್ಶಿಸಿದರು. ಅವರ ಭಿನ್ನ ಸ್ಟೈಲ್, ಮಾತು, ನಗು, ಕೋಪ, ಬುದ್ಧಿವಾದ ಹೇಳಿದ್ದುದ್ದನ್ನೆಲ್ಲ ಸೇರಿಸಿ ವಿಡಿಯೋವನ್ನು ಪ್ರೆಸೆಂಟ್ ಮಾಡಲಾಯಿತು. ತಮ್ಮ ಪಯಣದ ವಿಡಿಯೋ ನೋಡಿ ಸ್ವತಃ ಸುದೀಪ್ ಭಾವುಕರಾದರು.
-
ಒಟಿಟಿಯಿಂದಲೂ ಜೊತೆಗೆ ಸಾಗಿ ಬಂದ ನಟ ರಾಕೇಶ್ ಅಡಿಗ ಹಾಗೂ ರೂಪೇಶ್ ಶೆಟ್ಟಿ ಅವರುಗಳು ಬಿಗ್ಬಾಸ್ ಕನ್ನಡ ಒಂಬತ್ತನೇ ಸೀಸನ್ ನ ಫೈನಲಿಸ್ಟ್ ಆಗಿದ್ದಾರೆ. ಆತ್ಮೀಯ ಗೆಳೆಯರಾಗಿದ್ದವರಿಬ್ಬರು ಫೈನಲ್ಗೆ ಬಂದಿರುವುದು ಅಪರೂಪ.
-
ದೀಪಿಕಾ ದಾಸ್ಗೆ ಡಾ ಸಾಯಿಲ್ ಕಡೆಯಿಂದ ಐದು ಲಕ್ಷ ರುಪಾಯಿ ಬಹುಮಾನ ನೀಡಲಾಯಿತು.
-
ದೀಪಿಕಾ ದಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ರೂಪೇಶ್ ಶೆಟ್ಟಿ ಹಾಗೂ ರಾಕೇಶ್ ಅಡಿಗ ಇಬ್ಬರೂ ಬಿಗ್ಬಾಸ್ ಕನ್ನಡ ಸೀಸನ್ ನ ಫೈನಲಿಸ್ಟ್ಗಳಾಗಿದ್ದಾರೆ.
-
ರೂಪೇಶ್ ರಾಜಣ್ಣ ಅವರು ಬಿಗ್ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಕನ್ನಡಪರ ಹೋರಾಟಗಾರರಾಗಿ ಬಿಗ್ಬಾಸ್ ಮನೆಯ ಒಳಗೆ ಪ್ರವೇಶಿಸಿದ್ದ ರೂಪೇಶ್ ರಾಜಣ್ಣ ಕೊನೆಯ ವರೆಗೂ ಚೆನ್ನಾಗಿ ಆಡಿ ಈಗ ಮನೆಯಿಂದ ಹೊರಗೆ ಬಂದಿದ್ದಾರೆ.
-
ಒಟ್ಟು ಎರಡು ಕೋಟಿಗೂ ಹೆಚ್ಚು ಮತಗಳನ್ನು ಜನ ಬಿಗ್ಬಾಸ್ಗೆ ಮಾಡಿದ್ದಾರೆ. ಉಳಿದ ನಾಲ್ಕು ಜನ ಪ್ರತಿಯೊಬ್ಬರೂ ಸಹ ಲಕ್ಷಾಂತರ ಮತಗಳನ್ನು ಪಡೆದಿದ್ದಾರೆ. ಒಟ್ಟು ಐದು ಜನರಿಗೆ ಎರಡು ಕೋಟಿಗೂ ಹೆಚ್ಚು ಮತಗಳು ಬಂದಿವೆ.
-
ಬಿಗ್ಬಾಸ್ ಮನೆಯಲ್ಲಿ ಎಲ್ಲರ ಮಾತು ಕೇಳುವವರು ಯಾರು? ಕೇಳದವರು ಯಾರು ಎಂಬ ಬಗ್ಗೆ ಚರ್ಚೆ ನಡೆಯಿತು. ಸ್ಪರ್ಧಿಗಳ ಪ್ರಕಾರ, ಎಲ್ಲರ ಮಾತು ಕೇಳುವವರು ಯಾರೆಂಬ ಪ್ರಶ್ನೆಗೆ ಸಾಮೂಹಿಕವಾಗಿ ರಾಕೇಶ್ ಅಡಿಗ ಹೆಸರು ಹೇಳಿದರು. ಯಾರ ಮಾತೂ ಕೇಳಿಸಿಕೊಳ್ಳದವರು ಎಂಬ ಪ್ರಶ್ನೆಗೆ ರೂಪೇಶ್ ರಾಜಣ್ಣ ಎಂಬ ಉತ್ತರ ಬಂತು.
-
ವಿನೋದ್ ಗೊಬ್ರಗಾಲ ಅವರು ಭಿನ್ನ ಶೈಲಿಯಲ್ಲಿ ಸೀಸನ್ 09 ರ ವಾರ್ತಾ ವಿಶೇಷಗಳನ್ನು ಹೇಳಿದರು. ಆರ್ಯವರ್ಧನ್ 'ಲವ್ ಯು ಚಂದ್ರ' ಹೆಸರಿನ ಹೋಟೆಲ್ ಮಾಡಿದ್ದಾರೆ ಎಂದು ಹೇಳಿ, ಬಿಗ್ಬಾಸ್ನ ಸ್ಪರ್ಧಿಗಳನ್ನು ಆ ಹೋಟೆಲ್ ಜೊತೆಗೆ ಲಿಂಕ್ ಮಾಡಿ ಪ್ರಸ್ತುತ ಪಡಿಸಿದ ವಾರ್ತೆಗಳು ನಗು ಉಕ್ಕಿಸಿತು.
-
ಬಿಗ್ಬಾಸ್ನ ಸೀಸನ್ 09 ರ ಎಮೋಷನಲ್ ವಿಡಿಯೋವನ್ನು ಸುದೀಪ್ ಪ್ಲೇ ಮಾಡಿಸಿದರು. ಬಿಗ್ಬಾಸ್ ಸೀಸನ್ 09 ರ ಎಲ್ಲ ಸ್ಪರ್ಧಿಗಳ ಎಮೋಷನಲ್ ವಿಟಿಯನ್ನು ಪ್ರಸಾರ ಮಾಡಲಾಯ್ತು. ವಿಟಿ ನೋಡಿ ಎಲ್ಲರೂ ಮತ್ತೊಮ್ಮೆ ಭಾವುಕರಾದರು.
-
ಬಿಗ್ಬಾಸ್ ಸ್ಪರ್ಧಿಗಳು ತಮಗೆ ದೊರೆತ ಮೊದಲ ಸಂಬಳವನ್ನು ನೆನಪು ಮಾಡಿಕೊಂಡರು. ಈಗುಳಿದಿರುವ ನಾಲ್ಕು ಜನ ಸ್ಪರ್ಧಿಗಳಲ್ಲಿ ಒಬ್ಬರು ಅರವತ್ತು ಲಕ್ಷ ಹಣ ಗೆಲ್ಲಲಿದ್ದಾರೆ.
-
ಬಿಗ್ಬಾಸ್ ಕನ್ನಡ ಸೀಸನ್ 9 ಗೆದ್ದವರಿಗೆ ಸಿಗಲಿದೆ 60 ಲಕ್ಷ ಹಣ ಸಿಗಲಿದೆ ಎಂದು ನಟ ಸುದೀಪ್ ಹೇಳಿದರು.
-
ಕೊನೆಯ ದಿನಕ್ಕೆ ಸ್ಪರ್ಧಿಗಳೆಲ್ಲ ತಯಾರಾಗುತ್ತಿದ್ದಾರೆ. ಸ್ಪರ್ಧಿಗಳು ತಮ್ಮ ಬಟ್ಟೆ, ಇನ್ನಿತರೆ ವಸ್ತುಗಳನ್ನೆಲ್ಲ ಪ್ಯಾಕ್ ಮಾಡಿಕೊಳ್ಳುತ್ತಿದ್ದಾರೆ.
-
ಇಂದಿನ ಎಪಿಸೋಡ್ನಲ್ಲಿ ದೀಪಿಕಾ ದಾಸ್ ಹಾಗೂ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಎಲಿಮಿನೇಟ್ ಆಗಿದ್ದಾರೆ ಎನ್ನುವ ಮಾಹಿತಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ.
-
ಇಂದಿನ ಕಾರ್ಯಕ್ರಮದ ಕೆಲವು ಪ್ರೋಮೋಗಳು ಈಗಾಗಲೇ ಬಿಡುಗಡೆ ಆಗಿದ್ದು, ನಿನ್ನೆ ಬಿಳಿ ಬಣ್ಣದ ಬಟ್ಟೆ ತೊಟ್ಟು ಮಿಂಚಿದ್ದ ಸುದೀಪ್, ಇಂದು ಅಂದರೆ ಭಾನುವಾರ ಕಪ್ಪು ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ.
-
ಐದು ಮಂದಿ ಫೈನಲಿಸ್ಟ್ಗಳಲ್ಲಿ ದಿವ್ಯಾ ಉರುಡುಗ ಮೊದಲಿಗರಾಗಿ ಹೊರಗೆ ಹೋಗಿದ್ದಾರೆ. ಇನ್ನುಳಿದ ನಾಲ್ಕರಲ್ಲಿ ಒಬ್ಬರು ಇಂದು ಎಲಿಮಿನೇಟ್ ಆಗಲಿದ್ದಾರೆ. ಆಗ ಉಳಿವ ಮೂವರಲ್ಲಿ ಒಬ್ಬರು ವಿಜೇತರಾಗಿದ್ದಾರೆ.
-
ಫಿನಾಲೆ ಸಮಯ ಹತ್ತಿರ ಬರುತ್ತಲೇ ಮನೆಯಲ್ಲಿ ಉಳಿದಿರುವ ಎಲ್ಲ ಸದಸ್ಯರು ತುಸು ಭಾವುಕರಾಗಿದ್ದಾರೆ. ರೂಪೇಶ್ ಶೆಟ್ಟಿಯಂತೂ ಈ ಮನೆಯನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ. ರಾಕೇಶ್ ಅಡಿಗ ಸಹ ಒಬ್ಬೊಬ್ಬರೇ ಮನೆಯ ಬಗ್ಗೆ ಹೊರಗಡೆ ಪ್ರಪಂಚದ ಬಗ್ಗೆ ಮಾತನಾಡಿದ್ದು ಗಮನ ಸೆಳೆಯಿತು. ಇನ್ನು ದಿವ್ಯಾ ಉರುಡುಗ ಹಾಗೂ ರೂಪೇಶ್ ಶೇಟ್ಟಿ ಅವರುಗಳು ಮನೆಯಲ್ಲಿನ ಎಲ್ಲ ಕ್ಯಾಮೆರಾಗಳಿಗೆ ಧನ್ಯವಾದ ಹೇಳಿದ್ದಾರೆ.
-
ಫಿನಾಲೆಗೆಂದು ಸ್ಪರ್ಧಿಗಳಿಗೆ ವಿಶೇಷವಾಗಿ ಸ್ಟೈಲಿಸ್ಟ್ಗಳನ್ನು ಕರೆಸಿ ಎಲ್ಲರಿಗೂ ಹೇರ್ಸ್ಟೈಲ್ ಹಾಗೂ ಫೇಶಿಯಲ್, ಮೆನಿಕ್ಯೂರ್, ಪೆಡಿಕ್ಯೂರ್ ಇನ್ನಿತರೆಗಳನ್ನು ಮಾಡಿಸಲಾಗಿದೆ. ಅದರ ವಿಡಿಯೋವನ್ನು ಸಹ ಫಿನಾಲೆಯಲ್ಲಿ ಪ್ರದರ್ಶಿಸಲಾಗಿದೆ.
-
ಬಿಗ್ಬಾಸ್ ಫಿನಾಲೆ ಪ್ರಾರಂಭವಾಗಿದ್ದು, ವೇದಿಕೆಯಾಗಿ ಅದ್ಧೂರಿಯಾಗಿ ಎಂಟ್ರಿ ನೀಡಿದ್ದಾರೆ ಸುದೀಪ್. ರೂಪೇಶ್ ರಾಜಣ್ಣಗೆ ಇದು ನೂರು ದಿನದ ಆಟವಾದರೆ, ರಾಕೇಶ್ ಅಡಿಗ ಹಾಗೂ ರೂಪೇಶ್ ಶೆಟ್ಟಿಗೆ 142 ದಿನಗಳ ಆಟ. ದೀಪಿಕಾ ದಾಸ್ಗೆ 220 ಹಾಗೂ ದಿವ್ಯಾಗೆ 240 ದಿನಗಳ ಆಟವಾಗಿದೆ ಎಂದರು ಸುದೀಪ್.
-
ಬಿಗ್ಬಾಸ್ ಕನ್ನಡ ಸೀಸನ್ 09ರ ಮತ್ತೊಂದು ಟೀಸರ್ ಬಿಡುಗಡೆ ಆಗಿದ್ದು, ಟೀಸರ್ನಲ್ಲಿ ಸುದೀಪ್ ಅವರು ಬಿಗ್ಬಾಸ್ ಮನೆಯಲ್ಲಿ ನಡೆದ ತಮಾಷೆಯ ಸಂಗತಿಗಳ ಬಗ್ಗೆ ಒಳಗಿರುವ ಸ್ಪರ್ಧಿಗಳು ಹಾಗೂ ಅತಿಥಿಗಳಾಗಿ ಆಗಮಿಸಿರುವ ಎಲಿಮಿನೇಟೆಡ್ ಸ್ಪರ್ಧಿಗಳೊಟ್ಟಿಗೆ ಮಾತನಾಡಿದ್ದಾರೆ. ರೂಪೇಶ್ ರಾಜಣ್ಣ ಅವರಿಗೆ ಸಾನ್ಯಾ ಐಯ್ಯರ್ ಮಾಡಿದ ಪ್ರ್ಯಾಂಕ್ ಬಗ್ಗೆ ಸುದೀಪ್ ಅವರು ಮಾತನಾಡಿ ನಕ್ಕು, ಎಲ್ಲರನ್ನೂ ನಗಿಸಿದ್ದಾರೆ. ರಾಜಣ್ಣ ಅವರ ಅಮಾಯಕತ್ವ ಹಾಗೂ ಸಂಬರ್ಗಿಯವರ ಬುದ್ಧಿವಂತಿಕೆ ಸೇರಿ ರೂಪೇಶ್ ರಾಜಣ್ಣ ಅವರನ್ನು ಪ್ರ್ಯಾಂಕ್ ಮಾಡುವುದು ಸುಲಭವಾಗುತ್ತಿತ್ತು ಎಂದಿದ್ದಾರೆ ಸಾನ್ಯಾ ಐಯ್ಯರ್.
-
ಫಿನಾಲೆಗೆ ಈ ಸೀಸನ್ನ ಎಲ್ಲ ಸ್ಪರ್ಧಿಗಳು ಬಂದಿದ್ದಾರೆ. ಅರುಣ್ ಸಾಗರ್ ಅಂತೂ ಕಾರ್ಯಕ್ರಮ ಶುರುವಾಗುತ್ತಿದ್ದಂತೆ ಕುಣಿದು ಕುಪ್ಪಳಿಸಿ ಎಲ್ಲರನ್ನೂ ಹುರಿದುಂಬಿಸಿದ್ದಾರೆ. ಒಳಗಿರುವ ಐದೂ ಮಂದಿ ಸ್ಪರ್ಧಿಗಳ ಕುಟುಂಬದವರು ಸಹ ಕಾರ್ಯಕ್ರಮದಲ್ಲಿ ಹಾಜರಾಗಿದ್ದಾರೆ.
-
''ಮುಕ್ತಾಯದಿಂದಲೇ ಕತೆಗೆ ಒಂದು ದಿಕ್ಕು, ಮುಕ್ತಾಯದಿಂದಲೇ ಕತೆಗೆ ಒಂದು ದಿಕ್ಕು'' ಎಂದು ಅರ್ಥಪೂರ್ಣ ಡೈಲಾಗ್ ಹೇಳಿ ಸುದೀಪ್ ಬಿಗ್ಬಾಸ್ ಕನ್ನಡ ಸೀಸನ್ 09 ರ ಫಿನಾಲೆ ಆರಂಭಿಸಿದ್ದಾರೆ. ಬಿಳಿ ಬಣ್ಣದ ಟಿ ಶರ್ಟ್, ಬಿಳಿ ಬಣ್ಣದ ಪ್ಯಾಂಟ್ ಹಾಗೂ ಚಿನ್ನದ ಬಣ್ಣದ ಡಿಸೈನರ್ ವರ್ಕ್ ಇರುವ ಬಿಳಿ ಬಣ್ಣದ ಜಾಕೆಟ್ ಧರಿಸಿ ಮಿಂಚುತ್ತಿರುವ ಸುದೀಪ್ ಎಂದಿನಂತೆ ಹ್ಯಾಂಡ್ಸಮ್ ಆಗಿ ಕಾಣುತ್ತಿದ್ದಾರೆ.
- BBK9 Grand Finale: ರೂಪೇಶ್ ರಾಜಣ್ಣ ಕಪ್ ಎತ್ತುತ್ತಾರಾ..? ಪ್ಲಸ್ ಏನು..? ಮೈನಸ್ ಏನು?
ರೂಪೇಶ್ ರಾಜಣ್ಣ.. ಕನ್ನಡಪರ ಹೋರಾಟಗಳನ್ನು ಮಾಡುತ್ತಾ ಫೇಮಸ್ ಆದವರು. ಈ ಮೂಲಕವೇ ಬಿಗ್ ಬಾಸ್ ಸೀಸನ್ 9ಗೆ ನವೀನರಾಗಿ ಎಂಟ್ರಿ ಪಡೆದರು. ಬಿಗ್ ಬಾಸ್ ನೋಡಿ ಅನುಭವವಿದ್ದವರಿಗೆ ಸಡನ್ ಎಂಟ್ರಿ ಸಿಕ್ಕರೆ ಹೇಗಾಗಬೇಡ? ಮನೆಯೊಳಗೆ ಬಂದ ರಾಜಣ್ಣನಿಗೆ ಜೊತೆಯಾಗಿದ್ದು ಪ್ರಶಾಂತ್ ಸಂಬರ್ಗಿ. ಇಬ್ಬರು ಹೋರಾಟಗಾರರೇ ಆಗಿದ್ದ ಕಾರಣ ಮೊದ ಮೊದಲಿಗೆ ಇಬ್ಬರ ನಡುವೆ ಬೆಂಕಿಯೇ ಹೊತ್ತಿಕೊಂಡಿತ್ತು. ಕನ್ನಡ ಪರ ಸಂಘಟನೆಗಳ ಬಗ್ಗೆ ಮಾತಾಡಿದ್ದಕ್ಕೆ ಸಂಬರ್ಗಿ ವಿರುದ್ಧ ಹೊರಗಡೆ ಪ್ರತಿಭಟನೆಗಳು ನಡೆದವು. ಬಳಿಕ ಇಬ್ಬರು ಖಾಸಾ ದೋಸ್ತಿಗಳಾಗಿ ಬಿಟ್ಟರು.
- BBK9 Grand Finale: ಬಿಗ್ ಬಾಸ್ ಕನ್ನಡ ಸೀಸನ್ 9 ಟ್ರೋಫಿಗೆ ಮುತ್ತಿಡುತ್ತಾರಾ ರಾಕೇಶ್ ಅಡಿಗ?
ಬಿಗ್ ಬಾಸ್ ಎಲ್ಲೂ ಕೂಡ ರಾಕೇಶ್ ಅಡಿಗ ಕೆಟ್ಟ ಭಾಷೆಯನ್ನು ಬಳಸಿಲ್ಲ. ಅನುಚಿತವಾಗಿ ವರ್ತಿಸಲಿಲ್ಲ. ಮನೆಯಲ್ಲಿದ್ದ ಎಲ್ಲಾ ಸದಸ್ಯರ ಜೊತೆಗೂ ಒಂದೇ ರೀತಿಯ ಕನೆಕ್ಷನ್ ಇಟ್ಟುಕೊಂಡಿದ್ದಾರೆ. ಅಮೂಲ್ಯ ಜೊತೆಗೆ ಹೆಚ್ಚು ಗುರುತಿಸಿಕೊಂಡರೂ ಕೂಡ ಕಾವ್ಯಶ್ರೀ, ಅನುಪಮಾ, ದಿವ್ಯಾ ಉರುಡಗಾ ಅವರ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಅಲ್ಲದೇ ಬಿಗ್ ಬಾಸ್ ವೇದಿಕೆಗೆ ಮುಜುಗರವಾಗುವಂತೆ ಎಲ್ಲೂ ನಡೆದುಕೊಂಡಿಲ್ಲ. ಇತರರಿಗೆ ಹೋಲಿಸಿದರೆ ರಾಕೇಶ್ ಅಡಿಗ ದಿ ಬೆಸ್ಟ್ ಕಂಟೆಸ್ಟೆಂಟ್ ಆಗಿದ್ದಾರೆ. ಯಾರೊಂದಿಗೂ ಜಗಳ ಮಾಡಿಕೊಳ್ಳದ, ಸದಾ ನಗುತ್ತಿರುವ ರಾಕೇಶ್ ಅಡಿಗ ಅವರಿಗೆ ಜನಪ್ರಿಯತೆ ಜೊತೆ ಅವರು ಗೆಲ್ಲುವ ಅಗತ್ಯವಿದೆ. ಬಿಗ್ ಬಾಸ್ ಟೈಟಲ್ನಿಂದ ಲೈಫ್ ಚೇಂಜ್ ಆಗಬೇಕು ಎಂದರೆ, ರಾಕೇಶ್ ಅಡಿಗ ಗೆಲ್ಲಬೇಕು.
- ವೈಲ್ಡ್ ಕಾರ್ಡ್ನಲ್ಲಿ ಆಗಮಿಸಿದ ದೀಪಿಕಾ ಬಿಗ್ ಬಾಸ್ ಗೆಲ್ಲುತ್ತಾರಾ?
ಬಿಗ್ ಬಾಸ್ ಸೀಸನ್ 9 ನಲ್ಲಿ ಸ್ಟೈಲ್, ಮಾಡರ್ನ್ , ಕ್ಲಾಸ್ ಆಗಿ ಕಾಣಿಸಿಕೊಂಡವರು ಬೇರೆ ಯಾರೂ ಅಲ್ಲ ಅವರೇ ದೀಪಿಕಾ ದಾಸ್ . ದೀಪಿಕಾ ದಾಸ್ ಗೆ ಅಭಿಮಾನಿಗಳ ಬಳಗ ಬಹಳ ದೊಡ್ಡದಿದೆ. ನೇರ ನುಡಿಯ ಸರಳ ವ್ಯಕಿತ್ವವುಳ್ಳ ದೀಪಿಕಾ ದಾಸ್ ಕಿಚ್ಚನ ಬಳಿ ಶಬ್ಭಾಸ್ ಗಿರಿ ಪಡೆದುಕೊಂಡಿದ್ದಾಳೆ. ದೀಪಿಕಾ ದಾಸ್ ಸಖತ್ ಸೈಲೆಂಟ್. ಆದರೆ ಆಟ ಎಂದು ಬಂದಾಗ ಯಾರೆದುರು ಕುಗ್ಗದೆ ಜಗ್ಗದೆ ಸೆಣಸಾಡುತ್ತ ಇದ್ದರು. ದೀಪಿಕಾ ದಾಸ್ ಹೆಚ್ಚಾಗಿ ಟಾಸ್ಕ್ ಮೇಲೆ ಗಮನ ಹರಿಸಿ ಆಟದಲ್ಲಿ ಗೆಲ್ಲುವುದು ಒಂದೇ ಗುರಿ ಎನ್ನುವ ರೀತಿ ಬಿಗ್ ಬಾಸ್ ನಲ್ಲಿ ಆಟ ಆಡುತ್ತಾ ಇದ್ದಾರೆ.
-
ಬಿಗ್ಬಾಸ್ ಗ್ರ್ಯಾಂಡ್ ಫಿನಾಲೆಯ ಶೂಟಿಂಗ್ ಶುಕ್ರವಾರ (ಡಿಸೆಂಬರ್ 30) ನಡೆಯಲಿದ್ದು, ಅದೇ ದಿನ ರಾತ್ರಿ ಏಳುವರೆ ಗಂಟೆಗೆ ಕಾರ್ಯಕ್ರಮ ಪ್ರಸಾರವಾಗಲಿದೆ. ಕಾರ್ಯಕ್ರಮ ಪ್ರೋಮೋ ಒಂದು ಈಗಾಗಲೇ ಬಿಡುಗಡೆ ಆಗಿದ್ದು, ಬಿಳಿ ಬಣ್ಣದ ಉಡುಗೆ ತೊಟ್ಟು ಸುದೀಪ್ ಮಿಂಚುತ್ತಿದ್ದಾರೆ.
-
ಅರುಣ್ ಸಾಗರ್, ನವಾಜ್, ಪ್ರಶಾಂತ್ ಸಂಬರ್ಗಿ, ಕಾವ್ಯಾ, ಐಶ್ವರ್ಯಾ, ದರ್ಶ್ ಚಂದಪ್ಪ, ಮಯೂರಿ, ನೇಹಾ ಗೌಡ, ಅನುಪಮಾ ಗೌಡ, ದೀಪಿಕಾ ದಾಸ್, ಅಮೂಲ್ಯ ಗೌಡ, ವಿನೋದ್ ಗೊಬ್ರಗಾಲ, ಸಾನ್ಯಾ ಐಯ್ಯರ್, ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ, ರಾಕೇಶ್ ಅಡಿಗ, ಆರ್ಯವರ್ಧನ್, ದಿವ್ಯಾ ಉರುಡುಗ ಅವರುಗಳು ಈ ಬಾರಿ ಬಿಗ್ಬಾಸ್ ಮನೆ ಸೇರಿದ್ದರು.
-
ಈ ಬಾರಿ ಬಿಗ್ಬಾಸ್ ಮನೆಯೊಳಕ್ಕೆ ಹದಿನೆಂಟು ಮಂದಿ ಸ್ಪರ್ಧಿಗಳು ಇದ್ದರು. ಅದರಲ್ಲಿ ಹದಿಮೂರು ಮಂದಿ ಮನೆಯಿಂದ ಹೊರಗೆ ಹೋಗಿದ್ದಾರೆ. ಇನ್ನು ಐದು ಮಂದಿ ಮಾತ್ರ ಮನೆಯ ಒಳಗೆ ಉಳಿದಿದ್ದಾರೆ.
-
ಬಿಗ್ಬಾಸ್ ಕನ್ನಡ ಸೀಸನ್ 09 ರ ಫಿನಾಲೆಗೆ ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ, ದಿವ್ಯಾ ಉರುಡುಗ, ದೀಪಿಕಾ ದಾಸ್ ಅವರುಗಳು ಬಂದು ನಿಂತಿದ್ದು, ಇವರಲ್ಲಿ ಒಬ್ಬರು ಈ ಬಾರಿಯ ಬಿಗ್ಬಾಸ್ ಚಾಂಪಿಯನ್ ಆಗಲಿದ್ದಾರೆ.