Don't Miss!
- Finance Tumakuru namma metro: ಮಾದಾವರದಿಂದ ತುಮಕೂರು ಮೆಟ್ರೋ ಕಾರಿಡಾರ್ ಅಪಡೇಟ್
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Automobiles XUV300: ಮಹೀಂದ್ರಾ ಎಕ್ಸ್ಯುವಿ300 ಕಾರನ್ನು ನಿಮ್ಮ ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Technology OnePlus: ಒನ್ಪ್ಲಸ್ ವಾಚ್ 2 ನಾರ್ಡಿಕ್ ಬ್ಲೂ ಆವೃತ್ತಿ ಲಾಂಚ್! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Bigg Boss Kannada 9: ಸಂಬರಗಿಯನ್ನೇ ಅಣಕಿಸಿದ ವಿನೋದ್ : ಸೋಶಿಯಲ್ ಮೀಡಿಯಾದಲ್ಲಿ ಬಹುಪರಾಕ್!
ಬಿಗ್ ಬಾಸ್ ಮನೆ ದಿನೇ ದಿನೇ ಬದಲಾಗುತ್ತಾ ಹೋಗುತ್ತಿದೆ. ಸ್ಪರ್ಧಿಗಳು ತಮ್ಮ ನಿಜವಾದ ಆಟ ತೋರಿಸುವುದಕ್ಕೆ ಶುರು ಮಾಡಿದ್ದಾರೆ. ಕೆಲವೊಮ್ಮೆ ಗೊತ್ತಿಲ್ಲದೆ ಹೇಳುತ್ತಾರೋ, ಗೊತ್ತಿದ್ದು ಹೇಳುತ್ತಾರೋ ಇನ್ನೊಬ್ಬರ ಮನಸ್ಸಿಗೆ ನೋವಾಗುವಂತ ಟಾಕ್ಗಳು ಆರಂಭವಾಗಿವೆ. ಹೊರಗಡೆ ಏನೇ ಸ್ನೇಹವಿದ್ದರು, ಒಳಗೆ ಬಂದ ಮೇಲೆ ಅದರ ಸತ್ವ ತಿಳಿಯುತ್ತಿದೆ. ಬಿಗ್ ಬಾಸ್ ಅದ್ಯಾವಾಗ ಸೊಂಟಕ್ಕೆ ಪಟ್ಟಿ ಕಟ್ಟಿದರೋ, ಈಗ ಮಾತುಕತೆಯಲ್ಲ ಅವರವರ ನಡುವೆಯೇ ಸಾಗುತ್ತಿದೆ.
ಬಿಗ್ ಬಾಸ್ ಮೊದ ಮೊದಲಿಗೆ ಒಳ್ಳೆಯ ಕೆಲಸ ಮಾಡಿದೆ. ಸೊಂಟಕ್ಕೆ ಪಟ್ಟಿ ಕಟ್ಟದೆ ಹೋಗಿದ್ದರೆ ಅವರವರಿಗೆ ಬೇಕಾದವರನ್ನು ಹುಡುಕಿಕೊಂಡು ಸಮಯ ಕಳೆಯುತ್ತಿದ್ದರು. ಆದರೆ ಈಗ ಬೇಡವೆಂದರೂ ಪಟ್ಟಿ ಕಟ್ಟಿಕೊಂಡವರ ಜೊತೆಗೇನೆ ಬೆರೆಯಬೇಕಾಗಿದೆ. ಅದರಲ್ಲೂ ಪ್ರಶಾಂತ್ ಸಂಬರ್ಗಿ ಹಾಗೂ ವಿನೋದ್ ಗೊಬ್ಬರಗಾಲ ಅವರ ಬಾಂಧವ್ಯವೇ ಭಿನ್ನವಾಗಿದೆ. ಸಂಬರ್ಗಿಗೆ ಆಗಾಗ ಟಾಂಗ್ ಕೊಡುವ ಟ್ಯಾಲೆಂಟ್ ಗೊಬ್ಬರಗಾಲಗೆ ಸಖತ್ತಾಗಿಯೇ ಇದೆ.
Bigg Boss Kannada 9 : ಯಾರ ಕೈಗೆ ಯಾರ 'ಬ್ಯಾಂಡು'? ಯಾರ ಕೈಗಳು ಉಳಿದವು ಖಾಲಿ?
ನಗು ನಗುತ್ತಲೇ ಟಾಂಗ್ ಕೊಡುವ ಗೊಬ್ಬರಗಾಲ
ಪ್ರಶಾಂತ್ ಸಂಬರ್ಗಿ ತನ್ನದೇ ಆದ ವಾದ ಮಂಡಿಸುವವರು. ಯಾರ ಮಾತನ್ನು ಅಷ್ಟು ಸುಲಭದಲ್ಲಿ ಕೇಳುವವರಲ್ಲ. ಏನಾದರೂ ಹೇಳಿದರೂ ಅದಕ್ಕೆ ಜಗಳ್ಕೆ ಬಂದು ಬಿಡುತ್ತಾರೆ. ಅದರ ಜೊತೆಗೆ ಹೆಚ್ಚು ಕಾನೂನು ಅದು ಇದು ಅಂತಾನೇ ಮಾತನಾಡುತ್ತಾರೆ. ಆದರೆ ಪ್ರಶಾಂತ್ ಸಂಬರಗಿಯನ್ನು ಸಖತ್ತಾಗಿ ನಿಭಾಯಿಸುವುದು ಮಾತ್ರ ವಿನೋದ್ ಗೊಬ್ಬರಗಾಲ ಅನ್ನೋದು ಬಿಗ್ ಬಾಸ್ ಮನೆಯಲ್ಲಿ ಪ್ರೂವ್ ಆಗಿದೆ. ನಗು ನಗುತ್ತಲೇ ಸಂಬರ್ಗಿಯ ಕಾಲೆಳೆಯುವುದನ್ನು ವಿನೋದ್ ಚೆನ್ನಾಗಿಯೇ ಅರಿತಿದ್ದಾರೆ. ಆದರೆ ವಿನೋದ್ ಮಾಡುತ್ತಿರುವುದು ಕಿಂಡಲ್ ಎಂಬುದನ್ನು ಅರಿಯದೆ ನಗುತ್ತಲೇ ಇರುತ್ತಾರೆ ಪ್ರಶಾಂತ್.
ಬಂಡೆಗೆ ಚಚ್ಚಿದರೆ ಹೇಗೆ?
ಪ್ರಶಾಂತ್ ಸಂಬರಗಿ ಮತ್ತು ವಿನೋದ್ ಎಲ್ಲಿಯೇ ಹೋದರೂ ಜೊತೆಯಲ್ಲಿಯೇ ಹೋಗಬೇಕು ಅನ್ನೋ ಕಾರಣ ಇಬ್ಬರಿಗೂ ಸೇರಿ ಪಟ್ಟಿ ಹಾಕಲಾಗಿದೆ. ಈ ಪಟ್ಟಿಯಲ್ಲಿನ ಸ್ನೇಹವನ್ನು ಆಯ್ಕೆ ಮಾಡಿಕೊಂಡಿದ್ದು ಈ ಇಬ್ಬರೇ. ಆದರೆ ಪ್ರಶಾಂತ್ ಕಿರಿಕಿರಿಯನ್ನು ಗೊಬ್ಬರಗಾಲ ಸಹಿಸಿಕೊಳ್ಳುತ್ತಿದ್ದಾರೆ. ಅದರ ಜೊತೆಗೆ ರೇಗಿಸುತ್ತಿದ್ದಾರೆ. ಬಂಡೆ ಎಂದಾದ ಮೇಲೆ ಬಿಗ್ ಬಾಸ್ ಕ್ಯಾಮೆರಾಗೆ ಬಂದು ಹೇಳುತ್ತಿದ್ದಾನೆ. ಹೆಂಗೆ ಪ್ರಶಾಂತ್ ಸಂಬರ್ಗಿಯನ್ನೇ ಬಂಡೆ ಎಂದು ಬಿಟ್ಟೆ. ಇವ ಬಂಡೆ ಇದ್ದಂಗೆನೇ. ಸುಮ್ಮನೆ ಅರಚಾಡುತ್ತವೆ. ಕಿರುಚಾಡುತ್ತವೆ. ಏನೋ ಎಲ್ಲವನ್ನೂ ಉಳಿಸಿಬಿಡುವ ರೀತಿ ಎಂದಿದ್ದಾನೆ.
ಹೂವಿಯ ಹಿನ್ನೆಲೆ ಹುಡುಕಲು ಹೊರಟ ಮಾಲಿನಿ: ಸ್ವಂತ ತಂಗಿ ಎಂದು ತಿಳಿದರೆ ಅರಗಿಸಿಕೊಳ್ಳುತ್ತಾಳಾ..?
ಕಮೆಂಟ್ನಲ್ಲಿ ವಿನೋದ್ಗೆ ಬೆಂಬಲ
ಪ್ರಶಾಂತ್ ಸಂಬರ್ಗಿಯನ್ನು ವಿನೋದ್ ಗೊಬ್ಬರಗಾಲ ಆಟವಾಡಿಸುತ್ತಿರುವುದಕ್ಕೆ ಜನರ ಮೆಚ್ಚುಗೆ ಪಡೆದುಕೊಂಡಿದ್ದಾನೆ. ಕಿಲಾಡಿ ಎಂಬ ಬ್ಯಾಂಡ್ ಅನ್ನು ನಿನ್ನೆಯಷ್ಟೇ ವಿನೋದ್, ಸಂಬರ್ಗಿಗೆ ನೀಡಿದ್ದರು. ಆದರೆ ಆ ಕಿಲಾಡಿ ಬ್ಯಾಂಡ್ ನಿನ್ನ ಬಳಿಯೇ ಇರಬೇಕಿತ್ತು. ರಿಯಲ್ ಕಿಲಾಡಿ ನೀನೆ ಎನ್ನುತ್ತಿದ್ದಾರೆ. ಇನ್ನೊಂದಷ್ಟು ಜನ ವಿನೋದ್ ನೀನು ಸೂಪರ್ ಎನ್ನುತ್ತಿದ್ದಾರೆ.
ನೀರು ಉಳಿಸುವ ಮಾತಿಗೆ ಪ್ರಶಾಂತ್ ಸಿಡಿಮಿಡಿ
ಲೋಟಗಳನ್ನು ತೊಳೆಯುವಾಗ ನೀರು ಪೋಲಾಗುತ್ತಿದ್ದನ್ನು ರೂಪೇಶ್ ರಾಜಣ್ಣ ವಿರೋಧಿಸಿದ್ದರು. ಈ ವಿಚಾರವನ್ನು ಊಟಕ್ಕೆ ಕುಳಿತಾಗ ಎಲ್ಲರಿಗೂ ಸೇರಿಸಿ ಹೇಳದ್ದರು. ಗ್ಲಾಸ್ ತೊಳೆಯುವಾಗ ನಲ್ಲಿಯಲ್ಲಿ ನೀರನ್ನು ಆಫ್ ಮಾಡಿಕೊಳ್ಳಿ ಎಂದಾಗ ಪ್ರಶಾಂತ್ ಸಂಬರಗಿ ರೊಚ್ಚಿಗೆದ್ದಿದ್ದರು. ಹೇಳುವವರು ಮೊದಲು ಸರಿಯಾಗಿರಬೇಕು ಎಂದು ಮಾತಿಗೆ ಮಾತು ಬೆಳೆದು ವೈಯಕ್ತಿಕ ಜಗಳಕ್ಕೂ ತಿರುಗಿತ್ತು. ಈಗ ವಿನೋದ್ ಗೊಬ್ಬರಗಾಲ ಅದನ್ನೇ ಮೆನ್ಶನ್ ಮಾಡಿ ಪ್ರಶಾಂತ್ ಸಂಬರಗಿಗೆ ನಗು ನಗುತ್ತಲೇ ತಿರುಗೇಟು ನೀಡಿದ್ದಾರೆ.
ಡಿಕೆಡಿ 6 ವಿಶೇಷ ಪ್ರತಿಭೆಗಳಿಗೆ 1 ಲಕ್ಷ ಬಹುಮಾನ ನೀಡಿದ ತೋತಾಪುರಿ ಟೀಮ್!