Don't Miss!
- Lifestyle ಈರುಳ್ಳಿ ಹಾಕದೆ 3 ಪದಾರ್ಥ ಹಾಕಿ 5 ನಿಮಿಷದಲ್ಲಿ ಚಟ್ನಿ ಮಾಡಬಹುದು.! ಇಲ್ಲಿದೆ ರೆಸಿಪಿ
- Automobiles ಭರ್ಜರಿ ಮೈಲೇಜ್, ಬಹುಬೇಡಿಕೆಯ ಮಾರುತಿ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್
- Finance ಬ್ಯಾಂಕುಗಳ ಮೇಲೆ ನಡೆಯಲಿದ್ಯಾ ಸೈಬರ್ ಅಟ್ಯಾಕ್! ಎಚ್ಚರ ಎಚ್ಚರ ಎಂದ ಆರ್ಬಿಐ
- News ಆಜಾನ್ ಕೂಗುತ್ತಿದ್ದಾಗ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ: ವಿಡಿಯೋ ಹಂಚಿಕೊಂಡು ವಿಜಯೇಂದ್ರ ಕಿಡಿ
- Sports ಜೆರ್ಸಿ ನಂ.18, ವಿರಾಟ್ ಕೊಹ್ಲಿ ಜೊತೆಗಿನ ಹೋಲಿಕೆ ಬಗ್ಗೆ ಸ್ಮೃತಿ ಮಂಧಾನ ಹೇಳಿದ್ದೇನು?
- Technology Lenovo: ಲೆನೊವೊದಿಂದ ಎಐ ಚಾಲಿತ ಲೀಜನ್ ಗೇಮಿಂಗ್ ಲ್ಯಾಪ್ಟಾಪ್ಗಳು ಲಾಂಚ್; ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಿಗ್ ಬಾಸ್' ಮನೆಗೆ ಎಂಟ್ರಿ ಕೊಟ್ಟಿದ್ದಾರೆ ಸುದೀಪ್ ಜೂನಿಯರ್
Recommended Video
ಬಿಗ್ ಬಾಸ್ ಸ್ಪರ್ಧಿಗಳ ಆಯ್ಕೆ ಬಗ್ಗೆ ಕಿಚ್ಚ ಸುದೀಪ್ ಅವರು ಯಾವುದೇ ಮಧ್ಯಸ್ಥಿಕೆ ಹಾಗೂ ಸಲಹೆಗಳನ್ನ ನೀಡುವುದಿಲ್ಲ. ಇದು ಸಂಪೂರ್ಣವಾಗಿ ಆಯೋಜಕರಿಗೆ ಬಿಟ್ಟಿರುತ್ತೆ. ಇದನ್ನ ಸ್ವತಃ ಕಿಚ್ಚ ಸುದೀಪ್ ಅವರೇ ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆಯೊಮ್ಮೆ ಸ್ಪರ್ಧಿಯೊಬ್ಬರು ಕೈಕೊಟ್ಟ ವೇಳೆ ಕ್ರಿಕೆಟಿಗ ಅಯ್ಯಪ್ಪ ಅವರ ಹೆಸರನ್ನ ಸೂಚಿಸಿದ್ದನ್ನ ಬಿಟ್ಟರೆ, ಬೇರೆ ಯಾರನ್ನು ಸುದೀಪ್ ಸೂಚಿಸಿಲ್ಲ. ಈಗ ಏಳನೇ ಆವೃತ್ತಿ ಆರಂಭವಾಗಿದೆ. ಒಟ್ಟು 18 ಜನ ಸ್ಪರ್ಧಿಗಳು ದೊಡ್ಮನೆ ಪ್ರವೇಶಿಸಿದ್ದಾರೆ.
ಬಿಗ್ ಬಾಸ್: ಮೊದಲ ದಿನವೇ ರವಿ ಬೆಳಗೆರೆಗೆ ಶಾಕ್.!
ಇದರಲ್ಲಿ ಒಬ್ಬರು ಸುದೀಪ್ ಅವರ ಜೂನಿಯರ್ ಇದ್ದಾರೆ. ಕಿಚ್ಚನ ಚಿತ್ರದಲ್ಲೂ ಅಭಿನಯಿಸಿದ್ದಾರೆ. ಯಾರದು? ಮುಂದೆ ಓದಿ....
ಸುದೀಪ್ ಜೂನಿಯರ್ ಈಕೆ
ಬೆಂಗಳೂರಿನ ದಯಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಿಚ್ಚ ಸುದೀಪ್ ವಿದ್ಯಾಬ್ಯಾಸ ಮಾಡಿದ್ದಾರೆ. ವಿಶೇಷ ಅಂದ್ರೆ, ಅದೇ ಕಾಲೇಜಿನಲ್ಲಿ, ಸುದೀಪ್ ಅವರು ಓದಿದ ತರಗತಿಯಲ್ಲೇ ಚೈತ್ರಾ ವಾಸುದೇವನ್ ಕೂಡ ಓದಿದ್ದಾರಂತೆ. ಹಾಗಾಗಿ, ಸುದೀಪ್ ಅವರಿಗೆ ಚೈತ್ರಾ ಜೂನಿಯರ್ ಎಂದು ಹೇಳಿಕೊಂಡಿದ್ದಾರೆ.
'ಅಗ್ನಿಸಾಕ್ಷಿ' ಪ್ರಿಯಾಂಕಾ ಇಷ್ಟ ಪಟ್ಟು ಮೆಸೇಜ್ ಹಾಕಿದ್ರೆ, ಚಂದನ್ ಹೀಗಾ ಮಾಡೋದು.?
ಸುದೀಪ್ ಸಿನಿಮಾದಲ್ಲಿ ನಟನೆ
ಸಿನಿಮಾದಲ್ಲಿ ನಟಿಸುವ ಆಸಕ್ತಿ ಇಲ್ಲದ ಚೈತ್ರಾ ವಾಸುದೇವನ್ ಅವರು, ಕಿಚ್ಚ ಸುದೀಪ್ ಅಭಿನಯದ ಚಿತ್ರದಲ್ಲಿ ಮೊದಲ ಸಲ ಬಣ್ಣ ಹಚ್ಚಿದ್ದರು. ಸುದೀಪ್ ಅವರ ಪೈಲ್ವಾನ್ ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ನಡೆಯುವ ಬಾಕ್ಸಿಂಗ್ ದೃಶ್ಯದಲ್ಲಿ ಆಂಕರ್ ಆಗಿ ಕಾಣಿಸಿಕೊಂಡಿದ್ದಾರೆ. ಈ ವಿಷಯವನ್ನ ಚೈತ್ರಾ ಬಿಗ್ ಬಾಸ್ ವೇದಿಕೆಯಲ್ಲಿ ಹಂಚಿಕೊಂಡರು.
'ಬಿಗ್ ಬಾಸ್' ವೀಕ್ಷಕರಿಗೆ ಅಚ್ಚರಿ ನೀಡಿದ ಈ 5 ಜನರ 'ದೊಡ್ಮನೆ' ಎಂಟ್ರಿ!
ಸುದೀಪ್ ಮೊದಲ ಸಂದರ್ಶನ
ನಿರೂಪಕಿಯಾಗಿ ಮೊದಲ ಸಲ ಸಂದರ್ಶನ ಮಾಡಿದ್ದು ಕೂಡ ಕಿಚ್ಚ ಸುದೀಪ್ ಅವರಂತೆ. ಸಿಸಿಎಲ್ ಕ್ರಿಕೆಟ್ ನಡೆಯುತ್ತಿರುವ ವೇಳೆ ಚೈತ್ರಾ ಅವರು, ಸುದೀಪ್ ಅವರ ಸಂದರ್ಶನ ಮಾಡಿದ್ದರಂತೆ.
ಹಲವು ಶೋ ನಿರೂಪಣೆ ಮಾಡಿದ್ದಾರೆ
ಕಲರ್ಸ್ ಕನ್ನಡ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುವ 'ಒಂದು ಸಿನಿಮಾ ಕಥೆ' ಕಾರ್ಯಕ್ರಮವನ್ನ ಚೈತ್ರಾ ನಿರೂಪಣೆ ಮಾಡುತ್ತಿದ್ದರು. ಹಲವು ಖಾಸಗಿ ಕಾರ್ಯಕ್ರಮಗಳನ್ನ ಆಂಕರಿಂಗ್ ಮಾಡಿದ್ದಾರೆ.